ಮಂಗಳವಾರ, ಮೇ 11, 2010

ಕರ್ಣನ ತಿರುಗು ಬಾಣಕ್ಕೆ ವೇದ ವ್ಯಾಸರ ಶಮನಾಸ್ತ್ರ

http://thatskannada.oneindia.in/nri/article/2002/2812murthy1.html


ಕರ್ಣನ ತಿರುಗು ಬಾಣಕ್ಕೆ ವೇದ ವ್ಯಾಸರ ಶಮನಾಸ್ತ್ರ

ಮಂಗಳವಾರ, ಡಿಸೆಂಬರ್ 3, 2002 Hrs (FIRST part)

*ಕೆ. ಆರ್‌. ಎಸ್‌. ಮೂರ್ತಿ

ಆಕಾಶದಲ್ಲಿ ಕೋಟಿ, ತೂತುಗಳಾಗಿಬಿಟ್ಟಿದೆಯೋ ಎಂಬಂತೆ ಬಿಡುವಿಲ್ಲದೆ ಭೋರ್ಗರೆಯುವ ಮಳೆ; ಹಲವು ದಶಕಗಳ ಹಿಂದೆ ಇದ್ದ ಏರ್‌ ಕಂಡೀಷಂಡ್‌ ನಗರವಾಗಿದ್ದ ನಮ್ಮೆಲ್ಲರ ಆತ್ಮೀಯ ಬೆಂಗಳೂರಿನಂತಹ ಹಾಯೆನಿಸುವ ಹವೆಗೆ ಹೆಸರಾದ ನಮ್ಮ ಸಿಲಿಕಾನ್‌ ಕಣಿವೆಯಲ್ಲಿ ಜಡಿಮಳೆ ಪ್ರಾರಂಭವಾಗಿ ಒಂದು ವಾರವಾಗಿತ್ತು.

ವರ್ಷವೆಲ್ಲ ತಿಂಗಳಿಗೊಂದರಂತೆ ಕಾರ್ಯಕ್ರಮಗಳನ್ನು ನಡೆಸಿದ ಸಾಹಿತ್ಯ ಗೋಷ್ಠಿಗೆ ತಮ್ಮ ಒಂದು ವರುಷದ ಕಂದನ ತೊಟ್ಟಿಲು ತೂಗುವ ದೃಢ ನಿರ್ಧಾರದಿಂದಾಗಿ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮಕ್ಕೆ ವೇದ ವ್ಯಾಸರೇ ಸ್ವತಃ ಬಂದುಬಿಟ್ಟಿದ್ದರು. ತನ್ನ ಕಂದವಾದರೂ, ಅಲ್ಲಿ ನೆರೆದ ಇತರ ಸಾಹಿತ್ಯ ತಪಸ್ವಿಗಳು ಸಂಸಾರ ಸಮೇತ ಮಗುವನ್ನು ಮಡಿಲಲ್ಲಿಟ್ಟು ಹೆಮ್ಮೆಪಡುತ್ತಿರುವಾಗ ಆನಂದ ಭಾಷ್ಪದ ಹನಿಯಾಂದು ವ್ಯಾಸರ ಕಣ್ಣಲ್ಲಿ ಮೂಡಿತು.

‘ವ್ಯಾಸರೊಡನೆ ಸಂವಾದ’ ದ ಕಾರ್ಯಕ್ರಮದ ಮೊದಲಿಗೆ ಕೆ. ಆರ್‌. ಎಸ್‌. ಮೂರ್ತಿಯು ನೆರೆದಿದ್ದ ಪ್ರೇಕ್ಷಕರಿಗೆಲ್ಲ ‘ತಿರುಗು ಬಾಣ’ ಸಾಹಿತ್ಯ ಪ್ರಕಾರದ ಕಿರುಪರಿಚಯವನ್ನು ಮಾಡಿಕೊಟ್ಟರು. ಈ ಕಾರ್ಯಕ್ರಮವು ಒಂದು ಹೊಸ ಸಾಹಿತ್ಯ ಪ್ರಕಾರದ ಪ್ರಯೋಗವೆಂದು ತಿಳಿಸಿ ಅದರ ಸಣ್ಣ ವಿವರವನ್ನು ಕೊಟ್ಟರು.

ಸಾಹಿತ್ಯ ಪ್ರಕಾರದ ಹೊಸ ಪ್ರಯೋಗ

ಕನ್ನಡ ಸಾಹಿತ್ಯದಲ್ಲಿ, ಭಾರತದ ಸೋದರ ಭಾಷೆಗಳಲ್ಲಿ, ಪ್ರಪಂಚದ ಮಿಕ್ಕೆಲ್ಲ ಬಾಷೆಗಳಲ್ಲಿಕೂಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಒಂದು ದಿಕ್ಕಿನಲ್ಲಿ ಮಾತ್ರ ಸಾಹಿತ್ಯ ನದಿಯು ಹರಿಯುತ್ತಿದೆ. ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ, ಲೇಖಕನು ಓದುಗರೊಂದಿಗೆ ತನ್ನ ಸೃಷ್ಠಿಯ ಪಾತ್ರಗಳ ಮೂಲಕವೂ, ಸನ್ನಿವೇಶಗಳ ಮೂಲಕವೂ, ಕೆಲವು ಸಾರಿ ನೇರವಾಗಿಯೂ ಮಾತನಾಡುತ್ತಾನೆ. ಕವನ, ಕಾವ್ಯ, ಸಣ್ಣ ಕಥೆ, ಕಾದಂಬರಿ, ನಾಟಕ ಮೊದಲಾದ ವಿವಿಧ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಸಾಹಿತ್ಯನದಿಯ ದಿಕ್ಕನ್ನು ಓದುಗರ ಕಡೆಯಿಂದ ಲೇಖಕನ ದಿಕ್ಕಿಗೆ ಹರಿಸುವ ಪ್ರಯೋಗವಿದು ಎಂದು ತಿಳಿಸಿದರು.

‘ಲೇಖಕನಿಗೇ ತಿರುವಾದ ಸಾಹಿತ್ಯ ಪ್ರಕಾರವು ಪ್ರಪಂಚದಲ್ಲೇ ‘ದಿಕ್‌ ಪರಿವರ್ತಕ’ (Paradigm Shift) ಧೀಮಂತ ವಿಶ್ವಾಮಿತ್ರ ಸೃಷ್ಟಿ. ಇದನ್ನು ಈಗಿರುವ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಉಪಯೋಗಿಸಬಹುದು. ಕವನ, ಸಣ್ಣಕಥೆ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲೂ ಪರಿಣಾಮಕಾರಿಯಾಗಿ ಪ್ರಯೋಗಿಸಬಹುದು’ ಎಂದು ಬಣ್ಣಿಸಿದರು.

ಈ ಕಾರ್ಯಕ್ರಮದ ಕೇಂದ್ರ ಪಾತ್ರ: ಕರ್ಣ

ಕರ್ಣನ ಪಾತ್ರವನ್ನು ಕೇಂದ್ರೀಕರಿಸಿಕೊಂಡು, ಈ ಪ್ರಯೋಗಕ್ಕೆ ‘ಕರ್ಣನಿಂದ ವ್ಯಾಸರಿಗೇ ತಿರುಗುಬಾಣ’ ಎಂದು ಹೆಸರನ್ನು ಕೊಟ್ಟಿದ್ದರು. ಮುಖ್ಯ ಪಾತ್ರಗಳಲ್ಲಿ ಪದ್ಮನಾಭ ರಾವ್‌ ಅವರು ಕರ್ಣನಾಗಿ, ವಿಶ್ವನಾಥ್‌ ಹುಲಿಕಲ್‌ ಅರ್ಜುನನಾಗಿ, ಅನ್ನಪೂರ್ಣ ವಿಶ್ವನಾಥ್‌ ಕುಂತಿಯಾಗಿ, ಪ್ರಕಾಶ್‌ ನಾಯಕ್‌ ದುರ್ಯೋಧನನಾಗಿ, ಹನುಮಂತ ಶೆಟ್ಟರು ಶ್ರೀ ಕೃಷ್ಣನಾಗಿ, ವಿಜಯ ಏಳಂಜಿಯವರು ಏಕಲವ್ಯನಾಗಿ, ಗಣೇಶ ಕಡಬ ಭೀಮನಾಗಿ, ಮಧುಕಾಂತ್‌ ಕೃಷ್ಣಮೂರ್ತಿಯವರು ಭೀಷ್ಮನಾಗಿ, ಶಶಿಕಲ ನಿಂಬಾಳ್‌ ದ್ರೌಪದಿಯಾಗಿ ಮತ್ತು ವ್ಯಾಸನಾಗಿ ಮೂರ್ತಿ ಅಭಿನಯಿಸಿದರು.

ಈ ಕಾರ್ಯಕ್ರಮದಲ್ಲಿ ಸಭಿಕರಿಗೂ, ಹೊಸಬರೆಲ್ಲರಿಗೂ ರಂಗಪ್ರವೇಶ ಮಾಡುವ ಸದವಕಾಶವಿತ್ತು. ಕೆಲವರು ಅಂತರ್ಜಾಲದಲ್ಲಿ ಕಳಿಸಿದ್ದ ಪ್ರಶ್ನೆಗಳನ್ನು ಈ ಕಾರ್ಯಕ್ರಮದಲ್ಲಿ ಉಪಯೋಗಿಸಲಾಯಿತು. ಇಲ್ಲಿನ ಖ್ಯಾತ ನಟ, ನಿರ್ದೇಶಕರಾದ ಎಚ್‌. ಸಿ. ಶ್ರೀನಿವಾಸ್‌ ಅವರು ಅನೇಕ ಪ್ರಶ್ನೆಗಳನ್ನು ‘ಓದುಗನ’ ಪಾತ್ರದಲ್ಲಿ ಕೇಳಿದರು. ‘ಕನ್ನಡ ಪ್ರೇಮಿ’ ರವಿ ಗೋಪಾಲರಾವ್‌ ಅವರು ಕರ್ಣನ ಪಾತ್ರದ ಪರವಾಗಿ ಕೇಳಿ ಭಾಗವಹಿಸಿದಾಗ ವ್ಯಾಸರು ಅವರನ್ನು ‘ಎರಡನೆಯ ಕರ್ಣ’ ಎಂದು ಆತ್ಮೀಯವಾಗಿ ಕರೆದರು. ಮುಖ್ಯವಾಗಿ, ಅಂತರ್ಜಾಲದ ಮೂಲಕ ನಿತಿನ್‌ ರಘುವೀರ್‌ ಅವರು ಕರ್ಣ ಪಾತ್ರದ ಪರವಾಗಿ ಪ್ರಶ್ನೆ ಕಳಿಸಿದ್ದರು. ಎಲ್ಲ ಪ್ರಶ್ನೆಗಳನ್ನೂ ಸೂಕ್ತ ಪಾತ್ರಧಾರಿಗಳಿಗೆ ಸಮಯೋಕ್ತವಾಗಿ ಉಪಯೋಗಿಸಲು ಹೇಳಿ ಮೂರ್ತಿಯು ಪಾತ್ರಧಾರಿಗಳಿಗೆಲ್ಲರಿಗೂ ಕೊಟ್ಟಿದ್ದರು.

ಪಾತ್ರಧಾರಿಗಳಿಗೆ ಸಹಾಯಕವಾಗಿ ಮೂರ್ತಿಯು ಕಾರ್ಯಕ್ರಮದ ಧಾಟಿ ಅಥವ ನಡೆಯನ್ನು ಕನ್ನಡದಲ್ಲಿ ಬರೆದು ಕೊಟ್ಟಿದ್ದರು; ಆದರೆ, ಪಾತ್ರಧಾರಿಗಳೆಲ್ಲರೂ ತಮ್ಮ ಸ್ವಂತ ಆಶುಸಂಭಾಷಣೆಗಳನ್ನು ಉಪಯೋಗಿಸುವಂತೆ ಮೂರ್ತಿಯು ಉತ್ತೇಜಿಸಿದ್ದರು. ಆಶು ಸಂಭಾಷಣೆಯ ತಾಜಾ ರಸವು ಗಟ್ಟು ಮಾಡಿದ ಸಂಭಾಷಣೆಗಳಿಗಿಂತ ಚೆನ್ನಾಗಿರುತ್ತವೆ; ಆಗತಾನೇ ಅರಳಿದ ಸುಂದರ ಕುಸುಮದಂತೆ ಕಂಪು ಭರಿತವಾಗಿರುತ್ತವೆ.

ಈ ಅಂತರ್ಜಾಲದ ಓದುಗರಿಗೂ, ಈ ರೀತಿಯ ಪ್ರಯೋಗಗಳನ್ನು ಮಾಡಬಯಸುವರಿಗೆ ಸಹಾಯಕವಾಗಲೆಂದು ಈ ಕೆಳಗೆ ‘ಕರ್ಣನಿಂದ ವ್ಯಾಸರಿಗೆ ತಿರುಗುಬಾಣ’ ದ ನಡೆಯನ್ನು ಕೊಟ್ಟಿದೆ. ಇದನ್ನು ಉದಾಹರಣೆಯಾಗಿ ಉಪಯೋಗಿಸಿ ಸಾಹಿತ್ಯ ಪ್ರೇಮಿಗಳೂ, ನಾಟಕ ಪ್ರಿಯರೆಲ್ಲರೂ ಪ್ರಯತ್ನಿಸಬಹುದು. ವ್ಯಾಸರ ಮಹಾಭಾರತವಾಗಲಿ, ಇನ್ಯಾವ ಸಾಹಿತ್ಯವಾಗಲಿ ತೆಗೆದುಕೊಂಡು ಎಲ್ಲರೂ ತಮ್ಮದೇ ವಿಭಿನ್ನ ರೀತಿಯಲ್ಲಿ ‘ಲೇಖಕನೊಡನೆ ತಿರುಗು ಸಂವಾದ’ ದ ಸಾಹಿತ್ಯದ ನವದಿಕ್ಕನ್ನು ಹಿಡಿದು ಸಾಗಬಹುದು.

ಮರೆಯಬೇಡಿ: ಕಥೆ, ಕಾದಂಬರಿ, ನಾಟಕ, ಕವನ, ಹಾಸ್ಯ ಮೊದಲಾದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ನೀವು ಪ್ರಯೋಗ ಮಾಡಬಹುದು; ನೀವೆಲ್ಲರೂ ನಿಮ್ಮದೇ ಆದ ಸಾಮೂಹಿಕ ಸಾಹಿತ್ಯವನ್ನೂ ರಚಿಸಿ ನೋಡಬಹುದು.

ಸಾಹಿತ್ಯದ ಎಲ್ಲ ಪ್ರಕಾರಗಳೂ ಜೀವಂತವಾಗಿರಬೇಕಾದರೆ, ಪ್ರಪಂಚದ ಬೇರೆ, ಬೇರೆ ನಾಡುಗಳಲ್ಲಿರುವ ಸಾಹಿತಿಗಳು ಸೇರಿ, ಸಾಮೂಹಿಕವಾಗಿ ಅದನ್ನು ಪೋಷಿಸುತ್ತಾ ಸದಾ ಬೆಳೆಸುತ್ತಿರಬೇಕು; ಬಹುಮುಖ್ಯವಾಗಿ, ಸೃಷ್ಟಿ ಶೀಲ ಮಾಧ್ಯಮವಾದ ಸಾಹಿತ್ಯವನ್ನು ನಾವೆಲ್ಲರೂ ಹೊಸ, ಹೊಸ ದಾರಿಗೆ ತೆಗೆದುಕೊಂಡು ಹೋಗುತ್ತಿರಬೇಕು.

ಸಿಲಿಕಾನ್‌ ವ್ಯಾಲಿಯ ವ್ಯಾಸರು ಎಲ್ಲರಿಂದಲೂ ಇನ್ನು ಮುಂದೆಯೂ, ಇನ್ನೂ ಹೆಚ್ಚು ಪ್ರಶ್ನೆಗಳನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ. ನೀವೆಲ್ಲರೂ ನಿಮ್ಮ ತಿರುಗು ಬಾಣಗಳನ್ನು ನಿಮ್ಮ ಲೇಖನಿಯ ಧನಸ್ಸಿಗೆ ಹೂಡಿ; ನೀವೂ ಕೂಡ ವ್ಯಾಸರಾಗಿ ನಿಮ್ಮ ಚಿಂತನ ಶೀಲತೆಯನ್ನು ವ್ಯಕ್ತಪಡಿಸಿ.

