ಸೋಮವಾರ, ಮೇ 31, 2010

Illusions of Reality

Illusions of Reality

KRS Murthy

Reflections of the darkness
Soothing melodies in deaf ears
Anticipation of yesterday
Memories of to-morrow
Hard to forget realities of dreams
Mourning of my own death
Gravitational pull of the sky
Hunger in a full stomach
Warmth of my own hug
Rain fall from the oceans to the sky
Fear of my own birth
Celebrations of the pleasures of death
Hatred of falling in love
Eagerness of the lovers' separation
Contentment in emptiness
The bliss of being alone
Being alone in the whole universe
The one I conceived from my own non-existence
Believable illusions of reality!

ರತಿ ರಾಸ ರಾಗ

ರತಿ ರಾಸ ರಾಗ
ಕೆ. ಆರ್. ಎಸ್. ಮೂರ್ತಿ
http://drkrsmurthy.blogspot.com/2010/05/blog-post_31.html
ಕಾಮನ ಬಿಲ್ಲಿನ ಕಮಾನಿನ ವಿನ್ಯಾಸದ ಕಪ್ಪು ಕಣ್ಣಿನ ಬಿಂಕದ ವೈಯಾರಿ ರೂಪಸಿ
ತೆಳು ತನುವಿನ, ಬಿಳಿ ಬಣ್ಣದ, ನಯ ನಡುವಿನ, ತುಂಟ ತುಟಿಯವಳೇ ಊರ್ವಶಿ

ಇತ್ತ ಬಾ, ಹತ್ತು ಬಾ, ಕೆರಳಿದ ಕುದುರೆ ಚಿಮ್ಮುತಿದೆ, ನರಳುತಿದೆ, ಅರಳಿದ ಬಾಳೆ
ಸಾವಿರಾರು ಯೋಜನದ ಸವಾರಿಗೆ ನೆಗೆದು ಮಂಡಿಸು, ಕುಣಿದು ಕುಪ್ಪಳಿಸು ಬಾಲೆ

ಯುವಕರು ನಾವು, ತವಕವೇಕೆ ವರುಷಗಳು ಅರವತ್ತು, ಮತ್ತು ನಲವತ್ತೇ ಸಾಗಲಿ
ರಸಿಕರು ನಾವು, ರಾಸ ರಾಗ ಆಲಾಪದ ಕಾಮಾರ್ಚನೆಯು ಜಾವ, ಜಾವಕೆ ಆಗಲಿ

ಅರ್ಚನೆ, ಭಜನೆ, ಧೂಪಾರತಿ, ಮಂಗಳಾರತಿ, ಮಹಾಮಂಗಳಾರತಿ, ತೀರ್ಥ, ಪ್ರಸಾದ
ಜಾವಕ್ಕೆ ಒಂದೋ, ಎರಡೋ, ಮತ್ತೊಂದೋ ಸಾವಧಾನದ ನಗ್ನ ಸುಲಗ್ನ ಪೂರ್ಣ ಹಸಾದ

ಸರ್ಪಭೂಷಣ ನಾನು, ಕಲ್ಯಾಣಿ ನೀನು; ನೀನೇ ಸರಸತಿ, ನಾನೇ ಅಮರ ಜನಕ ಅಜನು;
ಸರ್ಪ, ಶೇಷಾದ್ರಿ ಶಯನ ಲೋಲ, ಸಕಲ ಸುಂದರ ಕಮಲಾಕ್ಷಿ ಲಕ್ಷ್ಮಿ ನಾನು ನೀನಲ್ಲವೇನು?

ಮನಸಿಜ ಮದನ, ಮೋಹನ ಮಹಾ ನರನ ಸುತ, ಕುಸುಮ ಶರ, ಸಕಲ ವರ್ಣ ಬಿಲ್ಲು ಗಾರ
ತ್ರಿಲೋಕ ಸುಂದರಿ, ರತಿ ರಾಗ ಚತುರೆ, ಕಾಮ ರುಚಿ ಪೂರ್ಣೆ, ಆಗಸ ರಾಜ ವದನೆ ಬಾರಾ

ನನ್ನಲ್ಲಿ ನೀನು, ನಿನ್ನೊಳಗೆ ನಾನು ಸೇರಿಹೊದರೆ ತಾನೇ ಇಹವು ಮೋಹದ ಜಾಲದಲ್ಲಿ ತಲ್ಲೀನ
ತಡವೇಕೆ, ಹಿಂಜರಿಯುವುದೇಕೆ, ನಸು ಕೂಡ ನಾಚಿಕೆಯೇಕೆ? ರಮಿಸು ಬಾ, ತಣಿಸು ಬಾ ನನ್ನ

ಭಾನುವಾರ, ಮೇ 30, 2010

ನಾನೆಲ್ಲರಿಗೂ ಬೇರೆ

ನಾನೆಲ್ಲರಿಗೂ ಬೇರೆ
ಕೆ. ಆರ್. ಎಸ್. ಮೂರ್ತಿ

ಬರೀ ಬರಡು ಬರೆಯುವವನು ನಾನಲ್ಲ
ಬರೀ ಬೋರ್ ಕೊರೆಯುವವನೂ ಅಲ್ಲ

ಸರ,ಸರ ಸರಾಗದಲಿ ಸುರಿಮಳೆಯು
ಸುರಿದು, ಹಿಂದಿನವರೆಲ್ಲರ ಕೊಚ್ಚೆಯು

ಹರಿದು ಚರಂಡಿಗೆ ಅಟ್ಟಿ, ಕೊಚ್ಚಿ ಹೋಗಿ
ಹೊಸ ನೀರು ಬಯಲಲೆಲ್ಲ ಹರಡಿ ಹೋಗಿ

ಹೊಸ ಹುರುಪಿನ ತಂಗಾಳಿಯು ಬೀಸುತಿರೆ
ಮಣ್ಣಿನ ಕಂಪು ಮನಸಿಗೆ ತಂಪು ಸೂಸುತಿರೆ

ಸರಿ ರಾಗ ಗಾಳಿಯಲಿ, ಅನುರಾಗ ಮನದಲ್ಲಿ
ಹಸೆಯುವೆನು ಹೊಸ ದಿಕ್ಕಿನ ಲೇಖನಿಯಲಿ

ಶುಕ್ರವಾರ, ಮೇ 28, 2010

ಕಿಟ್ಟಪ್ಪನ ಕಷ್ಟವೆಲ್ಲಾ ನನಗಿರಲಿ

ಕಿಟ್ಟಪ್ಪನ ಕಷ್ಟವೆಲ್ಲಾ ನನಗಿರಲಿ
ಕೆ. ಆರ್. ಎಸ್. ಮೂರ್ತಿ

ಬಿಟ್ಟು ಬಿಡು ಕಿಟ್ಟಪ್ಪ ನಿನ್ನ ಕೆಟ್ಟ ಬುಧ್ಧಿ
ಕೆಟ್ಟ ಹುಡುಗೀರ ಸಹವಾಸ ಕಡಿಮೆ ಮಾಡು

ನಿನ್ನ ಕೊಳಲು ಊದಿ ಕೊಂಡು ಮರದ ಕೆಳಗೆ
ಸುಮ್ಕೆ ಕೂತ್ಕೋ ನೆರಳಿನಲ್ಲಿ ಕಾಲು ಚಾಚಿ

ದಿನಯೆಲ್ಲಾ ದನ ಕಾಯ್ಕೊಂಡು ಗೋಪಾಲ
ಬಾಯಲ್ಲಿ ಬೆಣ್ಣೆ ತುಂಬಿ ಕೊಂಡು ನೀ ಕಳ್ಳ

ನಿನ್ನ ಹುಡುಗೀರನ್ನೆಲ್ಲಾ ನಾನು ನೋಡ್ಕಂಡು
ದಿನ, ರಾತ್ರಿ ಸ್ವರ್ಗದ ಸುಖ ತೋರಿಸ್ತೀನಿ

ಅಷ್ಟೊಂದು ಹುಡುಗೀರ ಸಹವಾಸದಿಂದ
ನಿನಗೆ ಯಾವಾಗಲೂ ಸುಸ್ತು, ಏದುಸಿರು

ನಿನ್ನ ಬಾಯಲ್ಲಿ ತುತ್ತೂರಿ ಓದಕ್ಕೆ ಸಾಗದು
ಹುಡುಗೀರಿಗೆ ನಿನ್ನಿಂದ ಸುಖ ಆಗಲಾರದು

ಬಂದ ಸುಂದರಿಯರನ್ನೆಲ್ಲಾ ನನಗೆ ಕೊಟ್ಟರೆ
ಕೇಳಪ್ಪ ಎಷ್ಟು ಬೇಕಾದರೂ ಬೆಣ್ಣೆ, ಸಕ್ಕರೆ!

ಕಾಲ ರಾಯ ಕುಂಟುತ್ತಾ ಅವ್ನೆ

ಕಾಲ ರಾಯ ಕುಂಟುತ್ತಾ ಅವ್ನೆ
ಕೆ. ಆರ್. ಎಸ್. ಮೂರ್ತಿ

ನೋಡ್ರಪ್ಪಾ ನೋಡ್ರೀ! ಕುಂಟ್ಟುತ್ತ ಬರ್ತವ್ನೆ! ಕಾಲ ರಾಯಾನೋ
ಏನಾಯ್ತಪ್ಪೋ! ಅವನ್ಗೆ? ಯಾವಾಗ್ಲೂ ಓಡ್ತಾ ಇದ್ದೊನೂ!

ನನ್ಯಾಕ್ಲ ಕುಂಟ ಅಂತೀ, ದರಿದ್ರವನು ನೀನು ಕಣ್ಲಾ?
ನಿಮ್ಗೆಲ್ಲಾರ್ಗೆ ಕಣೋ ಬಡಿದಿರೋದು ದರಿದ್ರದ ಶಕುನ!

ದ್ಯಾವಲೋಕದಲ್ಲಿ ಏಲಾರ್ಗೂ ಬಂದ್ಬುಟ್ಟೈಯ್ತೋ,
ಏಳುರಾಟದ ಶನಿ ಕಾಟ, ಪಟ್ಟಾಗಿ ಬಡಿದು ಬಿಟ್ಟೈಯ್ತೋ

ರಾಹು, ಕೇತು ಇಬ್ರೂ ಒಂದೇ ಮನೇಲಿ ಸೇರಿ ಬಿಟ್ಟವ್ರೋ!
ನಮ್ ಸ್ವರ್ಗದ ದ್ಯಾವ್ರಿಗೆಲ್ಲಾ ಡಬ್ಬಲ್ ತಾಪತ್ರಯಾನೋ

ನಾರಣಪ್ಪನ ಹೆಂಡ್ರು ಲಚ್ಮಿ ಕೈಲಿ ಬಿಡಿಗಾಸೂ ಇಲ್ಲದೆ ಆಗಿಹೋಗಿ
ವೈಕುಂಠ ಬಿಟ್ಟು, ಎಲ್ಲಾರ್ನೂ ಕೈ ನೀಡಿ ಬಿಕ್ಷೆ ಬೇಡ್ತಾ ಅವ್ಳೋ

ಬ್ರಮ್ಮನ ಹೆಂಡ್ರು, ವಾಣಿಯಮ್ಮ ಮಾತಿಲ್ಲದೆ ಮೂಕಿ ಆಗಿ ಬಿಟ್ಟವ್ಳೋ
ಅವ್ಳ ವೀಣೆಯ ಬುರುಡೆ ಒಡಕಾಗಿ, ತಂತಿಯೆಲ್ಲಾ ಕಿತ್ತೋಗೈತೋ

ಬ್ರಮ್ಮ ಲೋಕದಲ್ಲಿ ಸಂತಾನವೇ ಇಲ್ಲದೆ ಮಕ್ಕಳೇ ಇಲ್ಲ ಕಣೋ
ಹುಟ್ಟಿಸೋ ಗಂಡಸು, ಬೊಮ್ಮಣ್ಣ ಷಂಡ ಆಗಿ ಹೋಗಿ ಮುದುರಿ ಕೊಂಡವ್ನೋ

ಅನ್ನಪೂರ್ಣಮ್ಮನ ಅಡಿಗೆಯೆಲ್ಲಾ ಹಳಸು ಕೊಂಡು ಹೋಗಿ ಬಿಟ್ಟೈಯ್ತೋ
ಅವ್ಳ ಅಡಿಗೆ ಮನೆಯ ಪಾತ್ರೆಗಳೆಲ್ಲಾ ಖಾಲಿ ಆಗಿ ಒಲೆಯೆಲ್ಲಾ ಒಣಗೈತೋ

ಅವಳ್ಗೆನೇ ಹಸಿವು ಹೆಚ್ಚಾಗಿ, "ಭವತಿ ಭಿಕ್ಷಾಂದೇಹಿ" ಬೇಡ್ತಾಳಂತೆ
ಹೊತ್ತಾರೆಯಿಂದ ರಾತ್ರಿ ವರೆಗೂ ಮನೆ, ಮನೆ ಮುಂದೆ ಬೇಡ್ಕಂಡು ಓಗ್ತಾಳಂತೆ

ನಮೂರ ಸಾಹುಕಾರ ಕುಬೇರನ ಪರಿಸ್ತಿಥಿ ಕೇಳಿದ್ರೇನೆ ಕಣ್ಣೀರಿ ಬರ್ತದೆ ಕಣೋ
ಭಂಡಾರ ಖಾಲಿ ಆಗಿ, ನರಕದಿಂದ ಸಾವಿರಾರು ಕೋಟಿ ಸಾಲ ಮಾಡ್ಕಂಡು ಬಿಟ್ಟವ್ನೋ

ಪಾರ್ವತಮ್ಮ, ನಮ್ಮಪ್ಪ ಶಿವನ ಮನೆ ಬಗ್ಗೆ ಏನು ಆಗೈತೆ ಗೊತ್ತೇನ್ರೋ?
ಇಬ್ರೂ ಹಿಮಾಲಯದಲ್ಲಿದ್ದ ಕೈಲಾಸವನ್ನು ಪರ್ವತವನ್ನು ಭೋಗ್ಯಕ್ಕೆ ಹಾಕವ್ರೋ

ಕೈಲಾಸದ ಹಿಮ ಎಲ್ಲ ಬತ್ತಿಹೋಗಿ, ಮರಳು ಗಾಡು, ಒಣ ಪ್ರದೇಶ ಆಗೈಯ್ತೋ
ಗಂಗಮ್ಮನಿಗೆ ಬಾಯಾರಿ, ಒಂದು ಹನಿ ಕೂಡ ಕುಡಿಯಕ್ಕೆ ನೀರಿಲ್ದೆ, ಬಡವಾಗವ್ಳೊ

ಗುಂಡಪ್ಪ, ಡೊಳ್ಳು ಹೊಟ್ಟೆ ಗಣೇಶನಿಗೆ ಒಂದು ತುತ್ತು ಊಟ ಕೂಡಾನೂ ಇಲ್ದೇ ಉಪಾಸಾನ್ರೋ
ಹೊಟ್ಟೆ ಎಲ್ಲಾ ಕರಗಿ, ಸಣಕಲು ಕಡ್ಡಿ ಆಗಿ, ಅವನ ಹೊಟ್ಟೆ ಸುತ್ತುಕೊಂಡಿದ್ದ ಹಾವು ಓಡೋಯ್ತಂತೋ

ನಮ್ಮ ಕಿಟ್ಟಪ್ಪನ ಕೊಳಲು ಚುಲ್ಟಾ ಆಗಿ ಹೋಗಿ, ಅದಕ್ಕೆ ಸ್ವಲ್ಪಾನೂ ಉಸಿರೇ ಇಲ್ಲಾಂತ
ಸ್ವರ್ಗದ ಹುಡ್ಗೀರ್ಗೆಲ್ಲಾ ಬೇಸರ ಆಗಿ, ಅವನನ್ನು ಬಿಟ್ಟು, ಕಾಡಿನಲ್ಲಿ ಸನ್ಯಾಸಿನಿ ಆಗಿಬಿಟ್ಟವ್ರೆ

ನರಕದೋರು ದೊಡ್ಡ ರಾಕ್ಷಸ ಸೈನ್ಯ ನನ್ನನ್ನು ಹಿಂಬಾಲಿಸಿ ಅಟ್ಟಿಸಿಕೊಂಡು ಬಂದು ಬಿಟ್ಟ್ರು
ನನ್ನ ಎರಡೂ ಕಾಲಿಗೆ ಪಟಪಟಾಂತ ಚೆನ್ನಾಗಿ ಹೊಡೆದು ಚೆಚ್ಚಿ ಕುಂಟನ್ನ ಮಾಡ್ಬಿಟ್ರು

ನಿಮ್ಗೆಲ್ಲಾ ಗೊತ್ತಿರೋ ಹಾಗೆ ಯಾವಾಗಲೂ ಜೋರಾಗಿ ಓಡುತಿದ್ದವ್ನು ಪ್ರಮಾಣ, ನನ್ನ ಆಣೆ
ಕಲಿಗಾಲಾನೇ ಕೆಟ್ಟದ್ದು ಅಂದುಕೊಂಡಿದ್ದೆ ಕಣ್ರೋ, ಈಗ ಇದ್ಯಾವ ಕಾಲ ಬಂದಿದ್ಯೋ ನಾ ಕಾಣೆ!

