ಬುಧವಾರ, ಮೇ 12, 2010

ಕರ್ಣ - ವ್ಯಾಸ ಕಾರ್ಯಕ್ರಮ ಧಾಟಿ

ಕರ್ಣ - ವ್ಯಾಸ ಕಾರ್ಯಕ್ರಮ ಧಾಟಿ

ಮುನ್ನುಡಿ - ಕಾರ್ಯಕ್ರಮ ಪರಿಚಯ

೧. "ತಿರುಗು ಬಾಣ" ಸಾಹಿತ್ಯ ಪ್ರಕಾರದ ಕಿರುಪರಿಚಯ

೨ ಕರ್ಣ - ವ್ಯಾಸ ಕಾರ್ಯಕ್ರಮದ ಕೇಮ್ದ್ರ ವಸ್ತುವಿನ ಪರಿಚಯ

೩ ಇವತ್ತಿನ ಕಾರ್ಯಕ್ರಮದ ಪರಿಮಿತಿಯ ಮಮ್ಡನೆ

೪ ಪಾತ್ರಗಳ, ಪಾತ್ರಧಾರಿಗಳ ಹೆಸರುಗಳು

೫ ಪಾತ್ರಗಳ, ರಮ್ಗವಿನ್ಯಾಸದ ಸೂಚನೆ

೬ ಧಿಡೀರ್ ಪಾತ್ರಧಾರಣೆಯ ಅಪೇಕ್ಷೆ ಇರುವ ಪ್ರೇಕ್ಷಕರಿಗೆ ಸೂಚನೆಗಳು

೭. ಪರದೆ ಕಳಚಿದಮ್ತೆ ರಮ್ಗದ ಮೇಲಿನ ಸನ್ನಿವೇಷದ ಕಿರುಪರಿಚಯ

ಮೊದಲ ಹಮ್ತ:

ರಮ್ಗದ ಮೇಲೆ: ಅರ್ಜುನ, ಕ್ರಿಮಷ್ಣ, ಕರ್ಣ

(ಕರ್ಣನು ರಣರಮ್ಗದಲ್ಲಿ ರಕ್ತದ ಹೊಳೆಯ ಕೆಸರಿನಲ್ಲಿ ಹೂತು ಹೋಗಿರುವ ತನ್ನ ರಥವನ್ನು ಮೇಲೆತ್ತಲು, ತನ್ನ ಬಿಲ್ಲು, ಬತ್ತಳಿಕೆಗಳನ್ನು ಕೆಳಗಿಟ್ಟು, ರಥದ ಚಕ್ರಕ್ಕೆ ಕೈಯಿಟ್ಟು, ಭುಜವಿಕ್ಕಿ ಸೆಣೆದಾಡುತ್ತಿದ್ದಾನೆ.)



Krishna tells Arjuna to shoot the arrow and kill Karna, even though Karna is repairing the wheels of the chariot.



ಕ್ರಿ ಷ್ಣ: ಅರ್ಜುನ! ಇದೇ ಸದವಕಾಶ, ಹೂಡು ನಿನ್ನ ಬಾಣವನ್ನು. ಕರ್ಣನಿಗೆ ಗುರಿಯಿಟ್ಟು ನೇರವಾಗಿ ಹೊಡೆ ಬೇಗ.



Arjuna hesitates to follow Krishna's instructions.



ಅರ್ಜುನ: ಕ್ರಿoಷ್ಣಾ! ಹೇ ಭಗವನ್! ನ್ಯಾಯವನ್ನು ನಮ್ಮಮ್ಥ ಹುಲುಮಾನವರಿಗೆ ತಿಳಿಯ ಹೇಳಬೇಕಾದವನು ನೀನು. ಅದುಹೇಗೆ ನಾನು ರಥವನ್ನು ಬಿಟ್ಟು, ಸಾರಥಿಯ ಸಹಾಯವೂ ಇಲ್ಲದೆ, ತಾನೊಬ್ಬನೇ ಕೆಸರಿನಲ್ಲಿ ತೋಳು-ಭುಜಗಳನ್ನು ಕೊಟ್ಟು ಮಮ್ಡಿಯೂರಿರುವ ಕರ್ಣನ ಕಡೆಗೆ, ಸೂತ ಪುತ್ರನಾದವನ ಕಡೆಗೆ, ಮಹಾಕ್ಷತ್ರಿಯನಾದ, ಅಸಮಾನ ಬಿಲ್ಲುಗಾರನಾದ ನಾನು ಬಾಣವನ್ನು ಬೀರುವುದು ಅದು ಹೇಗೆ ಸಾಧ್ಯ, ಅದಾವ ನ್ಯಾಯ, ಅದಾವ ಶೌರ್ಯ?



Krishna persuades Arjuna to shoot saying that it is an opportune time and to exploit it.



ಕ್ರಿ ಷ್ಣ: ಹೇ ನರೋತ್ತಮ! ಕರ್ಣನು ಜಗತ್ತಿನಲ್ಲೇ ಮಹಾಶೂರ, ಮಹಾಬಿಲ್ಲುಗಾರ. ಆದರೆ, ಅವನು ನಿನಗೂ, ದ್ರೌಪದಿಗೂ, ಪಾಮ್ಡವರೆಲ್ಲರಿಗೂ ಮಾಡಿರುವ ಅನ್ಯಾಯಗಳನ್ನು ನೀನೇ ಯೋಚಿಸಿನೋಡು. ಇವನನ್ನು ಕೊಲ್ಲಲು ಈ ಕ್ಷಣಕ್ಕಿಮ್ತ ಮುಮ್ದೆ ಇನಾವ ಸಮಯವೂ ಸರಿಯಲ್ಲ. ಇದೇ ಮಹೂರ್ತ. ಬಿಡು ಬಾಣವನ್ನು. ತಡಮಾಡಬೇಡ!



Arjuna shoots the arrow to Karna.



ಅರ್ಜುನ: ನಿನ್ನ ಮಾತನ್ನು ಕೇಳಿ ನಾನು ಈ ಬಾಣವನ್ನು ಬಿಡುತ್ತಿದ್ದೇನೆ.



