ಶುಕ್ರವಾರ, ಫೆಬ್ರವರಿ 4, 2011

ಅನ್ವರ್ಥ ನಾಮಾವಳಿ

ಅನ್ವರ್ಥ ನಾಮಾವಳಿ
ಕೆ. ಆರ್. ಎಸ್. ಮೂರ್ತಿ

ಸಣ್ಣ ಕಣ್ಣಯ್ಯ

ಇವನಿಗೆ ಚೀನಯ್ಯ, ನಿಪ್ಪಾನಯ್ಯ, ಕೊರಿಯಯ್ಯ, ವಿಯೇಟ್ಟನಾಮಯ್ಯ ಇತ್ಯಾದಿ ಹೆಸರುಗಳುಂಟು.

"ಯ್ಯ" ಇರುವ ಕಡೆ "ಮ್ಮ: ಅಥವಾ "ಕ್ಕ" ಹಾಕಿಕೊಳ್ಳಿ.

ಅರ್ಧ ಕಾಲೇಶ್ವರ

ಒಬಾಮ ಒಬ್ಬ ಅರ್ಧ ಕಾಲೇಶ್ವರ.

ಕೆಂಪು ಕಂಠಯ್ಯ

ಟೆಕ್ಸಾಸಿನ ಗೌರವರ್ಣೀಯ ಒರಟನಿಗೆ ಕೊಟ್ಟ ಬಿರುದು

ಬಚ್ಚಲು ಬಾಯಿ

ಯಾವಾಗಲೂ ಇಂಗ್ಲೀಷಿನ ನಾಲ್ಕು ಅಕ್ಷರದ ಪದಗಳ ಅಷ್ಟೋತ್ತರ ಮಂತ್ರ ಬೊಗಳುವ ಕೊರಚನಿಗೆ ಈ ಹೆಸರನ್ನು ಕೊಡಬಹುದು
ತುಂಟ ವ್ಯಾಲಂಟನ ದಿನ
ಕೆ. ಆರ್. ಎಸ. ಮೂರ್ತಿ

ಲಂಪಟ ತುಂಟ ವ್ಯಾಲಂಟ ಅಂತೂ ಮತ್ತೊಮ್ಮೆ ಬರಲಿರುವ
ಅಂಟಿಸಿ, ಜಂಟಿ ಕಟ್ಟಿ ಅವನ - ಅವಳ ಆಟವಾಡಿಸುವಲಿರುವ

ಹದಿನಾಕರಂದು ಚಂದಿರನ ಹಾಲು ಬೆಳದಿಂಗಳಿನ ಅಂಗಳದಲ್ಲಿ
ಜೇನಿನ ಹನಿಗಳು ತುಂತುರು ತುಂತುರಾಗಿ, ಮೂಡಿ ಆಗಸದಲ್ಲಿ

ಧರೆಗೆ ಧಾರೆ ಧಾರೆಯಾಗಿ ಇಳೆಯೆ, ನಾನೂ ನೀನೂ ನೆನೆಯುವ
ಬರಿ ಬೆತ್ತಲಲಿ ಮಿಲನದಲಿ ಮೀಯುವ ಮದನ ರತಿಯರಾಗುವ

ಬಾರಾ! ಮನದಣಿಯುವ ಮೈಮನಗಳ ಮರೆತು ಬೆರೆವ ಬಾರಾ!
ಒಬ್ಬರನ್ನೊಬ್ಬರ ಏರಿ ತಾರಾ ಮಂಡಲಗಳ ಅಲೆಯುವ ಬಾರಾ!

ತನುಗಳ ಸವಿಯುತ ಇಬ್ಬರೂ ಒಬ್ಬರನ್ನೊಬ್ಬರ ರುಚಿಸುವ ಬಾರಾ!
ಒಬ್ಬರ ಮನದಲಿ ಇನ್ನೊಬ್ಬರು ಹೊಕ್ಕು ಲೋಕಗಳ ರಚಿಸುವ ಬಾರಾ!