ಬುಧವಾರ, ಮೇ 26, 2010

ಸುಳ್ಳೇ ಸತ್ಯ

ಸುಳ್ಳೇ ಸತ್ಯ
ಕೆ. ಆರ್. ಎಸ್. ಮೂರ್ತಿ

ಅದು ಸುಳ್ಳು, ಇದು ಸುಳ್ಳು
ನಾ ಸುಳ್ಳು, ನೀ ಸುಳ್ಳು
ನಿನ್ನೆ, ಮೊನ್ನೆ, ನಾಳೆಯೆಲ್ಲ ಸುಳ್ಳು
ಕಂಡದ್ದು ಸುಳ್ಳು, ಅಂದುಕೊಂಡದ್ದು ಸುಳ್ಳು
ಮುಟ್ಟಿದ್ದು ಸುಳ್ಳು, ಮೆಟ್ಟಿದ್ದು ಸುಳ್ಳು
ಅನಿಸಿದ್ದು ಸುಳ್ಳು, ಅನುಭವಿಸಿದ್ದೇ ಸುಳ್ಳು
ಕಲಿತದ್ದು ಸುಳ್ಳು, ಅರಿತಿದ್ದು ಸುಳ್ಳು
ಒಲವೆಲ್ಲ ಸುಳ್ಳು, ನಲಿವೆಲ್ಲ ಸುಳ್ಳು
ಬಾಳೆಲ್ಲ ಸುಳ್ಳು, ಬಳಗವೆಲ್ಲ ಸುಳ್ಳು
ಹುಟ್ಟಿದ್ದು, ಇರುವುದು, ಸಾಯುವುದು ಸುಳ್ಳು

ಇದೆ ಸತ್ಯ, ಇದೊಂದೆ ಸತ್ಯ

ತಿರುಗು ಬಾಣ

ಸಾಹಿತ್ಯ ಪ್ರಕಾರದ ಹೊಸ ಪ್ರಯೋಗ:

ಕನ್ನಡ ಸಾಹಿತ್ಯದಲ್ಲಿ, ಭಾರತದ ಸೋದರ ಭಾಷೆಗಳಲ್ಲಿ, ಪ್ರಪಂಚದ ಮಿಕ್ಕೆಲ್ಲ ಬಾಷೆಗಳಲ್ಲಿಕೂಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಒಂದು ದಿಕ್ಕಿನಲ್ಲಿ ಮಾತ್ರ ಸಾಹಿತ್ಯ ನದಿಯು ಹರಿಯುತ್ತಿದೆ. ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ, ಲೇಖಕನು ಓದುಗರೊಂದಿಗೆ ತನ್ನ ಸೃಷ್ಠಿಯ ಪಾತ್ರಗಳ ಮೂಲಕವೂ, ಸನ್ನಿವೇಶಗಳ ಮೂಲಕವೂ, ಕೆಲವು ಸಾರಿ ನೇರವಾಗಿಯೂ ಮಾತನಾಡುತ್ತಾನೆ. ಕವನ, ಕಾವ್ಯ, ಸಣ್ಣ ಕಥೆ, ಕಾದಂಬರಿ, ನಾಟಕ ಮೊದಲಾದ ವಿವಿಧ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಸಾಹಿತ್ಯನದಿಯ ದಿಕ್ಕನ್ನು ಓದುಗರ ಕಡೆಯಿಂದ ಲೇಖಕನ ದಿಕ್ಕಿಗೆ ಹರಿಸುವ ಪ್ರಯೋಗವಿದು:

‘ಲೇಖಕನಿಗೇ ತಿರುವಾದ ಸಾಹಿತ್ಯ ಪ್ರಕಾರವು ಪ್ರಪಂಚದಲ್ಲೇ ‘ದಿಕ್‌ ಪರಿವರ್ತಕ’ (Paradigm Shift); ಧೀಮಂತ ವಿಶ್ವಾಮಿತ್ರ ಸೃಷ್ಟಿ.

ಇದನ್ನು ಈಗಿರುವ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಉಪಯೋಗಿಸಬಹುದು. ಕವನ, ಸಣ್ಣಕಥೆ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲೂ ಪರಿಣಾಮಕಾರಿಯಾಗಿ ಪ್ರಯೋಗಿಸಬಹುದು.

ಈ ಕಾರ್ಯಕ್ರಮದ ಕೇಂದ್ರ ಪಾತ್ರ: ಕರ್ಣ

ಕರ್ಣ - ವ್ಯಾಸ ಕಾರ್ಯಕ್ರಮ ಧಾಟಿ

ಮುನ್ನುಡಿ - ಕಾರ್ಯಕ್ರಮ ಪರಿಚಯ

೧. "ತಿರುಗು ಬಾಣ" ಸಾಹಿತ್ಯ ಪ್ರಕಾರದ ಕಿರುಪರಿಚಯ

೨ ಕರ್ಣ - ವ್ಯಾಸ ಕಾರ್ಯಕ್ರಮದ ಕೇಂದ್ರ ವಸ್ತುವಿನ ಪರಿಚಯ

೩ ಆದಿನದ ಕಾರ್ಯಕ್ರಮದ ಪರಿಮಿತಿಯ ಮಂಡನೆ

೪ ಪಾತ್ರಗಳ, ಪಾತ್ರಧಾರಿಗಳ ಹೆಸರುಗಳು

೫ ಪಾತ್ರಗಳ, ರಂಗವಿನ್ಯಾಸದ ಸೂಚನೆ

೬ ಧಿಡೀರ್ ಪಾತ್ರಧಾರಣೆಯ ಅಪೇಕ್ಷೆ ಇರುವ ಪ್ರೇಕ್ಷಕರಿಗೆ ಸೂಚನೆಗಳು

೭. ಪರದೆ ಕಳಚಿದಂತೆ ರಂಗದ ಮೇಲಿನ ಸನ್ನಿವೇಷದ ಕಿರುಪರಿಚಯ

ಮೊದಲ ಹಂತ:

ರಂಗದ ಮೇಲೆ: ಅರ್ಜುನ, ಕೃಷ್ಣ, ಕರ್ಣ

(ಕರ್ಣನು ರಣರಂಗದಲ್ಲಿ ರಕ್ತದ ಹೊಳೆಯ ಕೆಸರಿನಲ್ಲಿ ಹೂತು ಹೋಗಿರುವ ತನ್ನ ರಥವನ್ನು ಮೇಲೆತ್ತಲು, ತನ್ನ ಬಿಲ್ಲು, ಬತ್ತಳಿಕೆಗಳನ್ನು ಕೆಳಗಿಟ್ಟು, ರಥದ ಚಕ್ರಕ್ಕೆ ಕೈಯಿಟ್ಟು, ಭುಜವಿಕ್ಕಿ ಸೆಣೆದಾಡುತ್ತಿದ್ದಾನೆ.)



Krishna tells Arjuna to shoot the arrow and kill Karna, even though Karna is repairing the wheels of the chariot.



ಕೃಷ್ಣ: ಅರ್ಜುನ! ಇದೇ ಸದವಕಾಶ, ಹೂಡು ನಿನ್ನ ಬಾಣವನ್ನು. ಕರ್ಣನಿಗೆ ಗುರಿಯಿಟ್ಟು ನೇರವಾಗಿ ಹೊಡೆ ಬೇಗ.



Arjuna hesitates to follow Krishna's instructions.



ಅರ್ಜುನ: ಕೃಷ್ಣಾ! ಹೇ ಭಗವನ್! ನ್ಯಾಯವನ್ನು ನಮ್ಮಂಥ ಹುಲುಮಾನವರಿಗೆ ತಿಳಿಯ ಹೇಳಬೇಕಾದವನು ನೀನು. ಅದುಹೇಗೆ ನಾನು ರಥವನ್ನು ಬಿಟ್ಟು, ಸಾರಥಿಯ ಸಹಾಯವೂ ಇಲ್ಲದೆ, ತಾನೊಬ್ಬನೇ ಕೆಸರಿನಲ್ಲಿ ತೋಳು-ಭುಜಗಳನ್ನು ಕೊಟ್ಟು ಮಂಡಿಯೂರಿರುವ ಕರ್ಣನ ಕಡೆಗೆ, ಸೂತ ಪುತ್ರನಾದವನ ಕಡೆಗೆ, ಮಹಾಕ್ಷತ್ರಿಯನಾದ, ಅಸಮಾನ ಬಿಲ್ಲುಗಾರನಾದ ನಾನು ಬಾಣವನ್ನು ಬೀರುವುದು ಅದು ಹೇಗೆ ಸಾಧ್ಯ, ಅದಾವ ನ್ಯಾಯ, ಅದಾವ ಶೌರ್ಯ?



Krishna persuades Arjuna to shoot saying that it is an opportune time and to exploit it.



ಕೃಷ್ಣ: ಹೇ ನರೋತ್ತಮ! ಕರ್ಣನು ಜಗತ್ತಿನಲ್ಲೇ ಮಹಾಶೂರ, ಮಹಾಬಿಲ್ಲುಗಾರ. ಆದರೆ, ಅವನು ನಿನಗೂ, ದ್ರೌಪದಿಗೂ, ಪಾಂಡವರೆಲ್ಲರಿಗೂ ಮಾಡಿರುವ ಅನ್ಯಾಯಗಳನ್ನು ನೀನೇ ಯೋಚಿಸಿನೋಡು. ಇವನನ್ನು ಕೊಲ್ಲಲು ಈ ಕ್ಷಣಕ್ಕಿಂತ ಮುಂದೆ ಇನ್ನಾವ ಸಮಯವೂ ಸರಿಯಲ್ಲ. ಇದೇ ಮಹೂರ್ತ. ಬಿಡು ಬಾಣವನ್ನು. ತಡಮಾಡಬೇಡ!



Arjuna shoots the arrow to Karna.



ಅರ್ಜುನ: ನಿನ್ನ ಮಾತನ್ನು ಕೇಳಿ ನಾನು ಈ ಬಾಣವನ್ನು ಬಿಡುತ್ತಿದ್ದೇನೆ.



Karna collapses and starts his dialogue complaining and blaming Krishna and Arjuna for their illegal tactics.



ಕರ್ಣ: ಹಾ! ಇದೇನು ಆರ್ಜುನ, ಬಿಲ್ಲುಬಾಣವನ್ನು ಕೆಳಗಿಟ್ಟು, ಕೈಗಳನ್ನು ರಣರಂಗದಲ್ಲಿ ಸುರಿಯುತ್ತಿರುವ ರಕ್ತದ ಕೆಸರಿನಿಂದ ನನ್ನ ರಥವನ್ನು ಮೇಲೆತ್ತುವ ಸಮಯದಲ್ಲಿ ಹೇಡಿಯಂತೆ, ಕ್ಷತ್ರಿಯ ಧರ್ಮವನ್ನು ಮರೆತು, ಬಾಣಹೂಡಿ ಕೊಂದೆಯಲ್ಲೋ ನರಾಧಮ!

ಹೇ ಕೃಷ್ಣ! ಜೀವನ ಪೂರ್ತಿ ದುರಾದೃಷ್ಟ ಕಾಡಿದ ನನಗೆ ಮರಣ ಸಮಯದಲ್ಲೂ ಬಹಳ ಮೋಸವಾಗಿಹೊಯಿತಲ್ಲಾ. ಏಲ್ಲವನ್ನೂ ತಿಳಿದವನಂತೆ ನಾಟಕವಾಡುವ ನೀನು ಅರ್ಜುನನಿಗೆ ಅನ್ಯಾಯದ ಪಾಠಹೇಳಿ ನನ್ನನ್ನು ಕೊಲ್ಲಿಸಿದೆಯಲ್ಲಾ.



Arjuna responds by mentioning Karna's numerous mistakes through out Mahabharatha.



ಅರ್ಜುನ: ಕರ್ಣ! ನ್ಯಾಯದ ಭಾಷಣ ಕೊಡುವುದನ್ನು ಯಾವಾಗ ಕಲಿತೆ? ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣನಾದ ನೀನೂ, ದುರ್ಯೋಧನನೂ, ದುಶ್ಯಾಸನನೂ, ಸಜ್ಜನತೆ, ಪರಸ್ತ್ರೀ ಗೌರವಗಳನ್ನು ಕಸದಬುಟ್ಟಿಗೆ ಎಸೆದು, ದ್ರೌಪದಿಯನ್ನು ನಿನ್ನ ತೊಡೆಯಮೇಲೆ ಕೂರಿಸಿಕೊಳ್ಳಲು ನೀಚ ಮನೋಭಾವದಿಂದ ಮೆರೆದ ನಿನಗೆ ಇದೇನು ಸಾಯುವಕಾಲದಲ್ಲಿ ನ್ಯಾಯ ನೀತಿಗಳ ಅರಿವು ಆಗುತ್ತಿದೆಯೇನು ?



Krishna responds with similar statements and blames his 'blind' support to Duryodhana.



ಕೃಷ್ಣ: ಹುಟ್ಟಿನಿಂದ ಸೂತಪುತ್ರನೆಂದು ಕೊರಗುತ್ತಿದ್ದವನು, ಒಂದು ಸಣ್ಣ ರಾಜ್ಯದ ಲಂಚ ಕೊಟ್ಟ ಮಾತ್ರಕ್ಕೆ, ದುರ್ಯೋಧನನನ್ನು ಪ್ರಶಂಸೆ ಮಾಡುತ್ತಾ, ವಿವೇಚನೆಯನ್ನು ಕೂಡ ಮಾಡದೆ, ಅವನಿಗೆ ಸಾಸಿವೆ ಕಾಳಿನಷ್ಟೂ ಬುಧ್ಧಿ ಮಾತು ಹೇಳದೆ, ಕುರುಡನಂತೆ ಜೀವನವನ್ನೆಲ್ಲಾ ಕಳೆದ ನೀನು ನ್ಯಾಯ ವಾದಿಯಂತೆ ನಾಟಕ ಮಾಡುತ್ತಿರುವುದು ನೋಡಿದರೆ ನನಗೆ ನಗೆಯು ಬರುತ್ತಿದೆ.



Karna defends his master Duryodhana and defends his actions.



ಕರ್ಣ: ನನ್ನ ಆತ್ಮಗೌರವಕ್ಕೇ ಕುಂದು ಬಂದಹಾಗೆ ಮಾಡಿಬಿಟ್ಟ ನೀನೂ, ದ್ರೋಣರೂ, ಆ ಮುದುಕ ಭೀಷ್ಮರೂ ನನ್ನ ಶಕ್ತಿ ಸಾಮರ್ಥ್ಯಗಳಿಗೆ ಬೆಲೆಕೊಡದೆ, ಸೂತ ಪುತ್ರನೆಂದು ಹೀಯಾಳಿಸಿಕೊಳ್ಳುತ್ತಿರುವಾಗ, ವಿಶಾಲ ಮನೋಭಾವದ ನಿಜವಾದ ಗುಣವನ್ನು ಕಂಡ, ನನ್ನ ಆಪ್ತ ಸ್ನೇಹಿತ ದುರ್ಯೋಧನನ ಬಗ್ಗೆ ನಿನಗೇನು ಗೊತ್ತು? ಕಷ್ಟದಲ್ಲಿ ಒದಗುವನೇ ನಿಜವಾದ ಸ್ನೇಹಿತ. ನನ್ನ ಆಪ್ತಮಿತ್ರನ ಬಗ್ಗೆ ಇಂಥಾ ಮಾತುಗಳನ್ನಾಡಿದ್ದಕ್ಕೆ, ಇದೀಗಲೆ ಎದ್ದು ಬಂದು ನಿನ್ನ ಕತ್ತು ಹಿಚುಕಿಬಿಟ್ಟೇನು, ಎಚ್ಚರಿಕೆ!

ಪ್ರವೇಶ: ದುರ್ಯೋಧನ



Duryodhana blames Krishna and cries for Karna's collapse.



ದುರ್ಯೋಧನ: ಕರ್ಣಾ! ಜಗತ್ತಿನಲ್ಲೇ ಅದ್ವಿತೀಯ ಬಿಲ್ಲುಗಾರನಾದ ನಿನ್ನಂತಹಾ ಮಹಾವೀರನಿಗೆ ಇದೆಂಥಾ ಅನ್ಯಾಯವಾಯಿತು! ಯುಧ್ಧದಲ್ಲಿ ನಿನ್ನನ್ನು ಅಸ್ತ್ರವಿದ್ಯೆಯಲ್ಲಿ, ಧರ್ಮ ಯುಧ್ಧದಲ್ಲಿ ಕೊಲ್ಲಲು ಅಸಾಧ್ಯವೆಂದು, ಈ ಕುತಂತ್ರಿ ಕೃಷ್ಣನೂ, ಹೆಂಗೆಳೆಯರೊಡನೆ ಸೀರೆ ಒಡವೆಗಳನ್ನು ತೊಟ್ಟು ಭರತನಾಟ್ಯವನ್ನು ಮಾಡುವುದನ್ನು ಬಿಟ್ಟು, ರಣರಂಗದ ನಿಯಮಗಳನ್ನು ಅರಿಯದೆ ಅರ್ಜುನನು ಕಳ್ಳ ಕೃಷ್ಣನ ಹಿಂದೆ ಅಡಗಿಕೊಂಡು ಬಾಣವನ್ನು ನಿಸ್ಸಹಾಯಕನಾದ ನಿನ್ನೆಡೆಗೆ ಬಿಟ್ಟು ಕೊಂದಿರುವುದು ಪಾಂಡವ ವಂಶಕ್ಕೇ ಅವಮಾನದ ಸಂಗತಿ.



Krishna trickily mentions Vyaasa as the real architect of the roles in Mahabharatha.



ಕೃಷ್ಣ: ದುರ್ಯೋಧನ! ಸಿಕ್ಕಸಿಕ್ಕವರನ್ನೆಲ್ಲಾ ಸುಮ್ಮಸುಮ್ಮನೆ ಬೈಯುವುದು ತರವಲ್ಲ. ಈ ಮಹಾಭಾರತದ ಕವಿಯ ಸೃಷ್ಟಿಯಲ್ಲವೇ ನಾವೆಲ್ಲರೂ? ನೀನೂ, ಕರ್ಣನೂ ಪ್ರಲಾಪಿಸುತ್ತಿರುವ ವಿಷಯಗಳನ್ನು ನೇರವಾಗಿ ವೇದವ್ಯಾಸರಿಗೇ ನೀನು ಏಕೆ ಕೇಳಬಾರದು?



Duryodhana summons Vyaasa with uncontrollable anger.



ದುರ್ಯೋಧನ: ಕೃಷ್ಣ! ನಿನ್ನನ್ನು ನಾನು ಯಾವಾಗಲೂ ಗೌರವಿಸಿದ್ದೇ ಇಲ್ಲ! ಈ ನಿನ್ನ ಮಾತಿಗೊಂದು ಸಲ ಬೆಲೆ ಕೊಟ್ಟು ನೋಡುವೆ. ಯಾರಲ್ಲಿ! ಈದೀಗಲೇ ಕಾಡಿನಲ್ಲಿ ಕಣ್ಮುಚ್ಚಿ ಯಾವಾಗಲೂ ತಪಸ್ಸುಮಾಡುವ ಅ ವ್ಯಾಸರನ್ನೇ ಹಿಡಿದು ಎಳೆದು ತನ್ನಿ. ತಡಮಾಡಬೇಡಿ. ನನ್ನ ಜೀವವೇ ಎನ್ನುವಹಾಗಿದ್ದ ಮಹಾವೀರ ಕರ್ಣನಿಗೆ ಆದ ಅನ್ಯಾಯಗಳೆಲ್ಲವನ್ನೂ ಆ ವ್ಯಾಸರಿಗೇ ಹೇಳೊಣವಂತೆ. ಹೊರಡಿ ವಾಯುವೇಗದಲ್ಲಿ!

