ಶುಕ್ರವಾರ, ಮೇ 28, 2010

ಕಿಟ್ಟಪ್ಪನ ಕಷ್ಟವೆಲ್ಲಾ ನನಗಿರಲಿ

ಕಿಟ್ಟಪ್ಪನ ಕಷ್ಟವೆಲ್ಲಾ ನನಗಿರಲಿ
ಕೆ. ಆರ್. ಎಸ್. ಮೂರ್ತಿ

ಬಿಟ್ಟು ಬಿಡು ಕಿಟ್ಟಪ್ಪ ನಿನ್ನ ಕೆಟ್ಟ ಬುಧ್ಧಿ
ಕೆಟ್ಟ ಹುಡುಗೀರ ಸಹವಾಸ ಕಡಿಮೆ ಮಾಡು

ನಿನ್ನ ಕೊಳಲು ಊದಿ ಕೊಂಡು ಮರದ ಕೆಳಗೆ
ಸುಮ್ಕೆ ಕೂತ್ಕೋ ನೆರಳಿನಲ್ಲಿ ಕಾಲು ಚಾಚಿ

ದಿನಯೆಲ್ಲಾ ದನ ಕಾಯ್ಕೊಂಡು ಗೋಪಾಲ
ಬಾಯಲ್ಲಿ ಬೆಣ್ಣೆ ತುಂಬಿ ಕೊಂಡು ನೀ ಕಳ್ಳ

ನಿನ್ನ ಹುಡುಗೀರನ್ನೆಲ್ಲಾ ನಾನು ನೋಡ್ಕಂಡು
ದಿನ, ರಾತ್ರಿ ಸ್ವರ್ಗದ ಸುಖ ತೋರಿಸ್ತೀನಿ

ಅಷ್ಟೊಂದು ಹುಡುಗೀರ ಸಹವಾಸದಿಂದ
ನಿನಗೆ ಯಾವಾಗಲೂ ಸುಸ್ತು, ಏದುಸಿರು

ನಿನ್ನ ಬಾಯಲ್ಲಿ ತುತ್ತೂರಿ ಓದಕ್ಕೆ ಸಾಗದು
ಹುಡುಗೀರಿಗೆ ನಿನ್ನಿಂದ ಸುಖ ಆಗಲಾರದು

ಬಂದ ಸುಂದರಿಯರನ್ನೆಲ್ಲಾ ನನಗೆ ಕೊಟ್ಟರೆ
ಕೇಳಪ್ಪ ಎಷ್ಟು ಬೇಕಾದರೂ ಬೆಣ್ಣೆ, ಸಕ್ಕರೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