ತಿರುಗುಬಾಣದ ಮೊದಲ ಹಂತ:

ಪ್ರವೇಶ: ದ್ರೌಪದಿ

ದ್ರೌಪದಿ: ಕರ್ಣ! ನೀನು ರಣರಂಗಕ್ಕೆ ಧೀರನಂತೆ ಬಂದು ಹೋರಾಡಿದರೂ, ಇದೀಗ ಸಾಯುವಕ ಾಲದಲ್ಲಿ ನಿನ್ನ ಜೀವನವನ್ನೆಲ್ಲಾ ಮರುಕಳಿಸಿ ನೆನಪಿಸಿಕೊಂಡು, ಅಳುತ್ತಿದ್ದೀಯಲ್ಲಾ. ನನಗೆ ಬಂದ ಕಷ್ಟಗಳು ನಿನ್ನ ದುಷ್ಟ ಮನಸ್ಸಿಗೆ ಏನು ತಿಳಿಯುವುದು! ಅಬಲೆಯಾದ ನನ್ನ ವಸ್ತ್ರಾಪಹರಣ ಮಾಡುವುದಕ್ಕೆ ನಾನೇನು ತಪ್ಪು ಮಾಡಿದ್ದೆ? ದುರುಳರಾದ ದುರ್ಯೋಧನ - ದುಶ್ಯಾಸನರ ಪರವಾಗಿ ನಿಂತು ಪರಸ್ತ್ರೀಯಾದ ನನ್ನನ್ನು ಅವಮಾನಿಸಿ, ಛೇಡಿಸಿ, ಕಾಮುಕ ಕೋತಿಮನದ ಹುಚ್ಚನಂತೆ ಆಟವಾಡಿದ್ದು ನೆನಪಿದೆಯೇ ಈಗ ಯುದ್ಧದಲ್ಲಿ ಸೋತು ಉರುಳಿ ಬಿದ್ದುಕೊಂಡಿರುವ ಕೀಳು ಮನಸ್ಸಿಗೆ? ಅಧಮನಾದ ನಿನಗೆ ಆದಂತೆ ನಿನ್ನ ‘ಸ್ವಾಮಿ’ ಆ ಖಳನಿಗೂ ಸದ್ಯದಲ್ಲಿಯೇ ಸಾವು ಬರಲಿದೆ.

ಕುಂತಿ: ದ್ರೌಪದಿ! ನಿನ್ನ ದುಖ, ಸಿಟ್ಟು, ಸೇಡು ಎಲ್ಲವೂ ಹೆಂಗಸಾದ ನನಗೆ ಅರ್ಥವಾಗುತ್ತದೆ, ಮಗಳೇ. ಆದರೆ, ನಿನ್ನ ಅಣ್ಣ, ಪಾಂಡವರ ಪಕ್ಷಪಾತಿ ಶ್ರೀ ಕೃಷ್ಣನು ಮೊದಲೇ ಹೇಳಿದ ಹಾಗೆ, ಇದಕ್ಕೆಲ್ಲಾ ವ್ಯಾಸರೆ ಕಾರಣರಲ್ಲವೆ?

ವ್ಯಾಸ: ದ್ರೌಪದಿ! ನಿನಗೆ ವಸ್ತ್ರಾಪಹರಣ ಮಾಡುವ ದುರ್ಮನಸ್ಸನ್ನು ಕೌರವರು ಪ್ರದರ್ಶಿಸಿದರೂ ನಿನಗೆ ನಿಜವಾಗಿಯೂ ವಸ್ತ್ರಾಪಹರಣವಾಗಲಿಲ್ಲ. ಈ ಘಟನೆಗಳಲ್ಲಿ ನಾನು ಓದುಗರಿಗೆ ಸಮಾಜದ ಹುಳುಕುಗಳನ್ನೂ, ಮನುಷ್ಯನ ಮನಸ್ಸಿನ ದುರ್ಬಲ ಶಕ್ತಿಗಳನ್ನೂ, ಕ್ಲಿಷ್ಟವಾದರೂ ಸನ್ನಿವೇಶಗಳ ಉಪಯೋಗಿಸಿ ಹೇಳುವ ಪ್ರಯತ್ನ ಮಾಡಿದ್ದೇನೆ. ಯಾವಾಗಲೂ, ಎಲ್ಲ ರೀತಿಯಲ್ಲೂ ಸಹನೆಯುಳ್ಳವನೂ, ಧರ್ಮವನ್ನು ಪಾಲಿಸುವ ಧರ್ಮರಾಯನೂ ಜೂಜಾಡುವ ಚಂಚಲತೆಗೆ ದಾಸನಾದುದರಿಂದ ತನ್ನದೆಲ್ಲವನ್ನೂ, ತಮ್ಮಂದಿರದೆಲ್ಲವನ್ನೂ, ಕೊನೆಗೆ ಹೆಂಡತಿಯನ್ನೂ ಪಣಕ್ಕಿಟ್ಟು ಕಳೆದುಕೊಳ್ಳುವ ಸ್ಥಿತಿಗೆ ಬಂದುಬಿಡುತ್ತಾನೆ. ಹೊರನೋಟಕ್ಕೆ ಸಣ್ಣ ತಪ್ಪೆಂದು ಕಂಡರೂ ಮನುಷ್ಯನ ಯಾವ ದುರ್ಬಲತೆಯಾದರೂ ಅದರಿಂದ ಬಹಳ ದೊಡ್ಡ ಹಾನಿಯಾಗಬಹುದೆಂಬುದನ್ನು ತೋರಿಸುವ ಘಟನೆ ಇದು. ಉಪ್ಪು ತಿಂದ ಮನೆಯನ್ನು ಎದುರುಹಾಕಿಕೊಳ್ಳಲು ದ್ರೋಣ, ಭೀಷ್ಮಾದಿಗಳೂ ಹೆದರಿ ಸ್ವಲ್ಪ, ಸ್ವಲ್ಪ ಮಾತ್ರ ಪ್ರತಿಭಟಿಸಿದರು. ಗೌರವಿತ ಆಚಾರ್ಯನಾಗಲೀ, ವಯಸ್ಸಿನಲ್ಲಿ ಹಿರಿಯವರಾಗಲೀ ಸಮಾಜವನ್ನು ಸಂಪೂರ್ಣವಾಗಿ ಪ್ರತಿಭಟಿಸುವುದು ಕಡಿಮೆ. ಇಂತಹವರು ಎಲ್ಲ ಸಮಾಜದಲ್ಲೂ ಇರುತ್ತಾರೆ. ದುಷ್ಟ ಶಕ್ತಿಗಳನ್ನು ಮುಖಾಮುಖಿ ಎದುರಿಸುವುದಕ್ಕೆ ಸಜ್ಜನರೂ, ಶಕ್ತಿಶಾಲಿಗಳೂ ಮೀನ-ಮೇಷ ಎಣಿಸುತ್ತಾರೆ.

ದ್ರೌಪದಿ! ನನ್ನ ಕಥೆಯನ್ನು ಈ ಸಮಯದಲ್ಲಿ ಮುಂದುವರಿಸುವ ದಾರಿ ಕಾಣಲಿಲ್ಲ. ಜೊತೆಗೆ ನಿನ್ನನ್ನು ನಗ್ನಳಾಗಿ ಮಾಡಿಬಿಡುವುದನ್ನು ನಿಲ್ಲಿಸಲು ಶ್ರೀ ಕೃಷ್ಣನ ಮಾಯೆಯನ್ನು ಇಲ್ಲಿ ಉಪಯೋಗಿಸಿಕೊಂಡೆ.

ದ್ರೌಪದಿ: ನನ್ನ ಮಹಾವೀರ ಪತಿಗಳಿಂದ ಕೌರವರೆಲ್ಲರಿಗೂ ನರಕದ ಬಾಗಿಲು ತೆಗೆದುಕೊಂಡು ಕಾದಿದೆ!

ದುರ್ಯೋಧನ: ದ್ರೌಪದಿ ! ನೀನೇಕೆ ವ್ಯಥಾ ಕನಸನ್ನು ಈ ಹಗಲಿನಲ್ಲಿ, ರಣರಂಗದಲ್ಲಿ ಕಾಣುತ್ತಿದ್ದೀಯೆ? ನಿನ್ನ ವಸ್ತ್ರಾಪಹರಣದ ಮನೋರಂಜನೆಯನ್ನು ನೋಡುತ್ತಿದ್ದ ನಾವು, ಮೀಸೆಯ ಮೇಲೆ ಕೈಹಾಕಿ ಅಟ್ಟಹಾಸದಿಂದ ನಿನ್ನ ಆ ಸೌಂದರ್ಯದ ಬೆಡಗನ್ನು ಮನತಣಿಸಿಕೊಳ್ಳುತ್ತಾ ನೋಡುತ್ತಿರುವಾಗ, ಆ ನಿನ್ನ ಗಂಡಂದಿರು ಏನೂ ಮಾಡಲಾಗದ ಹೇಡಿಗಳಂತೆ ಬಾಲ ಮುದುರಿಕೊಂಡು ಸುಮ್ಮನೆ ಮಿಕ - ಮಿಕ ನೋಡುತ್ತಿದ್ದರಲ್ಲವೆ! ಆ ಅಡುಗೆ ಭಟ್ಟನ ಮಾತನ್ನೇಕೆ ತಂದು ನಿನ್ನ ನಾಲಿಗೆಯನ್ನು ನೋಯಿಸಿಕೊಳುತ್ತಿದ್ದೀಯೆ ದಿಗಂಬರ ಸುಂದರಿ? (ದೊಡ್ಡ ಅಟ್ಟಹಾಸ ಹಾಕುತ್ತಾನೆ)

ಪ್ರವೇಶ: ಭೀಮ

ಭೀಮ: ಎಲವೋ ಅಧಮಾಧಮ! ನಾನು ಅಡುಗೆ ಭಟ್ಟನಾಗಿದ್ದಾಗ, ನನ್ನ ಪ್ರೀತಿಯ ಹೆಂಡತಿಯಾದ ದ್ರೌಪದಿಯನ್ನು ಛೇಡಿಸಿ, ಕೆರಳಿಸಿ ಕಾಮಾಂಧನಾಗಿ ಅರಮನೆಯಲ್ಲೆಲ್ಲಾ ಹಿಂಬಾಲಿಸುತ್ತಿದ್ದ ಆ ಕೀಚಕನನ್ನು ಹೇಗೆ ಕೊಂದೆ ಎನ್ನುವುದು ನಿನಗೆ ಗೊತ್ತೋ! ದುರ್ಯೋಧನ ನೀನು ಧೈರ್ಯವಂತನಾದರೆ ಇದೀಗಲೇ ಬಾ ! ನಿನ್ನನ್ನು ಜಟ್ಟಿ ಕಾಳಗದಲ್ಲಿ, ಪಲ್ಟಿಹಾಕಿಸಿ, ಕೆಳಗುರುಳಿಸಿ, ಜಗತ್ಪ್ರಸಿದ್ಧವಾದ ನನ್ನ ಪಟ್ಟಿನಲ್ಲಿ ನೇಣುಹಾಕಿ ಒಂದೂ ಉಸಿರು ದಕ್ಕದಂತೆ ಮಾಡಿಬಿಡುತ್ತೇನೆ.

ನನ್ನ ಪ್ರೀತಿಯ ಪುತ್ರ ಘಟೋತ್ಕಚನನ್ನು ಸಾಯಿಸಿದ ಆ ಕರ್ಣನನ್ನು ಈ ಕಾಲಭೈರವನ ತುಳಿತದಲ್ಲಿ ಮೆಟ್ಟಿ ಕುಣಿದು ನಾಟ್ಯವಾಡುತ್ತೇನೆ.

ಕೃಷ್ಣ : ಜಗತ್‌ ಜಟ್ಟಿ ಭೀಮ! ಸಾವಧಾನ. ಮುಂದೆ ಆಗುವ ಭಾರತ ಯುಧ್ಧವನ್ನು ಈಗಲೇ ಮುಗಿಸಿ ಬಿಡಲು ಸಾಧ್ಯವೇ! ಇದರ ಸೃಷ್ಟಿ ಕರ್ತ, ದಿವ್ಯ ಜ್ಞಾನಿಯಾದ ವೇದ ವ್ಯಾಸರು ನಡೆಸಿದಂತೆ ಮಹಾಭಾರತ ವೆಲ್ಲವೂ ಸಾಗಬೇಕಲ್ಲವೆ! :-) :-)

ವ್ಯಾಸ: (ಕೃಷ್ಣನು ನಗುವ ಧಾಟಿಯಲ್ಲೇ ನಕ್ಕು) ಕೃಷ್ಣ ! ನೀನು ಬೇರೆಯಲ್ಲ ನಾನು ಬೇರೆಯಲ್ಲ; ಸಮಯಕ್ಕೆ ಒಂದು ಉಪಾಯವನ್ನು ಹೂಡುವೆಯಲ್ಲಾ !

ಕರ್ಣ: ಮಹಾವೀರನಾದ ನನ್ನ ಹಣೆ ಬರಹದ ಪ್ರಕಾರ ನಾನು ಸೂತ ಪುತ್ರನಾಗಿ ಜೀವನಪೂರ್ತಿ ಅವಹೇಳನ ಮಾಡಿಸಿಕೊಳ್ಳಬೇಕಾಯಿತಲ್ಲಾ . ನನ್ನ ದುಃಖ ಯಾರಿಗೂ ಅರ್ಥವಾಗಲಾರದು.

ಪ್ರವೇಶ: ಏಕಲವ್ಯ

ಏಕಲವ್ಯ: ನಿನ್ನ ದುಃಖ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ ಕರ್ಣ. ಬೇಡರವನಾದ ನನಗೆ ಬಿಲ್ಲುವಿದ್ಯೆ, ಶಸ್ತ್ರ ಪಾಠಗಳನ್ನು ಹೇಳಿಕೊಡುವುದಿಲ್ಲ ಎಂದು ನನ್ನನ್ನು ಕನಿಕರವಿಲ್ಲದೆ ಹಿಂತಿರುಗಿಸಿ ಕಳಿಸಿಬಿಟ್ಟ ದ್ರೋಣರ ಬಗ್ಗೆ ನನಗೂ ಬಹಳ ಬೇಸರವಾಯಿತಲ್ಲವೆ. ಹುಟ್ಟಿನಿಂದ ಬೇಡನಾದ ನನಗೆ ಬಿಲ್ಲುವಿದ್ಯೆಯನ್ನು ನೈಜವಾಗಿ ಕಲಿಯಬಲ್ಲ ಸೌಭಾಗ್ಯ - ಸಂಪ್ರದಾಯಗಳು ರಕ್ತಗತವಾಗಿ ಬಂದದ್ದು ಎನ್ನುವುದನ್ನು ತೋರಿಸಿಕೊಡಲು ಗುರುವಿನ ಪ್ರತಿಮೆಯೇ ಸಾಕ್ಷಿಯಾಯಿತು. ಕರ್ಣ! ಆದರೆ, ಬಿಲ್ಲುವಿದ್ಯಕ್ಕೇ ಅತಿ ಅವಶ್ಯಕವಾದ ನನ್ನ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ಕೊಡಲು, ನನ್ನ ಕಣ್ಣಿನ ರೆಪ್ಪೆಯನ್ನು ಕೂಡ ಮಿಟುಕಿಸದೆ ಒಂದೇ ಹೊಡೆತದಲ್ಲಿ ಕತ್ತರಿಸಿ ಗುರುಗಳ ಪಾದದಲ್ಲಿಟ್ಟಾಗ, ಪ್ರಪಂಚದ ಧನಸ್‌-ಶಾಸ್ತ್ರ ಪಾರಂಗತರನ್ನೆಲ್ಲಾ ಮಿಂಚಿ ಗೆದ್ದ ಸಂತಸದ ಅನುಭವವಾಯ್ತು.

ಕರ್ಣ! ನಿನ್ನ ಪರಿಸ್ಥಿತಿ ನನಗೆ ಅರ್ಥವಾಗುವಷ್ಟು ಇನ್ಯಾರಿಗೂ ತಿಳಿಯಲಾರದು.

ವ್ಯಾಸ: ಕರ್ಣನು ಸೂತಪುತ್ರನೆಂದೂ, ಪಾಂಡವರು ಮತ್ತು ಕೌರವರುಗಳು ರಾಜ ಪುತ್ರರೆಂದೂ ನಂಬಿ ದ್ರೋಣ ಮೊದಲಾದ ಶಸ್ತ್ರಾಚಾರ್ಯರುಗಳು ನನ್ನ ಕಥೆಯಲ್ಲಿ ಕರ್ಣನನ್ನು ಅಲ್ಲಗಳೆದರು. ಇದನ್ನು ಸ್ವಲ್ಪ ಯೋಚಿಸಿನೋಡು ಕರ್ಣ. ಈ ಆಚಾರ್ಯರುಗಳು ಮೊದಲಿಗೆ ಬ್ರಾಹ್ಮಣರು; ರಾಜಾಶ್ರಯವಿಲ್ಲದೆ ಅವರ ವಿದ್ಯೆಯನ್ನು ಇನ್ಯಾರಿಗಾದರೂ ಹೇಳಿಕೊಟ್ಟರೆ ಅವರ ಹೆಚ್ಚುಗಾರಿಕೆ ಸಫಲವಾದೀತೇ? ತಮಗೆ ಅವಕಾಶವನ್ನು ಕೊಟ್ಟ ರಾಜನ ಪುತ್ರರಿಗೆ ಅವರ ಜೀವನ, ಅವರ ಉದ್ಯೋಗ ಮೀಸಲಾಗಿಟ್ಟಿದ್ದರು. ಆದ ಕಾರಣವೇ, ಅವರು ತಮ್ಮ ಆಶ್ರಯದಾತರಿಗೆ ಮುಡುಪಾಗಿಟ್ಟುಕೊಂಡಿದ್ದ ನಿಷ್ಠೆಯನ್ನು ಇತರರಿಗೆ ಹಂಚುವುದಕ್ಕೆ ಹಿಂಜರಿದರು. ನಮ್ಮ ಕಾಲದಲ್ಲಿ ಕೂಡ ಉದ್ಯೋಗಗಳು ಹುಟ್ಟಿದ ಜಾತಿಯನ್ನೇ ಅನುಸರಿಸುತ್ತಿದ್ದವು; ಹಾಗಂದ ಮಾತ್ರಕ್ಕೆ, ಈ ಸಂಪ್ರದಾಯದಿಂದ - ಕುರುಡೆನ್ನೀ, ಸಮಾಜದ ಕುಂದುಕೊರತೆ ಹಾಗೂ ಅನ್ಯಾಯವೆನ್ನೀ - ರಾಜರಿಗೆ, ಕ್ಷತ್ರಿಯ ಕುಲದವರಿಗೆ ಮೀಸಲಾಗಿದ್ದ ಉದ್ಯೋಗವೆಂದು ಸನ್ನಿವೇಶಗಳಮೂಲಕ ಅವಹೇಳನ ಮಾಡುವ ಕಾರಣದಿಂದ ಕಥೆಯಲ್ಲಿ ಬರೆದೆ. ಇಲ್ಲಿನ ತಮಾಷೆ ಏನೆಂದರೆ, ಓದುಗರಿಗೆಲ್ಲಾ ಕರ್ಣನು ಸೂತನಲ್ಲ ಎಂದು ಗೊತ್ತಿದೆ; ಪಾತ್ರಗಳಿಗೆ ಮಾತ್ರ ಗೊತ್ತಿಲ್ಲ!