ಎರಡನೆಯ ಹಂತ

ಪ್ರವೇಶ: ವ್ಯಾಸರನ್ನು ಇಬ್ಬರು ಸೈನಿಕರು ಕರೆದುಕೊಂಡು ಬರುತ್ತಾರೆ



Vyaasa realizes what is happening: He is being questioned, interrogated and challenged by the characters he created.



ವ್ಯಾಸ: ಇದೇನಿದು! ತಪಸ್ಸುಮಾಡುತ್ತಿದ್ದ ನನ್ನನ್ನು ಬಲವಂತದಿಂದ ಎಳೆದು ಇಲ್ಲಿಗೇಕೆ ಕರೆದುಕೊಂಡುಬಂದಿರಿ? ಇದು ರಣರಂಗದಂತಿದೆ; ನಾನು ಬರೆದು ವಿಸ್ತರಿಸಿದ ಮಹಾಭಾರತದಂತೆಯೇ ಕಾಣುತ್ತಿದೆಯಲ್ಲಾ. ಜೊತೆಗೇ, ನಾನು ಸೃಷ್ಟಿಸಿದ ಪಾತ್ರಗಳೇ ನನ್ನ ಮುಂದೆ ನಿಂತು, ನನ್ನನ್ನೇ ಎದುರಿಸಿ ಮಾತನಾಡುತ್ತಿವೆಯಲ್ಲಾ! ಇದು ಜಗತ್ತಿನಲ್ಲೇ ಸರ್ವಕಾಲಕ್ಕೂ ಅತಿಶ್ರೇಷ್ಠ ಸೃಷ್ಟಿಶೀಲ ಕವಿಯೂ, ದಿವ್ಯಜ್ಞಾನಿಯೂ ಆಗಿರುವ ನನಗೇ ಅಚ್ಚರಿಯಾಗುತ್ತಿದೆಯೆಂದರೆ ಉತ್ಪ್ರೇಕ್ಷೆಯಾಗುವುದಿಲ್ಲ!

ನಾನು ಕಲ್ಪಿಸಿದ ಪಾತ್ರಗಳೇ ನನ್ನನ್ನು ತಿರು ಪ್ರಶ್ನೆ ಕೇಳುತ್ತಿರುವ ಹಾಗೆ ಮಾಡಿದ ಆ ಹುಲುಮಾನವ, ಆ ಕುತಮ್ತ್ರಿ, ಆ ಅತಿ ಉಧ್ಧಟದ ಅಹಂಕಾರಿ ಯಾರು ಇರಬಹುದು ? ! :-)



Duryodhana sums up the complaints and blames Vyaasa.



ದುರ್ಯೋಧನ: ವ್ಯಾಸರೇ! ಕಳ್ಳರ ಮಾತನ್ನು ಚಕ್ರವರ್ತಿಯಾದ ನಾನು ಕೇಳುವುದು ಎಂದರೇ ಅತಿಶಯವಾಗಿಯೂ ಅಸಾಧ್ಯ! ಆದರೆ, ಮಹಾಭಾರತದಲ್ಲಿ ನಡೆದ ಎಲ್ಲಕ್ಕೂ ನೀವೇ ಕಾರಣರು ಎನ್ನುತ್ತಾನೆ ಈ ಕಪಟಿ ಕೃಷ್ಣ.

ರಣರಂಗದಲ್ಲಿ ಅಸಮಾನ ಅಸ್ತ್ರಮೇಧಾವಿಯಾಗಿದ್ದ ನನ್ನ ಜೀವದ ಜೀವದಂತಿದ್ದ ಕರ್ಣನನ್ನು ಈ ರೀತಿ, ಕರ್ಣನ ಸಮಕ್ಕೆ ಹೋಲಿಸಲೂ ಅಯ್ಯೋಗ್ಯನಾದ ಅರ್ಜುನನಿಂದ ಏಕೆ, ಯಾವ ಮನಸ್ಸಿನಿಂದ ವಧೆಯನ್ನು ಅನೀತಿರೀತಿಯಲ್ಲಿ ಮಾಡಿಸಿದಿರಿ?

ನೀವು ನಿಜವಾಗಿಯೂ ಮಹಾಕವಿಯೂ, ಮಹಾಜ್ಞಾನಿಗಳೂ ಆಗಿದ್ದರೆ, ಇದ್ದಕ್ಕೆ ಉತ್ತರ ಹೇಳಿ.

(He starts responding to one question at a time.

Vyaasa responds…)

ವ್ಯಾಸ: ದುರ್ಯೋಧನ! ನಿನ್ನ ಪ್ರಶ್ನೆಗೆ ಒಂದೆರಡು ಮಾತುಗಳಲ್ಲಿ ಉತ್ತರ ಹೇಳುವುದು ಸುಲಭವಲ್ಲ. ಯಾವುದೇ ಪ್ರಶ್ನೆಗೂ ಒಂದೇ ಒಂದು ಉತ್ತರವಿರುವುದಿಲ್ಲ; ಯಾವುದೇ ಪ್ರಶ್ನೆಗಾಗಲಿ ನೋಡುವ ದೃಷ್ಟಿಗೆ ತಕ್ಕ ಉತ್ತರ ಸಿಕ್ಕುತ್ತದೆ. ನಾನು ಕರ್ಣನಿಗೆ ಈ ರೀತಿಯ ಸಾವು ಬರುವ ಹಾಗೆ ಬರೆದಿರುವುದಕ್ಕೆ ಕೆಲವು ಕಾರಣಗಳಿವೆ. ಎಲ್ಲ ದೃಷ್ಟಿಗಳಿಂದಲೂ ನೋಡಿ, ಸಮಗ್ರ ರೀತಿಯಲ್ಲಿ ತಿಳಿದುಕೊಂಡರೆ ಮಾತ್ರ ಸತ್ಯವು ಸ್ವಲ್ಪ, ಸ್ವಲ್ಪವಾಗಿ ಕಂಡುಬರುತ್ತಾ ಹೋಗುತ್ತದೆ. ಕರ್ಣನ ಜೀವನವನ್ನು ಮೊದಲಿನಿಂದ ಕೊನೆಯವರೆಗೂ ಅರ್ಥ ಮಾಡಿಕೊಳ್ಳಬೇಕು. ಯಾವ ಯಾವ ಸಂದರ್ಭದಲ್ಲಿ ನಾನು ಯಾವ ಕಾರಣಕ್ಕಾಗಿ ಏನೇನು ಬರೆದೆ ಎನ್ನುವುದನ್ನು ಒಂದೊಂದಾಗಿ ಹೇಳುತ್ತೇನೆ. ಎಲ್ಲವನ್ನೂ ಸಾವಧಾನವಾಗಿ ಕೇಳಿ, ಮಧ್ಯದಲ್ಲೇ ಯಾವ ನಿರ್ಧಾರಕ್ಕೂ ಬರಲು ಆತುರ ಪಡದೆ ಕೇಳುತ್ತಾ ಹೋದರೆ ನನ್ನ ಕವಿಮನವನ್ನು ನಿನಗೆ ತಿಳಿಸಬಲ್ಲೆ; ಆಗ ಮಾತ್ರ, ಕವಿಯಾಗಿ ನಾನು ಯಾವ ಕಾರಣದಿಂದಾಗಿ ಮಹಾಭಾರತದ ಕಥೆಯನ್ನು ಹೇಗೆ ಬೆಳೆಸಿಕೊಂಡು ಹೋದೆ ಎನ್ನುವುದು ನಿನಗೆ ತಿಳಿಯುತ್ತದೆ.
ಕರ್ಣನು ಮಹಾಶೂರ ಮತ್ತು ಅಜೇಯ. ಅವನನ್ನು ಅರ್ಜುನನು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ. ಒಬ್ಬ ಮಹಾ ಪರಾಕ್ರಮಿಯು ಯುಧ್ಧದಲ್ಲಿ ಸತ್ತರೂ ಅದಕ್ಕೆ ಮುಂಚೆ ಅವನು ಸೋಲಬೇಕಾಗಿಲ್ಲ; ಸತ್ತವನು ಸೋಲದಿರಬಹುದು; ಕೊಂದವನು ಗೆಲ್ಲದೇ ಇರಬಹುದು. ಧರ್ಮಯುದ್ಧದ ಕಹಳೆ ಊದುವವರೂ ಕೆಲವು ಸಮಯಗಳಲ್ಲಿ ಧರ್ಮದ ದಾರಿಯಿಂದ ಕವಲು ದಾರಿ ಹಿಡಿಯಬಹುದು. ಅಂತೆಯೇ, ಎಲ್ಲರ ಕಣ್ಣಿಗೆ ದುಷ್ಟ, ದುರಾತ್ಮನಾಗಿ ಕಂಡುಬರುವ ಕೆಟ್ಟ ಸ್ವಭಾವದವನೂ ಕೆಲವು ಸಾರಿ ಜನೋಪಕಾರಿಯಾಗಬಹುದು. ಈ ದ್ವಂದ್ವವು ಉಪ್ಪುಖಾರಗಳನ್ನು ತಿಂದ, ರಕ್ತ ಮಾಂಸದ ಎಲ್ಲ ಮಾನವನಿಗೂ ನೆರಳಂತೆ ಹಿಂಬಾಲಿಸಿಕೊಂಡು ಬರುತ್ತದೆ. ಮನುಷ್ಯ ದೇಹವನ್ನು ತೆಗೆದುಕೊಂಡ ಶ್ರೀ ಕೃಷ್ಣನನ್ನೂ ಕಾಡದೇ ಬಿಡುವುದಿಲ್ಲ ಎಂದು ತೋರಿಸುವುದಕ್ಕೆ ಶ್ರೀ ಕೃಷ್ಣನೇ ದುರ್ಬುದ್ಧಿಯನ್ನೂ, ದುರ್ಮಾರ್ಗವನ್ನೂ ಅರ್ಜುನನಿಗೆ ಹೇಳಿಕೊಡುವ ಸಂದರ್ಭವನ್ನು ಕರ್ಣನ ಸಾವಿನ ಘಟನೆಯಲ್ಲಿ ಅಳವಡಿಸಿಕೊಂಡೆ.
ಕರ್ಣನ ಸಾವಿಗೆ ಒಂದೊಂದೇ ಹಂತದಲ್ಲಿ ಸಿದ್ಧತೆಗಳಾಗುತ್ತಿದ್ದವು; ಒಂದು ದೃಷ್ಟಿಯಲ್ಲಿ ನೋಡಿದರೆ ಈ ಸಿದ್ಧತೆಗಳಲ್ಲೆಲ್ಲಾ ಕರ್ಣನೂ ದಾನಶೂರನಾಗಿಯಾದರೂ ಪಾತ್ರ ವಹಿಸಿದ.

(Karna cries and complains about his birth with Kunti as the mother, and that she and Krishna hid the facts throughout his life.)

ಕರ್ಣ: ಹುಟ್ಟಿನ ಸಮಯದಿಂದಲೇ ನನಗೆ ಮೋಸವಾಗಿಹೋಗಿದೆ. ನಾನು ನನ್ನ ಅಮ್ಮನ ತೊಡೆಯಮೇಲೆ ಹಾಯಾಗಿ ನಿದ್ರಿಸುವ, ತಾಯಿಯ ಪ್ರೀತಿಯ ಉಣಿಸಿನ ಸೌಭಾಗ್ಯವಿಲ್ಲದೆಯೆ, ಸೂತ ಪುತ್ರನೆಂದು ಬೆಳೆಯುವ ಹಣೆಬರಹ ನನ್ನ ಪಾಲಾಯಿತಲ್ಲಾ :-(

ಪ್ರವೇಶ: ಕುಂತಿ



(Kunti responds to Karna about the birth out of wedlock, as a simple curiosity of a young teenager, yet defends herself as a good mother with examples of Pandavas.)


ಕುಮ್ತಿ: "ಅಮ್ಮಾ" ಎಂದು ನೀನು ಬೋಧಿಸಿ ಕರೆದದ್ದನ್ನು ಕೇಳಿ ಬಂದೆ ನನ್ನ ಕಂದ. ನಾನು ಹರೆಯಕ್ಕೆ ಬಂದಾಗ ಋಷಿವರ್ಯರು ಕೊಟ್ಟಿದ್ದ ಅಮೂಲ್ಯ ವರಗಳನ್ನು ಸುಮ್ಮನೇ ನಂಬಲಾಗದೆ, ಹೇರಳ ಕಾಂತಿಯಿಂದ ಪ್ರಜ್ವಲಿಸುವ ಸೂರ್ಯನನ್ನು ಒಂದು ದಿನ ಪ್ರಾತಃ ಕಾಲ ನೋಡಿ ನನಗೆ ವರವಾಗಿ ಕೊಟ್ಟಿದ್ದ ಮಂತ್ರವನ್ನು ಉಛ್ಛರಿಸಿಕೊಂಡು ಅವನನ್ನು ಅರಾಧಿಸಿದೆ.

ಇದು ನನ್ನ ಹುಡುಗುತನದ ಕುತೂಹಲವೆಂದಾದರೂ ತಿಳಿದುಕೊ; ಮುಂದಿನ ಪರಿಣಾಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಬೇಜವಾಬ್ದಾರಿ ಹೆಂಗಸಿನ ಚೆಲ್ಲಾಟವೆಂದಾದರೂ ಅವಹೇಳನ ಮಾಡು. ವಿವಾಹಕ್ಕೆ ಮುಂಚೆಯೇ ಪಡೆದ ಕೂಸನ್ನು ಅರಮನೆಯಲ್ಲಿ ಸಾಕಿದರೆ, ಯಾವ ರಾಜಕುಮಾರನೂ ನನ್ನನ್ನು ವರಿಸುವುದಿಲ್ಲ ಎಂದು ಸ್ವಾರ್ಥಿಯಾಗಿ, ಭಯಪಟ್ಟು ನಿನ್ನನ್ನು ನೀರಿನಮೇಲೆ ತೇಲಿಬಿಡಬೇಕಾಯಿತು. ಅಂದು ನನಗಾದ ದುಖವನ್ನು ಯಾರೂ ಅರ್ಥಮಾಡಿಕೊಳ್ಳರು ಕಂದಾ! :-( :-(

ನನಗೆ ಈ ನನ್ನ ಪಾಪಕ್ಕೆ ಜೀವನದಲ್ಲಿ ಸಾಕಷ್ಟು ಶಾಸ್ತಿಯಾಗಿದೆ. ರ‍ೋಗಿಷ್ಟನಾದ ಗಂಡನನ್ನು ಪಡೆದದ್ದು, ನನ್ನ ಇನ್ನಿತರ ಮಕ್ಕಳೂ, ಅಂದರೆ ಪಾಂಡವರು, ಜೀವನ ಪೂರ್ತಿ ವನವಾಸ, ಅಜ್ಞಾತವಾಸ ಇತ್ಯಾದಿ ಕಷ್ಟಗಳನ್ನು ಅನುಭವಿಸುವುದನ್ನು ನನ್ನ ಕಣ್ಣಾರೆ ನೋಡಿ ಕಣ್ಣೀರು ಸುರಿಸಿದ್ದನ್ನು ವರ್ಣಿಸಲಸಾಧ್ಯ. ಜೊತೆಗೆ, ನೀನು ನಿನ್ನ ತಮ್ಮಂದಿರನ್ನು ಎದುರುಹಾಕಿಕೊಂಡ ಕೌರವರನ್ನು ಆಶ್ರಯಿಸಿ ಜೀವನಮಾಡಿದ್ದನ್ನು ಕಂಡು ನನಗಾದ ಶೋಕ ಮತ್ಯಾರಿಗೂ ಬೇಡ :-( :-(



Karna blames Kunti again for the special boon she begged from Karna of 'Not using the same arrow twice'.

Karna blames Kunti again of it as an excuse to save Arjuna's life.



ಕರ್ಣ: ನಿನ್ನ ದುಹ್ಖದ ಜೀವನವನ್ನು ಕೇಳಲಾರೆನಮ್ಮಾ :-( ಆದರೆ, ನೀನು ನನ್ನಿಂದ "ತೊಟ್ಟ ಬಾಣವನ್ನು ಮತ್ತೆ ತೊಡಬೇಡ ಕಂದ" ಎಂದು ಕೇಳುವಾಗ ನಿನ್ನ ಮಾತೃ ವಾತ್ಸಲ್ಯ ಎಲ್ಲಿ ಹೋಗಿತ್ತು?! ನಿನ್ನ ಪ್ರೀತಿಯ ಮಗ ಅರ್ಜುನನನ್ನು ಉಳಿಸಿಕೊಳ್ಳಲು, ನೀನು ನನ್ನ ಭವಿಷ್ಯವನ್ನು ಮೂಲೆಗೊತ್ತಿ, ಮಾತೃ ವಾತ್ಸಲ್ಯಕ್ಕೆ ತರ್ಪಣ ಬಿಟ್ಟೆಯಲ್ಲಾ! ನನ್ನ ಕೆಟ್ಟ ಹಣೇಬರಹಕ್ಕೆ ಮೊದಲಿಲ್ಲ, ಕೊನೆಯಿಲ್ಲ; ಒಬ್ಬರು ಉಳಿಯಲು ಇನ್ನೊಬ್ಬರು ತಮ್ಮ ಜೀವವನ್ನೇ ತ್ಯಾಗ ಮಾಡಬೇಕಲ್ಲವೆ! :-( :-(



Kunti repeats the fact of her request for Karna to join the Pandavas in the war. She says that would have saved Karna's collapse.