Karna collapses and starts his dialogue complaining and blaming Krishna and Arjuna for their illegal tactics.



ಕರ್ಣ: ಹಾ! ಇದೇನು ಆರ್ಜುನ, ಬಿಲ್ಲುಬಾಣವನ್ನು ಕೆಳಗಿಟ್ಟು, ಕೈಗಳನ್ನು ರಣರಮ್ಗದಲ್ಲಿ ಸುರಿಯುತ್ತಿರುವ ರಕ್ತದ ಕೆಸರಿನಿಮ್ದ ನನ್ನ ರಥವನ್ನು ಮೇಲೆತ್ತುವ ಸಮಯದಲ್ಲಿ ಹೇಡಿಯಮ್ತೆ, ಕ್ಷತ್ರಿಯ ಧರ್ಮವನ್ನು ಮರೆತು, ಬಾಣಹೂಡಿ ಕೊಮ್ದೆಯಲ್ಲೋ ನರಾಧಮ!

ಹೇ ಕ್ರಿಮಷ್ಣ! ಜೀವನ ಪೂರ್ತಿ ದುರಾದ್ರಿ!ಷ್ಟ ಕಾಡಿದ ನನಗೆ ಮರಣ ಸಮಯದಲ್ಲೂ ಬಹಳ ಮೋಸವಾಗಿಹೊಯಿತಲ್ಲಾ. ಏಲ್ಲವನ್ನೂ ತಿಳಿದವನಮ್ತೆ ನಾಟಕವಾಡುವ ನೀನು ಅರ್ಜುನನಿಗೆ ಅನ್ಯಾಯದ ಪಾಠಹೇಳಿ ನನ್ನನ್ನು ಕೊಲ್ಲಿಸಿದೆಯಲ್ಲಾ.



Arjuna responds by mentioning Karna's numerous mistakes through out Mahabharatha.



ಅರ್ಜುನ: ಕರ್ಣ! ನ್ಯಾಯದ ಭಾಷಣ ಕೊಡುವುದನ್ನು ಯಾವಾಗ ಕಲಿತೆ? ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣನಾದ ನೀನೂ, ದುರ್ಯೋಧನನೂ, ದುಶ್ಯಾಸನನೂ, ಸಜ್ಜನತೆ, ಪರಸ್ತ್ರೀ ಗೌರವಗಳನ್ನು ಕಸದಬುಟ್ಟಿಗೆ ಎಸೆದು, ದ್ರೌಪದಿಯನ್ನು ನಿನ್ನ ತೊಡೆಯಮೇಲೆ ಕೂರಿಸಿಕೊಳ್ಳಲು ನೀಚ ಮನೋಭಾವದಿಮ್ದ ಮೆರೆದ ನಿನಗೆ ಇದೇನು ಸಾಯುವಕಾಲದಲ್ಲಿ ನ್ಯಾಯ ನೀತಿಗಳ ಅರಿವು ಆಗುತ್ತಿದೆಯೇನು ?



Krishna responds with similar statements and blames his 'blind' support to Duryodhana.



ಕ್ರಿ ಷ್ಣ: ಹುಟ್ಟಿನಿಮ್ದ ಸೂತಪುತ್ರನೆಮ್ದು ಕೊರಗುತ್ತಿದ್ದವನು, ಒಮ್ದು ಸಣ್ಣ ರಾಜ್ಯದ ಲಮ್ಚ ಕೊಟ್ಟ ಮಾತ್ರಕ್ಕೆ, ದುರ್ಯೋಧನನನ್ನು ಪ್ರಶಮ್ಸೆ ಮಾಡುತ್ತಾ, ವಿವೇಚನೆಯನ್ನು ಕೂಡ ಮಾಡದೆ, ಅವನಿಗೆ ಸಾಸಿವೆ ಕಾಳಿನಷ್ಟೂ ಬುಧ್ಧಿ ಮಾತು ಹೇಳದೆ, ಕುರುಡನಮ್ತೆ ಜೀವನವನ್ನೆಲ್ಲಾ ಕಳೆದ ನೀನು ನ್ಯಾಯ ವಾದಿಯಮ್ತೆ ನಾಟಕ ಮಾಡುತ್ತಿರುವುದು ನೋಡಿದರೆ ನನಗೆ ನಗೆಯು ಬರುತ್ತಿದೆ.



Karna defends his master Duryodhana and defends his actions.



ಕರ್ಣ: ನನ್ನ ಆತ್ಮಗೌರವಕ್ಕೇ ಕುಮ್ದು ಬಮ್ದಹಾಗೆ ಮಾಡಿಬಿಟ್ಟ ನೀನೂ, ದ್ರೋಣರೂ, ಆ ಮುದುಕ ಭೀಷ್ಮರೂ ನನ್ನ ಶಕ್ತಿ ಸಾಮರ್ಥ್ಯಗಳಿಗೆ ಬೆಲೆಕೊಡದೆ, ಸೂತ ಪುತ್ರನೆಮ್ದು ಹೀಯಾಳಿಸಿಕೊಳ್ಳುತ್ತಿರುವಾಗ, ವಿಶಾಲ ಮನೋಭಾವದ ನಿಜವಾದ ಗುಣವನ್ನು ಕಮ್ಡ, ನನ್ನ ಆಪ್ತ ಸ್ನೇಹಿತ ದುರ್ಯೋಧನನ ಬಗ್ಗೆ ನಿನಗೇನು ಗೊತ್ತು? ಕಷ್ಟದಲ್ಲಿ ಒದಗುವನೇ ನಿಜವಾದ ಸ್ನೇಹಿತ. ನನ್ನ ಆಪ್ತಮಿತ್ರನ ಬಗ್ಗೆ ಇಮ್ಥಾ ಮಾತುಗಳನ್ನಾಡಿದ್ದಕ್ಕೆ, ಇದೀಗಲೆ ಎದ್ದುಬಮ್ದು ನಿನ್ನ ಕತ್ತು ಹಿಚುಕಿಬಿಟ್ಟೇನು, ಎಚ್ಚರಿಕೆ!