ಏಕಲವ್ಯನ ಕಥೆಯಲ್ಲಿಯೂ ಅಷ್ಟೆ: ಕ್ಷತ್ರಿಯ ಯುವಕನಾಗಿ, ದ್ರೋಣರಂತಹ ಅದ್ವಿತೀಯ ಆಚಾರ್ಯರಿಂದ ಕಲಿತ, ಇವನಿಗೆ ಸಮಾನರಾದ ಬಿಲ್ಲುಗಾರರು ಎಲ್ಲಿಯೂ ಇಲ್ಲ ಎಂದು ಅಹಂಕಾರದಲ್ಲಿ ಮುಳುಗಿದ್ದ ಅರ್ಜುನನಿಗೆ ಕಣ್ಣು ತೆರೆಸಲು ಅಳವಡಿಸಿದ ಕಥೆ; ವಿದ್ಯೆಯು ಮನಸನ್ನು ಕೇಂದ್ರೀಕರಿಸಿದ ಎಲ್ಲರಿಗೂ ಪ್ರಾಪ್ತವೆನ್ನುವ ದೃಷ್ಟಾಂತವನ್ನು ಏಕಲವ್ಯನನ್ನು ಕೇಂದ್ರೀಕರಿಸಿ ಓದುಗರಿಗೆ ತಿಳಿಸಿ ಹೇಳಿದ ಕಥೆ.

ಈ ದೃಷ್ಟಾಂತ ಧ್ಯೇಯದ ಕಥೆಯಲ್ಲಿ ದ್ರೋಣರು ಏಕಲವ್ಯನನ್ನು ಗುರುದಕ್ಷಿಣೆ ಕೇಳಿದಾಗ ಅವರ ಸ್ವಾರ್ಥದ ಹುಳುಕು ಪ್ರಪಂಚಕ್ಕೇ ಕಂಡುಬರುತ್ತದೆ. ಈ ಕಥೆಯಲ್ಲಿ ಮೊದಲಿನಿಂದ ಕೊನೆಯವರೆಗೂ ನಿರ್ಮಲ ಮನಸ್ಸನ್ನು ಉಳಿಸಿಕೊಳ್ಳುವವನು ಏಕಮಾತ್ರ ಪಾತ್ರದ ಏಕಲವ್ಯ; ಇಂತಹ ಅದ್ವಿತೀಯ ಬಿಲ್ಲುಗಾರನ ಮುಂದೆ, ಅರ್ಜುನನೂ ದ್ವಿತೀಯನಾಗಿಬಿಡುತ್ತಾನೆ; ಆಚಾರ್ಯರೂ ಕೂಡ ಅಲ್ಪರಾಗಿಬಿಡುತ್ತಾರೆ.

ಏಕಲವ್ಯನು ಹುಟ್ಟಿನಿಂದ ಬೇಡ. ಬೇಡನ ವೃತ್ತಿ ಬೇಟೆಯಾಡುವುದು; ಇದು ಇವನಿಗೂ, ಇವನ ಸಂಸಾರ ಪಾಲನೆಗೂ ಅತ್ಯವಶ್ಯಕ. ಆದರೆ, ಬೇಡನು ತನ್ನ ಕೆಲಸಕ್ಕೆ ಸಾಕಷ್ಟು ಬಿಲ್ಲುವಿದ್ಯೆಯನ್ನು ಕಲಿತಿದ್ದರೆ ಸಾಕು. ಪ್ರಪಂಚದಲ್ಲಿ ಎಲ್ಲರನ್ನೂ ಮೀರಿಸಿ ಬಿಲ್ಲುಗಾರ ನಾಗಬೇಕಾಗಿಲ್ಲ. ಇವನಿಗೆ ಯಾವ ಗುರುವೂ ಬೇಕಾಗಿಲ್ಲ. ಇವನಲ್ಲಿ ರಕ್ತಗತವಾಗಿ ಬಂದ ಪ್ರವೃತ್ತಿಯಾದ ಬಿಲ್ಲುಗಾರಿಕೆ ತನಗೆ ತಾನೇ ವ್ಯಕ್ತವಾಗುತ್ತದೆ. ಇವನಿಗೆ ಮನಸ್ಸನ್ನು ಕೇಂದ್ರೀಕರಿಸಲು ದ್ರೋಣರ ಪ್ರತಿಮೆ ಒಂದು ನೆಪವಾದ ಧ್ಯೇಯ ಮೂರ್ತಿ. ಜನ್ಮ ಸಹಜವಾದ ಬಿಲ್ಲುಗಾರ ಏಕಲವ್ಯ. ಇವನ ಮುಂದೆ ಎಲ್ಲರೂ ಸಾಮಾನ್ಯರು.

ಕರ್ಣ: ನನಗೆ ಕಪಟಿ ಕೃಷ್ಣ, ತಾಯಿ ಕುಂತಿ, ಇಂದ್ರ ಇವರುಗಳು ಅನ್ಯಾಯ ಮಾಡುತ್ತಿರುವಾಗ, ನನ್ನ ತಂದೆಯಾದ ಸೂರ್ಯ ದೇವನು ನನ್ನ ಪತನಕ್ಕೆ ಪ್ರೀತಿಯಿಂದ ಅಡ್ಡಬಂದು ನನ್ನನ್ನು ಉಳಿಸಿಕೊಳ್ಳಬಹುದಾಗಿತ್ತಲ್ಲವೆ?

ಪ್ರವೇಶ: ಸೂರ್ಯ

ಸೂರ್ಯ: ಅಳಬೇಡ, ಕಣ್ಣೀರಿಡಬೇಡ ಕರ್ಣ!

ಕರ್ಣ: ಇಂದ್ರನು ತನ್ನ ನೆಚ್ಚಿನ ಮಗನಾದ ಅರ್ಜುನನ ಜಯಕ್ಕೋಸ್ಕರ ನನ್ನಿಂದ ವರದ ನೆವದಲ್ಲಿ ನನ್ನ ಜೀವವನ್ನೇ ಸಾಯುವ ಮುಂಚೆಯೇ ಕಿತ್ತುಕೊಂಡು ಹೋಗಿಬಿಟ್ಟ. ನೀನೇಕೆ ಅಂತಹ ಪುತ್ರವಾತ್ಸಲ್ಯವನ್ನು ನನಗೆ ತೋರಲಿಲ್ಲ ?

ಸೂರ್ಯ: ಪುತ್ರಾ! ನೀನು ದಾನಶೂರನೆಂಬ ಹೆಸರಿಗೆ ತಕ್ಕಂತೆ ಕೇಳಿದ್ದನ್ನು, ಕೊಂಚವೂ ಹಿಂಜರಿಯದೆ, ಒಂದು ಮಿಂಚು ಹೊಳೆಯುವ ಕ್ಷಣಮಾತ್ರವೂ ಹಾರಿಹೋಗದಂತೆ, ನಿಂತಲ್ಲೇ ತರ್ಪಣ ಬಿಟ್ಟು ಕೊಡಲು ಹೋದಾಗ, ನಾನು ಬೇಡಿ, ಬೇಡಿ ‘ಬೇಡ ಮಗು’, ’ದುಡುಕಬೇಡ ಕಂದ’, ನಿನ್ನ ಪ್ರಾಣವನ್ನೇ ತರ್ಪಣ ಕೊಡಬೇಡ’ ಎಂದೆಲ್ಲಾ ಹೇಳಿ, ಕೂಗಿ, ಅಗ್ನಿಹೃದಯದ ನಾನೂ ಒಂದು ಹನಿ ಕಣ್ಣೀರು ಬಿಟ್ಟಿದ್ದನ್ನು ಕಂಡೂ, ನೀನು ನಿನ್ನ ದಾನವನ್ನು ಪೂರ್ತಿ ಮಾಡಿದೆಯಲ್ಲವೇ?

ವ್ಯಾಸ: ಕರ್ಣ! ನೀನು ಮಾಡಿದ ದಾನಗಳಬಗ್ಗೆ ಬೇಸರಪಡುವ ಕಾರಣವಿಲ್ಲ; ಕುಂತಿ! ನೀನು ಕೂಡ ನಿನ್ನ ಪುತ್ರನ ದಾನಗಳಿಗೆ ನೊಂದುಕೊಳ್ಳಬೇಕಾಗಿಲ್ಲ. ಕರ್ಣನು ಅತಿಪರಾಕ್ರಮಿ. ಬಿಲ್ಲುವಿದ್ಯೆಯಲ್ಲಿ ಅರ್ಜುನನ ಸಮಾನವಾಗಿಯೂ ಯುಧ್ಧ ಮಾಡಬಲ್ಲವನು. ಅದಕ್ಕಿಂತ ಹೆಚ್ಚಾಗಿ, ಸಾರಥಿಯಾದ ಶಲ್ಯನು ಅವನನ್ನು ತ್ಯಜಿಸಿದರೂ, ರಥವನ್ನು ತಾನೆ ನಡೆಸಿಕೊಂಡು, ಯುದ್ಧವನ್ನು ಮುಂದುವರಿಸಿದ ಅಸಮಾನ ವೀರ. ಗಾಂಢೀವಿಯೆಂದು ಹೆಸರಾದ ಅರ್ಜುನನೂ ಕೂಡ ಕರ್ಣನನ್ನು ಸೋಲಿಸಲಾಗಲೇ ಇಲ್ಲ. ತನ್ನ ಕರ್ಣಕುಂಡಲಗಳನ್ನೂ, ವಜ್ರಕವಚವನ್ನೂ ಒಂದು ಕಣ್ಣೂ ಮಿಟುಕಿಸದೆ ದಾನಮಾಡಿದರೂ ಅವನಿಗೆ ಸೋಲುಬರಲಿಲ್ಲ. ಕರ್ಣನನ್ನು ನ್ಯಾಯದಲ್ಲಿ ಸೋಲಿಸುವ, ಕೊಲ್ಲುವ ಸಾಧ್ಯತೆಯಿಲ್ಲವೆಂದಲೇ, ಕೃಷ್ಣನು ಅರ್ಜುನನಿಗೆ ಅಶಸ್ತ್ರನಾಗಿ, ರಥವನ್ನು ಮೇಲೆತ್ತಲು ಎರಡು ಕೈ-ಭುಜಗಳನ್ನೂ, ತನ್ನ ಪೂರ್ತಿ ದೇಹವನ್ನೂ ಕೊಟ್ಟಿರುವಾಗ ಮಾತ್ರ ಕೊಲ್ಲುವ ಅವಕಾಶವಿದೆಯೆಂದು ಸ್ಪಷ್ಟವಾಗಿ ಹೇಳುತ್ತಾನೆ. ಕವಿಯಾದ ನಾನು ಕರ್ಣನ ಮಹತ್ವಗಳನ್ನು ನಿರ್ದೇಶಿಸಲು ಇಷ್ಟೆಲ್ಲವನ್ನು ಕಥೆಯಲ್ಲಿ ಅಳವಡಿಸಬೇಕಾಯ್ತು.

ಕರ್ಣ! ನಿನಗೆ ಈಗ ಒಂದು ಗುಟ್ಟನ್ನು ಹೇಳುತ್ತೇನೆ ಕೇಳು. (ಗುಟ್ಟು ಹೇಳುವವರ ಧಾಟಿಯಲ್ಲಿ ಕರ್ಣನ ಕಿವಿಯೋಳಗೆ ಹೇಳಿದರೂ, ಸಭೆಯ ಎಲ್ಲರಿಗೂ ಚೆನ್ನಾಗಿ ಕೇಳುವಂತೆ ಗುಸು ಗುಸು ಧ್ವನಿಯಲ್ಲಿ ಹೇಳುತ್ತಾನೆ) ನಿನ್ನ ತಂದೆ ಸೂರ್ಯನಲ್ಲ; ನಿನ್ನ ತಾಯಿ ಕುಂತಿಯೂ ಅಲ್ಲ; ನಿನ್ನ ತಂದೆ, ತಾಯಿ ಎರಡೂ ನಾನೆ. ನನ್ನ ಕಲ್ಪನಾ ಲೋಕದಲ್ಲಿ ಜನಿಸಿದ ನಿನ್ನನ್ನು ಕಥೆಯು ನಡೆದ ಹಾಗೂ ಪೋಷಿಸಿ ಬೆಳೆಸಿದ ಮಾತಾ ಪಿತೃವೂ ನಾನೆ. ನಿನಗೊಬ್ಬನಿಗೇ ಅಲ್ಲ; ಮಹಾಭಾರತದ ಕಥೆಯ ಎಲ್ಲ ಪಾತ್ರಗಳನ್ನೂ, ಕಥೆಯಲ್ಲಿ ನನ್ನ ಅನುಕೂಲಕ್ಕಾಗಿ ದೇವರುಗಳೆನಿಸಿ ಕೊಂಡ ಗಣೇಶ, ಕೃಷ್ಣ, ಹನುಮಂತ ಮೊದಲಾದವರನ್ನೂ ಸೇರಿಸಿಬಿಟ್ಟಿದ್ದೇನೆ. ಎಲ್ಲಕ್ಕೂ ಹೆಚ್ಚಾಗಿ, ನನ್ನ ಪಾತ್ರವನ್ನೇ ನನ್ನ ಕಥೆಯಲ್ಲಿ ಹುಟ್ಟಿಸಿ, ನನಗೆ ನಾನೇ ‘ಜನ್ಮ ದಾತ’ ನಾಗಿದ್ದೇನೆ! ಈ ಕಾರಣದಿಂದಲೇ ಮಹಾಭಾರತವನ್ನು ಮೊದಲಿನಿಂದ ಕೊನೆಯವರೆಗೂ ಓದುಗರು ನಂಬಿಕೊಂಡಿದ್ದಾರೆ. ನಿನ್ನ ಪಾತ್ರವೂ, ನನ್ನ ಕಥೆಯ ಎಲ್ಲ ಪಾತ್ರಗಳೂ, ಸನ್ನಿವೇಶಗಳೂ ಸಮಾಜದಲ್ಲಿ ಅಜರಾಮರವಾಗಿ ಉಳಿದಿರುವುದು ಆಕಾರಣದಿಂದಲೇ.

‘ಒಂದು ಊರಿನಲ್ಲಿ ರಾಜ, ರಾಣಿಯರಿದ್ದರು, ಅವರಿಗೆ ಸಮಯಕ್ಕೆ ಸರಿಯಾಗಿ ಲಕ್ಷಣವಾದ ಮಕ್ಕಳು ಹುಟ್ಟಿ, ಎಲ್ಲರೂ ಒಳ್ಳೆಯವರಾಗಿ ಬೆಳೆದು, ಯಾರೂ, ಯಾರ ಜೊತೆಯೂ ಜಗಳವನ್ನಾಡದೆ ಸದಾ ಸುಖವಾಗಿದ್ದರು. ರಾಜ್ಯದಲ್ಲಿ ಯಾವಾಗಲೂ ಎಲ್ಲರೂ ನಗುನಗುತ್ತಾ, ಮಾದರಿ ಸಮಾಜವಾಗಿ ಬಾಳುತ್ತಿದ್ದರು’ (ಈ ಸಮಯಕ್ಕೆ ಪಾತ್ರಧಾರಿಗಳೆಲ್ಲರೂ ತೂಕಡಿಸಿ ಗೊರಕೆ ಹೊಡಯಲಾರಂಭಿಸಿರುತ್ತಾರೆ!) ಎಂದು ನಾನು ಕಥೆ ಬರೆದಿದ್ದರೆ ಓದುಗರಿರಲಿ, ಸಭಿಕರಿರಲಿ, ನನ್ನ ಪಾತ್ರಗಳೇ ನನ್ನ ಕಥೆಯನ್ನು ಕೇಳಲಾಗದೆ ನನ್ನ ಮುಂದೆಯೇ ತೂಕಡಿಸಿ ಗೊರಕೆ ಹೊಡೆದು ಬಿಡುತ್ತಿದ್ದರು. (ಈಗ ಎಲ್ಲ ಪಾತ್ರಧಾರಿಗಳೂ ಬೇಕಂತಲೇ ನಿದ್ದೆಬಂದವರ ಹಾಗೆ ನಟಿಸುತ್ತಿದ್ದರೋ ಎಂಬಂತೆ, ಎದ್ದು ಯಥಾ ಸ್ಥಿತಿಗೆ ಬರುತ್ತಾರೆ.)