ಕುಂತಿ: ಕರ್ಣ! ನಾನು ನಿನ್ನಿಂದ ವರವನ್ನು ಕೇಳುವ ಮೊದಲೇ, ನಿನ್ನನ್ನು ಪಾಂಡವರ ಪಕ್ಷಕ್ಕೆ ಕರೆದೆನೆನ್ನುವುದನ್ನು ಮರೆಯಬೇಡ. ಆದರೆ, ನಿನ್ನ ಹಟ ನೀನು ಬಿಡಲಿಲ್ಲ; ದುಷ್ಟ ದುರ್ಯೋಧನನ ಸಹವಾಸ ತೊರೆಯಲಿಲ್ಲ; ತಮ್ಮಂದಿರ ಮೋಹಕ್ಕಿಂತ, ತಾಯಿಯ ಬುಧ್ಧಿಮಾತಿಗಿಂತ, ದುರ್ಜನರ ಸಂಗವೇ ಇಂಪಾದ ಸಂಗೀತ ವಾಯಿತು ನಿನ್ನ ಕುರುಡು ಅಹಂಕಾರದ, ಅಪ್ರಯೋಜಕ ಸ್ವಾಮಿ ನಿಷ್ಟೆಯ ಧರ್ಮಕ್ಕೆ!



Krishna reminds the characters that it was all a plot scripted by Vyaasa.



ಕೃಷ್ಣ: ಕರ್ಣ! ಕುಂತಿ! ಇದೆಲ್ಲಕ್ಕೂ ಕಾರಣ ಆ ವೇದ ವ್ಯಾಸರಲ್ಲವೆ! :-) ವ್ಯಾಸರು ನಿಮ್ಮ ಜೀವನವನ್ನು ಈ ರೀತಿಯಲ್ಲೇ ರೂಪಿಸಿರುವುದರಿಂದ ಅವರನ್ನೇ ಕೇಳಿನೋಡೋಣ :-) :-)


(Vyaasa responds …

ವ್ಯಾಸ: ಮಗು ಕುಂತಿ ! ಚಿನ್ನವು ಪುಟಕ್ಕೆ ಹಾಕಿದಮೇಲೆ ತಾನೆ ತನ್ನ ಹೊಳಪನ್ನು ತೋರಿಸುತ್ತದೆ. ವಜ್ರವು ಅಪಾರ ಒತ್ತಡದಿಂದಾಗಿಯಲ್ಲವೆ ಅಬೇಧ್ಯವಾಗುವುದು. ಅದಕ್ಕೆ ಬಹಳ ಶ್ರಮವನ್ನು ಹಾಕಿ, ಕುಶಲತೆಯಿಂದ ಅದರ ಬಹುರ್ಮುಖಗಳನ್ನು ಮೂಡಿಸಿದಾಗ ಮಾತ್ರವಲ್ಲವೆ ಆ ವಜ್ರವು ಹೊಳೆಯುವುದು ! ಹಾಗೆಯೇ, ನೀನೂ, ನಿನ್ನ ಮಕ್ಕಳೆಲ್ಲರೂ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಗೆದ್ದು ವಿಜಯಿಗಳಾಗಿದ್ದು?
ವ್ಯಾಸ: ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತು ವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವಾಗ ಲೇಖಕನಿಗೂ, ಓದುವಾಗ ಓದುಗರಿಗೂ ಮನರಂಜನೆ ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.

ಕರ್ಣ: ಹಾಗಾದರೆ, ನನ್ನ ಕಥೆ, ನಮ್ಮೆಲ್ಲರ ಕಥೆ ನಿಜವಾಗಿಯೂ ನಡೆದದ್ದಲ್ಲವೇ?
ವ್ಯಾಸ: ನಾನು ಮಹಾಭಾರತವನ್ನು ರಚಿಸಿದಾಗ, ನನ್ನ ಮುಂದೆ ಕಂಡ, ನನ್ನ ಗಮನಕ್ಕೆ ಬಂದ ಪಾತ್ರಗಳನ್ನೂ, ಸನ್ನಿವೇಶಗಳನ್ನೂ, ನಡೆದದನ್ನು ನಡೆದ ಹಾಗೆಯೇ ದಾಖಲೆ ಮಾಡಲಿಲ್ಲ ; ಕಾರಣ, ಚಾರಿತ್ರಿಕ ದಾಖಲೆಯು ಸೃಷ್ಟಿ ಶೀಲ ಸಾಹಿತ್ಯವಾಗಲಾರದು. ಆದರೆ, ಕೆಲವು ಸಾರಿ ನಡೆದ, ಗಮನಕ್ಕೆ ಬಂದ ಘಟನೆಗಳನ್ನೂ, ನಿಜ ಜೀವನದ ಪಾತ್ರಗಳನ್ನೂ ಕಥೆಯಲ್ಲಿ ಸ್ವಾರಸ್ಯಕರವಾಗಿ ಹೆಣೆದಿದ್ದೇನೆ. ಇದರ ಜೊತೆಗೆ, ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿಬಂದ ಕಥೆಗಳನ್ನು ಸೂಕ್ತವಾಗಿ ಬೆರೆಸಿದ್ದೇನೆ. ಸಮಾಜದ ಸಂಪ್ರದಾಯಗಳನ್ನು ವಿಮರ್ಶಿಸಬೇಕೆನಿಸಿದಾಗ, ಅವಕ್ಕೆ ಪಾತ್ರಗಳ ರೂಪ ಕೊಟ್ಟು, ಸನ್ನಿವೇಶಕ್ಕೆ ಹೊಂದುವಂತೆ ಕಥೆಯನ್ನು ಹೇಳಿದ್ದೇನೆ. ಉದಾಹರಣೆಗೆ, ನಮ್ಮ ಕಾಲದಲ್ಲಿ ಇದ್ದ ವೀರ್ಯದಾನದ ನಿಯೋಗ ಪದ್ಧತಿಯನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ನನ್ನ ಕಲ್ಪನೆಯ ಕಣ್ಣು ಕಂಡಹಾಗೆ ಅಳವಡಿಸಿಕೊಂಡಿದ್ದೇನೆ. ಚಿತ್ರ ವೀರ್ಯ, ವಿಚಿತ್ರವೀರ್ಯರಿಗೆ ಮಕ್ಕಳಾಗದ ಸಮಯದಲ್ಲಿ ಋಷಿಗಳನ್ನು ಉಪಯೋಗಿಸಿಕೊಂಡಿದ್ದೇನೆ. ನನ್ನ ಕಥೆಯು ಮುಂದುವರಿದ ಹಾಗೆ ಕುಂತಿಯ ಪಾತ್ರಕ್ಕೆ ಋಷಿಗಳಿಂದ ನೇರವಾಗಿ ನಿಯೋಗ ತೋರಿಸಿದರೆ ಕಥೆಯು ರಸವತ್ತಾಗುವುದಿಲ್ಲವೆಂದು ಅನೇಕ ರೂಪಗಳನ್ನು ಕೊಟ್ಟಿದ್ದೇನೆ. ಸೂರ್ಯ, ಯಮ ಧರ್ಮರಾಯ, ವಾಯು, ಇಂದ್ರ ಮತ್ತು ಅಶ್ವಿನಿ ದೇವತೆಗಳನ್ನು ಉಪಯೋಗಿಸಿಕೊಂಡಿದ್ದೇನೆ. ದೇವತೆಗಳ ವರಪ್ರಸಾದದಿಂದ ಹುಟ್ಟಿದವರೆಂದರೆ ಹುಟ್ಟಿದ ಕುಂತಿಯ ಮಕ್ಕಳಿಗೆ ಮಹಾ ಶಕ್ತಿಗಳನ್ನು ತೋರ್ಪಡಿಸಬಹುದೆನ್ನುವ ಉದ್ದೇಶದಿಂದ ಕುಂತಿಯ ಪಾತ್ರದಲ್ಲಿ ಮಹಾ ಋಷಿಗಳ ಸೇವೆಯನ್ನು ಮಾಡಿ ವರಗಳನ್ನು ಪಡೆಯುವ ಕಥೆ ಕಟ್ಟಿದೆ. ಐದು ವರಗಳನ್ನು, ಪಂಚಪಾಂಡವರಿಗೆಂದು ಲೆಕ್ಕಹಾಕಿ ಕಥೆ ಬರೆದೆ. ಇನ್ನೂ ಕನ್ಯೆಯಾದ ಸುಂದರ ಕುಂತಿಗೆ ಮದುವೆಗೆ ಮುಂಚೆಯೇ ಈ ವರದಾನದಿಂದ ಮಗುವಾದರೆ ಹೇಗಿರುತ್ತದೆಂದು ನನ್ನ ಕುತೂಹಲ ಕಾಡಿಬಿಟ್ಟಿತು. ನನ್ನ ಕುತೂಹಲವನ್ನು ಕುಂತಿಯ ಪಾತ್ರಕ್ಕೆ ಧಾರೆಯೆರೆದೆ. ಅಂತೆಯೇ, ಕುಂತಿಯು ಇನ್ನೂ ಕನ್ಯೆಯಾಗಿರುವಾಗಲೇ ತಾಯಿಯಾಗಿಬಿಟ್ಟಳು. ಸೂರ್ಯನ ವರದಿಂದ ಹುಟ್ಟಿ ಪ್ರಜ್ವಲಮಯಿಯಾದ ಮಗುವಿಗೆ ಏಕಾಂಗಿಯಾಗಿ, ತಾಯಿಯಿಂದ ಅಗಲುವುದು ಒಂದೇ ದಾರಿಯಾಗಿ ಉಳಿಯಿತು. ಬರೆದ ಕಥೆಯನ್ನು ಅಳಿಸಿ ಕಥೆ ಬದಲಿಸುವ ಅಭ್ಯಾಸ ನನಗಿರಲಿಲ್ಲ. ಇದಕ್ಕೆ ಮುಂಚೆಯೇ ಕಥೆಯಲ್ಲಿ ನಿಪುಣತನದಿಂದ ವ್ಯಾಸನಾದ ನಾನು ಹೇಳಿದ ಕಥೆಯನ್ನು ಸಾಕ್ಷಾತ್‌ ಗಣೇಶನೇ ಲೇಖನಿಯನ್ನು ಹಿಡಿದು ಬರದಂತೆ ಬರೆದರೆ ಓದುಗರೆಲ್ಲರೂ ನಿಷ್ಠೆಯಿಂದ ಓದುತ್ತಾರೆ, ನನ್ನ ಕಥೆಯು ಜನಪ್ರಿಯವಾಗುತ್ತದೆ ಎಂಬ ಕಾರಣದಿಂದ ಆ ರೀತಿಯಲ್ಲಿ ಕಥೆಯನ್ನು ಬರೆದಾಗಿತ್ತು. ಅಲ್ಲದೆ, ನಾನು ಪ್ರತಿದಿನ ಬ್ರಾಹ್ಮೀ ಮಹೂರ್ತದಲ್ಲಿ ಪ್ರಾರಂಭಿಸುವಾಗ ವಿಘ್ನೕಶ್ವರನು ನನ್ನ ಮುಂದೆಯೇ ಕುಳಿತು ನನ್ನ ಕೈಯಲ್ಲಿ ಬರೆಸುತ್ತಿದ್ದಾನೆ ಎಂಬ ದೈವಿಕ ಕಲ್ಪನೆ ನಡೆದಿತ್ತು. ಹಾಗಾಗಿ ನನ್ನ ಕಲ್ಪನೆಯ ಗಣೇಶನು ಬರೆದದ್ದನ್ನು ಅಳಿಸಿಬರೆಯುವ ಮೊಂಡನಾಗಬಾರದು ಎನ್ನುವ ಮನೋಭಂಗಿಯಲ್ಲಿ ಕಥೆಯನ್ನು ಮುಂದುವರಿಸಿಬಿಟ್ಟೆ.

ದುರ್ಯೋಧನ: ಹಾಗಾದರೆ, ಭೀಷ್ಮರೇಕೆ ಪಾಂಡವರ ಕಡೆಗೇ ಯಾವಾಗಲೂ ಮಾತನಾಡುತ್ತಿದ್ದರು. ಮೊದಲಿನಿಂದಲೂ ಅವರ ಒಲವು ಕುಂತಿಯ ಮಕ್ಕಳ ಮೇಲೆಯೇ ಬೀರಿತ್ತು.
ಭೀಷ್ಮ : ದುರ್ಯೋಧನ! ‘ಪಾಂಡವರಿಗೆ ಸಲ್ಲ ಬೇಕಾಗಿದ್ದ ರಾಜ್ಯವನ್ನು ಕೊಟ್ಟುಬಿಡು; ಪಾಂಡವರು ನಿನಗೆ ಏನೂ ದ್ರೋಹ ಮಾಡಿಲ್ಲ’ ಎಂದು ಕೊನೆಯವರೆಗೂ ನಿನಗೆ ಬುಧ್ಧಿವಾದವನ್ನು ಹೇಳಿದೆ. ನಿನ್ನ ಕುತ್ಸಿತ ಬುಧ್ಧಿಗೆ ನನ್ನ ಬುಧ್ಧಿವಾದವೂ, ಮಿಕ್ಕೆಲ್ಲ ಹಿರಿಯವರ ಮಾತುಗಳೂ ತಟ್ಟಲಿಲ್ಲ. ಹಿರಿಯವನಾದ ಯುಧಿಷ್ಠಿರನು ವಯಸ್ಸಿನಲ್ಲಿ ಚಿಕ್ಕವಯಸ್ಸಿನಿಂದಲೇ ಧರ್ಮಯುಕ್ತವಾದ ಅಲೋಚನೆ, ನಡತೆ, ಸಂಯಮಗಳನ್ನು ಪ್ರದರ್ಶಿಸಿದ್ದರಿಂದ ನಮಗೆಲ್ಲರಿಗೂ ಅವನ ಮೇಲೆ ವಾತ್ಸಲ್ಯ, ಅಭಿಮಾನ, ಪ್ರೀತಿಗಳಿದ್ದಿದ್ದು ಸಹಜವಲ್ಲವೇ?
ಧೃತರಾಷ್ಟ್ರನು ಕುರುಡನಾಗಿದ್ದು, ಪಾಂಡುವು ರೋಗಿಷ್ಟನಾಗಿದ್ದುದಲ್ಲದೆ ಚಿಕ್ಕವಯಸ್ಸಿನಲ್ಲೇ ತೀರಿಕೊಂಡ. ನನ್ನ ಬಲತಮ್ಮಂದಿರಾದ ಚಿತ್ರವೀರ್ಯ, ವಿಚಿತ್ರವೀರ್ಯರುಗಳಿಗೆ ಬಲಗೈಯಾಗಿ ರಾಜ್ಯಭಾರ ಮಾಡಲು ಸಹಾಯಕನಾದ ನನಗೆ, ಅವರ ಮಕ್ಕಳ ಮತ್ತು ಮೊಮ್ಮಕ್ಕಳ ರಾಜ್ಯಗಳನ್ನೂ ನಿಭಾಯಿಸಬೇಕಾದ ವಿಧಿ ನನ್ನದಾಯಿತು. ಆಜನ್ಮ ಬ್ರಹ್ಮಚಾರಿಯಾದ ನನಗೆ ನಮ್ಮ ವಂಶದ ರಾಜ್ಯಭಾರದ ಹೊಣೆಯನ್ನು ವಿಧಿ ಹೇರಿಸಿಬಿಟ್ಟಿತು. ಆದ್ದರಿಂದಲೇ, ನಾನು ಪಾಂಡವರು ಮತ್ತು ಕೌರವರ ಮಧ್ಯೆ ಸಹಕಾರದ ವಾತಾವರಣವನ್ನು ಬೆಳೆಸಿ ರಾಜ್ಯಭಾರದ ಹೊಣೆಯನ್ನು ಕಳೆದುಕೊಳ್ಳುವ ಶತಪ್ರಯತ್ನಗಳನ್ನು ಮಾಡಿದೆ. ದುರ್ಯೋಧನ! ಆದರೆ ನೋಡು: ಮಹಾಭಾರತದ ಕುರುಕ್ಷೇತ್ರ ಮಹಾಯುದ್ಧದ ಕೊನೆಯವರೆಗೂ ನನ್ನ ಮುದಿವಯಸ್ಸಿನಲ್ಲೂ ಬಿಲ್ಲು ಬಾಣಹಿಡಿದು ನನ್ನ ಪ್ರೀತಿಯ ಬಂಧುಗಳ ಮಧ್ಯೆ ಯುದ್ಧವನ್ನು ಮಾಡುತ್ತಾ ಶರಮಂಚದ ಮೇಲೆ ಸಾಯಲು ಕಾಯುವ ಗತಿ ನನಗೆ ಬಂತು.
ವ್ಯಾಸ: ಭೀಷ್ಮ ! ಜೀವನದಲ್ಲಿ ವಿಧಿಯು ನಾವು ಕನಸು ಕಾಣದ, ಆಸೆ ಆಸ್ಥೆಗಳಿಂದ ಬಯಸದ ಪಥಕ್ಕೆ ಎಲ್ಲರನ್ನೂ ತೆಗೆದುಕೊಂಡು ಹೋಗುತ್ತದೆ. ನೀವು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದು ಸತ್ಯವತಿಗೆ ಮಾತುಕೊಟ್ಟಾಗ ನಿಮಗೂ ಮತ್ತು ಸತ್ಯವತಿಗೂ ಭವಿಷ್ಯದ ಅರಿವಿರುವುದಕ್ಕೆ ಸಾಧ್ಯತೆಯಿರಲಿಲ್ಲ. ವಿಧಿಯನ್ನು ಯಾರುತಾನೆ ಬಲ್ಲರು! ಸತ್ಯವತಿಯ ಮತ್ತು ಅವಳ ತಂದೆಯ ಸ್ವಾರ್ಥಕ್ಕೆ ಮಾರುಗೊಟ್ಟು ನೀವು ಅಸಮಾನ್ಯ ಶಪಥವನ್ನು ತೆಗೆದುಕೊಂಡು ಬಿಟ್ಟಿರಿ.
ಭೀಷ್ಮ: ಪೂಜ್ಯ ವೇದವ್ಯಾಸರೆ! ನೀವು ನಿಮ್ಮ ಮಾತೆಯಾದ ಸತ್ಯವತಿಯ ಬಗ್ಗೆ ಹೀಗೆ ಹೇಳುತ್ತಿರುವುದನ್ನು ಕೇಳಿಯೂ ನನ್ನ ಕಿವಿಯು ನಂಬಲಾಗುತ್ತಿಲ್ಲ.
ವ್ಯಾಸ: ಭೀಷ್ಮರೇ! ಕವಿಯ ದೃಷ್ಟಿಯಲ್ಲಿ ಅವನು ರಚಿಸಿದ ಪಾತ್ರಗಳೆಲ್ಲ ಅವನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ಮಕ್ಕಳಲ್ಲವೇ! ಪಾತ್ರಗಳನ್ನು ರೂಪಿಸಿ, ಅವುಗಳಿಗೆ ಜೀವವನ್ನು ತುಂಬಿ ಓದುಗರಿಗೆ ನಂಬುವ ಹಾಗೆ ಮಾಡುವ ನಿಜವಾದ ಸೂತ್ರಧಾರಿ ಕವಿಯಲ್ಲವೇ! (ಕೃಷ್ಣನ ಶೈಲಿಯಲ್ಲೇ, ಭಾವ ಭಂಗಿಗಳಲ್ಲೇ ನಗುನಗುತ್ತಾ) ಕೃಷ್ಣ! ನೀನು ನಾಟಕದ ಪಾತ್ರದಲ್ಲಿ ಕೃಷ್ಣನಾಗಿ ಸೂತ್ರಧಾರನೆನಿಸಿಕೊಂಡೆಯಲ್ಲವೇ?
ಕೃಷ್ಣ: (ಇವನು ವ್ಯಾಸರ ಭಂಗಿ ಭಾವಗಳಲ್ಲಿ) ಸಕಲವನ್ನೂ ತಿಳಿದ ದಿವ್ಯ ಜ್ಞಾನಿಗಳಾದ ನಿಮ್ಮ ಸತ್ಯದ ಮಾತುಗಳಿಗೆ ಉತ್ತರ ಹೇಳಲು ನನಗೆ ಸಾಧ್ಯವೇ! ನಿಮ್ಮ ಕಥೆಯಲ್ಲಿಯೇ ನಿಮ್ಮ ಪಾತ್ರವನ್ನೂ ಸೇರಿಸಿ, ನಿಮ್ಮ ಕಾವ್ಯವನ್ನು ನಿಮ್ಮ ಮುಂದೆಯೇ ಪ್ರತಿದಿನವೂ ಕುಳಿತು ಬರೆದ ಹಾಗೆ ಗಣೇಶನನ್ನೂ ನಿಮ್ಮ ಕಥೆಯಲ್ಲಿ ಸೇರಿಸಿಕೊಂಡಿರಿ. ನಿಮ್ಮ ಮತ್ತು ಗಣೇಶನ ಒಪ್ಪಿಗೆಯ ಪ್ರಕಾರ, ಮೊದಲಿನಿಂದ ಕೊನೆಯವರೆಗೂ ವಿರಾಮವಿಲ್ಲದೆ ಮಹಾಭಾರತದ ಸಂಪೂರ್ಣ ಕಾವ್ಯವನ್ನು ರಚಿಸಿದಂತೆ ಮಾಡಿ, ಓದುಗರ ಮನಸ್ಸಿಗೆ ಮಾಯಾಜಾಲವನ್ನು ಹಾಕಿಬಿಟ್ಟಿರಿ. ನನ್ನನ್ನು ಮಾಯಾವಿ, ಕಪಟಿ, ಪಾಂಡವರ ಪಕ್ಷಪಾತಿ ಎಂದೆಲ್ಲಾ ಬಣ್ಣಿಸಿದಿರಿ. ನಿಮ್ಮ ಮಾಯಾಜಾಲದ ವಿಚಿತ್ರಕ್ಕೆ ದೇವರೆನಿಸಿಕೊಂಡ ನಾನೇ ತಲೆ ಬಾಗುತ್ತೇನೆ. (ಕೃಷ್ಣನು ವ್ಯಾಸರಿಗೆ ಕೈಮುಗಿಯುತ್ತಾನೆ)