ಪ್ರವೇಶ: ದುರ್ಯೋಧನ



Duryodhana blames Krishna and cries for Karna's collapse.



ದುರ್ಯೋಧನ: ಕರ್ಣಾ! ಜಗತ್ತಿನಲ್ಲೇ ಅದ್ವಿತೀಯ ಬಿಲ್ಲುಗಾರನಾದ ನಿನ್ನಮ್ತಹಾ ಮಹಾವೀರನಿಗೆ ಇದೆಮ್ಥಾ ಅನ್ಯಾಯವಾಯಿತು! ಯುಧ್ಧದಲ್ಲಿ ನಿನ್ನನ್ನು ಅಸ್ತ್ರವಿದ್ಯೆಯಲ್ಲಿ, ಧರ್ಮ ಯುಧ್ಧದಲ್ಲಿ ಕೊಲ್ಲಲು ಅಸಾಧ್ಯವೆಮ್ದು, ಈ ಕುತಮ್ತ್ರಿ ಕ್ರಿ ಷ್ಣನೂ, ಹೆಮ್ಗೆಳೆಯರೊಡನೆ ಸೀರೆ ಒಡವೆಗಳನ್ನು ತೊಟ್ಟು ಭರತನಾಟ್ಯವನ್ನು ಮಾಡುವುದನ್ನು ಬಿಟ್ಟು, ರಣರಮ್ಗದ ನಿಯಮಗಳನ್ನು ಅರಿಯದೆ ಅರ್ಜುನನು ಕಳ್ಳ ಕ್ರಿ ಷ್ಣನ ಹಿಮ್ದೆ ಅಡಗಿಕೊಮ್ಡು ಬಾಣವನ್ನು ನಿಸ್ಸಹಾಯಕನಾದ ನಿನ್ನೆಡೆಗೆ ಬಿಟ್ಟು ಕೊಮ್ದಿರುವುದು ಪಾಮ್ಡವ ವಮ್ಶಕ್ಕೇ ಅವಮಾನದ ಸಮ್ಗತಿ.



Krishna trickily mentions Vyaasa as the real architect of the roles in Mahabharatha.



ಕ್ರಿ ಷ್ಣ: ದುರ್ಯೋಧನ! ಸಿಕ್ಕಸಿಕ್ಕವರನ್ನೆಲ್ಲಾ ಸುಮ್ಮಸುಮ್ಮನೆ ಬೈಯುವುದು ತರವಲ್ಲ. ಈ ಮಹಾಭಾರತದ ಕವಿಯ ಸ್ರಿಯಷ್ಟಿಯಲ್ಲವೇ ನಾವೆಲ್ಲರೂ? ನೀನೂ, ಕರ್ಣನೂ ಪ್ರಲಾಪಿಸುತ್ತಿರುವ ವಿಷಯಗಳನ್ನು ನೇರವಾಗಿ ವೇದವ್ಯಾಸರಿಗೇ ನೀನು ಏಕೆ ಕೇಳಬಾರದು?



Duryodhana summons Vyaasa with uncontrollable anger.



ದುರ್ಯೋಧನ: ಕ್ರಿaಷ್ಣ! ನಿನ್ನನ್ನು ನಾನು ಯಾವಾಗಲೂ ಗೌರವಿಸಿದ್ದೇ ಇಲ್ಲ! ಈ ನಿನ್ನ ಮಾತಿಗೊಮ್ದು ಸಲ ಬೆಲೆಕೊಟ್ಟು ನೋಡುವೆ. ಯಾರಲ್ಲಿ! ಈದೀಗಲೇ ಕಾಡಿನಲ್ಲಿ ಕಣ್ಮುಚ್ಚಿ ಯಾವಾಗಲೂ ತಪಸ್ಸುಮಾಡುವ ಅ ವ್ಯಾಸರನ್ನೇ ಹಿಡಿದು ಎಳೆದು ತನ್ನಿ. ತಡಮಾಡಬೇಡಿ. ನನ್ನ ಜೀವವೇ ಎನ್ನುವಹಾಗಿದ್ದ ಮಹಾವೀರ ಕರ್ಣನಿಗೆ ಆದ ಅನ್ಯಾಯಗಳೆಲ್ಲವನ್ನೂ ಆ ವ್ಯಾಸರಿಗೇ ಹೇಳೊಣವಮ್ತೆ. ಹೊರಡಿ ವಾಯುವೇಗದಲ್ಲಿ!

ಎರಡನೆಯ ಹಮ್ತ

ಪ್ರವೇಶ: ವ್ಯಾಸರನ್ನು ಇಬ್ಬರು ಸೈನಿಕರು ಕರೆದುಕೊಮ್ಡು ಬರುತ್ತಾರೆ



Vyaasa realizes what is happening: He is being questioned, interrogated and challenged by the characters he created.



ವ್ಯಾಸ: ಇದೇನಿದು! ತಪಸ್ಸುಮಾಡುತ್ತಿದ್ದ ನನ್ನನ್ನು ಬಲವಮ್ತದಿಮ್ದ ಎಳೆದು ಇಲ್ಲಿಗೇಕೆ ಕರೆದುಕೊಮ್ಡುಬಮ್ದಿರಿ? ಇದು ರಣರಮ್ಗದಮ್ತಿದೆ; ನಾನು ಬರೆದು ವಿಸ್ತರಿಸಿದ ಮಹಾಭಾರತದಮ್ತೆಯೇ ಕಾಣುತ್ತಿದೆಯಲ್ಲಾ. ಜೊತೆಗೇ, ನಾನು ಸ್ರಿನಷ್ಟಿಸಿದ ಪಾತ್ರಗಳೇ ನನ್ನ ಮುಮ್ದೆ ನಿಮ್ತು, ನನ್ನನ್ನೇ ಎದುರಿಸಿ ಮಾತನಾಡುತ್ತಿವೆಯಲ್ಲಾ! ಇದು ಜಗತ್ತಿನಲ್ಲೇ ಸರ್ವಕಾಲಕ್ಕೂ ಅತಿಶ್ರೇಷ್ಠ ಸೃಷ್ಟಿಶೀಲ ಕವಿಯೂ, ದಿವ್ಯಜ್ಞಾನಿಯೂ ಆಗಿರುವ ನನಗೇ ಅಚ್ಚರಿಯಾಗುತ್ತಿದೆಯೆಮ್ದರೆ ಉತ್ಪ್ರೇಕ್ಷೆಯಾಗುವುದಿಲ್ಲ!