(ಇಲ್ಲಿ ಸಭಿಕರು ತಮ್ಮ ಪ್ರಶ್ನೆಗಳನ್ನು ನೇರವಾಗಿಯೂ, ಯಾವುದಾದರೂ ಪಾತ್ರದ ಪರವಾಗಿಯಾದರೂ ಕೇಳಬಹುದು.)

ವ್ಯಾಸ: (ಪಾತ್ರಗಳ ಕಡೆಗೆಲ್ಲಾ ಒಂದು ಸಾರಿ ನೋಡಿ, ನಂತರ ಸಭಿಕರ ಕಡೆಗೆಲ್ಲಾ ನೋಡಿ) ಕರ್ಣ! ಒಟ್ಟಿನಲ್ಲಿ ಯೋಚನೆ ಮಾಡಿನೋಡು: ಕರ್ಣನು ಸಾವನ್ನಪ್ಪಿದರೂ, ಸೋಲಲಿಲ್ಲ; ಅವನು ದಾನ ಮಾಡಿದ್ದು ಕರ್ಣಕುಂಡಲಗಳನ್ನಲ್ಲ, ವಜ್ರ ಕವಚವನ್ನಲ್ಲ, ತೊಟ್ಟ ಬಾಣವನ್ನು ಮತ್ತೆ ತೊಡದ ಮಾತಲ್ಲ; ಹೆತ್ತ ತಾಯಿಗೇ ತನ್ನ ಜೀವವನ್ನು ವಾಪಸ್ಸು ಕೊಟ್ಟ ಅಪೂರ್ವ ಕುಮಾರ. ತನ್ನ ಪ್ರಾಣವನ್ನೇ ದಾನ ಮಾಡಿ, ತನ್ನ ತಮ್ಮನ ಕೈಯಲ್ಲೇ ಸಾಯಲು ಸಿಧ್ಧನಾದ ಅಜರಾಮರ. ಕರ್ಣಾ! ನೀನು ಸಾಯಲೇ ಇಲ್ಲ; ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ನೀನು ಈಗಲೂ, ಸಾವಿರಾರು ವರ್ಷಗಳಿಂದ ಓದುಗರ ಮನದಲ್ಲಿ ರಾರಾಜಿಸುತ್ತಿರುವ, ಸಾಹಿತ್ಯದ ಚರಿತ್ರೆಯಲ್ಲಿಯೇ ಸೂರ್ಯ ದೇವನಂತೆ ಪ್ರತಿಕ್ಷಣವೂ ಪ್ರಜ್ವಲಿಸುತ್ತಿರುವ ಏಕಮಾತ್ರ ವಿಭಿನ್ನ ಪಾತ್ರ.

ಯಾವುದೇ ಸಾಹಿತ್ಯದಲ್ಲಾಗಲೀ ಪಾತ್ರಗಳು ಪ್ರತಿದಿನವೂ ಓದುಗನೊಂದಿಗೆ ಮಾತನಾಡುತ್ತವೆ; ಘಟನೆಗಳೂ ಕೂಡ ಪ್ರತಿ ಓದುಗನ ಮನಸ್ಸಿನ ಕಣ್ಮುಂದೆ ಕುಣಿದು ನಡೆಯುತ್ತಿರುತ್ತವೆ. ಈ ರೀತಿಯಲ್ಲಿ ಸಾಹಿತಿಯೂ ತನ್ನ ಮನಸ್ಸಿಲ್ಲಿ, ಕಲ್ಪನೆಯ ಅಲೆಯಲ್ಲಿ ತೇಲಿಬಂದ ದೃಶ್ಯಗಳ ಉತ್ಸವವನ್ನು ಚೊಕ್ಕವಾಗಿ ಹಿಡಿದು ಕುಶಲತೆಯ ಬರಹದಿಂದ ಕಥೆ ಹೇಳಿ ಊಹೆಯ ಪ್ರಪಂಚವನ್ನು ನಿಜವೆನಿಸುವ ಕಥಾರಂಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾನೆ.

ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತುವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಯನ್ನು ಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವ ಸಮಯದಲ್ಲಿ ಲೇಖಕನಿಗೂ, ಓದುವ ಸಮಯದಲ್ಲಿ ಓದುಗರಿಗೂ ಮನರಂಜನೆಯನ್ನು ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.

ಅಂತ್ಯ ಪರದೆ ನಿಧಾನವಾಗಿ ಮುಚ್ಚುತ್ತದೆ

ಸದ್ಯದಲ್ಲೇ, ಈ ಧಾಟಿಯಲ್ಲಿ ಸಾಮೂಹಿಕ ಸಾಹಿತ್ಯ ರಚನೆಯ ಒಂದು ಮಾದರಿಯನ್ನೂ ಸಿದ್ಧಗೊಳಿಸುತ್ತಿದ್ದೇವೆ. ಇದರಲ್ಲಿ ಓದುಗರಾದ ನೀವೆಲ್ಲರೂ ಭಾಗವಹಿಸಬಹುದು. ನಿಮಗೆ ಆಸಕ್ತಿಯಿದ್ದಲ್ಲಿ, ಮೂರ್ತಿಯಾಡನೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ:

ಎರಡನೆಯ ಹಂತ :

ಪ್ರವೇಶ: ವ್ಯಾಸರನ್ನು ಇಬ್ಬರು ಸೈನಿಕರು ಕರೆದುಕೊಂಡು ಬರುತ್ತಾರೆ

ವ್ಯಾಸ: ಇದೇನಿದು! ತಪಸ್ಸುಮಾಡುತ್ತಿದ್ದ ನನ್ನನ್ನು ಬಲವಂತದಿಂದ ಎಳೆದು ಇಲ್ಲಿಗೇಕೆ ಕರೆದುಕೊಂಡುಬಂದಿರಿ? ಇದು ರಣರಂಗದಂತಿದೆ; ನಾನು ಬರೆದು ವಿಸ್ತರಿಸಿದ ಮಹಾಭಾರತದಂತೆಯೇ ಕಾಣುತ್ತಿದೆಯಲ್ಲಾ. ಜೊತೆಗೇ, ನಾನು ಸೃಷ್ಟಿಸಿದ ಪಾತ್ರಗಳೇ ನನ್ನ ಮುಂದೆ ನಿಂತು, ನನ್ನನ್ನೇ ಎದುರಿಸಿ ಮಾತನಾಡುತ್ತಿವೆಯಲ್ಲಾ ! ಇದು ಜಗತ್ತಿನಲ್ಲೇ ಸರ್ವಕಾಲಕ್ಕೂ ಅತಿ ಶ್ರೇಷ್ಠ ಸೃಷ್ಟಿಶೀಲ ಕವಿಯೂ, ದಿವ್ಯಜ್ಞಾನಿಯೂ ಆಗಿರುವ ನನಗೇ ಅಚ್ಚರಿಯಾಗುತ್ತಿದೆಯೆಂದರೆ ಉತ್ಪ್ರೇಕ್ಷೆಯಾಗುವುದಿಲ್ಲ !

ನಾನು ಕಲ್ಪಿಸಿದ ಪಾತ್ರಗಳೇ ನನ್ನನ್ನು ತಿರು ಪ್ರಶ್ನೆ ಕೇಳುತ್ತಿರುವ ಹಾಗೆ ಮಾಡಿದ ಆ ಹುಲುಮಾನವ, ಆ ಕುತಂತ್ರಿ, ಆ ಅತಿ ಉಧ್ಧಟದ ಅಹಂಕಾರಿ ಯಾರು ಇರಬಹುದು ?

ದುರ್ಯೋಧನ: ವ್ಯಾಸರೇ! ಕಳ್ಳರ ಮಾತನ್ನು ಚಕ್ರವರ್ತಿಯಾದ ನಾನು ಕೇಳುವುದು ಎಂದರೇ ಅತಿಶಯವಾಗಿಯೂ ಅಸಾಧ್ಯ! ಆದರೆ, ಮಹಾಭಾರತದಲ್ಲಿ ನಡೆದ ಎಲ್ಲಕ್ಕೂ ನೀವೇ ಕಾರಣರು ಎನ್ನುತ್ತಾನೆ ಈ ಕಪಟಿ ಕೃಷ್ಣ.

ರಣರಂಗದಲ್ಲಿ ಅಸಮಾನ ಅಸ್ತ್ರಮೇಧಾವಿಯಾಗಿದ್ದ ನನ್ನ ಜೀವದ ಜೀವದಂತಿದ್ದ ಕರ್ಣನನ್ನು ಈ ರೀತಿ, ಕರ್ಣನ ಸಮಕ್ಕೆ ಹೋಲಿಸಲೂ ಅಯ್ಯೋಗ್ಯನಾದ ಅರ್ಜುನನಿಂದ ಏಕೆ, ಯಾವ ಮನಸ್ಸಿನಿಂದ ವಧೆಯನ್ನು ಅನೀತಿರೀತಿಯಲ್ಲಿ ಮಾಡಿಸಿದಿರಿ.

ನೀವು ನಿಜವಾಗಿಯೂ ಮಹಾಕವಿಯೂ, ಮಹಾಜ್ಞಾನಿಗಳೂ ಆಗಿದ್ದರೆ, ಇದ್ದಕ್ಕೆ ಉತ್ತರ ಹೇಳಿ.

ವ್ಯಾಸ: ದುರ್ಯೋಧನ! ನಿನ್ನ ಪ್ರಶ್ನೆಗೆ ಒಂದೆರಡು ಮಾತುಗಳಲ್ಲಿ ಉತ್ತರ ಹೇಳುವುದು ಸುಲಭವಲ್ಲ. ಯಾವುದೇ ಪ್ರಶ್ನೆಗೂ ಒಂದೇ ಒಂದು ಉತ್ತರವಿರುವುದಿಲ್ಲ; ಯಾವುದೇ ಪ್ರಶ್ನೆಗಾಗಲಿ ನೋಡುವ ದೃಷ್ಟಿಗೆ ತಕ್ಕ ಉತ್ತರ ಸಿಕ್ಕುತ್ತದೆ. ನಾನು ಕರ್ಣನಿಗೆ ಈ ರೀತಿಯ ಸಾವು ಬರುವ ಹಾಗೆ ಬರೆದಿರುವುದಕ್ಕೆ ಕೆಲವು ಕಾರಣಗಳಿವೆ. ಎಲ್ಲ ದೃಷ್ಟಿಗಳಿಂದಲೂ ನೋಡಿ, ಸಮಗ್ರ ರೀತಿಯಲ್ಲಿ ತಿಳಿದುಕೊಂಡರೆ ಮಾತ್ರ ಸತ್ಯವು ಸ್ವಲ್ಪ, ಸ್ವಲ್ಪವಾಗಿ ಕಂಡುಬರುತ್ತಾ ಹೋಗುತ್ತದೆ. ಕರ್ಣನ ಜೀವನವನ್ನು ಮೊದಲಿನಿಂದ ಕೊನೆಯವರೆಗೂ ಅರ್ಥ ಮಾಡಿಕೊಳ್ಳಬೇಕು. ಯಾವ ಯಾವ ಸಂದರ್ಭದಲ್ಲಿ ನಾನು ಯಾವ ಕಾರಣಕ್ಕಾಗಿ ಏನೇನು ಬರೆದೆ ಎನ್ನುವುದನ್ನು ಒಂದೊಂದಾಗಿ ಹೇಳುತ್ತೇನೆ. ಎಲ್ಲವನ್ನೂ ಸಾವಧಾನವಾಗಿ ಕೇಳಿ, ಮಧ್ಯದಲ್ಲೇ ಯಾವ ನಿರ್ಧಾರಕ್ಕೂ ಬರಲು ಆತುರ ಪಡದೆ ಕೇಳುತ್ತಾ ಹೋದರೆ ನನ್ನ ಕವಿಮನವನ್ನು ನಿನಗೆ ತಿಳಿಸಬಲ್ಲೆ; ಆಗ ಮಾತ್ರ, ಕವಿಯಾಗಿ ನಾನು ಯಾವ ಕಾರಣದಿಂದಾಗಿ ಮಹಾಭಾರತದ ಕಥೆಯನ್ನು ಹೇಗೆ ಬೆಳೆಸಿಕೊಂಡು ಹೋದೆ ಎನ್ನುವುದು ನಿನಗೆ ತಿಳಿಯುತ್ತದೆ.

ಕರ್ಣನು ಮಹಾಶೂರ ಮತ್ತು ಅಜೇಯ. ಅವನನ್ನು ಅರ್ಜುನನು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ. ಒಬ್ಬ ಮಹಾ ಪರಾಕ್ರಮಿಯು ಯುಧ್ಧದಲ್ಲಿ ಸತ್ತರೂ ಅದಕ್ಕೆ ಮುಂಚೆ ಅವನು ಸೋಲಬೇಕಾಗಿಲ್ಲ; ಸತ್ತವನು ಸೋಲದಿರಬಹುದು; ಕೊಂದವನು ಗೆಲ್ಲದೇ ಇರಬಹುದು. ಧರ್ಮಯುದ್ಧದ ಕಹಳೆ ಊದುವವರೂ ಕೆಲವು ಸಮಯಗಳಲ್ಲಿ ಧರ್ಮದ ದಾರಿಯಿಂದ ಕವಲು ದಾರಿ ಹಿಡಿಯಬಹುದು. ಅಂತೆಯೇ, ಎಲ್ಲರ ಕಣ್ಣಿಗೆ ದುಷ್ಟ, ದುರಾತ್ಮನಾಗಿ ಕಂಡುಬರುವ ಕೆಟ್ಟ ಸ್ವಭಾವದವನೂ ಕೆಲವು ಸಾರಿ ಜನೋಪಕಾರಿಯಾಗಬಹುದು. ಈ ದ್ವಂದ್ವವು ಉಪ್ಪುಖಾರಗಳನ್ನು ತಿಂದ, ರಕ್ತ ಮಾಂಸದ ಎಲ್ಲ ಮಾನವನಿಗೂ ನೆರಳಂತೆ ಹಿಂಬಾಲಿಸಿಕೊಂಡು ಬರುತ್ತದೆ. ಮನುಷ್ಯ ದೇಹವನ್ನು ತೆಗೆದುಕೊಂಡ ಶ್ರೀ ಕೃಷ್ಣನನ್ನೂ ಕಾಡದೇ ಬಿಡುವುದಿಲ್ಲ ಎಂದು ತೋರಿಸುವುದಕ್ಕೆ ಶ್ರೀ ಕೃಷ್ಣನೇ ದುರ್ಬುದ್ಧಿಯನ್ನೂ, ದುರ್ಮಾರ್ಗವನ್ನೂ ಅರ್ಜುನನಿಗೆ ಹೇಳಿಕೊಡುವ ಸಂದರ್ಭವನ್ನು ಕರ್ಣನ ಸಾವಿನ ಘಟನೆಯಲ್ಲಿ ಅಳವಡಿಸಿಕೊಂಡೆ.

ಕರ್ಣನ ಸಾವಿಗೆ ಒಂದೊಂದೇ ಹಂತದಲ್ಲಿ ಸಿದ್ಧತೆಗಳಾಗುತ್ತಿದ್ದವು; ಒಂದು ದೃಷ್ಟಿಯಲ್ಲಿ ನೋಡಿದರೆ ಈ ಸಿದ್ಧತೆಗಳಲ್ಲೆಲ್ಲಾ ಕರ್ಣನೂ ದಾನಶೂರನಾಗಿಯಾದರೂ ಪಾತ್ರ ವಹಿಸಿದ.

ಕರ್ಣ: ಹುಟ್ಟಿನ ಸಮಯದಿಂದಲೇ ನನಗೆ ಮೋಸವಾಗಿಹೋಗಿದೆ. ನಾನು ನನ್ನ ಅಮ್ಮನ ತೊಡೆಯಮೇಲೆ ಹಾಯಾಗಿ ನಿದ್ರಿಸುವ, ತಾಯಿಯ ಪ್ರೀತಿಯ ಉಣಿಸಿನ ಸೌಭಾಗ್ಯವಿಲ್ಲದೆಯೆ, ಸೂತ ಪುತ್ರನೆಂದು ಬೆಳೆಯುವ ಹಣೆಬರಹ ನನ್ನ ಪಾಲಾಯಿತಲ್ಲಾ

ಪ್ರವೇಶ: ಕುಂತಿ

ಕುಂತಿ: ‘ಅಮ್ಮಾ’ ಎಂದು ನೀನು ಬೋಧಿಸಿ ಕರೆದದ್ದನ್ನು ಕೇಳಿ ಬಂದೆ ನನ್ನ ಕಂದ. ನಾನು ಹರೆಯಕ್ಕೆ ಬಂದಾಗ ಋಷಿವರ್ಯರು ಕೊಟ್ಟಿದ್ದ ಅಮೂಲ್ಯ ವರಗಳನ್ನು ಸುಮ್ಮನೇ ನಂಬಲಾಗದೆ, ಹೇರಳ ಕಾಂತಿಯಿಂದ ಪ್ರಜ್ವಲಿಸುವ ಸೂರ್ಯನನ್ನು ಒಂದು ದಿನ ಪ್ರಾತಃ ಕಾಲ ನೋಡಿ ಅವನನ್ನು ನನಗೆ ವರವಾಗಿ ಕೊಟ್ಟಿದ್ದ ಮಂತ್ರವನ್ನು ಉಚ್ಚರಿಸಿಕೊಂಡು ಅರಾಧಿಸಿದೆ.

