ಭಾನುವಾರ, ಮೇ 30, 2010

ನಾನೆಲ್ಲರಿಗೂ ಬೇರೆ

ನಾನೆಲ್ಲರಿಗೂ ಬೇರೆ
ಕೆ. ಆರ್. ಎಸ್. ಮೂರ್ತಿ

ಬರೀ ಬರಡು ಬರೆಯುವವನು ನಾನಲ್ಲ
ಬರೀ ಬೋರ್ ಕೊರೆಯುವವನೂ ಅಲ್ಲ

ಸರ,ಸರ ಸರಾಗದಲಿ ಸುರಿಮಳೆಯು
ಸುರಿದು, ಹಿಂದಿನವರೆಲ್ಲರ ಕೊಚ್ಚೆಯು

ಹರಿದು ಚರಂಡಿಗೆ ಅಟ್ಟಿ, ಕೊಚ್ಚಿ ಹೋಗಿ
ಹೊಸ ನೀರು ಬಯಲಲೆಲ್ಲ ಹರಡಿ ಹೋಗಿ

ಹೊಸ ಹುರುಪಿನ ತಂಗಾಳಿಯು ಬೀಸುತಿರೆ
ಮಣ್ಣಿನ ಕಂಪು ಮನಸಿಗೆ ತಂಪು ಸೂಸುತಿರೆ

ಸರಿ ರಾಗ ಗಾಳಿಯಲಿ, ಅನುರಾಗ ಮನದಲ್ಲಿ
ಹಸೆಯುವೆನು ಹೊಸ ದಿಕ್ಕಿನ ಲೇಖನಿಯಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