ನಾನು ಕಲ್ಪಿಸಿದ ಪಾತ್ರಗಳೇ ನನ್ನನ್ನು ತಿರು ಪ್ರಶ್ನೆ ಕೇಳುತ್ತಿರುವ ಹಾಗೆ ಮಾಡಿದ ಆ ಹುಲುಮಾನವ, ಆ ಕುತಮ್ತ್ರಿ, ಆ ಅತಿ ಉಧ್ಧಟದ ಅಹಮ್ಕಾರಿ ಯಾರು ಇರಬಹುದು ? ! :-)



Duryodhana sums up the complaints and blames Vyaasa.



ದುರ್ಯೋಧನ: ವ್ಯಾಸರೇ! ಕಳ್ಳರ ಮಾತನ್ನು ಚಕ್ರವರ್ತಿಯಾದ ನಾನು ಕೇಳುವುದು ಎಮ್ದರೇ ಅತಿಶಯವಾಗಿಯೂ ಅಸಾಧ್ಯ! ಆದರೆ, ಮಹಾಭಾರತದಲ್ಲಿ ನಡೆದ ಎಲ್ಲಕ್ಕೂ ನೀವೇ ಕಾರಣರು ಎನ್ನುತ್ತಾನೆ ಈ ಕಪಟಿ ಕ್ರಿರಷ್ಣ.

ರಣರಮ್ಗದಲ್ಲಿ ಅಸಮಾನ ಅಸ್ತ್ರಮೇಧಾವಿಯಾಗಿದ್ದ ನನ್ನ ಜೀವದ ಜೀವದಮ್ತಿದ್ದ ಕರ್ಣನನ್ನು ಈ ರೀತಿ, ಕರ್ಣನ ಸಮಕ್ಕೆ ಹೋಲಿಸಲೂ ಅಯ್ಯೋಗ್ಯನಾದ ಅರ್ಜುನನಿಮ್ದ ಏಕೆ, ಯಾವ ಮನಸ್ಸಿನಿಮ್ದ ವಧೆಯನ್ನು ಅನೀತಿರೀತಿಯಲ್ಲಿ ಮಾಡಿಸಿದಿರಿ.

ನೀವು ನಿಜವಾಗಿಯೂ ಮಹಾಕವಿಯೂ, ಮಹಾಜ್ಞಾನಿಗಳೂ ಆಗಿದ್ದರೆ, ಇದ್ದಕ್ಕೆ ಉತ್ತರ ಹೇಳಿ.



He starts responding to one question at a time.

Vyaasa responds…

Karna cries and complains about his birth with Kunti as the mother, and that she and Krishna hid the facts through out his life.



ಕರ್ಣ: ಹುಟ್ಟಿನ ಸಮಯದಿಮ್ದಲೇ ನನಗೆ ಮೋಸವಾಗಿಹೋಗಿದೆ. ನಾನು ನನ್ನ ಅಮ್ಮನ ತೊಡೆಯಮೇಲೆ ಹಾಯಾಗಿ ನಿದ್ರಿಸುವ, ತಾಯಿಯ ಪ್ರೀತಿಯ ಉಣಿಸಿನ ಸೌಭಾಗ್ಯವಿಲ್ಲದೆಯೆ, ಸೂತ ಪುತ್ರನೆಮ್ದು ಬೆಳೆಯುವ ಹಣೆಬರಹ ನನ್ನ ಪಾಲಾಯಿತಲ್ಲಾ :-(

ಪ್ರವೇಶ: ಕುಮ್ತಿ



Kunti responds to Karna about the birth out of wedlock, as a simple curiosity of a young teenager, yet defends herself as a good mother with examples of Pandavas.



ಕುಮ್ತಿ: "ಅಮ್ಮಾ" ಎಮ್ದು ನೀನು ಬೋಧಿಸಿ ಕರೆದದ್ದನ್ನು ಕೇಳಿ ಬಮ್ದೆ ನನ್ನ ಕಮ್ದ. ನಾನು ಹರೆಯಕ್ಕೆ ಬಮ್ದಾಗ ರ‍ಿಷಿವರ್ಯರು ಕೊಟ್ಟಿದ್ದ ಅಮೂಲ್ಯ ವರಗಳನ್ನು ಸುಮ್ಮನೇ ನಮ್ಬಲಾಗದೆ, ಹೇರಳ ಕಾಮ್ತಿಯಿಮ್ದ ಪ್ರಜ್ವಲಿಸುವ ಸೂರ್ಯನನ್ನು ಒಮ್ದು ದಿನ ಪ್ರಾತಹ್ ಕಾಲ ನೋಡಿ ಅವನನ್ನು ನನಗೆ ವರವಾಗಿ ಕೊಟ್ಟಿದ್ದ ಮಮ್ತ್ರವನ್ನು ಉಛ್ಛರಿಸಿಕೊಮ್ಡು ಅರಾಧಿಸಿದೆ.