ಇದು ನನ್ನ ಹುಡುಗುತನದ ಕುತೂಹಲವೆಂದಾದರೂ ತಿಳಿದುಕೊ; ಮುಂದಿನ ಪರಿಣಾಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಬೇಜವಾಬ್ದಾರಿ ಹೆಂಗಸಿನ ಚೆಲ್ಲಾಟವೆಂದಾದರೂ ಅವಹೇಳನ ಮಾಡು. ವಿವಾಹಕ್ಕೆ ಮುಂಚೆಯೇ ಪಡೆದ ಕೂಸನ್ನು ಅರಮನೆಯಲ್ಲಿ ಸಾಕಿದರೇ, ಯಾವ ರಾಜಕುಮಾರನೂ ನನ್ನನ್ನು ವರಿಸುವುದಿಲ್ಲ ಎಂದು ಸ್ವಾರ್ಥಿಯಾಗಿ, ಭಯಪಟ್ಟು ನಿನ್ನನ್ನು ನೀರಿನಮೇಲೆ ತೇಲಿಬಿಡಬೇಕಾಯಿತು. ಅಂದು ನನಗಾದ ದುಃಖವನ್ನು ಯಾರೂ ಅರ್ಥಮಾಡಿಕೊಳ್ಳರು ಕಂದಾ!

ನನಗೆ ಈ ನನ್ನ ಪಾಪಕ್ಕೆ ಜೀವನದಲ್ಲಿ ಸಾಕಷ್ಟು ಶಾಸ್ತಿಯಾಗಿದೆ. ರೋಗಿಷ್ಟನಾದ ಗಂಡನನ್ನು ಪಡೆದದ್ದು, ನನ್ನ ಇನ್ನಿತರ ಮಕ್ಕಳೂ, ಅಂದರೆ ಪಾಂಡವರು, ಜೀವನ ಪೂರ್ತಿ ವನವಾಸ, ಅಜ್ಞಾತವಾಸ ಇತ್ಯಾದಿ ಕಷ್ಟಗಳನ್ನು ಅನುಭವಿಸುವುದನ್ನು ನನ್ನ ಕಣ್ಣಾರೆ ನೋಡಿ ಕಣ್ಣೀರು ಸುರಿಸಿದ್ದನ್ನು ವರ್ಣಿಸಲಸಾಧ್ಯ. ಜೊತೆಗೆ, ನೀನು ನಿನ್ನ ತಮ್ಮಂದಿರನ್ನು ಎದುರುಹಾಕಿಕೊಂಡ ಕೌರವರನ್ನು ಆಶ್ರಯಿಸಿ ಜೀವನಮಾಡಿದ್ದನ್ನು ಕಂಡು ನನಗಾದ ಶೋಕ ಮತ್ಯಾರಿಗೂ ಬೇಡ.

ಕರ್ಣ: ನಿನ್ನ ದುಃಖದ ಜೀವನವನ್ನು ಕೇಳಲಾರೆನಮ್ಮಾ ಆದರೆ, ನೀನು ನನ್ನಿಂದ ‘ತೊಟ್ಟ ಬಾಣವನ್ನು ಮತ್ತೆ ತೊಡಬೇಡ ಕಂದ’ ಎಂದು ಕೇಳುವಾಗ ನಿನ್ನ ಮಾತೃ ವಾತ್ಸಲ್ಯ ಎಲ್ಲಿ ಹೋಗಿತ್ತು?! ನಿನ್ನ ಪ್ರೀತಿಯ ಮಗ ಅರ್ಜುನನನ್ನು ಉಳಿಸಿಕೊಳ್ಳಲು, ನೀನು ನನ್ನ ಭವಿಷ್ಯವನ್ನು ಮೂಲೆಗೊತ್ತಿ, ಮಾತೃ ವಾತ್ಸಲ್ಯಕ್ಕೆ ತರ್ಪಣ ಬಿಟ್ಟೆಯಲ್ಲಾ ! ನನ್ನ ಕೆಟ್ಟ ಹಣೇಬರಹಕ್ಕೆ ಮೊದಲಿಲ್ಲ, ಕೊನೆಯಿಲ್ಲ; ಒಬ್ಬರು ಉಳಿಯಲು ಇನ್ನೊಬ್ಬರು ತಮ್ಮ ಜೀವವನ್ನೇ ತ್ಯಾಗ ಮಾಡಬೇಕಲ್ಲವೆ ?

ಕುಂತಿ: ಕರ್ಣ! ನಾನು ನಿನ್ನಿಂದ ವರ ಕೇಳುವ ಮೊದಲೇ, ನಿನ್ನನ್ನು ಪಾಂಡವರ ಪಕ್ಷಕ್ಕೆ ಕರೆದೆನೆನ್ನುವುದನ್ನು ಮರೆಯಬೇಡ. ಆದರೆ, ನಿನ್ನ ಹಟ ನೀನು ಬಿಡಲಿಲ್ಲ; ದುಷ್ಟ ದುರ್ಯೋಧನನ ಸಹವಾಸ ತೊರೆಯಲಿಲ್ಲ; ತಮ್ಮಂದಿರ ಮೋಹಕ್ಕಿಂತ, ತಾಯಿಯ ಬದ್ಧಿಮಾತಿಗಿಂತ, ದುರ್ಜನರ ಸಂಗವೇ ಇಂಪಾದ ಸಂಗೀತ ವಾಯಿತು ನಿನ್ನ ಕುರುಡು ಅಹಂಕಾರದ, ಅಪ್ರಯೋಜಕ ಸ್ವಾಮಿನಿಷ್ಠೆಯ ಧರ್ಮಕ್ಕೆ!

ಕೃಷ್ಣ : ಕರ್ಣ! ಕುಂತಿ! ಇದೆಲ್ಲಕ್ಕೂ ಕಾರಣ ಆ ವೇದ ವ್ಯಾಸರಲ್ಲವೆ! ವ್ಯಾಸರು ನಿಮ್ಮ ಜೀವನವನ್ನು ಈ ರೀತಿಯಲ್ಲೇ ರೂಪಿಸಿರುವುದರಿಂದ ಅವರನ್ನೇ ಕೇಳಿನೋಡೋಣ.

ವ್ಯಾಸ: ಮಗು ಕುಂತಿ ! ಚಿನ್ನವು ಪುಟಕ್ಕೆ ಹಾಕಿದಮೇಲೆ ತಾನೆ ತನ್ನ ಹೊಳಪನ್ನು ತೋರಿಸುತ್ತದೆ. ವಜ್ರವು ಅಪಾರ ಒತ್ತಡದಿಂದಾಗಿಯಲ್ಲವೆ ಅಬೇಧ್ಯವಾಗುವುದು. ಅದಕ್ಕೆ ಬಹಳ ಶ್ರಮವನ್ನು ಹಾಕಿ, ಕುಶಲತೆಯಿಂದ ಅದರ ಬಹುರ್ಮುಖಗಳನ್ನು ಮೂಡಿಸಿದಾಗ ಮಾತ್ರವಲ್ಲವೆ ಆ ವಜ್ರವು ಹೊಳೆಯುವುದು ! ಹಾಗೆಯೇ, ನೀನೂ, ನಿನ್ನ ಮಕ್ಕಳೆಲ್ಲರೂ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಗೆದ್ದು ವಿಜಯಿಗಳಾಗಿದ್ದು?

ವ್ಯಾಸ: ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತು ವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವಾಗ ಲೇಖಕನಿಗೂ, ಓದುವಾಗ ಓದುಗರಿಗೂ ಮನರಂಜನೆ ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.

ಕರ್ಣ: ಹಾಗಾದರೆ, ನನ್ನ ಕಥೆ, ನಮ್ಮೆಲ್ಲರ ಕಥೆ ನಿಜವಾಗಿಯೂ ನಡೆದದ್ದಲ್ಲವೇ?

ವ್ಯಾಸ: ನಾನು ಮಹಾಭಾರತವನ್ನು ರಚಿಸಿದಾಗ, ನನ್ನ ಮುಂದೆ ಕಂಡ, ನನ್ನ ಗಮನಕ್ಕೆ ಬಂದ ಪಾತ್ರಗಳನ್ನೂ, ಸನ್ನಿವೇಶಗಳನ್ನೂ, ನಡೆದದನ್ನು ನಡೆದ ಹಾಗೆಯೇ ದಾಖಲೆ ಮಾಡಲಿಲ್ಲ ; ಕಾರಣ, ಚಾರಿತ್ರಿಕ ದಾಖಲೆಯು ಸೃಷ್ಟಿ ಶೀಲ ಸಾಹಿತ್ಯವಾಗಲಾರದು. ಆದರೆ, ಕೆಲವು ಸಾರಿ ನಡೆದ, ಗಮನಕ್ಕೆ ಬಂದ ಘಟನೆಗಳನ್ನೂ, ನಿಜ ಜೀವನದ ಪಾತ್ರಗಳನ್ನೂ ಕಥೆಯಲ್ಲಿ ಸ್ವಾರಸ್ಯಕರವಾಗಿ ಹೆಣೆದಿದ್ದೇನೆ. ಇದರ ಜೊತೆಗೆ, ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿಬಂದ ಕಥೆಗಳನ್ನು ಸೂಕ್ತವಾಗಿ ಬೆರೆಸಿದ್ದೇನೆ. ಸಮಾಜದ ಸಂಪ್ರದಾಯಗಳನ್ನು ವಿಮರ್ಶಿಸಬೇಕೆನಿಸಿದಾಗ, ಅವಕ್ಕೆ ಪಾತ್ರಗಳ ರೂಪ ಕೊಟ್ಟು, ಸನ್ನಿವೇಶಕ್ಕೆ ಹೊಂದುವಂತೆ ಕಥೆಯನ್ನು ಹೇಳಿದ್ದೇನೆ. ಉದಾಹರಣೆಗೆ, ನಮ್ಮ ಕಾಲದಲ್ಲಿ ಇದ್ದ ವೀರ್ಯದಾನದ ನಿಯೋಗ ಪದ್ಧತಿಯನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ನನ್ನ ಕಲ್ಪನೆಯ ಕಣ್ಣು ಕಂಡಹಾಗೆ ಅಳವಡಿಸಿಕೊಂಡಿದ್ದೇನೆ. ಚಿತ್ರ ವೀರ್ಯ, ವಿಚಿತ್ರವೀರ್ಯರಿಗೆ ಮಕ್ಕಳಾಗದ ಸಮಯದಲ್ಲಿ ಋಷಿಗಳನ್ನು ಉಪಯೋಗಿಸಿಕೊಂಡಿದ್ದೇನೆ. ನನ್ನ ಕಥೆಯು ಮುಂದುವರಿದ ಹಾಗೆ ಕುಂತಿಯ ಪಾತ್ರಕ್ಕೆ ಋಷಿಗಳಿಂದ ನೇರವಾಗಿ ನಿಯೋಗ ತೋರಿಸಿದರೆ ಕಥೆಯು ರಸವತ್ತಾಗುವುದಿಲ್ಲವೆಂದು ಅನೇಕ ರೂಪಗಳನ್ನು ಕೊಟ್ಟಿದ್ದೇನೆ. ಸೂರ್ಯ, ಯಮ ಧರ್ಮರಾಯ, ವಾಯು, ಇಂದ್ರ ಮತ್ತು ಅಶ್ವಿನಿ ದೇವತೆಗಳನ್ನು ಉಪಯೋಗಿಸಿಕೊಂಡಿದ್ದೇನೆ. ದೇವತೆಗಳ ವರಪ್ರಸಾದದಿಂದ ಹುಟ್ಟಿದವರೆಂದರೆ ಹುಟ್ಟಿದ ಕುಂತಿಯ ಮಕ್ಕಳಿಗೆ ಮಹಾ ಶಕ್ತಿಗಳನ್ನು ತೋರ್ಪಡಿಸಬಹುದೆನ್ನುವ ಉದ್ದೇಶದಿಂದ ಕುಂತಿಯ ಪಾತ್ರದಲ್ಲಿ ಮಹಾ ಋಷಿಗಳ ಸೇವೆಯನ್ನು ಮಾಡಿ ವರಗಳನ್ನು ಪಡೆಯುವ ಕಥೆ ಕಟ್ಟಿದೆ. ಐದು ವರಗಳನ್ನು, ಪಂಚಪಾಂಡವರಿಗೆಂದು ಲೆಕ್ಕಹಾಕಿ ಕಥೆ ಬರೆದೆ. ಇನ್ನೂ ಕನ್ಯೆಯಾದ ಸುಂದರ ಕುಂತಿಗೆ ಮದುವೆಗೆ ಮುಂಚೆಯೇ ಈ ವರದಾನದಿಂದ ಮಗುವಾದರೆ ಹೇಗಿರುತ್ತದೆಂದು ನನ್ನ ಕುತೂಹಲ ಕಾಡಿಬಿಟ್ಟಿತು. ನನ್ನ ಕುತೂಹಲವನ್ನು ಕುಂತಿಯ ಪಾತ್ರಕ್ಕೆ ಧಾರೆಯೆರೆದೆ. ಅಂತೆಯೇ, ಕುಂತಿಯು ಇನ್ನೂ ಕನ್ಯೆಯಾಗಿರುವಾಗಲೇ ತಾಯಿಯಾಗಿಬಿಟ್ಟಳು. ಸೂರ್ಯನ ವರದಿಂದ ಹುಟ್ಟಿ ಪ್ರಜ್ವಲಮಯಿಯಾದ ಮಗುವಿಗೆ ಏಕಾಂಗಿಯಾಗಿ, ತಾಯಿಯಿಂದ ಅಗಲುವುದು ಒಂದೇ ದಾರಿಯಾಗಿ ಉಳಿಯಿತು. ಬರೆದ ಕಥೆಯನ್ನು ಅಳಿಸಿ ಕಥೆ ಬದಲಿಸುವ ಅಭ್ಯಾಸ ನನಗಿರಲಿಲ್ಲ. ಇದಕ್ಕೆ ಮುಂಚೆಯೇ ಕಥೆಯಲ್ಲಿ ನಿಪುಣತನದಿಂದ ವ್ಯಾಸನಾದ ನಾನು ಹೇಳಿದ ಕಥೆಯನ್ನು ಸಾಕ್ಷಾತ್‌ ಗಣೇಶನೇ ಲೇಖನಿಯನ್ನು ಹಿಡಿದು ಬರದಂತೆ ಬರೆದರೆ ಓದುಗರೆಲ್ಲರೂ ನಿಷ್ಠೆಯಿಂದ ಓದುತ್ತಾರೆ, ನನ್ನ ಕಥೆಯು ಜನಪ್ರಿಯವಾಗುತ್ತದೆ ಎಂಬ ಕಾರಣದಿಂದ ಆ ರೀತಿಯಲ್ಲಿ ಕಥೆಯನ್ನು ಬರೆದಾಗಿತ್ತು. ಅಲ್ಲದೆ, ನಾನು ಪ್ರತಿದಿನ ಬ್ರಾಹ್ಮೀ ಮಹೂರ್ತದಲ್ಲಿ ಪ್ರಾರಂಭಿಸುವಾಗ ವಿಘ್ನೕಶ್ವರನು ನನ್ನ ಮುಂದೆಯೇ ಕುಳಿತು ನನ್ನ ಕೈಯಲ್ಲಿ ಬರೆಸುತ್ತಿದ್ದಾನೆ ಎಂಬ ದೈವಿಕ ಕಲ್ಪನೆ ನಡೆದಿತ್ತು. ಹಾಗಾಗಿ ನನ್ನ ಕಲ್ಪನೆಯ ಗಣೇಶನು ಬರೆದದ್ದನ್ನು ಅಳಿಸಿಬರೆಯುವ ಮೊಂಡನಾಗಬಾರದು ಎನ್ನುವ ಮನೋಭಂಗಿಯಲ್ಲಿ ಕಥೆಯನ್ನು ಮುಂದುವರಿಸಿಬಿಟ್ಟೆ.

ದುರ್ಯೋಧನ: ಹಾಗಾದರೆ, ಭೀಷ್ಮರೇಕೆ ಪಾಂಡವರ ಕಡೆಗೇ ಯಾವಾಗಲೂ ಮಾತನಾಡುತ್ತಿದ್ದರು. ಮೊದಲಿನಿಂದಲೂ ಅವರ ಒಲವು ಕುಂತಿಯ ಮಕ್ಕಳ ಮೇಲೆಯೇ ಬೀರಿತ್ತು.