Krishna mentions the name of Draupadi who was ill-treated by Karna and Duryodhana during the 'vastraapaharaNa'.)



ಕೃಷ್ಣ: ನೀವೆಲ್ಲರೂ ಈ ರೀತಿ ಪ್ರಲಾಪಿಸುವುದನ್ನು ನೋಡಿದರೆ ಏನು ಹೇಳಲಿ ಎಂದು ಗೊತ್ತಾಗುತ್ತಿಲ್ಲ. ಸಾಧ್ವಿ ಶಿರೋಮಣಿ, ಪತಿವ್ರತೆ, ಸುಂದರಿಯಾದರೂ ಸಾವಧಾನದಿಂದ ನಿಮ್ಮೆಲ್ಲರಿಗಿಂತಲೂ ಹೆಚ್ಚು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದವಳೆಂದರೆ ನನ್ನ ತಂಗಿ ಕೃಷ್ಣೆಯಾದ ದ್ರೌಪದಿ.

ಪ್ರವೇಶ: ದ್ರೌಪದಿ



Draupadi cries out and vents her anger towards Karna and Duryodhana.



ದ್ರೌಪದಿ: ಕರ್ಣ! ನೀನು ರಣರಂಗಕ್ಕೆ ಧೀರನಂತೆ ಬಂದು ಹೋರಾಡಿದರೂ, ಇದೀಗ ಸಾಯುವಕಾಲದಲ್ಲಿ ನಿನ್ನ ಜೀವನವನ್ನೆಲ್ಲಾ ಮರುಕಳಿಸಿ ನೆನಪಿಸಿಕೊಂಡು, ಅಳುತ್ತಿದ್ದೀಯಲ್ಲಾ. ನನಗೆ ಬಂದ ಕಷ್ಟಗಳು ನಿನ್ನ ದುಷ್ಟ ಮನಸ್ಸಿಗೆ ಏನು ತಿಳಿಯುವುದು! ಅಬಲೆಯಾದ ನನ್ನ ವಸ್ತ್ರಾಪಹರಣ ಮಾಡುವುದಕ್ಕೆ ನಾನೇನು ತಪ್ಪು ಮಾಡಿದ್ದೆ? ದುರುಳರಾದ ದುರ್ಯೋಧನ - ದುಶ್ಯಾಸನರ ಪರವಾಗಿ ನಿಂತು ಪರಸ್ತ್ರೀಯಾದ ನನ್ನನ್ನು ಅವಮಾನಿಸಿ, ಛೇಡಿಸಿ, ಕಾಮುಕ ಕೋತಿಮನದ ಹುಚ್ಚನಂತೆ ಆಟವಾಡಿದ್ದು ನೆನಪಿದೆಯೇ ಈಗ ಯುಧ್ಧದಲ್ಲಿ ಸೋತು ಉರುಳಿ ಬಿದ್ದುಕೊಂಡಿರುವ ಕೀಳು ಮನಸ್ಸಿಗೆ? ಅಧಮನಾದ ನಿನಗೆ ಆದಂತೆ ನಿನ್ನ ’ಸ್ವಾಮಿ’ ಆ ಖಳನಿಗೂ ಸಧ್ಯದಲ್ಲಿಯೇ ಸಾವು ಬರಲಿದೆ.


( Kunti blames Vyaasa for scripting the 'VastraapaharaNa event, as a cheap 'masaala' in his literary masterpiece.)


ಕುಂತಿ: ದ್ರೌಪದಿ! ನಿನ್ನ ದುಖ, ಸಿಟ್ಟು, ಸೇಡು ಎಲ್ಲವೂ ಹೆಂಗಸಾದ ನನಗೆ ಅರ್ಥವಾಗುತ್ತದೆ, ಮಗಳೇ. ಆದರೆ, ನಿನ್ನ ಅಣ್ಣ, ಪಾಂಡವರ ಪಕ್ಷಪಾತಿ ಶ್ರೀ ಕೃಷ್ಣನು ಮೊದಲೇ ಹೇಳಿದ ಹಾಗೆ, ಇದಕ್ಕೆಲ್ಲಾ ವ್ಯಾಸರೇ ಕಾರಣರಲ್ಲವೆ?

(Vyaasa responds)
ವ್ಯಾಸ: ದ್ರೌಪದಿ! ನಿನಗೆ ವಸ್ತ್ರಾಪಹರಣ ಮಾಡುವ ದುರ್ಮನಸ್ಸನ್ನು ಕೌರವರು ಪ್ರದರ್ಶಿಸಿದರೂ ನಿನಗೆ ನಿಜವಾಗಿಯೂ ವಸ್ತ್ರಾಪಹರಣವಾಗಲಿಲ್ಲ. ಈ ಘಟನೆಗಳಲ್ಲಿ ನಾನು ಓದುಗರಿಗೆ ಸಮಾಜದ ಹುಳುಕುಗಳನ್ನೂ, ಮನುಷ್ಯನ ಮನಸ್ಸಿನ ದುರ್ಬಲ ಶಕ್ತಿಗಳನ್ನೂ, ಕ್ಲಿಷ್ಟವಾದರೂ ಸನ್ನಿವೇಶಗಳ ಉಪಯೋಗಿಸಿ ಹೇಳುವ ಪ್ರಯತ್ನ ಮಾಡಿದ್ದೇನೆ. ಯಾವಾಗಲೂ, ಎಲ್ಲ ರೀತಿಯಲ್ಲೂ ಸಹನೆಯುಳ್ಳವನೂ, ಧರ್ಮವನ್ನು ಪಾಲಿಸುವ ಧರ್ಮರಾಯನೂ ಜೂಜಾಡುವ ಚಂಚಲತೆಗೆ ದಾಸನಾದುದರಿಂದ ತನ್ನದೆಲ್ಲವನ್ನೂ, ತಮ್ಮಂದಿರದೆಲ್ಲವನ್ನೂ, ಕೊನೆಗೆ ಹೆಂಡತಿಯನ್ನೂ ಪಣಕ್ಕಿಟ್ಟು ಕಳೆದುಕೊಳ್ಳುವ ಸ್ಥಿತಿಗೆ ಬಂದುಬಿಡುತ್ತಾನೆ. ಹೊರನೋಟಕ್ಕೆ ಸಣ್ಣ ತಪ್ಪೆಂದು ಕಂಡರೂ ಮನುಷ್ಯನ ಯಾವ ದುರ್ಬಲತೆಯಾದರೂ ಅದರಿಂದ ಬಹಳ ದೊಡ್ಡ ಹಾನಿಯಾಗಬಹುದೆಂಬುದನ್ನು ತೋರಿಸುವ ಘಟನೆ ಇದು. ಉಪ್ಪು ತಿಂದ ಮನೆಯನ್ನು ಎದುರುಹಾಕಿಕೊಳ್ಳಲು ದ್ರೋಣ, ಭೀಷ್ಮಾದಿಗಳೂ ಹೆದರಿ ಸ್ವಲ್ಪ, ಸ್ವಲ್ಪ ಮಾತ್ರ ಪ್ರತಿಭಟಿಸಿದರು. ಗೌರವಿತ ಆಚಾರ್ಯನಾಗಲೀ, ವಯಸ್ಸಿನಲ್ಲಿ ಹಿರಿಯವರಾಗಲೀ ಸಮಾಜವನ್ನು ಸಂಪೂರ್ಣವಾಗಿ ಪ್ರತಿಭಟಿಸುವುದು ಕಡಿಮೆ. ಇಂತಹವರು ಎಲ್ಲ ಸಮಾಜದಲ್ಲೂ ಇರುತ್ತಾರೆ. ದುಷ್ಟ ಶಕ್ತಿಗಳನ್ನು ಮುಖಾಮುಖಿ ಎದುರಿಸುವುದಕ್ಕೆ ಸಜ್ಜನರೂ, ಶಕ್ತಿಶಾಲಿಗಳೂ ಮೀನ-ಮೇಷ ಎಣಿಸುತ್ತಾರೆ.
ದ್ರೌಪದಿ! ನನ್ನ ಕಥೆಯನ್ನು ಈ ಸಮಯದಲ್ಲಿ ಮುಂದುವರಿಸುವ ದಾರಿ ಕಾಣಲಿಲ್ಲ. ಜೊತೆಗೆ ನಿನ್ನನ್ನು ನಗ್ನಳಾಗಿ ಮಾಡಿಬಿಡುವುದನ್ನು ನಿಲ್ಲಿಸಲು ಶ್ರೀ ಕೃಷ್ಣನ ಮಾಯೆಯನ್ನು ಇಲ್ಲಿ ಉಪಯೋಗಿಸಿಕೊಂಡೆ.

ದ್ರೌಪದಿ: ನನ್ನ ಮಹಾವೀರ ಪತಿಗಳಿಂದ ಕೌರವರೆಲ್ಲರಿಗೂ ನರಕದ ಬಾಗಿಲು ತೆಗೆದುಕೊಂಡು ಕಾದಿದೆ!

(Duryodhana ridicules the gutless attitude of Bheema during the 'vastraapaharaNa')


ದುರ್ಯೋಧನ: ದ್ರೌಪದಿ! ನೀನೇಕೆ ವ್ಯಥಾ ಕನಸನ್ನು ಈ ಹಗಲಿನಲ್ಲಿ, ರಣರಂಗದಲ್ಲಿ ಕಾಣುತ್ತಿದ್ದೀಯೆ? ನಿನ್ನ ವಸ್ತ್ರಾಪಹರಣದ ಮನೋರಂಜನೆಯನ್ನು ನೋಡುತ್ತಿದ್ದ ನಾವು, ಮೀಸೆಯ ಮೇಲೆ ಕೈಹಾಕಿ ಅಟ್ಟಹಾಸದಿಂದ ನಿನ್ನ ಆ ಸೌಂದರ್ಯದ ಬೆಡಗನ್ನು ಮನತಣಿಸಿಕೊಳ್ಳುತ್ತಾ ನೋಡುತ್ತಿರುವಾಗ, ಆ ನಿನ್ನ ಗಂಡಂದಿರು ಏನೂ ಮಾಡಲಾಗದ ಹೇಡಿಗಳಂತೆ ಬಾಲಗಳನ್ನು ಮುದುರಿಕೊಂಡು ಸುಮ್ಮನೆ ಮಿಕ - ಮಿಕ ನೋಡುತ್ತಿದ್ದರಲ್ಲವೆ! ಆ ಅಡುಗೆ ಭಟ್ಟನ ಮಾತನ್ನೇಕೆ ತಂದು ನಿನ್ನ ನಾಲಿಗೆಯನ್ನು ನೋಯಿಸಿಕೊಳುತ್ತಿದ್ದೀಯೆ ದಿಗಂಬರ ಸುಂದರಿ? (ದೊಡ್ಡ ಅಟ್ಟಹಾಸ ಹಾಕುತ್ತಾನೆ :-))

ಪ್ರವೇಶ: ಭೀಮ



Bheema rages and vows to kill Duryodhana, and moves to attack him. Krishna trickily restrains both Bheema and Duryodhana.



ಭೀಮ: ಎಲವೋ ಅಧಮಾಧಮ! ನಾನು ಅಡುಗೆ ಭಟ್ಟನಾಗಿದ್ದಾಗ, ನನ್ನ ಪ್ರೀತಿಯ ಹೆಂಡತಿಯಾದ ದ್ರೌಪದಿಯನ್ನು ಛೇಡಿಸಿ, ಕೆರಳಿಸಿ ಕಾಮಾಂಧನಾಗಿ ಅರಮನೆಯಲ್ಲೆಲ್ಲಾ ಹಿಂಬಾಲಿಸುತ್ತಿದ್ದ ಆ ಕೀಚಕನನ್ನು ಹೇಗೆ ಕೊಂದೆ ಎನ್ನುವುದು ನಿನಗೆ ಗೊತ್ತೋ! ದುರ್ಯೋಧನ! ನೀನು ಧೈರ್ಯವಂತನಾದರೆ ಇದೀಗಲೇ ಬಾ! ನಿನ್ನನ್ನು ಜೆಟ್ಟಿ ಕಾಳಗದಲ್ಲಿ, ಪಲ್ಟಿಹಾಕಿಸಿ, ಕೆಳಗುರುಳಿಸಿ, ಜಗತ್ಪ್ರಸಿಧ್ಧವಾದ ನನ್ನ ಪಟ್ಟಿನಲ್ಲಿ ನೇಣುಹಾಕಿ ಒಂದೂ ಉಸಿರು ದಕ್ಕದಂತೆ ಮಾಡಿಬಿಡುತ್ತೇನೆ.

ನನ್ನ ಪ್ರೀತಿಯ ಪುತ್ರ ಘಟೋತ್ಕಚನನ್ನು ಸಾಯಿಸಿದ ಆ ಕರ್ಣನನ್ನು ಈ ಕಾಲಭೈರವನ ತುಳಿತದಲ್ಲಿ ಮೆಟ್ಟಿ ಕುಣಿದು ನಾಟ್ಯವಾಡುತ್ತೇನೆ.



Krishna mentions Vyaasa as the writer to decide what may really happen.


ಕೃಷ್ಣ: ಜಗತ್ ಜೆಟ್ಟಿ ಭೀಮ! ಸಾವಧಾನ. ಮುಂದೆ ಆಗುವ ಭಾರತ ಯುಧ್ಧವನ್ನು ಈಗಲೇ ಮುಗಿಸಿ ಬಿಡಲು ಸಾಧ್ಯವೇ! ಇದರ ಸೃಷ್ಟಿ ಕರ್ತ, ದಿವ್ಯ ಜ್ಞಾನಿಯಾದ ವೇದ ವ್ಯಾಸರು ನಡೆಸಿದಂತೆ ಮಹಾಭಾರತ ವೆಲ್ಲವೂ ಸಾಗಬೇಕಲ್ಲವೆ! :-) :-)


Vyaasa responds …

ವ್ಯಾಸ: (ಕೃಷ್ಣನು ನಗುವ ಧಾಟಿಯಲ್ಲೇ ನಕ್ಕು) ಕೃಷ್ಣ ! ನೀನು ಬೇರೆಯಲ್ಲ ನಾನು ಬೇರೆಯಲ್ಲ; ಸಮಯಕ್ಕೆ ಒಂದು ಉಪಾಯವನ್ನು ಹೂಡುವೆಯಲ್ಲಾ !

Karna complains to Vyaasa that he was unjustly made to believe that he was born to a servant's ancestry - Sootha Putra. He claims to have deserved a royal treatment by everyone. Karna complains about Drona and Bheeshma as begets, who refused an opportunity to be trained along with Kauravas and Pandavas.