ಮಂಗಳವಾರ, ಜನವರಿ 25, 2011

ಬೇಡ ಶಾಪ

ಬೇಡ ಶಾಪ
ಕೆ. ಆರ್. ಎಸ್. ಮೂರ್ತಿ

ಕೊಡದಿದ್ದರೆ ಬೇಡ ಹೋಗೋ ಹಾರುವಯ್ಯ
ಬೇಡ ನಾನೆಂದು ಬಿಲ್ಲು ಬಾಣದ ನಿನ್ನ ಶಿಷ್ಯ

ಹುಟ್ಟಿನಲಿ ಬೇಡ, ನನಗೇನೂ ಬೇಡ ಪಾಠ
ಬಿಟ್ಟೂ, ಬಿಟ್ಟೂ, ಗುರಿಯಿಟ್ಟೂ ಆಗುವೆ ನಿರತ

ಗುರುದಾನ ಕೇಳಿ, ಹೆಬ್ಬೆಟ್ಟ ಕಸಿದು ಕೊಂಡೆ
ಪಾರ್ಥನನು ಮೀರಿದವ ಇರಬಾರದೆಂದೇ

ಹೆಬ್ಬೆರಳು ಗೆದ್ದಿತು, ಶಿಷ್ಯನನು ಸೋಲಿಸುವ
ಇನ್ನೊಬ್ಬ ಶಿಷ್ಯನಾನು ಇರಬಾರದೆಂಬ ನೆವ

ಕೊಡುವೆನೋ ನಿನಗೆ ವರ ಶಾಪವೊಂದು
ಶಿಷ್ಯನೇ ನಿನ್ನ ಶತ್ರು, ಮೃತ್ಯುವಾಗಲೆಂದು

ಸಾಧಕರು

ಸಾಧಕರು
ಕೆ. ಆರ್. ಎಸ್. ಮೂರ್ತಿ

ಭೃಂಗದ ಬೆನ್ನೇರಿ ಬಂದ ಬೇಂದ್ರೆ.
ಭರ್ಜರಿ ಬೆಂದವರಿಗೆ ಮಾತ್ರ ಬೇಂದ್ರೆ

ಆಶು ಕವಿ, ಆಶು ವಾಕ್ ಪಟುವೆಂದರೆ
ಸದಾ ಸಿಧ್ಧ, ನೀ ತನನಾನ ಎಂದರೆ

ನಾರದನ ನಾಕೂ ತಂತಿ ಮೀಟಿದಂತೆ
ನಾರಾಯಣನನೇ ಶಯನದಿಂದೆದ್ದಂತೆ

ಗಂಗೆಯ ಇಳಿಸಿದ ಸಾಧನ ಕೇರಿಯ ಸಿಧ್ಧ
ಪದ ಲಾಲಿತ್ಯದ ಬುಧ್ಧಿವಂತರಲಿ ನೀ ಬುಧ್ಧ
--

ಭಾನುವಾರ, ಜನವರಿ 23, 2011

ಜೇನುಗನಸು

ಜೇನುಗನಸು
ಕೆ. ಆರ್. ಎಸ್. ಮೂರ್ತಿ

ಏರು ಬೇಗ ಬೆಡಗಿ; ಏರು ರೋಮಾಂಚನದ ಮಂಚಕ್ಕೆ ಮೈ ತಲುಕಿಸಿ
ನಾರಿ ನಿನಗಾಗೇ ಅಲಂಕರಸಿ ಕಾದಿಹೆ ಕುಸುಮಗಳ ಸುವಾಸನೆ ಸಿಂಚಿಸಿ

ಮಾರ ಶರವು ನಿನಗೆಂದೇ ಕಾದಿಹುದು ಕೆಂಪು ಕೆಂಡವಾಗಿ ಬೆಳೆದೂ ಬೆಳೆದೂ
ನರ ಮಂಡಲವೆಲ್ಲಾ ನೆಗೆದು ಏಳಕೊಂಡಿವೆ ಬಿಗಿಯಾಗಿ, ಸೆಟೆದೂ ಸೆಟೆದೂ

ಚಂದಿರನು ಕಾದಿಹನು ಹುಣ್ಣಿಮೆಯ ಹಾಲನ್ನು ಕೋಮಲೆ ನಿನಗೆ ಸ್ನಾನಕ್ಕೆಂದು
ಇಂದಿರನ ವದನೆಯರು ಕಾಮ ವರ್ಧಿನಿ ರಾಗದ ವಿಲಂಬಿತ ಆಲಾಪನೆಗೆಂದು

ದುಂಬಿಗಳ ಹಿಂಡು ಕೋಟಿ ಕೋಟಿ ನೂರಾರು ಮಲಿಗಳೇ ಹಾರಾಡಿ ವನವೆಲ್ಲಾ
ಕುಸುಮಗಳು ಅನೇಕಾನೇಕ ಮಧುವ ಧಾರೆ ಎರೆದಿವೆ ಬಣ್ಣ ಬಣ್ಣದ ಬಟ್ಟಲಲೆಲ್ಲಾ