ಭೀಷ್ಮ : ದುರ್ಯೋಧನ! ‘ಪಾಂಡವರಿಗೆ ಸಲ್ಲ ಬೇಕಾಗಿದ್ದ ರಾಜ್ಯವನ್ನು ಕೊಟ್ಟುಬಿಡು; ಪಾಂಡವರು ನಿನಗೆ ಏನೂ ದ್ರೋಹ ಮಾಡಿಲ್ಲ’ ಎಂದು ಕೊನೆಯವರೆಗೂ ನಿನಗೆ ಬುಧ್ಧಿವಾದವನ್ನು ಹೇಳಿದೆ. ನಿನ್ನ ಕುತ್ಸಿತ ಬುಧ್ಧಿಗೆ ನನ್ನ ಬುಧ್ಧಿವಾದವೂ, ಮಿಕ್ಕೆಲ್ಲ ಹಿರಿಯವರ ಮಾತುಗಳೂ ತಟ್ಟಲಿಲ್ಲ. ಹಿರಿಯವನಾದ ಯುಧಿಷ್ಠಿರನು ವಯಸ್ಸಿನಲ್ಲಿ ಚಿಕ್ಕವಯಸ್ಸಿನಿಂದಲೇ ಧರ್ಮಯುಕ್ತವಾದ ಅಲೋಚನೆ, ನಡತೆ, ಸಂಯಮಗಳನ್ನು ಪ್ರದರ್ಶಿಸಿದ್ದರಿಂದ ನಮಗೆಲ್ಲರಿಗೂ ಅವನ ಮೇಲೆ ವಾತ್ಸಲ್ಯ, ಅಭಿಮಾನ, ಪ್ರೀತಿಗಳಿದ್ದಿದ್ದು ಸಹಜವಲ್ಲವೇ?

ಧೃತರಾಷ್ಟ್ರನು ಕುರುಡನಾಗಿದ್ದು, ಪಾಂಡುವು ರೋಗಿಷ್ಟನಾಗಿದ್ದುದಲ್ಲದೆ ಚಿಕ್ಕವಯಸ್ಸಿನಲ್ಲೇ ತೀರಿಕೊಂಡ. ನನ್ನ ಬಲತಮ್ಮಂದಿರಾದ ಚಿತ್ರವೀರ್ಯ, ವಿಚಿತ್ರವೀರ್ಯರುಗಳಿಗೆ ಬಲಗೈಯಾಗಿ ರಾಜ್ಯಭಾರ ಮಾಡಲು ಸಹಾಯಕನಾದ ನನಗೆ, ಅವರ ಮಕ್ಕಳ ಮತ್ತು ಮೊಮ್ಮಕ್ಕಳ ರಾಜ್ಯಗಳನ್ನೂ ನಿಭಾಯಿಸಬೇಕಾದ ವಿಧಿ ನನ್ನದಾಯಿತು. ಆಜನ್ಮ ಬ್ರಹ್ಮಚಾರಿಯಾದ ನನಗೆ ನಮ್ಮ ವಂಶದ ರಾಜ್ಯಭಾರದ ಹೊಣೆಯನ್ನು ವಿಧಿ ಹೇರಿಸಿಬಿಟ್ಟಿತು. ಆದ್ದರಿಂದಲೇ, ನಾನು ಪಾಂಡವರು ಮತ್ತು ಕೌರವರ ಮಧ್ಯೆ ಸಹಕಾರದ ವಾತಾವರಣವನ್ನು ಬೆಳೆಸಿ ರಾಜ್ಯಭಾರದ ಹೊಣೆಯನ್ನು ಕಳೆದುಕೊಳ್ಳುವ ಶತಪ್ರಯತ್ನಗಳನ್ನು ಮಾಡಿದೆ. ದುರ್ಯೋಧನ! ಆದರೆ ನೋಡು: ಮಹಾಭಾರತದ ಕುರುಕ್ಷೇತ್ರ ಮಹಾಯುದ್ಧದ ಕೊನೆಯವರೆಗೂ ನನ್ನ ಮುದಿವಯಸ್ಸಿನಲ್ಲೂ ಬಿಲ್ಲು ಬಾಣಹಿಡಿದು ನನ್ನ ಪ್ರೀತಿಯ ಬಂಧುಗಳ ಮಧ್ಯೆ ಯುದ್ಧವನ್ನು ಮಾಡುತ್ತಾ ಶರಮಂಚದ ಮೇಲೆ ಸಾಯಲು ಕಾಯುವ ಗತಿ ನನಗೆ ಬಂತು.

ವ್ಯಾಸ: ಭೀಷ್ಮ ! ಜೀವನದಲ್ಲಿ ವಿಧಿಯು ನಾವು ಕನಸು ಕಾಣದ, ಆಸೆ ಆಸ್ಥೆಗಳಿಂದ ಬಯಸದ ಪಥಕ್ಕೆ ಎಲ್ಲರನ್ನೂ ತೆಗೆದುಕೊಂಡು ಹೋಗುತ್ತದೆ. ನೀವು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದು ಸತ್ಯವತಿಗೆ ಮಾತುಕೊಟ್ಟಾಗ ನಿಮಗೂ ಮತ್ತು ಸತ್ಯವತಿಗೂ ಭವಿಷ್ಯದ ಅರಿವಿರುವುದಕ್ಕೆ ಸಾಧ್ಯತೆಯಿರಲಿಲ್ಲ. ವಿಧಿಯನ್ನು ಯಾರುತಾನೆ ಬಲ್ಲರು! ಸತ್ಯವತಿಯ ಮತ್ತು ಅವಳ ತಂದೆಯ ಸ್ವಾರ್ಥಕ್ಕೆ ಮಾರುಗೊಟ್ಟು ನೀವು ಅಸಮಾನ್ಯ ಶಪಥವನ್ನು ತೆಗೆದುಕೊಂಡು ಬಿಟ್ಟಿರಿ.

ಭೀಷ್ಮ: ಪೂಜ್ಯ ವೇದವ್ಯಾಸರೆ! ನೀವು ನಿಮ್ಮ ಮಾತೆಯಾದ ಸತ್ಯವತಿಯ ಬಗ್ಗೆ ಹೀಗೆ ಹೇಳುತ್ತಿರುವುದನ್ನು ಕೇಳಿಯೂ ನನ್ನ ಕಿವಿಯು ನಂಬಲಾಗುತ್ತಿಲ್ಲ.

ವ್ಯಾಸ: ಭೀಷ್ಮರೇ! ಕವಿಯ ದೃಷ್ಟಿಯಲ್ಲಿ ಅವನು ರಚಿಸಿದ ಪಾತ್ರಗಳೆಲ್ಲ ಅವನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ಮಕ್ಕಳಲ್ಲವೇ! ಪಾತ್ರಗಳನ್ನು ರೂಪಿಸಿ, ಅವುಗಳಿಗೆ ಜೀವವನ್ನು ತುಂಬಿ ಓದುಗರಿಗೆ ನಂಬುವ ಹಾಗೆ ಮಾಡುವ ನಿಜವಾದ ಸೂತ್ರಧಾರಿ ಕವಿಯಲ್ಲವೇ! (ಕೃಷ್ಣನ ಶೈಲಿಯಲ್ಲೇ, ಭಾವ ಭಂಗಿಗಳಲ್ಲೇ ನಗುನಗುತ್ತಾ) ಕೃಷ್ಣ! ನೀನು ನಾಟಕದ ಪಾತ್ರದಲ್ಲಿ ಕೃಷ್ಣನಾಗಿ ಸೂತ್ರಧಾರನೆನಿಸಿಕೊಂಡೆಯಲ್ಲವೇ?

ಕೃಷ್ಣ: (ಇವನು ವ್ಯಾಸರ ಭಂಗಿ ಭಾವಗಳಲ್ಲಿ) ಸಕಲವನ್ನೂ ತಿಳಿದ ದಿವ್ಯ ಜ್ಞಾನಿಗಳಾದ ನಿಮ್ಮ ಸತ್ಯದ ಮಾತುಗಳಿಗೆ ಉತ್ತರ ಹೇಳಲು ನನಗೆ ಸಾಧ್ಯವೇ! ನಿಮ್ಮ ಕಥೆಯಲ್ಲಿಯೇ ನಿಮ್ಮ ಪಾತ್ರವನ್ನೂ ಸೇರಿಸಿ, ನಿಮ್ಮ ಕಾವ್ಯವನ್ನು ನಿಮ್ಮ ಮುಂದೆಯೇ ಪ್ರತಿದಿನವೂ ಕುಳಿತು ಬರೆದ ಹಾಗೆ ಗಣೇಶನನ್ನೂ ನಿಮ್ಮ ಕಥೆಯಲ್ಲಿ ಸೇರಿಸಿಕೊಂಡಿರಿ. ನಿಮ್ಮ ಮತ್ತು ಗಣೇಶನ ಒಪ್ಪಿಗೆಯ ಪ್ರಕಾರ, ಮೊದಲಿನಿಂದ ಕೊನೆಯವರೆಗೂ ವಿರಾಮವಿಲ್ಲದೆ ಮಹಾಭಾರತದ ಸಂಪೂರ್ಣ ಕಾವ್ಯವನ್ನು ರಚಿಸಿದಂತೆ ಮಾಡಿ, ಓದುಗರ ಮನಸ್ಸಿಗೆ ಮಾಯಾಜಾಲವನ್ನು ಹಾಕಿಬಿಟ್ಟಿರಿ. ನನ್ನನ್ನು ಮಾಯಾವಿ, ಕಪಟಿ, ಪಾಂಡವರ ಪಕ್ಷಪಾತಿ ಎಂದೆಲ್ಲಾ ಬಣ್ಣಿಸಿದಿರಿ. ನಿಮ್ಮ ಮಾಯಾಜಾಲದ ವಿಚಿತ್ರಕ್ಕೆ ದೇವರೆನಿಸಿಕೊಂಡ ನಾನೇ ತಲೆ ಬಾಗುತ್ತೇನೆ. (ಕೃಷ್ಣನು ವ್ಯಾಸರಿಗೆ ಕೈಮುಗಿಯುತ್ತಾನೆ)

ಕೃಷ್ಣ : ನೀವೆಲ್ಲರೂ ಈ ರೀತಿ ಪ್ರಲಾಪಿಸುವುದನ್ನು ನೋಡಿದರೆ ಏನು ಹೇಳಲಿ ಎಂದು ಗೊತ್ತಾಗುತ್ತಿಲ್ಲ. ಸಾಧ್ವಿ ಶಿರೋಮಣಿ, ಪತಿವ್ರತೆ, ಸುಂದರಿಯಾದರೂ ಸಾವಧಾನದಿಂದ ನಿಮ್ಮೆಲ್ಲರಿಗಿಂತಲೂ ಹೆಚ್ಚು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದವಳೆಂದರೆ ನನ್ನ ತಂಗಿ ಕೃಷ್ಣೆಯಾದ ದ್ರೌಪದಿ.


ಪ್ರವೇಶ: ದ್ರೌಪದಿ

ದ್ರೌಪದಿ: ಕರ್ಣ! ನೀನು ರಣರಂಗಕ್ಕೆ ಧೀರನಂತೆ ಬಂದು ಹೋರಾಡಿದರೂ, ಇದೀಗ ಸಾಯುವಕ ಾಲದಲ್ಲಿ ನಿನ್ನ ಜೀವನವನ್ನೆಲ್ಲಾ ಮರುಕಳಿಸಿ ನೆನಪಿಸಿಕೊಂಡು, ಅಳುತ್ತಿದ್ದೀಯಲ್ಲಾ. ನನಗೆ ಬಂದ ಕಷ್ಟಗಳು ನಿನ್ನ ದುಷ್ಟ ಮನಸ್ಸಿಗೆ ಏನು ತಿಳಿಯುವುದು! ಅಬಲೆಯಾದ ನನ್ನ ವಸ್ತ್ರಾಪಹರಣ ಮಾಡುವುದಕ್ಕೆ ನಾನೇನು ತಪ್ಪು ಮಾಡಿದ್ದೆ? ದುರುಳರಾದ ದುರ್ಯೋಧನ - ದುಶ್ಯಾಸನರ ಪರವಾಗಿ ನಿಂತು ಪರಸ್ತ್ರೀಯಾದ ನನ್ನನ್ನು ಅವಮಾನಿಸಿ, ಛೇಡಿಸಿ, ಕಾಮುಕ ಕೋತಿಮನದ ಹುಚ್ಚನಂತೆ ಆಟವಾಡಿದ್ದು ನೆನಪಿದೆಯೇ ಈಗ ಯುದ್ಧದಲ್ಲಿ ಸೋತು ಉರುಳಿ ಬಿದ್ದುಕೊಂಡಿರುವ ಕೀಳು ಮನಸ್ಸಿಗೆ? ಅಧಮನಾದ ನಿನಗೆ ಆದಂತೆ ನಿನ್ನ ‘ಸ್ವಾಮಿ’ ಆ ಖಳನಿಗೂ ಸದ್ಯದಲ್ಲಿಯೇ ಸಾವು ಬರಲಿದೆ.

ಕುಂತಿ: ದ್ರೌಪದಿ! ನಿನ್ನ ದುಖ, ಸಿಟ್ಟು, ಸೇಡು ಎಲ್ಲವೂ ಹೆಂಗಸಾದ ನನಗೆ ಅರ್ಥವಾಗುತ್ತದೆ, ಮಗಳೇ. ಆದರೆ, ನಿನ್ನ ಅಣ್ಣ, ಪಾಂಡವರ ಪಕ್ಷಪಾತಿ ಶ್ರೀ ಕೃಷ್ಣನು ಮೊದಲೇ ಹೇಳಿದ ಹಾಗೆ, ಇದಕ್ಕೆಲ್ಲಾ ವ್ಯಾಸರೆ ಕಾರಣರಲ್ಲವೆ?

ವ್ಯಾಸ: ದ್ರೌಪದಿ! ನಿನಗೆ ವಸ್ತ್ರಾಪಹರಣ ಮಾಡುವ ದುರ್ಮನಸ್ಸನ್ನು ಕೌರವರು ಪ್ರದರ್ಶಿಸಿದರೂ ನಿನಗೆ ನಿಜವಾಗಿಯೂ ವಸ್ತ್ರಾಪಹರಣವಾಗಲಿಲ್ಲ. ಈ ಘಟನೆಗಳಲ್ಲಿ ನಾನು ಓದುಗರಿಗೆ ಸಮಾಜದ ಹುಳುಕುಗಳನ್ನೂ, ಮನುಷ್ಯನ ಮನಸ್ಸಿನ ದುರ್ಬಲ ಶಕ್ತಿಗಳನ್ನೂ, ಕ್ಲಿಷ್ಟವಾದರೂ ಸನ್ನಿವೇಶಗಳ ಉಪಯೋಗಿಸಿ ಹೇಳುವ ಪ್ರಯತ್ನ ಮಾಡಿದ್ದೇನೆ. ಯಾವಾಗಲೂ, ಎಲ್ಲ ರೀತಿಯಲ್ಲೂ ಸಹನೆಯುಳ್ಳವನೂ, ಧರ್ಮವನ್ನು ಪಾಲಿಸುವ ಧರ್ಮರಾಯನೂ ಜೂಜಾಡುವ ಚಂಚಲತೆಗೆ ದಾಸನಾದುದರಿಂದ ತನ್ನದೆಲ್ಲವನ್ನೂ, ತಮ್ಮಂದಿರದೆಲ್ಲವನ್ನೂ, ಕೊನೆಗೆ ಹೆಂಡತಿಯನ್ನೂ ಪಣಕ್ಕಿಟ್ಟು ಕಳೆದುಕೊಳ್ಳುವ ಸ್ಥಿತಿಗೆ ಬಂದುಬಿಡುತ್ತಾನೆ. ಹೊರನೋಟಕ್ಕೆ ಸಣ್ಣ ತಪ್ಪೆಂದು ಕಂಡರೂ ಮನುಷ್ಯನ ಯಾವ ದುರ್ಬಲತೆಯಾದರೂ ಅದರಿಂದ ಬಹಳ ದೊಡ್ಡ ಹಾನಿಯಾಗಬಹುದೆಂಬುದನ್ನು ತೋರಿಸುವ ಘಟನೆ ಇದು. ಉಪ್ಪು ತಿಂದ ಮನೆಯನ್ನು ಎದುರುಹಾಕಿಕೊಳ್ಳಲು ದ್ರೋಣ, ಭೀಷ್ಮಾದಿಗಳೂ ಹೆದರಿ ಸ್ವಲ್ಪ, ಸ್ವಲ್ಪ ಮಾತ್ರ ಪ್ರತಿಭಟಿಸಿದರು. ಗೌರವಿತ ಆಚಾರ್ಯನಾಗಲೀ, ವಯಸ್ಸಿನಲ್ಲಿ ಹಿರಿಯವರಾಗಲೀ ಸಮಾಜವನ್ನು ಸಂಪೂರ್ಣವಾಗಿ ಪ್ರತಿಭಟಿಸುವುದು ಕಡಿಮೆ. ಇಂತಹವರು ಎಲ್ಲ ಸಮಾಜದಲ್ಲೂ ಇರುತ್ತಾರೆ. ದುಷ್ಟ ಶಕ್ತಿಗಳನ್ನು ಮುಖಾಮುಖಿ ಎದುರಿಸುವುದಕ್ಕೆ ಸಜ್ಜನರೂ, ಶಕ್ತಿಶಾಲಿಗಳೂ ಮೀನ-ಮೇಷ ಎಣಿಸುತ್ತಾರೆ.