ಇದು ನನ್ನ ಹುಡುಗುತನದ ಕುತೂಹಲವೆಮ್ದಾದರೂ ತಿಳಿದುಕೊ; ಮುಮ್ದಿನ ಪರಿಣಾಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಬೇಜವಾಬ್ದಾರಿ ಹೆಮ್ಗಸಿನ ಚೆಲ್ಲಾಟವೆಮ್ದಾದರೂ ಅವಹೇಳನ ಮಾಡು. ವಿವಾಹಕ್ಕೆ ಮುಮ್ಚೆಯೇ ಪಡೆದ ಕೂಸನ್ನು ಅರಮನೆಯಲ್ಲಿ ಸಾಕಿದರೇ, ಯಾವ ರಾಜಕುಮಾರನೂ ನನ್ನನ್ನು ವರಿಸುವುದಿಲ್ಲ ಎಮ್ದು ಸ್ವಾರ್ಥಿಯಾಗಿ, ಭಯಪಟ್ಟು ನಿನ್ನನ್ನು ನೀರಿನಮೇಲೆ ತೇಲಿಬಿಡಬೇಕಾಯಿತು. ಅಮ್ದು ನನಗಾದ ದುಹ್ಖವನ್ನು ಯಾರೂ ಅರ್ಥಮಾಡಿಕೊಳ್ಳರು ಕಮ್ದಾ! :-( :-(

ನನಗೆ ಈ ನನ್ನ ಪಾಪಕ್ಕೆ ಜೀವನದಲ್ಲಿ ಸಾಕಷ್ಟು ಶಾಸ್ತಿಯಾಗಿದೆ. ರ‍ೋಗಿಷ್ಟನಾದ ಗಮ್ಡನನ್ನು ಪಡೆದದ್ದು, ನನ್ನ ಇನ್ನಿತರ ಮಕ್ಕಳೂ, ಅಮ್ದರೆ ಪಾಮ್ಡವರು, ಜೀವನ ಪೂರ್ತಿ ವನವಾಸ, ಅಜ್ಞಾತವಾಸ ಇತ್ಯಾದಿ ಕಷ್ಟಗಳನ್ನು ಅನುಭವಿಸುವುದನ್ನು ನನ್ನ ಕಣ್ಣಾರೆ ನೋಡಿ ಕಣ್ಣೀರು ಸುರಿಸಿದ್ದನ್ನು ವರ್ಣಿಸಲಸಾಧ್ಯ. ಜೊತೆಗೆ, ನೀನು ನಿನ್ನ ತಮ್ಮಮ್ದಿರನ್ನು ಎದುರುಹಾಕಿಕೊಮ್ಡ ಕೌರವರನ್ನು ಆಶ್ರಯಿಸಿ ಜೀವನಮಾಡಿದ್ದನ್ನು ಕಮ್ಡು ನನಗಾದ ಶೋಕ ಮತ್ಯಾರಿಗೂ ಬೇಡ :-( :-(



Karna blames Kunti again for the special boon she begged from Karna of 'Not using the same arrow twice'.

Karna blames Kunti again of it as an excuse to save Arjuna's life.



ಕರ್ಣ: ನಿನ್ನ ದುಹ್ಖದ ಜೀವನವನ್ನು ಕೇಳಲಾರೆನಮ್ಮಾ :-( ಆದರೆ, ನೀನು ನನ್ನಿಮ್ದ "ತೊಟ್ಟ ಬಾಣವನ್ನು ಮತ್ತೆ ತೊಡಬೇಡ ಕಮ್ದ" ಎಮ್ದು ಕೇಳುವಾಗ ನಿನ್ನ ಮಾತೃ ವಾತ್ಸಲ್ಯ ಎಲ್ಲಿ ಹೋಗಿತ್ತು?! ನಿನ್ನ ಪ್ರೀತಿಯ ಮಗ ಅರ್ಜುನನನ್ನು ಉಳಿಸಿಕೊಳ್ಳಲು, ನೀನು ನನ್ನ ಭವಿಷ್ಯವನ್ನು ಮೂಲೆಗೊತ್ತಿ, ಮಾತೃ ವಾತ್ಸಲ್ಯಕ್ಕೆ ತರ್ಪಣ ಬಿಟ್ಟೆಯಲ್ಲಾ! ನನ್ನ ಕೆಟ್ಟ ಹಣೇಬರಹಕ್ಕೆ ಮೊದಲಿಲ್ಲ, ಕೊನೆಯಿಲ್ಲ; ಒಬ್ಬರು ಉಳಿಯಲು ಇನ್ನೊಬ್ಬರು ತಮ್ಮ ಜೀವವನ್ನೇ ತ್ಯಾಗ ಮಾಡಬೇಕಲ್ಲವೆ :-( :-(



Kunti repeats the fact of her request for Karna to join the Pandavas in the war. She says that would have saved Karna's collapse.



ಕುಮ್ತಿ: ಕರ್ಣ! ನಾನು ನಿನ್ನಿಮ್ದ ವರ ಕೇಳುವಮೊದಲೇ, ನಿನ್ನನ್ನು ಪಾಮ್ಡವರ ಪಕ್ಷಕ್ಕೆ ಕರೆದೆನೆನ್ನುವುದನ್ನು ಮರೆಯಬೇಡ. ಆದರೆ, ನಿನ್ನ ಹಟ ನೀನು ಬಿಡಲಿಲ್ಲ; ದುಷ್ಟ ದುರ್ಯೋಧನನ ಸಹವಾಸ ತೊರೆಯಲಿಲ್ಲ; ತಮ್ಮಮ್ದಿರ ಮೋಹಕ್ಕಿಮ್ತ, ತಾಯಿಯ ಬುಧ್ಧಿಮಾತಿಗಿಮ್ತ, ದುರ್ಜನರ ಸಮ್ಗವೇ ಇಮ್ಪಾದ ಸಮ್ಗೀತ ವಾಯಿತು ನಿನ್ನ ಕುರುಡು ಅಹಮ್ಕಾರದ, ಅಪ್ರಯೋಜಕ ಸ್ವಾಮಿನಿಷ್ಟೆಯ ಧರ್ಮಕ್ಕೆ!



Krishna reminds the characters that it was all a plot scripted by Vyaasa.



ಕ್ರಿ ಷ್ಣ: ಕರ್ಣ! ಕುಮ್ತಿ! ಇದೆಲ್ಲಕ್ಕೂ ಕಾರಣ ಆ ವೇದ ವ್ಯಾಸರಲ್ಲವೆ! :-) ಯಾಸರು ನಿಮ್ಮ ಜೀವನವನ್ನು ಈ ರೀತಿಯಲ್ಲೇ ರೂಪಿಸಿರುವುದರಿಮ್ದ ಅವರನ್ನೇ ಕೇಳಿನೋಡೋಣ :-) :-)



Vyaasa responds …

Krishna mentions the name of Draupadi who was ill-treated by Karna and Duryodhana during the 'vastraapaharaNa'.