ನಿನ್ನಧರಗಳೇ ಸವಿಯಲ್ಲವೇ ಜೇನಿನ ಸುಧಾಮೃತವನು ಸುರಿಸುವ ಕಾಮಧೇನು
ಹರಿಸುವುದು ಗಂಗಾಧಾರೆ, ರಭಸದಲಿ ಭೋರ್ಗರೆದು ಧಮನಿಯಲಿ ಆನಂದವನು

ಹೊಸತು ಹೊಸೆಯುವ, ಹಸಿವ ತಣಿಸುವ, ಆಸೆಗಳ ಬೆಸೆಯುವ, ಒಂದೇ ಕನಸ ಕಾಣುವ
ವಿನ್ಯಾಸದ ಲಾಸ್ಯವನಾಡುವ, ಬಂಧನದ ಭಾಷೆಯಾಡುವ, ನಿಮಿಷವನೇ ನಿಲ್ಲಿಸಿಬಿಡುವ

ಗುರುವಾರ, ಜನವರಿ 20, 2011

ತಿರುಕನ ನನಸು

ತಿರುಕನ ನನಸು
ಕೆ. ಆರ್. ಎಸ್. ಮೂರ್ತಿ

ಪೆದ್ದರಲಿ ಅತಿ ಪೆದ್ದ ದಡ್ಡರಲ್ಲೆಲ್ಲಾ, ಮಹಾ ದಡ್ಡನಾಗಬೇಕೆಂಬ ಅಸಾಮಾನ್ಯ ಬಯಕೆ
ಈ ಕ್ಷಣದಲ್ಲೇ ಸಿಧ್ಧನಾಗಿಹೆ ನಾನು, ಭಾವಿಗೆ ಹಾರಿ ಬಿದ್ದು ಪ್ರಾಣವನ್ನು ತ್ಯಜಿಸುವುದಕೆ

ಸತ್ತು, ಮುಂದಿನ ಜನುಮದಲಿ ಮತ್ತೆ ಆಗುವೆ ಪೆದ್ದೇಶ್ವರ ಚಕ್ರವರ್ತಿ, ಪೆದ್ದ ಗಂಡನಾಗಿ
ಹುಟ್ಟಿ ಮತ್ತೆ ಬರುವ ಮಹದಾಸೆಯಿದೆ; ಸಾಧ್ಯವೇ ಇಲ್ಲವೆನುವುದನು ಸಾಧಿಸುವೆ ದಿಟವಾಗಿ

ಪೆದ್ದನಾದರೇನಂತೆ, ತ್ರಿಪುರ ಸುಂದರಿ, ಅಪ್ರತಿಮ ಜಾಣೆ, ರಾಜ ಕುವರಿಯ ಬಲಗೈ ಹಿಡಿವೆ
ದಡ್ಡನಾದರೇನಂತೆ, ದೊಡ್ಡ ಅರಮನೆಯ ಅಂತಃಪುರದಲಿ ರಾಜಕುವರಿಯೊಡನೆಯೇ ಮಲಗುವೆ

ಫಕ್ಕನೆ ನಗಬೇಡಿ, ಇಂತಹ ಕನಸನು ತಿರುಕನ ಕನಸೆಂದು ಕಿಂಚಿತ್ತೂ ಹೀಯಾಳಿಸಲೇ ಬೇಡಿ
ಅಸಾಧ್ಯವು ಕೂಡ ಆಗಬಲ್ಲುದು, ಮೂರ್ಖನಿಗೂ ಗರವೊಮ್ಮೆ ಬಡಿಯಬಹುದು ಯೋಚಿಸಿನೋಡಿ

ರಾಜನ ಕಟ್ಟಪ್ಪಣೆಯಂತೆ ಧೂತರು ಕುದುರೆಯೇರಿ ಧಾವಿಸಿ ಬರುವಾಗ ಇಡೀ ನಗರದಲ್ಲೇ
ದೊಡ್ಡ ಮೂರ್ಖನನು ಹುಡುಕುತ್ತಿರುವಾಗ ನಾನು ಪ್ರತ್ಯಕ್ಷ ಅದೇ ಕಾಡಿನ ಅವರ ದಾರಿಯಲೇ