ದ್ರೌಪದಿ! ನನ್ನ ಕಥೆಯನ್ನು ಈ ಸಮಯದಲ್ಲಿ ಮುಂದುವರಿಸುವ ದಾರಿ ಕಾಣಲಿಲ್ಲ. ಜೊತೆಗೆ ನಿನ್ನನ್ನು ನಗ್ನಳಾಗಿ ಮಾಡಿಬಿಡುವುದನ್ನು ನಿಲ್ಲಿಸಲು ಶ್ರೀ ಕೃಷ್ಣನ ಮಾಯೆಯನ್ನು ಇಲ್ಲಿ ಉಪಯೋಗಿಸಿಕೊಂಡೆ.

ದ್ರೌಪದಿ: ನನ್ನ ಮಹಾವೀರ ಪತಿಗಳಿಂದ ಕೌರವರೆಲ್ಲರಿಗೂ ನರಕದ ಬಾಗಿಲು ತೆಗೆದುಕೊಂಡು ಕಾದಿದೆ!

ದುರ್ಯೋಧನ: ದ್ರೌಪದಿ ! ನೀನೇಕೆ ವ್ಯಥಾ ಕನಸನ್ನು ಈ ಹಗಲಿನಲ್ಲಿ, ರಣರಂಗದಲ್ಲಿ ಕಾಣುತ್ತಿದ್ದೀಯೆ? ನಿನ್ನ ವಸ್ತ್ರಾಪಹರಣದ ಮನೋರಂಜನೆಯನ್ನು ನೋಡುತ್ತಿದ್ದ ನಾವು, ಮೀಸೆಯ ಮೇಲೆ ಕೈಹಾಕಿ ಅಟ್ಟಹಾಸದಿಂದ ನಿನ್ನ ಆ ಸೌಂದರ್ಯದ ಬೆಡಗನ್ನು ಮನತಣಿಸಿಕೊಳ್ಳುತ್ತಾ ನೋಡುತ್ತಿರುವಾಗ, ಆ ನಿನ್ನ ಗಂಡಂದಿರು ಏನೂ ಮಾಡಲಾಗದ ಹೇಡಿಗಳಂತೆ ಬಾಲ ಮುದುರಿಕೊಂಡು ಸುಮ್ಮನೆ ಮಿಕ - ಮಿಕ ನೋಡುತ್ತಿದ್ದರಲ್ಲವೆ! ಆ ಅಡುಗೆ ಭಟ್ಟನ ಮಾತನ್ನೇಕೆ ತಂದು ನಿನ್ನ ನಾಲಿಗೆಯನ್ನು ನೋಯಿಸಿಕೊಳುತ್ತಿದ್ದೀಯೆ ದಿಗಂಬರ ಸುಂದರಿ? (ದೊಡ್ಡ ಅಟ್ಟಹಾಸ ಹಾಕುತ್ತಾನೆ)

ಪ್ರವೇಶ: ಭೀಮ

ಭೀಮ: ಎಲವೋ ಅಧಮಾಧಮ! ನಾನು ಅಡುಗೆ ಭಟ್ಟನಾಗಿದ್ದಾಗ, ನನ್ನ ಪ್ರೀತಿಯ ಹೆಂಡತಿಯಾದ ದ್ರೌಪದಿಯನ್ನು ಛೇಡಿಸಿ, ಕೆರಳಿಸಿ ಕಾಮಾಂಧನಾಗಿ ಅರಮನೆಯಲ್ಲೆಲ್ಲಾ ಹಿಂಬಾಲಿಸುತ್ತಿದ್ದ ಆ ಕೀಚಕನನ್ನು ಹೇಗೆ ಕೊಂದೆ ಎನ್ನುವುದು ನಿನಗೆ ಗೊತ್ತೋ! ದುರ್ಯೋಧನ ನೀನು ಧೈರ್ಯವಂತನಾದರೆ ಇದೀಗಲೇ ಬಾ ! ನಿನ್ನನ್ನು ಜಟ್ಟಿ ಕಾಳಗದಲ್ಲಿ, ಪಲ್ಟಿಹಾಕಿಸಿ, ಕೆಳಗುರುಳಿಸಿ, ಜಗತ್ಪ್ರಸಿದ್ಧವಾದ ನನ್ನ ಪಟ್ಟಿನಲ್ಲಿ ನೇಣುಹಾಕಿ ಒಂದೂ ಉಸಿರು ದಕ್ಕದಂತೆ ಮಾಡಿಬಿಡುತ್ತೇನೆ.

ನನ್ನ ಪ್ರೀತಿಯ ಪುತ್ರ ಘಟೋತ್ಕಚನನ್ನು ಸಾಯಿಸಿದ ಆ ಕರ್ಣನನ್ನು ಈ ಕಾಲಭೈರವನ ತುಳಿತದಲ್ಲಿ ಮೆಟ್ಟಿ ಕುಣಿದು ನಾಟ್ಯವಾಡುತ್ತೇನೆ.

ಕೃಷ್ಣ : ಜಗತ್‌ ಜಟ್ಟಿ ಭೀಮ! ಸಾವಧಾನ. ಮುಂದೆ ಆಗುವ ಭಾರತ ಯುಧ್ಧವನ್ನು ಈಗಲೇ ಮುಗಿಸಿ ಬಿಡಲು ಸಾಧ್ಯವೇ! ಇದರ ಸೃಷ್ಟಿ ಕರ್ತ, ದಿವ್ಯ ಜ್ಞಾನಿಯಾದ ವೇದ ವ್ಯಾಸರು ನಡೆಸಿದಂತೆ ಮಹಾಭಾರತ ವೆಲ್ಲವೂ ಸಾಗಬೇಕಲ್ಲವೆ! :-) :-)

ವ್ಯಾಸ: (ಕೃಷ್ಣನು ನಗುವ ಧಾಟಿಯಲ್ಲೇ ನಕ್ಕು) ಕೃಷ್ಣ ! ನೀನು ಬೇರೆಯಲ್ಲ ನಾನು ಬೇರೆಯಲ್ಲ; ಸಮಯಕ್ಕೆ ಒಂದು ಉಪಾಯವನ್ನು ಹೂಡುವೆಯಲ್ಲಾ !

ಕರ್ಣ: ಮಹಾವೀರನಾದ ನನ್ನ ಹಣೆ ಬರಹದ ಪ್ರಕಾರ ನಾನು ಸೂತ ಪುತ್ರನಾಗಿ ಜೀವನಪೂರ್ತಿ ಅವಹೇಳನ ಮಾಡಿಸಿಕೊಳ್ಳಬೇಕಾಯಿತಲ್ಲಾ . ನನ್ನ ದುಃಖ ಯಾರಿಗೂ ಅರ್ಥವಾಗಲಾರದು.

ಪ್ರವೇಶ: ಏಕಲವ್ಯ

ಏಕಲವ್ಯ: ನಿನ್ನ ದುಃಖ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ ಕರ್ಣ. ಬೇಡರವನಾದ ನನಗೆ ಬಿಲ್ಲುವಿದ್ಯೆ, ಶಸ್ತ್ರ ಪಾಠಗಳನ್ನು ಹೇಳಿಕೊಡುವುದಿಲ್ಲ ಎಂದು ನನ್ನನ್ನು ಕನಿಕರವಿಲ್ಲದೆ ಹಿಂತಿರುಗಿಸಿ ಕಳಿಸಿಬಿಟ್ಟ ದ್ರೋಣರ ಬಗ್ಗೆ ನನಗೂ ಬಹಳ ಬೇಸರವಾಯಿತಲ್ಲವೆ. ಹುಟ್ಟಿನಿಂದ ಬೇಡನಾದ ನನಗೆ ಬಿಲ್ಲುವಿದ್ಯೆಯನ್ನು ನೈಜವಾಗಿ ಕಲಿಯಬಲ್ಲ ಸೌಭಾಗ್ಯ - ಸಂಪ್ರದಾಯಗಳು ರಕ್ತಗತವಾಗಿ ಬಂದದ್ದು ಎನ್ನುವುದನ್ನು ತೋರಿಸಿಕೊಡಲು ಗುರುವಿನ ಪ್ರತಿಮೆಯೇ ಸಾಕ್ಷಿಯಾಯಿತು. ಕರ್ಣ! ಆದರೆ, ಬಿಲ್ಲುವಿದ್ಯಕ್ಕೇ ಅತಿ ಅವಶ್ಯಕವಾದ ನನ್ನ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ಕೊಡಲು, ನನ್ನ ಕಣ್ಣಿನ ರೆಪ್ಪೆಯನ್ನು ಕೂಡ ಮಿಟುಕಿಸದೆ ಒಂದೇ ಹೊಡೆತದಲ್ಲಿ ಕತ್ತರಿಸಿ ಗುರುಗಳ ಪಾದದಲ್ಲಿಟ್ಟಾಗ, ಪ್ರಪಂಚದ ಧನಸ್‌-ಶಾಸ್ತ್ರ ಪಾರಂಗತರನ್ನೆಲ್ಲಾ ಮಿಂಚಿ ಗೆದ್ದ ಸಂತಸದ ಅನುಭವವಾಯ್ತು.

ಕರ್ಣ! ನಿನ್ನ ಪರಿಸ್ಥಿತಿ ನನಗೆ ಅರ್ಥವಾಗುವಷ್ಟು ಇನ್ಯಾರಿಗೂ ತಿಳಿಯಲಾರದು.

ವ್ಯಾಸ: ಕರ್ಣನು ಸೂತಪುತ್ರನೆಂದೂ, ಪಾಂಡವರು ಮತ್ತು ಕೌರವರುಗಳು ರಾಜ ಪುತ್ರರೆಂದೂ ನಂಬಿ ದ್ರೋಣ ಮೊದಲಾದ ಶಸ್ತ್ರಾಚಾರ್ಯರುಗಳು ನನ್ನ ಕಥೆಯಲ್ಲಿ ಕರ್ಣನನ್ನು ಅಲ್ಲಗಳೆದರು. ಇದನ್ನು ಸ್ವಲ್ಪ ಯೋಚಿಸಿನೋಡು ಕರ್ಣ. ಈ ಆಚಾರ್ಯರುಗಳು ಮೊದಲಿಗೆ ಬ್ರಾಹ್ಮಣರು; ರಾಜಾಶ್ರಯವಿಲ್ಲದೆ ಅವರ ವಿದ್ಯೆಯನ್ನು ಇನ್ಯಾರಿಗಾದರೂ ಹೇಳಿಕೊಟ್ಟರೆ ಅವರ ಹೆಚ್ಚುಗಾರಿಕೆ ಸಫಲವಾದೀತೇ? ತಮಗೆ ಅವಕಾಶವನ್ನು ಕೊಟ್ಟ ರಾಜನ ಪುತ್ರರಿಗೆ ಅವರ ಜೀವನ, ಅವರ ಉದ್ಯೋಗ ಮೀಸಲಾಗಿಟ್ಟಿದ್ದರು. ಆದ ಕಾರಣವೇ, ಅವರು ತಮ್ಮ ಆಶ್ರಯದಾತರಿಗೆ ಮುಡುಪಾಗಿಟ್ಟುಕೊಂಡಿದ್ದ ನಿಷ್ಠೆಯನ್ನು ಇತರರಿಗೆ ಹಂಚುವುದಕ್ಕೆ ಹಿಂಜರಿದರು. ನಮ್ಮ ಕಾಲದಲ್ಲಿ ಕೂಡ ಉದ್ಯೋಗಗಳು ಹುಟ್ಟಿದ ಜಾತಿಯನ್ನೇ ಅನುಸರಿಸುತ್ತಿದ್ದವು; ಹಾಗಂದ ಮಾತ್ರಕ್ಕೆ, ಈ ಸಂಪ್ರದಾಯದಿಂದ - ಕುರುಡೆನ್ನೀ, ಸಮಾಜದ ಕುಂದುಕೊರತೆ ಹಾಗೂ ಅನ್ಯಾಯವೆನ್ನೀ - ರಾಜರಿಗೆ, ಕ್ಷತ್ರಿಯ ಕುಲದವರಿಗೆ ಮೀಸಲಾಗಿದ್ದ ಉದ್ಯೋಗವೆಂದು ಸನ್ನಿವೇಶಗಳಮೂಲಕ ಅವಹೇಳನ ಮಾಡುವ ಕಾರಣದಿಂದ ಕಥೆಯಲ್ಲಿ ಬರೆದೆ. ಇಲ್ಲಿನ ತಮಾಷೆ ಏನೆಂದರೆ, ಓದುಗರಿಗೆಲ್ಲಾ ಕರ್ಣನು ಸೂತನಲ್ಲ ಎಂದು ಗೊತ್ತಿದೆ; ಪಾತ್ರಗಳಿಗೆ ಮಾತ್ರ ಗೊತ್ತಿಲ್ಲ!

ಏಕಲವ್ಯನ ಕಥೆಯಲ್ಲಿಯೂ ಅಷ್ಟೆ: ಕ್ಷತ್ರಿಯ ಯುವಕನಾಗಿ, ದ್ರೋಣರಂತಹ ಅದ್ವಿತೀಯ ಆಚಾರ್ಯರಿಂದ ಕಲಿತ, ಇವನಿಗೆ ಸಮಾನರಾದ ಬಿಲ್ಲುಗಾರರು ಎಲ್ಲಿಯೂ ಇಲ್ಲ ಎಂದು ಅಹಂಕಾರದಲ್ಲಿ ಮುಳುಗಿದ್ದ ಅರ್ಜುನನಿಗೆ ಕಣ್ಣು ತೆರೆಸಲು ಅಳವಡಿಸಿದ ಕಥೆ; ವಿದ್ಯೆಯು ಮನಸನ್ನು ಕೇಂದ್ರೀಕರಿಸಿದ ಎಲ್ಲರಿಗೂ ಪ್ರಾಪ್ತವೆನ್ನುವ ದೃಷ್ಟಾಂತವನ್ನು ಏಕಲವ್ಯನನ್ನು ಕೇಂದ್ರೀಕರಿಸಿ ಓದುಗರಿಗೆ ತಿಳಿಸಿ ಹೇಳಿದ ಕಥೆ.

ಈ ದೃಷ್ಟಾಂತ ಧ್ಯೇಯದ ಕಥೆಯಲ್ಲಿ ದ್ರೋಣರು ಏಕಲವ್ಯನನ್ನು ಗುರುದಕ್ಷಿಣೆ ಕೇಳಿದಾಗ ಅವರ ಸ್ವಾರ್ಥದ ಹುಳುಕು ಪ್ರಪಂಚಕ್ಕೇ ಕಂಡುಬರುತ್ತದೆ. ಈ ಕಥೆಯಲ್ಲಿ ಮೊದಲಿನಿಂದ ಕೊನೆಯವರೆಗೂ ನಿರ್ಮಲ ಮನಸ್ಸನ್ನು ಉಳಿಸಿಕೊಳ್ಳುವವನು ಏಕಮಾತ್ರ ಪಾತ್ರದ ಏಕಲವ್ಯ; ಇಂತಹ ಅದ್ವಿತೀಯ ಬಿಲ್ಲುಗಾರನ ಮುಂದೆ, ಅರ್ಜುನನೂ ದ್ವಿತೀಯನಾಗಿಬಿಡುತ್ತಾನೆ; ಆಚಾರ್ಯರೂ ಕೂಡ ಅಲ್ಪರಾಗಿಬಿಡುತ್ತಾರೆ.

ಏಕಲವ್ಯನು ಹುಟ್ಟಿನಿಂದ ಬೇಡ. ಬೇಡನ ವೃತ್ತಿ ಬೇಟೆಯಾಡುವುದು; ಇದು ಇವನಿಗೂ, ಇವನ ಸಂಸಾರ ಪಾಲನೆಗೂ ಅತ್ಯವಶ್ಯಕ. ಆದರೆ, ಬೇಡನು ತನ್ನ ಕೆಲಸಕ್ಕೆ ಸಾಕಷ್ಟು ಬಿಲ್ಲುವಿದ್ಯೆಯನ್ನು ಕಲಿತಿದ್ದರೆ ಸಾಕು. ಪ್ರಪಂಚದಲ್ಲಿ ಎಲ್ಲರನ್ನೂ ಮೀರಿಸಿ ಬಿಲ್ಲುಗಾರ ನಾಗಬೇಕಾಗಿಲ್ಲ. ಇವನಿಗೆ ಯಾವ ಗುರುವೂ ಬೇಕಾಗಿಲ್ಲ. ಇವನಲ್ಲಿ ರಕ್ತಗತವಾಗಿ ಬಂದ ಪ್ರವೃತ್ತಿಯಾದ ಬಿಲ್ಲುಗಾರಿಕೆ ತನಗೆ ತಾನೇ ವ್ಯಕ್ತವಾಗುತ್ತದೆ. ಇವನಿಗೆ ಮನಸ್ಸನ್ನು ಕೇಂದ್ರೀಕರಿಸಲು ದ್ರೋಣರ ಪ್ರತಿಮೆ ಒಂದು ನೆಪವಾದ ಧ್ಯೇಯ ಮೂರ್ತಿ. ಜನ್ಮ ಸಹಜವಾದ ಬಿಲ್ಲುಗಾರ ಏಕಲವ್ಯ. ಇವನ ಮುಂದೆ ಎಲ್ಲರೂ ಸಾಮಾನ್ಯರು.