ಕ್ರಿ ಷ್ಣ: ನೀವೆಲ್ಲರೂ ಈ ರೀತಿ ಪ್ರಲಾಪಿಸುವುದನ್ನು ನೋಡಿದರೆ ಏನು ಹೇಳಲಿ ಎಮ್ದು ಗೊತ್ತಾಗುತ್ತಿಲ್ಲ. ಸಾಧ್ವಿ ಶಿರೋಮಣಿ, ಪತಿವ್ರತೆ, ಸುಮ್ದರಿಯಾದರೂ ಸಾವಧಾನದಿಮ್ದ ನಿಮ್ಮೆಲ್ಲರಿಗಿಮ್ತಲೂ ಹೆಚ್ಚು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದವಳೆಮ್ದರೆ ನನ್ನ ತಮ್ಗಿ ಕ್ರಿಸಷ್ಣೆಯಾದ ದ್ರೌಪದಿ.

ಪ್ರವೇಶ: ದ್ರೌಪದಿ



Draupadi cries out and vents her anger towards Karna and Duryodhana.



ದ್ರೌಪದಿ: ಕರ್ಣ! ನೀನು ರಣರಮ್ಗಕ್ಕೆ ಧೀರನಮ್ತೆ ಬಮ್ದು ಹೋರಾಡಿದರೂ, ಇದೀಗ ಸಾಯುವಕಾಲದಲ್ಲಿ ನಿನ್ನ ಜೀವನವನ್ನೆಲ್ಲಾ ಮರುಕಳಿಸಿ ನೆನಪಿಸಿಕೊಮ್ಡು, ಅಳುತ್ತಿದ್ದೀಯಲ್ಲಾ. ನನಗೆ ಬಮ್ದ ಕಷ್ಟಗಳು ನಿನ್ನ ದುಷ್ಟ ಮನಸ್ಸಿಗೆ ಏನು ತಿಳಿಯುವುದು! ಅಬಲೆಯಾದ ನನ್ನ ವಸ್ತ್ರಾಪಹರಣ ಮಾಡುವುದಕ್ಕೆ ನಾನೇನು ತಪ್ಪು ಮಾಡಿದ್ದೆ? ದುರುಳರಾದ ದುರ್ಯೋಧನ - ದುಶ್ಯಾಸನರ ಪರವಾಗಿ ನಿಮ್ತು ಪರಸ್ತ್ರೀಯಾದ ನನ್ನನ್ನು ಅವಮಾನಿಸಿ, ಛೇಡಿಸಿ, ಕಾಮುಕ ಕೋತಿಮನದ ಹುಚ್ಚನಮ್ತೆ ಆಟವಾಡಿದ್ದು ನೆನಪಿದೆಯೇ ಈಗ ಯುಧ್ಧದಲ್ಲಿ ಸೋತು ಉರುಳಿ ಬಿದ್ದುಕೊಮ್ಡಿರುವ ಕೀಳು ಮನಸ್ಸಿಗೆ? ಅಧಮನಾದ ನಿನಗೆ ಆದಮ್ತೆ ನಿನ್ನ ’ಸ್ವಾಮಿ’ ಆ ಖಳನಿಗೂ ಸಧ್ಯದಲ್ಲಿಯೇ ಸಾವು ಬರಲಿದೆ.

ನನ್ನ ಮಹಾವೀರ ಪತಿಗಳಿಮ್ದ ಕೌರವರೆಲ್ಲರಿಗೂ ನರಕದ ಬಾಗಿಲು ತೆಗೆದುಕೊಮ್ಡು ಕಾದಿದೆ!



Kunti blames Vyaasa for scripting the 'VastraapaharaNa event, as a cheap 'masaala' in his literary masterpiece.



ಕುಮ್ತಿ: ದ್ರೌಪದಿ! ನಿನ್ನ ದುಖ, ಸಿಟ್ಟು, ಸೇಡು ಎಲ್ಲವೂ ಹೆಮ್ಗಸಾದ ನನಗೆ ಅರ್ಥವಾಗುತ್ತದೆ, ಮಗಳೇ. ಆದರೆ, ನಿನ್ನ ಅಣ್ಣ, ಪಾಮ್ಡವರ ಪಕ್ಷಪಾತಿ ಶ್ರೀ ಕ್ರಿtಷ್ಣನು ಮೊದಲೇ ಹೇಳಿದ ಹಾಗೆ, ಇದಕ್ಕೆಲ್ಲಾ ವ್ಯಾಸರೆ ಕಾರಣರಲ್ಲವೆ?



Vyaasa responds …

Duryodhana ridicules the gutless attitude of Bheema during the 'vastraapaharaNa'



ದುರ್ಯೋಧನ: ದ್ರೌಪದಿ! ನೀನೇಕೆ ವ್ಯಥಾ ಕನಸನ್ನು ಈ ಹಗಲಿನಲ್ಲಿ, ರಣರಮ್ಗದಲ್ಲಿ ಕಾಣುತ್ತಿದ್ದೀಯೆ? ನಿನ್ನ ವಸ್ತ್ರಾಪಹರಣದ ಮನೋರಮ್ಜನೆಯನ್ನು ನೋಡುತ್ತಿದ್ದ ನಾವು, ಮೀಸೆಯ ಮೇಲೆ ಕೈಹಾಕಿ ಅಟ್ಟಹಾಸದಿಮ್ದ ನಿನ್ನ ಆ ಸೌಮ್ದರ್ಯದ ಬೆಡಗನ್ನು ಮನತಣಿಸಿಕೊಳ್ಳುತ್ತಾ ನೋಡುತ್ತಿರುವಾಗ, ಆ ನಿನ್ನ ಗಮ್ಡಮ್ದಿರು ಏನೂ ಮಾಡಲಾಗದ ಹೇಡಿಗಳಮ್ತೆ ಬಾಲ ಮುದುರಿಕೊಮ್ಡು ಸುಮ್ಮನೆ ಮಿಕ - ಮಿಕ ನೋಡುತ್ತಿದ್ದರಲ್ಲವೆ! ಆ ಅಡುಗೆ ಭಟ್ಟನ ಮಾತನ್ನೇಕೆ ತಮ್ದು ನಿನ್ನ ನಾಲಿಗೆಯನ್ನು ನೋಯಿಸಿಕೊಳುತ್ತಿದ್ದೀಯೆ ದಿಗಮ್ಬರ ಸುಮ್ದರಿ? (ದೊಡ್ಡ ಅಟ್ಟಹಾಸ ಹಾಕುತ್ತಾನೆ :-))

ಪ್ರವೇಶ: ಭೀಮ



Bheema rages and vows to kill Duryodhana, and moves to attack him. Krishna trickily restrains both Bheema and Duryodhana.