ಹತ್ತುವೆನು ಭರದಲ್ಲಿ ಕೈಲಿ ಕೊಡಲಿಯೊಂದನು ಹಿಡಿದು, ಏರುವೆನು ಅತಿ ಎತ್ತರದ ದೊಡ್ಡ ಮರವನ್ನು
ಕೊಂಬೆಯ ತುದಿಗೇರಿ, ಕೊಡಲಿಯ ಹೊಡೆದು ಕೂತ ಕೊಂಬೆಯನೇ ಕತ್ತರಿಸುವ ಯೋಜನೆ ಮಾಡುವೆನು

ಧೂತರಿಗಿಂತ ಪೆದ್ದನಂತೂ ನಾನಲ್ಲ; ಪೋಲೀಸು ಪ್ಯಾದೆಗಳಿಗಿಂತ ಪೆದ್ದರುಂಟೇ ಈ ಲೋಕದಲ್ಲಿ ಹೇಳಿ?
ಬಂಧಿಸಿ ಒಯ್ಯುವುದು ಖಂಡಿತವು ನನ್ನನ್ನು; ಮುಂದಿನ ಕಥೆಯನ್ನು ನೀವೇ ಕೇಳೋಣ ಬೇಗ ಬೇಗ ಹೇಳಿ!

ಕನ್ನಡತಿಗೆ ಉತ್ಸವ

ಕನ್ನಡತಿಗೆ ಉತ್ಸವ
ಕೆ. ಆರ್. ಎಸ್. ಮೂರ್ತಿ

ಅಕ್ಷರ ಮಾಲೆಯ ಪೋಣಿಸಿದ ಕಂಠೀ ಹಾರ
ಸುಗಂಧ, ಮಲ್ಲಿಗೆ, ಗುಲಾಬಿ, ಕನಕಾಂಬರ

ಸಿಂಪಡಿಸುವೆವು ಸಿರಿಗಂಧ, ಚಂದನ, ಪನ್ನೀರು
ನಿರಂತರ ಮೈಮೇಲೆಲ್ಲಾ ಪಸರಿಸುವ ತುಂತುರು

ರಂಗು ರಂಗಿನ ನಯ ರೇಶಿಮೆಯ ಸೀರೆ ಉಡಿಸಲು
ಪಚ್ಚೆ, ಸುವರ್ಣ, ರತ್ನ ಅಲಂಕರಿಸಿದ ಪಸಿರು ಶಾಲು

ಕಾವೇರಿಯೇ ಮಾಡಿಸುತಾಳೆ ನಿನಗೆ ನಿತ್ಯ ಸ್ನಾನ
ಜೋರಿನ ಜೋಗ ಜಲಪಾತದ ಭರದ ಅಭ್ಯಂಜನ

ದುಂಬಿಯ ತಂಬೂರಿಯ ಶೃತಿ ಗುನುಗುವ ತನನಾನ
ಕರುನಾಡಿನ ಗಿಣಿ, ಕೋಗಿಲೆ ವೃಂದದ ಆಲಾಪನ
ಸ್ವರನಾಡಿನ ಗಿಣಿ, ಕೋಗಿಲೆ ವೃಂದದ ಆಲಾಪನ

ಸಾವಿರ ನಯನದ ಸಾವಿರ ಮಯೂರಗಳ ಕುಣಿತ
ವಾನರ ಸೈನ್ಯದ ಹುರುಪಿನ ಕೇಕೆಯಾಟದ ನೆಗೆತ

ವೀಳ್ಯ ಲೇಪಿತ ಕೆಂಪೇರಿದ ತೊಂಡೆಯ ತುಟಿಯ ಬಾಯಿ
ನಡೆವಾಗ ಹಾದಿಯಲಿ ಕೋಟಿ ತೆಂಗಿನ ಈಡು ಕಾಯಿ

ಕನ್ನಡತಿ ಬಾರೇ, ಕಣ್ತುಂಬ ನೋಡಿ ಧನ್ಯವಾದೇವು
ಎಡೆ ಬಿಡದೆ ಉತ್ಸಾಹದ ಅಮ್ಮನುತ್ಸವವ ನಡೆಸುವೆವು

ಕನ್ನಡತಿಯೇ ಸರಸತಿ, ವಾಗ್ದೇವಿ, ಗಾನ ಶಾರದೆಯು
ಕನ್ನಡಕೇ ಮೀಸಲು ನಮ್ಮೆಲ್ಲರ ಗುಂಡಿಗೆಯ ಗುಡಿಯು