ಕರ್ಣ: ಮಹಾವೀರನಾದ ನನ್ನ ಹಣೆಬರಹದ ಪ್ರಕಾರ ನಾನು ಸೂತ ಪುತ್ರನಾಗಿ ಜೀವನಪೂರ್ತಿ ಅವಹೇಳನ ಮಾಡಿಸಿಕೊಳ್ಳಬೇಕಾಯಿತಲ್ಲಾ :-) ನನ್ನ ದುಃಖ ಯಾರಿಗೂ ಅರ್ಥವಾಗಲಾರದು. :-(

ಪ್ರವೇಶ: ಏಕಲವ್ಯ



Ekalavya confers with a similar complaint to Drona, Bheeshma, Krishna and also Arjuna.



ಏಕಲವ್ಯ: ನಿನ್ನ ದುಃಖ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ ಕರ್ಣ. ಬೇಡರವನಾದ ನನಗೆ ಬಿಲ್ಲುವಿದ್ಯೆ, ಶಸ್ತ್ರ ಪಾಠಗಳನ್ನು ಹೇಳಿಕೊಡುವುದಿಲ್ಲ ಎಂದು ನನ್ನನ್ನು ಕನಿಕರವಿಲ್ಲದೆ ಹಿಂತಿರುಗಿಸಿ ಕಳಿಸಿಬಿಟ್ಟ ದ್ರೋಣರ ಬಗ್ಗೆ ನನಗೂ ಬಹಳ ಬೇಸರವಾಯಿತಲ್ಲವೆ. ಹುಟ್ಟಿನಿಂದ ಬೇಡನಾದ ನನಗೆ ಬಿಲ್ಲುವಿದ್ಯೆಯನ್ನು ನೈಜವಾಗಿ ಕಲಿಯಬಲ್ಲ ಸೌಭಾಗ್ಯ - ಸಂಪ್ರದಾಯಗಳು ರಕ್ತಗತವಾಗಿ ಬಂದದ್ದು ಎನ್ನುವುದನ್ನು ತೋರಿಸಿಕೊಡಲು ಗುರುವಿನ ಪ್ರತಿಮೆಯೇ ಸಾಕ್ಷಿಯಾಯಿತು. ಕರ್ಣ! ಆದರೆ, ಬಿಲ್ಲುವಿದ್ಯಕ್ಕೇ ಅತಿ ಅವಶ್ಯಕವಾದ ನನ್ನ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ಕೊಡಲು, ನನ್ನ ಕಣ್ಣಿನ ರೆಪ್ಪೆಯನ್ನು ಕೂಡ ಮಿಟುಕಿಸದೆ ಒಂದೇ ಹೊಡೆತದಲ್ಲಿ ಕತ್ತರಿಸಿ ಗುರುಗಳ ಪಾದದಲ್ಲಿಟ್ಟಾಗ, ಪ್ರಪಂಚದ ಧನಸ್-ಶಾಸ್ತ್ರ ಪಾರಂಗತರನ್ನೆಲ್ಲಾ ಮಿಂಚಿ ಗೆದ್ದ ಸಮ್ತಸದ ಅನುಭವವಾಯ್ತು.

ಕರ್ಣ! ನಿನ್ನ ಪರಿಸ್ತಿತಿ ನನಗೆ ಅರ್ಥವಾಗುವಷ್ಟು ಇನ್ಯಾರಿಗೂ ತಿಳಿಯಲಾರದು.


(Vyaasa responds.)

ವ್ಯಾಸ: ಕರ್ಣನು ಸೂತಪುತ್ರನೆಂದೂ, ಪಾಂಡವರು ಮತ್ತು ಕೌರವರುಗಳು ರಾಜ ಪುತ್ರರೆಂದೂ ನಂಬಿ ದ್ರೋಣ ಮೊದಲಾದ ಶಸ್ತ್ರಾಚಾರ್ಯರುಗಳು ನನ್ನ ಕಥೆಯಲ್ಲಿ ಕರ್ಣನನ್ನು ಅಲ್ಲಗಳೆದರು. ಇದನ್ನು ಸ್ವಲ್ಪ ಯೋಚಿಸಿನೋಡು ಕರ್ಣ. ಈ ಆಚಾರ್ಯರುಗಳು ಮೊದಲಿಗೆ ಬ್ರಾಹ್ಮಣರು; ರಾಜಾಶ್ರಯವಿಲ್ಲದೆ ಅವರ ವಿದ್ಯೆಯನ್ನು ಇನ್ಯಾರಿಗಾದರೂ ಹೇಳಿಕೊಟ್ಟರೆ ಅವರ ಹೆಚ್ಚುಗಾರಿಕೆ ಸಫಲವಾದೀತೇ? ತಮಗೆ ಅವಕಾಶವನ್ನು ಕೊಟ್ಟ ರಾಜನ ಪುತ್ರರಿಗೆ ಅವರ ಜೀವನ, ಅವರ ಉದ್ಯೋಗ ಮೀಸಲಾಗಿಟ್ಟಿದ್ದರು. ಆದ ಕಾರಣವೇ, ಅವರು ತಮ್ಮ ಆಶ್ರಯದಾತರಿಗೆ ಮುಡುಪಾಗಿಟ್ಟುಕೊಂಡಿದ್ದ ನಿಷ್ಠೆಯನ್ನು ಇತರರಿಗೆ ಹಂಚುವುದಕ್ಕೆ ಹಿಂಜರಿದರು. ನಮ್ಮ ಕಾಲದಲ್ಲಿ ಕೂಡ ಉದ್ಯೋಗಗಳು ಹುಟ್ಟಿದ ಜಾತಿಯನ್ನೇ ಅನುಸರಿಸುತ್ತಿದ್ದವು; ಹಾಗಂದ ಮಾತ್ರಕ್ಕೆ, ಈ ಸಂಪ್ರದಾಯದಿಂದ - ಕುರುಡೆನ್ನೀ, ಸಮಾಜದ ಕುಂದುಕೊರತೆ ಹಾಗೂ ಅನ್ಯಾಯವೆನ್ನೀ - ರಾಜರಿಗೆ, ಕ್ಷತ್ರಿಯ ಕುಲದವರಿಗೆ ಮೀಸಲಾಗಿದ್ದ ಉದ್ಯೋಗವೆಂದು ಸನ್ನಿವೇಶಗಳಮೂಲಕ ಅವಹೇಳನ ಮಾಡುವ ಕಾರಣದಿಂದ ಕಥೆಯಲ್ಲಿ ಬರೆದೆ. ಇಲ್ಲಿನ ತಮಾಷೆ ಏನೆಂದರೆ, ಓದುಗರಿಗೆಲ್ಲಾ ಕರ್ಣನು ಸೂತನಲ್ಲ ಎಂದು ಗೊತ್ತಿದೆ; ಪಾತ್ರಗಳಿಗೆ ಮಾತ್ರ ಗೊತ್ತಿಲ್ಲ!
ಏಕಲವ್ಯನ ಕಥೆಯಲ್ಲಿಯೂ ಅಷ್ಟೆ: ಕ್ಷತ್ರಿಯ ಯುವಕನಾಗಿ, ದ್ರೋಣರಂತಹ ಅದ್ವಿತೀಯ ಆಚಾರ್ಯರಿಂದ ಕಲಿತ, ಇವನಿಗೆ ಸಮಾನರಾದ ಬಿಲ್ಲುಗಾರರು ಎಲ್ಲಿಯೂ ಇಲ್ಲ ಎಂದು ಅಹಂಕಾರದಲ್ಲಿ ಮುಳುಗಿದ್ದ ಅರ್ಜುನನಿಗೆ ಕಣ್ಣು ತೆರೆಸಲು ಅಳವಡಿಸಿದ ಕಥೆ; ವಿದ್ಯೆಯು ಮನಸನ್ನು ಕೇಂದ್ರೀಕರಿಸಿದ ಎಲ್ಲರಿಗೂ ಪ್ರಾಪ್ತವೆನ್ನುವ ದೃಷ್ಟಾಂತವನ್ನು ಏಕಲವ್ಯನನ್ನು ಕೇಂದ್ರೀಕರಿಸಿ ಓದುಗರಿಗೆ ತಿಳಿಸಿ ಹೇಳಿದ ಕಥೆ.
ಈ ದೃಷ್ಟಾಂತ ಧ್ಯೇಯದ ಕಥೆಯಲ್ಲಿ ದ್ರೋಣರು ಏಕಲವ್ಯನನ್ನು ಗುರುದಕ್ಷಿಣೆ ಕೇಳಿದಾಗ ಅವರ ಸ್ವಾರ್ಥದ ಹುಳುಕು ಪ್ರಪಂಚಕ್ಕೇ ಕಂಡುಬರುತ್ತದೆ. ಈ ಕಥೆಯಲ್ಲಿ ಮೊದಲಿನಿಂದ ಕೊನೆಯವರೆಗೂ ನಿರ್ಮಲ ಮನಸ್ಸನ್ನು ಉಳಿಸಿಕೊಳ್ಳುವವನು ಏಕಮಾತ್ರ ಪಾತ್ರದ ಏಕಲವ್ಯ; ಇಂತಹ ಅದ್ವಿತೀಯ ಬಿಲ್ಲುಗಾರನ ಮುಂದೆ, ಅರ್ಜುನನೂ ದ್ವಿತೀಯನಾಗಿಬಿಡುತ್ತಾನೆ; ಆಚಾರ್ಯರೂ ಕೂಡ ಅಲ್ಪರಾಗಿಬಿಡುತ್ತಾರೆ.
ಏಕಲವ್ಯನು ಹುಟ್ಟಿನಿಂದ ಬೇಡ. ಬೇಡನ ವೃತ್ತಿ ಬೇಟೆಯಾಡುವುದು; ಇದು ಇವನಿಗೂ, ಇವನ ಸಂಸಾರ ಪಾಲನೆಗೂ ಅತ್ಯವಶ್ಯಕ. ಆದರೆ, ಬೇಡನು ತನ್ನ ಕೆಲಸಕ್ಕೆ ಸಾಕಷ್ಟು ಬಿಲ್ಲುವಿದ್ಯೆಯನ್ನು ಕಲಿತಿದ್ದರೆ ಸಾಕು. ಪ್ರಪಂಚದಲ್ಲಿ ಎಲ್ಲರನ್ನೂ ಮೀರಿಸಿ ಬಿಲ್ಲುಗಾರ ನಾಗಬೇಕಾಗಿಲ್ಲ. ಇವನಿಗೆ ಯಾವ ಗುರುವೂ ಬೇಕಾಗಿಲ್ಲ. ಇವನಲ್ಲಿ ರಕ್ತಗತವಾಗಿ ಬಂದ ಪ್ರವೃತ್ತಿಯಾದ ಬಿಲ್ಲುಗಾರಿಕೆ ತನಗೆ ತಾನೇ ವ್ಯಕ್ತವಾಗುತ್ತದೆ. ಇವನಿಗೆ ಮನಸ್ಸನ್ನು ಕೇಂದ್ರೀಕರಿಸಲು ದ್ರೋಣರ ಪ್ರತಿಮೆ ಒಂದು ನೆಪವಾದ ಧ್ಯೇಯ ಮೂರ್ತಿ. ಜನ್ಮ ಸಹಜವಾದ ಬಿಲ್ಲುಗಾರ ಏಕಲವ್ಯ. ಇವನ ಮುಂದೆ ಎಲ್ಲರೂ ಸಾಮಾನ್ಯರು.

karNa complains of the tricks played by Krishna, Kunti, Indra and also Soorya.


ಕರ್ಣ: ನನಗೆ ಕಪಟಿ ಕೃಷ್ಣ, ತಾಯಿ ಕುಂತಿ, ಇಂದ್ರ ಇವರುಗಳು ಅನ್ಯಾಯ ಮಾಡುತ್ತಿರುವಾಗ, ನನ್ನ ತಂದೆಯಾದ ಸೂರ್ಯ ದೇವನು ನನ್ನ ಪತನಕ್ಕೆ ಪ್ರೀತಿಯಿಂದ ಅಡ್ಡಬಂದು ನನ್ನನ್ನು ಉಳಿಸಿಕೊಳ್ಳಬಹುದಾಗಿತ್ತಲ್ಲವೆ?

ಪ್ರವೇಶ: ಸೂರ್ಯ

ಸೂರ್ಯ: ಅಳಬೇಡ, ಕಣ್ಣೀರಿಡಬೇಡ ಕರ್ಣ!



Karna cries as an unfortunate child with Soorya not taking any practical steps to stop him from his 'noble 'giveaway' acts before the war.



ಕರ್ಣ: ಇಂದ್ರನು ತನ್ನ ನೆಚ್ಚಿನ ಮಗನಾದ ಅರ್ಜುನನ ಜಯಕ್ಕೋಸ್ಕರ ನನ್ನಿಂದ ವರದ ನೆವದಲ್ಲಿ ಸಾಯುವ ಮುಂಚೆಯೇ ನನ್ನ ಜೀವವನ್ನೇ ಕಿತ್ತುಕೊಂಡು ಹೋಗಿಬಿಟ್ಟ. ನೀನೇಕೆ ಅಂತಹ ಪುತ್ರವಾತ್ಸಲ್ಯವನ್ನು ನನಗೆ ತೋರಲಿಲ್ಲ? ನೀನು ಏಕೆ ಇಂದ್ರನನ್ನು ತಡೆಯಲಿಲ್ಲ? ನಿನಗೆ ನಿಜವಾದ ಪುತ್ರವಾತ್ಸಲ್ಯವಿದ್ದಿದ್ದರೆ, ಆ ಇಂದ್ರನನ್ನು ಕ್ಷಣಮಾತ್ರದಲ್ಲಿ ಸುಡಬಹುದಾಗಿತ್ತಲ್ಲವೇ?



Soorya responds reminding Karna about his attempts to warn his son Karna, where as Karna ignored him.



ಸೂರ್ಯ: ಪುತ್ರಾ! ನೀನು ದಾನಶೂರನೆಂಬ ಹೆಸರಿಗೆ ತಕ್ಕಂತೆ ಕೇಳಿದ್ದನ್ನು, ಕೊಂಚವೂ ಹಿಂಜರಿಯದೆ, ಒಂದು ಮಿಂಚು ಹೊಳೆಯುವ ಕ್ಷಣಮಾತ್ರವೂ ಹಾರಿಹೋಗದಂತೆ, ನಿಂತಲ್ಲೇ ತರ್ಪಣವನ್ನು ಬಿಟ್ಟು ಕೊಡಲು ಹೋದಾಗ, ನಾನು ಬೇಡಿ, ಬೇಡಿ ’ಬೇಡ ಮಗು’, ’ದುಡುಕಬೇಡ ಕಂದ’, ನಿನ್ನ ಪ್ರಾಣವನ್ನೇ ತರ್ಪಣ ಕೊಡಬೇಡ’ ಎಂದೆಲ್ಲಾ ಹೇಳಿ, ಕೂಗಿ, ಅಗ್ನಿಹೃದಯದ ನಾನೂ ಒಂದು ಹನಿ ಕಣ್ಣೀರು ಬಿಟ್ಟಿದ್ದನ್ನು ಕಂಡೂ, ನೀನು ನಿನ್ನ ದಾನವನ್ನು ಪೂರ್ತಿ ಮಾಡಿದೆಯಲ್ಲವೇ? ಅದು ನೆನೆಪಿದೆ ತಾನೆ?

(Vyaasa responds…)