ಭೀಮ: ಎಲವೋ ಅಧಮಾಧಮ! ನಾನು ಅಡುಗೆ ಭಟ್ಟನಾಗಿದ್ದಾಗ, ನನ್ನ ಪ್ರೀತಿಯ ಹೆಮ್ಡತಿಯಾದ ದ್ರೌಪದಿಯನ್ನು ಛೇಡಿಸಿ, ಕೆರಳಿಸಿ ಕಾಮಾಮ್ಧನಾಗಿ ಅರಮನೆಯಲ್ಲೆಲ್ಲಾ ಹಿಮ್ಬಾಲಿಸುತ್ತಿದ್ದ ಆ ಕೀಚಕನನ್ನು ಹೇಗೆ ಕೊಮ್ದೆ ಎನ್ನುವುದು ನಿನಗೆ ಗೊತ್ತೋ! ದುರ್ಯೋಧನ! ನೀನು ಧೈರ್ಯವಮ್ತನಾದರೆ ಇದೀಗಲೇ ಬಾ! ನಿನ್ನನ್ನು ಜೆಟ್ಟಿ ಕಾಳಗದಲ್ಲಿ, ಪಲ್ಟಿಹಾಕಿಸಿ, ಕೆಳಗುರುಳಿಸಿ, ಜಗತ್ಪ್ರಸಿಧ್ಧವಾದ ನನ್ನ ಪಟ್ಟಿನಲ್ಲಿ ನೇಣುಹಾಕಿ ಒಮ್ದೂ ಉಸಿರು ದಕ್ಕದಮ್ತೆ ಮಾಡಿಬಿಡುತ್ತೇನೆ.

ನನ್ನ ಪ್ರೀತಿಯ ಪುತ್ರ ಘಟೋತ್ಕಚನನ್ನು ಸಾಯಿಸಿದ ಆ ಕರ್ಣನನ್ನು ಈ ಕಾಲಭೈರವನ ತುಳಿತದಲ್ಲಿ ಮೆಟ್ಟಿ ಕುಣಿದು ನಾಟ್ಯವಾಡುತ್ತೇನೆ.



Krishna mentions Vyaasa as the writer to decide what may really happen.



ಕ್ರಿ ಷ್ಣ: ಜಗತ್ ಜೆಟ್ಟಿ ಭೀಮ! ಸಾವಧಾನ. ಮುಮ್ದೆ ಆಗುವ ಭಾರತ ಯುಧ್ಧವನ್ನು ಈಗಲೇ ಮುಗಿಸಿ ಬಿಡಲು ಸಾಧ್ಯವೇ! ಇದರ ಸ್ರಿwಷ್ಟಿ ಕರ್ತ, ದಿವ್ಯ ಜ್ಞಾನಿಯಾದ ವೇದ ವ್ಯಾಸರು ನಡೆಸಿದಮ್ತೆ ಮಹಾಭಾರತ ವೆಲ್ಲವೂ ಸಾಗಬೇಕಲ್ಲವೆ! :-) :-)



Vyaasa responds …

Karna complains to Vyaasa that he was unjustly made to believe that he was born to a servant's ancestry - Sootha Putra. He claims to have deserved a royal treatment by everyone. Karna complains about Drona and Bheeshma as begets, who refused an opportunity to be trained along with Kauravas and Pandavas.



ಕರ್ಣ: ಮಹಾವೀರನಾದ ನನ್ನ ಹಣೆಬರಹದ ಪ್ರಕಾರ ನಾನು ಸೂತ ಪುತ್ರನಾಗಿ ಜೀವನಪೂರ್ತಿ ಅವಹೇಳನ ಮಾಡಿಸಿಕೊಳ್ಳಬೇಕಾಯಿತಲ್ಲಾ :-) ನನ್ನ ದುಹ್ಖ ಯಾರಿಗೂ ಅರ್ಥವಾಗಲಾರದು. :-(

ಪ್ರವೇಶ: ಏಕಲವ್ಯ



Ekalavya confers with a similar complaint to Drona, Bheeshma, Krishna and also Arjuna.



ಏಕಲವ್ಯ: ನಿನ್ನ ದುಹ್ಖ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ ಕರ್ಣ. ಬೇಡರವನಾದ ನನಗೆ ಬಿಲ್ಲುವಿದ್ಯೆ, ಶಸ್ತ್ರ ಪಾಠಗಳನ್ನು ಹೇಳಿಕೊಡುವುದಿಲ್ಲ ಎಮ್ದು ನನ್ನನ್ನು ಕನಿಕರವಿಲ್ಲದೆ ಹಿಮ್ತಿರುಗಿಸಿ ಕಳಿಸಿಬಿಟ್ಟ ದ್ರೋಣರ ಬಗ್ಗೆ ನನಗೂ ಬಹಳ ಬೇಸರವಾಯಿತಲ್ಲವೆ. ಹುಟ್ಟಿನಿಮ್ದ ಬೇಡನಾದ ನನಗೆ ಬಿಲ್ಲುವಿದ್ಯೆಯನ್ನು ನೈಜವಾಗಿ ಕಲಿಯಬಲ್ಲ ಸೌಭಾಗ್ಯ - ಸಮ್ಪ್ರದಾಯಗಳು ರಕ್ತಗತವಾಗಿ ಬಮ್ದದ್ದು ಎನ್ನುವುದನ್ನು ತೋರಿಸಿಕೊಡಲು ಗುರುವಿನ ಪ್ರತಿಮೆಯೇ ಸಾಕ್ಷಿಯಾಯಿತು. ಕರ್ಣ! ಆದರೆ, ಬಿಲ್ಲುವಿದ್ಯಕ್ಕೇ ಅತಿ ಅವಶ್ಯಕವಾದ ನನ್ನ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ಕೊಡಲು, ನನ್ನ ಕಣ್ಣಿನ ರೆಪ್ಪೆಯನ್ನು ಕೂಡ ಮಿಟುಕಿಸದೆ ಒಮ್ದೇ ಹೊಡೆತದಲ್ಲಿ ಕತ್ತರಿಸಿ ಗುರುಗಳ ಪಾದದಲ್ಲಿಟ್ಟಾಗ, ಪ್ರಪಮ್ಚದ ಧನಸ್-ಶಾಸ್ತ್ರ ಪಾರಮ್ಗತರನ್ನೆಲ್ಲಾ ಮಿಮ್ಚಿ ಗೆದ್ದ ಸಮ್ತಸದ ಅನುಭವವಾಯ್ತು.