ಕರ್ಣ: ನನಗೆ ಕಪಟಿ ಕೃಷ್ಣ, ತಾಯಿ ಕುಂತಿ, ಇಂದ್ರ ಇವರುಗಳು ಅನ್ಯಾಯ ಮಾಡುತ್ತಿರುವಾಗ, ನನ್ನ ತಂದೆಯಾದ ಸೂರ್ಯ ದೇವನು ನನ್ನ ಪತನಕ್ಕೆ ಪ್ರೀತಿಯಿಂದ ಅಡ್ಡಬಂದು ನನ್ನನ್ನು ಉಳಿಸಿಕೊಳ್ಳಬಹುದಾಗಿತ್ತಲ್ಲವೆ?

ಪ್ರವೇಶ: ಸೂರ್ಯ

ಸೂರ್ಯ: ಅಳಬೇಡ, ಕಣ್ಣೀರಿಡಬೇಡ ಕರ್ಣ!

ಕರ್ಣ: ಇಂದ್ರನು ತನ್ನ ನೆಚ್ಚಿನ ಮಗನಾದ ಅರ್ಜುನನ ಜಯಕ್ಕೋಸ್ಕರ ನನ್ನಿಂದ ವರದ ನೆವದಲ್ಲಿ ನನ್ನ ಜೀವವನ್ನೇ ಸಾಯುವ ಮುಂಚೆಯೇ ಕಿತ್ತುಕೊಂಡು ಹೋಗಿಬಿಟ್ಟ. ನೀನೇಕೆ ಅಂತಹ ಪುತ್ರವಾತ್ಸಲ್ಯವನ್ನು ನನಗೆ ತೋರಲಿಲ್ಲ ?

ಸೂರ್ಯ: ಪುತ್ರಾ! ನೀನು ದಾನಶೂರನೆಂಬ ಹೆಸರಿಗೆ ತಕ್ಕಂತೆ ಕೇಳಿದ್ದನ್ನು, ಕೊಂಚವೂ ಹಿಂಜರಿಯದೆ, ಒಂದು ಮಿಂಚು ಹೊಳೆಯುವ ಕ್ಷಣಮಾತ್ರವೂ ಹಾರಿಹೋಗದಂತೆ, ನಿಂತಲ್ಲೇ ತರ್ಪಣ ಬಿಟ್ಟು ಕೊಡಲು ಹೋದಾಗ, ನಾನು ಬೇಡಿ, ಬೇಡಿ ‘ಬೇಡ ಮಗು’, ’ದುಡುಕಬೇಡ ಕಂದ’, ನಿನ್ನ ಪ್ರಾಣವನ್ನೇ ತರ್ಪಣ ಕೊಡಬೇಡ’ ಎಂದೆಲ್ಲಾ ಹೇಳಿ, ಕೂಗಿ, ಅಗ್ನಿಹೃದಯದ ನಾನೂ ಒಂದು ಹನಿ ಕಣ್ಣೀರು ಬಿಟ್ಟಿದ್ದನ್ನು ಕಂಡೂ, ನೀನು ನಿನ್ನ ದಾನವನ್ನು ಪೂರ್ತಿ ಮಾಡಿದೆಯಲ್ಲವೇ?

ವ್ಯಾಸ: ಕರ್ಣ! ನೀನು ಮಾಡಿದ ದಾನಗಳಬಗ್ಗೆ ಬೇಸರಪಡುವ ಕಾರಣವಿಲ್ಲ; ಕುಂತಿ! ನೀನು ಕೂಡ ನಿನ್ನ ಪುತ್ರನ ದಾನಗಳಿಗೆ ನೊಂದುಕೊಳ್ಳಬೇಕಾಗಿಲ್ಲ. ಕರ್ಣನು ಅತಿಪರಾಕ್ರಮಿ. ಬಿಲ್ಲುವಿದ್ಯೆಯಲ್ಲಿ ಅರ್ಜುನನ ಸಮಾನವಾಗಿಯೂ ಯುಧ್ಧ ಮಾಡಬಲ್ಲವನು. ಅದಕ್ಕಿಂತ ಹೆಚ್ಚಾಗಿ, ಸಾರಥಿಯಾದ ಶಲ್ಯನು ಅವನನ್ನು ತ್ಯಜಿಸಿದರೂ, ರಥವನ್ನು ತಾನೆ ನಡೆಸಿಕೊಂಡು, ಯುದ್ಧವನ್ನು ಮುಂದುವರಿಸಿದ ಅಸಮಾನ ವೀರ. ಗಾಂಢೀವಿಯೆಂದು ಹೆಸರಾದ ಅರ್ಜುನನೂ ಕೂಡ ಕರ್ಣನನ್ನು ಸೋಲಿಸಲಾಗಲೇ ಇಲ್ಲ. ತನ್ನ ಕರ್ಣಕುಂಡಲಗಳನ್ನೂ, ವಜ್ರಕವಚವನ್ನೂ ಒಂದು ಕಣ್ಣೂ ಮಿಟುಕಿಸದೆ ದಾನಮಾಡಿದರೂ ಅವನಿಗೆ ಸೋಲುಬರಲಿಲ್ಲ. ಕರ್ಣನನ್ನು ನ್ಯಾಯದಲ್ಲಿ ಸೋಲಿಸುವ, ಕೊಲ್ಲುವ ಸಾಧ್ಯತೆಯಿಲ್ಲವೆಂದಲೇ, ಕೃಷ್ಣನು ಅರ್ಜುನನಿಗೆ ಅಶಸ್ತ್ರನಾಗಿ, ರಥವನ್ನು ಮೇಲೆತ್ತಲು ಎರಡು ಕೈ-ಭುಜಗಳನ್ನೂ, ತನ್ನ ಪೂರ್ತಿ ದೇಹವನ್ನೂ ಕೊಟ್ಟಿರುವಾಗ ಮಾತ್ರ ಕೊಲ್ಲುವ ಅವಕಾಶವಿದೆಯೆಂದು ಸ್ಪಷ್ಟವಾಗಿ ಹೇಳುತ್ತಾನೆ. ಕವಿಯಾದ ನಾನು ಕರ್ಣನ ಮಹತ್ವಗಳನ್ನು ನಿರ್ದೇಶಿಸಲು ಇಷ್ಟೆಲ್ಲವನ್ನು ಕಥೆಯಲ್ಲಿ ಅಳವಡಿಸಬೇಕಾಯ್ತು.

ಕರ್ಣ! ನಿನಗೆ ಈಗ ಒಂದು ಗುಟ್ಟನ್ನು ಹೇಳುತ್ತೇನೆ ಕೇಳು. (ಗುಟ್ಟು ಹೇಳುವವರ ಧಾಟಿಯಲ್ಲಿ ಕರ್ಣನ ಕಿವಿಯೋಳಗೆ ಹೇಳಿದರೂ, ಸಭೆಯ ಎಲ್ಲರಿಗೂ ಚೆನ್ನಾಗಿ ಕೇಳುವಂತೆ ಗುಸು ಗುಸು ಧ್ವನಿಯಲ್ಲಿ ಹೇಳುತ್ತಾನೆ) ನಿನ್ನ ತಂದೆ ಸೂರ್ಯನಲ್ಲ; ನಿನ್ನ ತಾಯಿ ಕುಂತಿಯೂ ಅಲ್ಲ; ನಿನ್ನ ತಂದೆ, ತಾಯಿ ಎರಡೂ ನಾನೆ. ನನ್ನ ಕಲ್ಪನಾ ಲೋಕದಲ್ಲಿ ಜನಿಸಿದ ನಿನ್ನನ್ನು ಕಥೆಯು ನಡೆದ ಹಾಗೂ ಪೋಷಿಸಿ ಬೆಳೆಸಿದ ಮಾತಾ ಪಿತೃವೂ ನಾನೆ. ನಿನಗೊಬ್ಬನಿಗೇ ಅಲ್ಲ; ಮಹಾಭಾರತದ ಕಥೆಯ ಎಲ್ಲ ಪಾತ್ರಗಳನ್ನೂ, ಕಥೆಯಲ್ಲಿ ನನ್ನ ಅನುಕೂಲಕ್ಕಾಗಿ ದೇವರುಗಳೆನಿಸಿ ಕೊಂಡ ಗಣೇಶ, ಕೃಷ್ಣ, ಹನುಮಂತ ಮೊದಲಾದವರನ್ನೂ ಸೇರಿಸಿಬಿಟ್ಟಿದ್ದೇನೆ. ಎಲ್ಲಕ್ಕೂ ಹೆಚ್ಚಾಗಿ, ನನ್ನ ಪಾತ್ರವನ್ನೇ ನನ್ನ ಕಥೆಯಲ್ಲಿ ಹುಟ್ಟಿಸಿ, ನನಗೆ ನಾನೇ ‘ಜನ್ಮ ದಾತ’ ನಾಗಿದ್ದೇನೆ! ಈ ಕಾರಣದಿಂದಲೇ ಮಹಾಭಾರತವನ್ನು ಮೊದಲಿನಿಂದ ಕೊನೆಯವರೆಗೂ ಓದುಗರು ನಂಬಿಕೊಂಡಿದ್ದಾರೆ. ನಿನ್ನ ಪಾತ್ರವೂ, ನನ್ನ ಕಥೆಯ ಎಲ್ಲ ಪಾತ್ರಗಳೂ, ಸನ್ನಿವೇಶಗಳೂ ಸಮಾಜದಲ್ಲಿ ಅಜರಾಮರವಾಗಿ ಉಳಿದಿರುವುದು ಆಕಾರಣದಿಂದಲೇ.

‘ಒಂದು ಊರಿನಲ್ಲಿ ರಾಜ, ರಾಣಿಯರಿದ್ದರು, ಅವರಿಗೆ ಸಮಯಕ್ಕೆ ಸರಿಯಾಗಿ ಲಕ್ಷಣವಾದ ಮಕ್ಕಳು ಹುಟ್ಟಿ, ಎಲ್ಲರೂ ಒಳ್ಳೆಯವರಾಗಿ ಬೆಳೆದು, ಯಾರೂ, ಯಾರ ಜೊತೆಯೂ ಜಗಳವನ್ನಾಡದೆ ಸದಾ ಸುಖವಾಗಿದ್ದರು. ರಾಜ್ಯದಲ್ಲಿ ಯಾವಾಗಲೂ ಎಲ್ಲರೂ ನಗುನಗುತ್ತಾ, ಮಾದರಿ ಸಮಾಜವಾಗಿ ಬಾಳುತ್ತಿದ್ದರು’ (ಈ ಸಮಯಕ್ಕೆ ಪಾತ್ರಧಾರಿಗಳೆಲ್ಲರೂ ತೂಕಡಿಸಿ ಗೊರಕೆ ಹೊಡಯಲಾರಂಭಿಸಿರುತ್ತಾರೆ!) ಎಂದು ನಾನು ಕಥೆ ಬರೆದಿದ್ದರೆ ಓದುಗರಿರಲಿ, ಸಭಿಕರಿರಲಿ, ನನ್ನ ಪಾತ್ರಗಳೇ ನನ್ನ ಕಥೆಯನ್ನು ಕೇಳಲಾಗದೆ ನನ್ನ ಮುಂದೆಯೇ ತೂಕಡಿಸಿ ಗೊರಕೆ ಹೊಡೆದು ಬಿಡುತ್ತಿದ್ದರು. (ಈಗ ಎಲ್ಲ ಪಾತ್ರಧಾರಿಗಳೂ ಬೇಕಂತಲೇ ನಿದ್ದೆಬಂದವರ ಹಾಗೆ ನಟಿಸುತ್ತಿದ್ದರೋ ಎಂಬಂತೆ, ಎದ್ದು ಯಥಾ ಸ್ಥಿತಿಗೆ ಬರುತ್ತಾರೆ.)

(ಇಲ್ಲಿ ಸಭಿಕರು ತಮ್ಮ ಪ್ರಶ್ನೆಗಳನ್ನು ನೇರವಾಗಿಯೂ, ಯಾವುದಾದರೂ ಪಾತ್ರದ ಪರವಾಗಿಯಾದರೂ ಕೇಳಬಹುದು.)

ವ್ಯಾಸ: (ಪಾತ್ರಗಳ ಕಡೆಗೆಲ್ಲಾ ಒಂದು ಸಾರಿ ನೋಡಿ, ನಂತರ ಸಭಿಕರ ಕಡೆಗೆಲ್ಲಾ ನೋಡಿ) ಕರ್ಣ! ಒಟ್ಟಿನಲ್ಲಿ ಯೋಚನೆ ಮಾಡಿನೋಡು: ಕರ್ಣನು ಸಾವನ್ನಪ್ಪಿದರೂ, ಸೋಲಲಿಲ್ಲ; ಅವನು ದಾನ ಮಾಡಿದ್ದು ಕರ್ಣಕುಂಡಲಗಳನ್ನಲ್ಲ, ವಜ್ರ ಕವಚವನ್ನಲ್ಲ, ತೊಟ್ಟ ಬಾಣವನ್ನು ಮತ್ತೆ ತೊಡದ ಮಾತಲ್ಲ; ಹೆತ್ತ ತಾಯಿಗೇ ತನ್ನ ಜೀವವನ್ನು ವಾಪಸ್ಸು ಕೊಟ್ಟ ಅಪೂರ್ವ ಕುಮಾರ. ತನ್ನ ಪ್ರಾಣವನ್ನೇ ದಾನ ಮಾಡಿ, ತನ್ನ ತಮ್ಮನ ಕೈಯಲ್ಲೇ ಸಾಯಲು ಸಿಧ್ಧನಾದ ಅಜರಾಮರ. ಕರ್ಣಾ! ನೀನು ಸಾಯಲೇ ಇಲ್ಲ; ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ನೀನು ಈಗಲೂ, ಸಾವಿರಾರು ವರ್ಷಗಳಿಂದ ಓದುಗರ ಮನದಲ್ಲಿ ರಾರಾಜಿಸುತ್ತಿರುವ, ಸಾಹಿತ್ಯದ ಚರಿತ್ರೆಯಲ್ಲಿಯೇ ಸೂರ್ಯ ದೇವನಂತೆ ಪ್ರತಿಕ್ಷಣವೂ ಪ್ರಜ್ವಲಿಸುತ್ತಿರುವ ಏಕಮಾತ್ರ ವಿಭಿನ್ನ ಪಾತ್ರ.

ಯಾವುದೇ ಸಾಹಿತ್ಯದಲ್ಲಾಗಲೀ ಪಾತ್ರಗಳು ಪ್ರತಿದಿನವೂ ಓದುಗನೊಂದಿಗೆ ಮಾತನಾಡುತ್ತವೆ; ಘಟನೆಗಳೂ ಕೂಡ ಪ್ರತಿ ಓದುಗನ ಮನಸ್ಸಿನ ಕಣ್ಮುಂದೆ ಕುಣಿದು ನಡೆಯುತ್ತಿರುತ್ತವೆ. ಈ ರೀತಿಯಲ್ಲಿ ಸಾಹಿತಿಯೂ ತನ್ನ ಮನಸ್ಸಿಲ್ಲಿ, ಕಲ್ಪನೆಯ ಅಲೆಯಲ್ಲಿ ತೇಲಿಬಂದ ದೃಶ್ಯಗಳ ಉತ್ಸವವನ್ನು ಚೊಕ್ಕವಾಗಿ ಹಿಡಿದು ಕುಶಲತೆಯ ಬರಹದಿಂದ ಕಥೆ ಹೇಳಿ ಊಹೆಯ ಪ್ರಪಂಚವನ್ನು ನಿಜವೆನಿಸುವ ಕಥಾರಂಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾನೆ.

ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತುವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಯನ್ನು ಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವ ಸಮಯದಲ್ಲಿ ಲೇಖಕನಿಗೂ, ಓದುವ ಸಮಯದಲ್ಲಿ ಓದುಗರಿಗೂ ಮನರಂಜನೆಯನ್ನು ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.

ಅಂತ್ಯ ಪರದೆ ನಿಧಾನವಾಗಿ ಮುಚ್ಚುತ್ತದೆ

(ಸದ್ಯದಲ್ಲೇ, ಈ ಧಾಟಿಯಲ್ಲಿ ಸಾಮೂಹಿಕ ಸಾಹಿತ್ಯ ರಚನೆಯ ಒಂದು ಮಾದರಿಯನ್ನೂ ಸಿದ್ಧಗೊಳಿಸುತ್ತಿದ್ದೇವೆ. ಇದರಲ್ಲಿ ಓದುಗರಾದ ನೀವೆಲ್ಲರೂ ಭಾಗವಹಿಸಬಹುದು. ನಿಮಗೆ ಆಸಕ್ತಿಯಿದ್ದಲ್ಲಿ, ಮೂರ್ತಿಯಾಡನೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ: ICubed.Murthy@Gmail.com)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