ವ್ಯಾಸ: ಕರ್ಣ! ನೀನು ಮಾಡಿದ ದಾನಗಳಬಗ್ಗೆ ಬೇಸರಪಡುವ ಕಾರಣವಿಲ್ಲ; ಕುಂತಿ! ನೀನು ಕೂಡ ನಿನ್ನ ಪುತ್ರನ ದಾನಗಳಿಗೆ ನೊಂದುಕೊಳ್ಳಬೇಕಾಗಿಲ್ಲ. ಕರ್ಣನು ಅತಿಪರಾಕ್ರಮಿ. ಬಿಲ್ಲುವಿದ್ಯೆಯಲ್ಲಿ ಅರ್ಜುನನ ಸಮಾನವಾಗಿಯೂ ಯುಧ್ಧ ಮಾಡಬಲ್ಲವನು. ಅದಕ್ಕಿಂತ ಹೆಚ್ಚಾಗಿ, ಸಾರಥಿಯಾದ ಶಲ್ಯನು ಅವನನ್ನು ತ್ಯಜಿಸಿದರೂ, ರಥವನ್ನು ತಾನೆ ನಡೆಸಿಕೊಂಡು, ಯುದ್ಧವನ್ನು ಮುಂದುವರಿಸಿದ ಅಸಮಾನ ವೀರ. ಗಾಂಢೀವಿಯೆಂದು ಹೆಸರಾದ ಅರ್ಜುನನೂ ಕೂಡ ಕರ್ಣನನ್ನು ಸೋಲಿಸಲಾಗಲೇ ಇಲ್ಲ. ತನ್ನ ಕರ್ಣಕುಂಡಲಗಳನ್ನೂ, ವಜ್ರಕವಚವನ್ನೂ ಒಂದು ಕಣ್ಣೂ ಮಿಟುಕಿಸದೆ ದಾನಮಾಡಿದರೂ ಅವನಿಗೆ ಸೋಲುಬರಲಿಲ್ಲ. ಕರ್ಣನನ್ನು ನ್ಯಾಯದಲ್ಲಿ ಸೋಲಿಸುವ, ಕೊಲ್ಲುವ ಸಾಧ್ಯತೆಯಿಲ್ಲವೆಂದಲೇ, ಕೃಷ್ಣನು ಅರ್ಜುನನಿಗೆ ಅಶಸ್ತ್ರನಾಗಿ, ರಥವನ್ನು ಮೇಲೆತ್ತಲು ಎರಡು ಕೈ-ಭುಜಗಳನ್ನೂ, ತನ್ನ ಪೂರ್ತಿ ದೇಹವನ್ನೂ ಕೊಟ್ಟಿರುವಾಗ ಮಾತ್ರ ಕೊಲ್ಲುವ ಅವಕಾಶವಿದೆಯೆಂದು ಸ್ಪಷ್ಟವಾಗಿ ಹೇಳುತ್ತಾನೆ. ಕವಿಯಾದ ನಾನು ಕರ್ಣನ ಮಹತ್ವಗಳನ್ನು ನಿರ್ದೇಶಿಸಲು ಇಷ್ಟೆಲ್ಲವನ್ನು ಕಥೆಯಲ್ಲಿ ಅಳವಡಿಸಬೇಕಾಯ್ತು.
ಕರ್ಣ! ನಿನಗೆ ಈಗ ಒಂದು ಗುಟ್ಟನ್ನು ಹೇಳುತ್ತೇನೆ ಕೇಳು. (ಗುಟ್ಟು ಹೇಳುವವರ ಧಾಟಿಯಲ್ಲಿ ಕರ್ಣನ ಕಿವಿಯೋಳಗೆ ಹೇಳಿದರೂ, ಸಭೆಯ ಎಲ್ಲರಿಗೂ ಚೆನ್ನಾಗಿ ಕೇಳುವಂತೆ ಗುಸು ಗುಸು ಧ್ವನಿಯಲ್ಲಿ ಹೇಳುತ್ತಾನೆ) ನಿನ್ನ ತಂದೆ ಸೂರ್ಯನಲ್ಲ; ನಿನ್ನ ತಾಯಿ ಕುಂತಿಯೂ ಅಲ್ಲ; ನಿನ್ನ ತಂದೆ, ತಾಯಿ ಎರಡೂ ನಾನೆ. ನನ್ನ ಕಲ್ಪನಾ ಲೋಕದಲ್ಲಿ ಜನಿಸಿದ ನಿನ್ನನ್ನು ಕಥೆಯು ನಡೆದ ಹಾಗೂ ಪೋಷಿಸಿ ಬೆಳೆಸಿದ ಮಾತಾ ಪಿತೃವೂ ನಾನೆ. ನಿನಗೊಬ್ಬನಿಗೇ ಅಲ್ಲ; ಮಹಾಭಾರತದ ಕಥೆಯ ಎಲ್ಲ ಪಾತ್ರಗಳನ್ನೂ, ಕಥೆಯಲ್ಲಿ ನನ್ನ ಅನುಕೂಲಕ್ಕಾಗಿ ದೇವರುಗಳೆನಿಸಿ ಕೊಂಡ ಗಣೇಶ, ಕೃಷ್ಣ, ಹನುಮಂತ ಮೊದಲಾದವರನ್ನೂ ಸೇರಿಸಿಬಿಟ್ಟಿದ್ದೇನೆ. ಎಲ್ಲಕ್ಕೂ ಹೆಚ್ಚಾಗಿ, ನನ್ನ ಪಾತ್ರವನ್ನೇ ನನ್ನ ಕಥೆಯಲ್ಲಿ ಹುಟ್ಟಿಸಿ, ನನಗೆ ನಾನೇ ‘ಜನ್ಮ ದಾತ’ ನಾಗಿದ್ದೇನೆ! ಈ ಕಾರಣದಿಂದಲೇ ಮಹಾಭಾರತವನ್ನು ಮೊದಲಿನಿಂದ ಕೊನೆಯವರೆಗೂ ಓದುಗರು ನಂಬಿಕೊಂಡಿದ್ದಾರೆ. ನಿನ್ನ ಪಾತ್ರವೂ, ನನ್ನ ಕಥೆಯ ಎಲ್ಲ ಪಾತ್ರಗಳೂ, ಸನ್ನಿವೇಶಗಳೂ ಸಮಾಜದಲ್ಲಿ ಅಜರಾಮರವಾಗಿ ಉಳಿದಿರುವುದು ಆಕಾರಣದಿಂದಲೇ.
‘ಒಂದು ಊರಿನಲ್ಲಿ ರಾಜ, ರಾಣಿಯರಿದ್ದರು, ಅವರಿಗೆ ಸಮಯಕ್ಕೆ ಸರಿಯಾಗಿ ಲಕ್ಷಣವಾದ ಮಕ್ಕಳು ಹುಟ್ಟಿ, ಎಲ್ಲರೂ ಒಳ್ಳೆಯವರಾಗಿ ಬೆಳೆದು, ಯಾರೂ, ಯಾರ ಜೊತೆಯೂ ಜಗಳವನ್ನಾಡದೆ ಸದಾ ಸುಖವಾಗಿದ್ದರು. ರಾಜ್ಯದಲ್ಲಿ ಯಾವಾಗಲೂ ಎಲ್ಲರೂ ನಗುನಗುತ್ತಾ, ಮಾದರಿ ಸಮಾಜವಾಗಿ ಬಾಳುತ್ತಿದ್ದರು’ (ಈ ಸಮಯಕ್ಕೆ ಪಾತ್ರಧಾರಿಗಳೆಲ್ಲರೂ ತೂಕಡಿಸಿ ಗೊರಕೆ ಹೊಡಯಲಾರಂಭಿಸಿರುತ್ತಾರೆ!) ಎಂದು ನಾನು ಕಥೆ ಬರೆದಿದ್ದರೆ ಓದುಗರಿರಲಿ, ಸಭಿಕರಿರಲಿ, ನನ್ನ ಪಾತ್ರಗಳೇ ನನ್ನ ಕಥೆಯನ್ನು ಕೇಳಲಾಗದೆ ನನ್ನ ಮುಂದೆಯೇ ತೂಕಡಿಸಿ ಗೊರಕೆ ಹೊಡೆದು ಬಿಡುತ್ತಿದ್ದರು. (ಈಗ ಎಲ್ಲ ಪಾತ್ರಧಾರಿಗಳೂ ಬೇಕಂತಲೇ ನಿದ್ದೆಬಂದವರ ಹಾಗೆ ನಟಿಸುತ್ತಿದ್ದರೋ ಎಂಬಂತೆ, ಎದ್ದು ಯಥಾ ಸ್ಥಿತಿಗೆ ಬರುತ್ತಾರೆ.)
(Last opportunity for spectator participation)


(ಇಲ್ಲಿ ಸಭಿಕರು ತಮ್ಮ ಪ್ರಶ್ನೆಗಳನ್ನು ನೇರವಾಗಿಯೂ, ಯಾವುದಾದರೂ ಪಾತ್ರದ ಪರವಾಗಿಯಾದರೂ ಕೇಳಬಹುದು.)
ವ್ಯಾಸ: (ಪಾತ್ರಗಳ ಕಡೆಗೆಲ್ಲಾ ಒಂದು ಸಾರಿ ನೋಡಿ, ನಂತರ ಸಭಿಕರ ಕಡೆಗೆಲ್ಲಾ ನೋಡಿ) ಕರ್ಣ! ಒಟ್ಟಿನಲ್ಲಿ ಯೋಚನೆ ಮಾಡಿನೋಡು: ಕರ್ಣನು ಸಾವನ್ನಪ್ಪಿದರೂ, ಸೋಲಲಿಲ್ಲ; ಅವನು ದಾನ ಮಾಡಿದ್ದು ಕರ್ಣಕುಂಡಲಗಳನ್ನಲ್ಲ, ವಜ್ರ ಕವಚವನ್ನಲ್ಲ, ತೊಟ್ಟ ಬಾಣವನ್ನು ಮತ್ತೆ ತೊಡದ ಮಾತಲ್ಲ; ಹೆತ್ತ ತಾಯಿಗೇ ತನ್ನ ಜೀವವನ್ನು ವಾಪಸ್ಸು ಕೊಟ್ಟ ಅಪೂರ್ವ ಕುಮಾರ. ತನ್ನ ಪ್ರಾಣವನ್ನೇ ದಾನ ಮಾಡಿ, ತನ್ನ ತಮ್ಮನ ಕೈಯಲ್ಲೇ ಸಾಯಲು ಸಿಧ್ಧನಾದ ಅಜರಾಮರ. ಕರ್ಣಾ! ನೀನು ಸಾಯಲೇ ಇಲ್ಲ; ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ನೀನು ಈಗಲೂ, ಸಾವಿರಾರು ವರ್ಷಗಳಿಂದ ಓದುಗರ ಮನದಲ್ಲಿ ರಾರಾಜಿಸುತ್ತಿರುವ, ಸಾಹಿತ್ಯದ ಚರಿತ್ರೆಯಲ್ಲಿಯೇ ಸೂರ್ಯ ದೇವನಂತೆ ಪ್ರತಿಕ್ಷಣವೂ ಪ್ರಜ್ವಲಿಸುತ್ತಿರುವ ಏಕಮಾತ್ರ ವಿಭಿನ್ನ ಪಾತ್ರ.
ಯಾವುದೇ ಸಾಹಿತ್ಯದಲ್ಲಾಗಲೀ ಪಾತ್ರಗಳು ಪ್ರತಿದಿನವೂ ಓದುಗನೊಂದಿಗೆ ಮಾತನಾಡುತ್ತವೆ; ಘಟನೆಗಳೂ ಕೂಡ ಪ್ರತಿ ಓದುಗನ ಮನಸ್ಸಿನ ಕಣ್ಮುಂದೆ ಕುಣಿದು ನಡೆಯುತ್ತಿರುತ್ತವೆ. ಈ ರೀತಿಯಲ್ಲಿ ಸಾಹಿತಿಯೂ ತನ್ನ ಮನಸ್ಸಿಲ್ಲಿ, ಕಲ್ಪನೆಯ ಅಲೆಯಲ್ಲಿ ತೇಲಿಬಂದ ದೃಶ್ಯಗಳ ಉತ್ಸವವನ್ನು ಚೊಕ್ಕವಾಗಿ ಹಿಡಿದು ಕುಶಲತೆಯ ಬರಹದಿಂದ ಕಥೆ ಹೇಳಿ ಊಹೆಯ ಪ್ರಪಂಚವನ್ನು ನಿಜವೆನಿಸುವ ಕಥಾರಂಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾನೆ.
ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತುವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಯನ್ನು ಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವ ಸಮಯದಲ್ಲಿ ಲೇಖಕನಿಗೂ, ಓದುವ ಸಮಯದಲ್ಲಿ ಓದುಗರಿಗೂ ಮನರಂಜನೆಯನ್ನು ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.


(ಅಂತ್ಯ ಪರದೆ ನಿಧಾನವಾಗಿ ಮುಚ್ಚುತ್ತದೆ.)

ಸೋಮವಾರ, ಮೇ 17, 2010

ಓಡೋ! ಬೇಸರಪಡದೆ ಓಡೋ!

ಓಡೋ! ಬೇಸರಪಡದೆ ಓಡೋ!
ಕೆ. ಆರ್. ಎಸ್. ಮೂರ್ತಿ

ಕಾಲು ಎರಡೇ. ನೀನೊಬ್ಬ ಓಡು.
ಹೆಜ್ಜೆ ಮುಂದೆ, ಮುಂದೆ.

ನಿನ್ನೆರಡು ಕಣ್ಣುಗಳು ಮುಂದೆ ಇವೆ.
ಹಿಂತಿರುಗಿ ನೋಡಿದರೆ ಅಭ್ಯಂತರವಿಲ್ಲ.
ಹಿಂದೆ ನಡೆಯಲು ಬಾರದು.

ಏದುಸಿರು ಬಂದರೆ ಬರಲಿ,
ಸುಮ್ಮನೆ ಕೂರಲೂ ಬಾರದು.

ಪಂದ್ಯದೋಟವು ಹೌದು.
ಪೈಪೋಟಿ ಕಟ್ಟಿಕೋ.
ಇತರರಲಿ ಪೈಪೋಟಿ,
ನಿನ್ನಲಿ ನೀನೆ ಪೈಪೋಟಿ,
ಪೈಪೋಟಿಯ ಕಾಟದ ತಂಟೆ,
ಎಷ್ಟು ಮಾಡಿದರೂ, ಹೇಗೆ ಮಾಡಿದರೂ,
ನೀ ಸೇರುವ ತಾಣವೇ ಬೇರೆ;
ಅವರಿವರ ಸೇರುವ ತಾಣಗಳ
ಕಾಣುವೆಯೋ, ಇಲ್ಲವೋ, ಇವೆಲ್ಲ
ನಿನಗೆ ನಿಶ್ಚಯದ ಹಕ್ಕಿಲ್ಲ.

ನಿನ್ನ ಮುಕ್ತಾಯ, ಅವರಿವರ ಮುಕ್ತಾಯ,
ಇಂದೋ, ಮುಂದೋ, ಎಂದೆಂದು ಯಾರಿಗೆ ಗೊತ್ತು!
ಈ ಕ್ಷಣ ಬಂದರೂ ಬಂದೀತು, ನಾಳೆಯೋ,
ಆರೇಳು ದಿನದಲ್ಲೋ, ದಿನದಲ್ಲೋ, ರಾತ್ರಿಯಲ್ಲೋ,
ತಿಂಗಳುಗಳು, ವರುಷಗಳು, ದಶಕಗಳು, ಕಳೆಯ ಬೇಕೋ!
ಈಗಲೇ ಬಂದು ಬಿಡಲಿ ಎನ್ನುವ ಹಕ್ಕಂತೂ ಇಲ್ಲವೇ ಇಲ್ಲ.

ದಾರಿಯಲ್ಲಿ ಊಟ, ಪಾನ, ಪಾಠ, ನಿದ್ದೆ ಎಲ್ಲಕೂ ಅನುಕೂಲವಿವೆ.
ಎಷ್ಟು, ಯಾವುದು ದಕ್ಕುವುದೋ, ದಕ್ಕಿಸಿಕೊ.
ಸಿಕ್ಕದಿದ್ದರೆ ಇವೆಯಲ್ಲ ಉಪವಾಸ, ಬಾಯಾರಿಕೆ, ಜಾಗರಣೆ!
ಹಾಸಿಗೆ ಹಿಡಿದಾಗ, ಹಸಿವೂ ಇಲ್ಲದಿರಬಹುದಲ್ಲ;
ಮೆತ್ತನೆಯ ಹಾಸಿಗೆಯಲಿ ಪವಡಿಸಿದರೂ,
ತೂಗುಯ್ಯಾಲೆಯ ಮೇಲೆ ತೂಗಿಸಿಕೊಂಡರೂ,
ನಿದ್ರಾದೇವಿಯು ಮುನಿಸಿಕೊಂಡು, ನಿನಗೆ ಮುದ್ದು ಮಾಡಿ,
ಕುಸುಮಾಲಿಂಗನವನ್ನು ಕೊಡದಿದ್ದರೆ, ನಿನ್ನ ಹಣೆ ಬರಹ.

ನಿನ್ನ ಹೃದಯದ ಪ್ರೇಮಿ ನೀನೇ.
ಅದನ್ನು ನಡೆಸುವ, ಓಡಿಸುವ, ಆರಿಸಿಬಿಡುವ,
ಕಾಲರಾಯನು ಎಂದು ಬಾಗಿಲು ತಟ್ಟಿ
ನಿಮ್ಮ ಕತ್ತಿಗೆಗೆ ಕಬ್ಬಿಣದ ಹಾರದ ಆಭರಣವನು ಹಾಕಿ,
ಎಮ್ಮೆಕೋಣನ ಮೇಲೆ ಸವಾರಿ ಮಾಡಿಸಿ,
ತಮಟೆ, ಓಲಗ, ಕುಣಿತಗಳಿಲ್ಲದೆಯೇ,
ಕನಿಕರದ ಸವಿ ಮಾತುಗಳಿಲ್ಲದೆಯೇ,
ಎಳೆದು ಪೋಗುವಾಗ, ಅಳಬೇಡ ಮರುಳೆ.

ಹುಸಿ ಸ್ವಪ್ರತಿಷ್ಠೆ ಹೆಂಡಕ್ಕೂ ಕೆಟ್ಟ ಅಮಲನ್ನು ತರಿಸಿ
ನಿನ್ನ ನಡೆಯನು ಕೊಂಕು ಮಾಡೀತು, ಮೂಗು, ಮೊಗ,
ಮಣ್ಣ ಮೊಕ್ಕೀತು, ಬಳಗ ಬಂಧುಗಳೂ, ಹಿತವಂತರೂ,
ಅಟ್ಟಹಾಸದಿ ನಕ್ಕು ನಲಿದಾಡಿ, ಊರೆಲ್ಲ ಡಂಗುರವ
ಹೊಡೆಸಿಯಾರು, ಕತ್ತಿ, ಚಾಕು, ವಿಷದ ಬಾಣಗಳ
ಅವರೆಲ್ಲ ಹೊಡೆದಾಗ, ನಿನ್ನ ಬೆನ್ನ ಹೊಕ್ಕುವ ಮುಂಚೆ,
ಕೈಯ ಚಮತ್ಕಾರದಿಂದ ಹಿಡಿದು, ಫಕ್ಕನೆ, ಪಟ್ಟನೆ,
ಮುರಿದು, ಬಿಸುಟು, ನಿನ್ನ ಮೊಂದೋಟವನು ನಿಲಿಸದೆ,
ಮುಂದುವರಿಸು ಮಂದಹಾಸದಿ ಮಿಕ್ಕೆಲ್ಲರನು ಗೆಲ್ಲು.

ಗೆದ್ದು ಜಯಲಕ್ಷ್ಮಿಯನು ಒಲಿಸಿ, ಹದದಲ್ಲಿ ಹೆಮ್ಮೆಯಯನು,
ವಿನಯದಿ ಬೆರೆಸಿ, ಹೇಮದ ಆಭರಣವ ಮಾಡಿಕೊ,
ಆಗ ಮಾತ್ರವೇ ಆಗುವೆ ನೀನು ನಿಜ ಮನುಜ.

RUN! KEEP RUNNING

RUN! KEEP RUNNING
KRS Murthy

Life is a long distance race,
a life long race.

Getting to the finish line
could take very long,
or may be just around the corner

Distance is not measured in miles, but in years
You can eat, drink and sleep on the way,
but never stop for a break.

Even when you think you are not running,
your heart is still running, racing slower or harder

Some may declare victory
only after a short distance
because they think they finished at a mirage.

The line is never crossed,
but they are already victors
only in their imagination!

They are only shortsighted
going blind in the celebration
of their victory illusion.

Ego is a drink,
that can slow you down to almost a halt,
fall behind or even fall down on your face.

Run it only one day at a time
ahead of others one day,
but may fall behind the next day.

Run while you could,
as you may come to a dead stop,
when you really stop dead!

Look back all you want,
but watch your back
for any knifes thrown at you.

Catch the knifes
all your life in your hands,
not on your back,
as they come in handy all your life.

Catch them few times carefully,
so that you can teach yourself
to be careful to duck
at any trick knifes coming your way.