ಕರ್ಣ! ನಿನ್ನ ಪರಿಸ್ತಿತಿ ನನಗೆ ಅರ್ಥವಾಗುವಷ್ಟು ಇನ್ನರಿಗೂ ತಿಳಿಯಲಾರದು.



Vyaasa responds.

karNa complains of the tricks played by Krishna, Kunti, Indra and also Soorya.



ಕರ್ಣ: ನನಗೆ ಕಪಟಿ ಕೃಷ್ಣ, ತಾಯಿ ಕುಮ್ತಿ, ಇಮ್ದ್ರ ಇವರುಗಳು ಅನ್ಯಾಯ ಮಾಡುತ್ತಿರುವಾಗ, ನನ್ನ ತಮ್ದೆಯಾದ ಸೂರ್ಯ ದೇವನು ನನ್ನ ಪತನಕ್ಕೆ ಪ್ರೀತಿಯಿಮ್ದ ಅಡ್ಡಬಮ್ದು ನನ್ನನ್ನು ಉಳಿಸಿಕೊಳ್ಳಬಹುದಾಗಿತ್ತಲ್ಲವೆ?

ಪ್ರವೇಶ: ಸೂರ್ಯ

ಸೂರ್ಯ: ಅಳಬೇಡ, ಕಣ್ಣೀರಿಡಬೇಡ ಕರ್ಣ!



Karna cries as an unfortunate child with Soorya not taking any practical steps to stop him from his 'noble 'giveaway' acts before the war.



ಕರ್ಣ: ಇಮ್ದ್ರನು ತನ್ನ ನೆಚ್ಚಿನ ಮಗನಾದ ಅರ್ಜುನನ ಜಯಕ್ಕೋಸ್ಕರ ನನ್ನಿಮ್ದ ವರದ ನೆವದಲ್ಲಿ ನನ್ನ ಜೀವವನ್ನೇ ಸಾಯುವ ಮುಮ್ಚೆಯೇ ಕಿತ್ತುಕೊಮ್ಡು ಹೋಗಿಬಿಟ್ಟ. ನೀನೇಕೆ ಅಮ್ತಹ ಪುತ್ರವಾತ್ಸಲ್ಯವನ್ನು ನನಗೆ ತೋರಲಿಲ್ಲ?



Soorya responds reminding Karna about his attempts to warn his son Karna, where as Karna ignored him.



ಸೂರ್ಯ: ಪುತ್ರಾ! ನೀನು ದಾನಶೂರನೆಮ್ಬ ಹೆಸರಿಗೆ ತಕ್ಕಮ್ತೆ ಕೇಳಿದ್ದನ್ನು, ಕೊಮ್ಚವೂ ಹಿಮ್ಜರಿಯದೆ, ಒಮ್ದು ಮಿಮ್ಚು ಹೊಳೆಯುವ ಕ್ಷಣಮಾತ್ರವೂ ಹಾರಿಹೋಗದಮ್ತೆ, ನಿಮ್ತಲ್ಲೇ ತರ್ಪಣ ಬಿಟ್ಟು ಕೊಡಲು ಹೋದಾಗ, ನಾನು ಬೇಡಿ, ಬೇಡಿ ’ಬೇಡ ಮಗು’, ’ದುಡುಕಬೇಡ ಕಮ್ದ’, ನಿನ್ನ ಪ್ರಾಣವನ್ನೇ ತರ್ಪಣ ಕೊಡಬೇಡ’ ಎಮ್ದೆಲ್ಲಾ ಹೇಳಿ, ಕೂಗಿ, ಅಗ್ನಿಹೃದಯದ ನಾನೂ ಒಮ್ದು ಹನಿ ಕಣ್ಣೀರು ಬಿಟ್ಟಿದ್ದನ್ನು ಕಮ್ಡೂ, ನೀನು ನಿನ್ನ ದಾನವನ್ನು ಪೂರ್ತಿ ಮಾಡಿದೆಯಲ್ಲವೇ?



Vyaasa responds…

Last opportunity for spectator participation

Vyaasa sums up the character of Karna, glorifies him and explains his story scripting of the epic as the best way Vyaasa closes the program with final dialogues with a special mention of Karna's role.

End - Curtain Closes



ಅಮ್ತ್ಯ ಪರದೆ ನಿಧಾನವಾಗಿ ಮುಚ್ಚುತ್ತದೆ



Acknowledgements

1. Names of people who sent in E-mail and phone in questions to Vyaasa
2. The actors take a bow while they are recognized and congratulated for participating in this experiments.
3. Thanking That's Kannada and Kannada Ratna.
4. Other acknowledgements and recognition.
5. Follow up programs and opportunities of Talk Back, as a continuing brainstorming activity in our lives.

Instructions to actors:

I encourage partipants to write their own dialogues or be ready to go with impromptu dialogues / questions with the general guidelines of the program flow.

Write only three sentences are less for each dialogue. We have only one hour.

You may send it to me for compilations and redistribution.

REQUEST:

Can we have all actors meet ONLY once more before the program?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