They stab you just to step over you,
for their steps can't keep up with yours.

Keep the sprint forward,
the spirits up,
in spite of any pits you may trip on.

Run! Keep running,
while you can,
day and night.

The electrons in your body,
all around you,
and all over the vast universe
are circling around the nucleus
non-stop, for over few billion years.

Is that zillion zillion circles
of gazillion atoms?

The world has never stopped running
from the first tick of the clock,
from the first cry from its cradle of conception
of the divine mother, mother of all,
mother who wants the baby
young and playful forever.

Virgin mother!
Mother of my immaculate conception!
Feed me your nectar forever,
your unending affection,
of selfless love.

ARE WE RICH?

ARE WE RICH?
KRS Murthy

Dad! All my friends were discussing today
To know when we have really become rich

To be sure that we are rich is not easy at all
As I do not know what is being rich anymore

Are you rich when you have lots of money?
Do not need any more money to say enough

Just like I have felt that I can't eat any more
In a full stomach after a really tasty big meal

Do you ever get enough to say no more please?
How can I my find a stomach to put my money?

That just refuses to eat any more money to force feed
The tummy warns with a hurt really badly, when I ignore

When I feed anymore by force clearly spells pain
Just enough is happiness, and too much really means less

Less happiness than before, and the money doctor
Will cruelly prescribe fasting for the rest of your life

If you still ignore the doctor, you will win a ticket
A free ticket to a non-stop bullet train to the grave

Always had this question even when I was a little girl
Never asked this question as you were busy being rich

Is it too late now to ask kneeling in front of your grave?
For you can't answer while you are taking a long rest

You probably never knew whether you were rich enough
For your parents never taught you the important lesson

Born unlucky with my stomach full as you ate for me
Probably enough for my children and grandchildren too

Let me go on an immediate workout regiment to give away
Give to all who were lucky born hungry to parents who ate

Bred a generation of hungry souls who knew when to quit
Walk away from the dinner table before it is too much

Give away to the needy, and beg for their blessing on me
For my generation to regain the precious healthy hunger

Embrace the ritual of the sacred penance of giving myself
Give as much as my soul pleads me to do, and do listen

Treasure the sharing of my fortunes, and gain in sharing
Like palming water from the vast ocean, just to return it

Back to the vastness to feel the fortune of playing the role
Of a giver and take the proud bow with the divine gratitude

NEVER LET THE SECRETS DRIFT

NEVER LET THE SECRETS DRIFT
KRS Murthy

Where did all my dearest dreams of yesterday go?
Had hid it secretly in my own colossal sand castle

Born to many hours of labor of love, day and night
Sun dipping down the horizon has been my witness

The dream castle I built was really very big and tall
Big strong fort I built around it made me a promise

Not to let any friend or enemy to come inside or prowl
Promise I heard when I mixed all the sand for the fort

With sea shells, fish bones, and stones, small and big
Glued them with my own spit, hopes and secret wishes

Tender kiss and a secret whisper to every handful of sand
Will never utter the secret, as dreams are meant to be ours

Never to be told to any soul, however close, it may pretend
For any reason at all, and not even the colorful butterfly

Never the pretty birds that chirp all day at each other
Birds have never known at all the art of keeping a secret

Do not let the innocent looking buds know your secrets,
For they will open to blossom at dawn and let the bees

Bees will always buzz all your secrets away, to each other
While visiting from flower to flower in the whole garden

Many times wander to all other gardens around the forest
Not even the ants following each other up and down the trees

"A secret that is let out to drift is no more a secret"
Guard it from everyone who may try to eves drop on the mind

As my mother always used to say, as I sat sad on her lap
When my mind drifted away to fly with the dream angels

Seeing my face looking down, and couple drops in my eyes
"Never let your soul cry when your dreams wash away "

When the tall waves flirt with the shore to kiss the sand
Quietly recede as if nothing ever happened, to come again

Many of your dreams are meant to remain only as dreams
For they are your own secrets, in your soul, to treasure

For they are purer and prettier, like a virgin, unseen
Hide it, and guard it, to quietly let it all wash ashore

Back into the vast ocean that hides everyone's secrets
The secrets anyway really came from the depths of the ocean

NASTY SECRET ABOUT ME

NASTY SECRET ABOUT ME,
AT LAST!

KRS Murthy

Let me come out right now
to tell you the real secret truth,
never told any one before.

My lips are sealed to tell anyone
I ever come across just a moment after
I finish pouring my heart to you.

Keep it our little secret,
for I trust you a lot
like my own soul,
that hides all my dirt.

Get the truth about me once for all.
Laugh at me all you want.
Spit on my face hundred times.
Ridicule me for all my life.

Firstly, I am a big fool,
like the circus clown.
I really mean it.
There is nothing in my brain.
It is empty like the vacuum.

I know, I made a fool of you.
All of you in the whole world.

It is all for play, and mind game.
I smile for no reason,
even looking at a wall.
I do not care if it is white or black,
painted with stripes or colors.

Laugh loud just to have fun.
Laugh every way I can.
I have no mercy for anyone.
Laughing is my main game.

I like to play like a little kid
with letters, words and sentences.
Throw them in all places.
Place them all in a box.

Circle my poetic wand.
Clap in rhythm, sometimes.
Act like a fool, just to get laughs
Jumble, juggle and giggle.

Quickly pull out a meaning
like a word magician.
If I can open some minds,
see their face bud bloom
like the morning flower,
that is enough applause I seek.

I have no special skills,
never went to the school,
the clowning school,
never known a teacher.

Never took any test
as it only has four letters.
Never cared for IQ quizzes
as it is only a number.

Let me also tell you
the secret recipe
for the gourmet poetry
I concoct, almost everyday.

Need to do your own cooking
to see it to really believe.
Gourmet with tantalizing aroma
ready to make instant love
to your mind palette.

Just use only 26 letters.
Throw them anyway you want.

Keep smiling all along,
whether it makes any sense
or even when it spells non-sense!

Just watch the rainbow come out,
the shapes of different meanings
dancing in front of you
like a virgin court dancer.

Shapely virgin invoked
from simple ingredients.

Make sure you hold her tight
close to your soul in embrace
reward her with a sensuous kiss,
a sweet kiss in your own special way
and a warm hug before saying good-bye
before you send her to everyone else
to share her beauty for all to see.

Admiration love ritual
with genuine music
is all the angel asks from you
and all who court her
to carry you on her wings
on the elegant flight of
the divine orgasmic ecstasy.

ABSOLUTION ASSURANCE

ABSOLUTION ASSURANCE
KRS Murthy

I remember the times my mind vomited
eruptions of stinking gooey green liquid
every time I remembered how you made
me feel by rejecting me on my rainy days.

My soul sobbed with cries and hick ups
thinking of the unbearable sad moments
you turned your head away with no pity
ignoring my severely torn bleeding heart.

Nightmares chased me in broad daylights
soaking me wet inside my own sweat pool
sinking my confidence deep submerged
in desperation robbing all my zeal oxygen.

All my hopes were buried in a graveyard,
closed tight in a coffin of total insecurity
in an anonymous tomb with no capstone
guaranteed of zero chance of resurrection.

You have no reason to hide in the fortress
safely hunkered down in the cruelty castle
laying flat deep in your cowardly bunkers
scared for your life of my revenge bullets

I bare no arms even for my own protection.
Locked my anger long ago with an oath seal,
never to quench even the simplest revenge,
only to fly high with pardoning pair of wings.

Oath to shelter even the snakes that bite hard,
embrace the enemy with a warm friendly hug,
wear the forgiveness smile always on my face,
shed the pain skin to gain a tolerance within.

WAKE UP CALL

WAKE UP CALL
KRS Murthy

Truth woke me up with an alarm
with a very loud scream,
big blow to my head
throwing cold water on the face
of my false dreams of the future.

Dream that levitated my life
Over the air lacking of oxygen
Suffocating my brain of any logic.

Can't go back to sleep,
but not really awake

EXPRESS LOVE

EXPRESS LOVE
KRS Murthy

Last week was the dinner meeting,
an hour and a half.
This week's long walk
for half hour on the beach.

You have already walked into my heart
beating it very fast,
when we shared the same blanket
with nothing to cover your breast.

Our skins behaved like lifelong friends.
Two hour warm up of our friendship
has melted our hearts into the same pot
blinding our mind
tricking them to package it
as two long weeks of relationship.

Willing bodies have made way for
express love.

What does future hold
for the baby we just made?

Turbo love?
Drive-in romance?
Takeout love lunch?
Nanosecond orgasms?

Strobe light love affairs,
can hypnotize gene welding,
we just enjoyed.

Rolled a red carpet
to the new universe
of rocket age gene launches
with a liftoff to an assembly line
womb impregnations with
love illusions.

Who would want the real thing,
if it is not a fashion anymore!

MADE FOR EACH OTHER

MADE FOR EACH OTHER
KRS Murthy

She asked him
How long?
How big?
How strong?
How firm?

He was proud to answer

It can grow as long as you want,
So long that I have stopped measuring
After a count of twelve
After a count of 12 years
Our love has been still growing, Dear

It is bigger than everything I know
It is so big that my mind only thinks
Of the same thing
All of 24 hours in a day
Our love is a full day affair, Dear

It is very firm and strong
So much that it can penetrate through any door
Any small space, however small
Before you can count three
Our love will remain firm very long, Dear

He asked her
How deep?
How large?
How heavy?
How soft?

She had a sweet response

It can become as deep as you want
So deep that never you could touch its bottom
Never you could probe enough
For every hour on the hour
Deep love is a pleasure, Darling

It is very large and heavy
So large that you can't hold it in a hand
Never you could cover it well
With two hands, and a kiss
Keep fondling it a little longer, Darling

It is very soft and tender
So soft that a bee in a flower only knows
Savor the honey slow and steady
With two lips and one tongue
Keep the love going even while screaming

ಭಾನುವಾರ, ಮೇ 16, 2010

ಮನದಲಿ ಹಂಸ ಗೀತೆ

ಮನದಲಿ ಹಂಸ ಗೀತೆ
ಕೆ. ಆರ್. ಎಸ್. ಮೂರ್ತಿ

ಹಂಸ ಗೀತೆಯು ಮನದಲ್ಲಿ ಗುನುಗಿತಾ ಗಾ
ಗ ಪ ನೀ ... ಸ ನಿ ಪಾ ಗ... ನಿ ರಿ ಗಾ

ಗಣಪ... ಗ ನಿ ಪಾ... ಪಾ ಗ ರಿ ಗ ಪ
ನೀ ನ...ಪ.. ಪರಿ ಪರಿ ನೀ..ನ..ನಾ ಪ

ನೀ ನ.. ನ..ಪೊರೆ ಗೌರೀ ಸುತ ಗರಿ ಗರಿ
ನೆರೆ...ನಿರಿ..ನಿರಿ ನೆರೆ ನಂಬಿದೆ ನೋ..ನಿರಿ

ಗಾನ ನಿನಗಿದೋ ಗಣಪ..ಗಾ ನೀ ಪಾ ನೀ
ಘನ ಮೂರುತಿ ನೀ ನೋ ಸರಿ ಸರಿ ಪಾ ನೀ

ಗ ಸ . ಗ ಪ . ಗ ರಿ . ಗ ಪ ಪ ನಿ ಸ
ಸ ರಿ ಗ ಪ ನೀ ಸಾ.ಸಾ ನಿ ಪ ಗ ರಿ ಸ

ಹೆಂಡತಿಯ ವಟ ವಟ ಅಷ್ಟೋತ್ತರ

ಹೆಂಡತಿಯ ವಟ ವಟ ಅಷ್ಟೋತ್ತರ
ಕೆ. ಆರ್. ಎಸ್. ಮೂರ್ತಿ

ಪಕ್ಕದ ಮನೆಯವಳು ರುಕ್ಕು ಫಕ್ಕನೆ ನಕ್ಕಾಗ ಬಿಂಕದಲಿ
ತನ್ನ ರವಿಕೆಯನು ಸರಿಪಡಿಸಿ ಸಡಲಿಸಿದರೆ ಚಕ್ಕಂದದಲಿ

ಮುಖವಿಕ್ಕಿ ರವಿಕೆಯ ಸಂದಿಯಲಿ, ಸೊಂಟ, ಹೊಕ್ಕಳಿನ ಕೆಳಗೂ
ಸೀರೆಯ ನೆರಿಗೆ ಮೇಲೆ ಕಣ್ಣು, ಚಕ್ಕನೆ ಹೊಕ್ಕುತ ಸೆರಗಿನ ಒಳಗೂ

ಹುಡುಕುವಿರಿ ಎಲ್ಲ ಕಡೆ ಸಕ್ಕರೆಯ ಅರಸುವ ಇರುವೆಯಂದದಲಿ
ತುಟಿಯನ್ನು ಕಚ್ಚಿ ಪೆಚ್ಚುಪೆಚ್ಚಾಗಿ ಕಣ್ಣಿಕ್ಕಿ ತದೇಕ ಚಿತ್ತದಲಿ

ಪದ್ದು ಬೀದಿಯಲಿ ಬಂದಳು ಎಂದರೆ ಒಡನೆ ಬಿದ್ದೂ, ಎದ್ದೂ,
ಹಾರಿ ಓಡುವಿರಿ ಪುಟ್ಟಾ ಬೆಕ್ಕಾಗಿ ಸದ್ದೂ ಮಾಡದೆ ಕದ್ದು, ಕದ್ದು

ಚಂಪಳ ಕೆಂಡ ಕೆಂಪಾದ ಅಧರವು ಬಿದ್ದೊಡನೆ ಕಣ್ಣಿಗೆ
ತಾರಾಡುವಿರಿ ಜೊಲ್ಲನು ಸುರಿಸಿ ಸುತ್ತು, ಸುತ್ತು ತಿರುಗಿ

ಮಧುವನು ಅರಸುವ ದುಂಬಿಯಂದದಿ ಝೊಂಯೆಂದು
ಹಾರಿ ಓಡುವಿರಿ ಬರಿಯ ಕಾಲಿನಲೇ, ಚಪ್ಪಲಿಯ ಬಿಟ್ಟು

ಸುಮಳ ಘಮ ಘಮ ವಾಸನೆಯು ಮೂಗಿಗೆ ಬಡಿದಾಗ
ಸಿಂಹಿಣಿಯ ಆಘ್ರಾಣವನು ಹಿಂಬಾಲಿಸುವ ಸಿಂಹವಾಗಿ

ಕಮಲಳ ಮುಖವನು ಕಂಡೊಡನೆ, ಹಲ್ಲನ್ನು ಗೀಚುವಿರಿ
ಬಾಲವಿಲ್ಲದ ಕೋತಿಯಂತಿರುವ ನಿಮ್ಮ ಮೂತಿಯು ಅರಳಿ

ವರ್ಷಳ ಆಸ್ತಿ ಬಲು ಜಾಸ್ತಿ, ಅಪಾರವಾದ ಆಕರ್ಷಣೆ
ಹರುಷ ಹೆಚ್ಚಾಗಿ, ಹಿಂಬಾಲಿಸುವಿರಿ ಅವಳ ಹಿಂದೆ, ಹಿಂದೆ

ವಸುಧಳ, ಅವಳ ತಂಗಿ ಸುಧಳ ಸುಮಧುರ ಕಂಠವು
ನಿಮ್ಮ ಕತ್ತೆ ಕಿವಿಯನು ಆನೆ ಕಿವಿಗಿಂತ ಮೀರಿಸುವುದು

ವೈದೇಹಿಯ ವೈಯ್ಯಾರ, ತಾರಳ ಥಳುಕು, ಸರಳಳ ಭಾಳ ತಳ
ಭಾಗ್ಯಳೇ ಭೋಗ್ಯ, ಭಾರತಿಯು ರತಿ, ತುಂಟಿ ರೀಟಳು ಬಹಳ

ಲಲಿತಳ ಲಲಿತ ಕಲೆ, ರಾಗಿಣಿಯ ಮುಂದೆ ನೀವು ಪುಟ್ಟ ಗಿಣಿ
ಅನುಪಮಳ ಅನುಪಮ ಅನುರಾಗ, ಪ್ರೇಮಳೇ ನಿಮ್ಮೆಲ್ಲ ಪ್ರೇರಣೆ

ಬಲಿಯಾಗಿ ಪ್ರತಿಭಳ ಅತಿಯುಕ್ತಿಗೂ, ವನಿತಳ ಅತಿವಿನಯಕ್ಕೂ
ಸೋಲುವಿರಿ ವಾಸಂತಿಯ ವಿನಂತಿಗೂ, ನಯನಳ ನಯವಂತಿಕೆಗೂ

ಸ್ಮಿತಳ ಹುಸಿ ಒಲವು ಆಕಸ್ಮಿತ, ಮಲ್ಲಿಕಳು ತಾತ್ಕಾಲಿಕ ಸಾಕಲ್ಲವೇ
ಗೀತ ಎತ್ತ ಪೋದರೂ ಅತ್ತಲೇ ಮೆತ್ತಗೆ ಹೊರಡುವಿರಿ ಮಾತಿಲ್ಲದೆಯೆ

ಕಾವೇರಿಯ ದರ್ಶನಕೆ ನಿಮ್ಮ ಮೈ ನಿಮಿಷದಲಿ ಬಿಸಿಯೇರುವುದು
ಗೋದಾವರಿಯು ಹಾದಿಯಲಿ ಬಂದರೆ ಸೆಟೆದು ನಿಮ್ಮ ಗರಿಗೆದರುವುದು

ಅಂಜನ, ರಂಜನ, ಮಂಜುಳ, ಕಾಂಚನ ಎಲ್ಲರೂ ಚತುರೆಯರೇ
ಅರ್ಚನ, ಪ್ರಾರ್ಥನ, ಕೀರ್ತನ, ಅರ್ಪಣರ ಭಜನೆ ಮಾಡುವುದೇ?

ಶ್ರಧ್ಧಳ ಮೈಮೇಲೆ ಅತಿ ಶ್ರಧ್ಧೆ, ವೀಣಳೇ ನಿಮ್ಮ ಕಾಜಾಣ
ಪ್ರೇರಣಳೇ ನಿಮ್ಮ ಜೀವನದ ಸಕಲ ತರಹದ ಆಶಾ ಪ್ರೇರಣೆ

ಸಾಲ ಕೇಳುವ ಮಾಲಳಿಗೆ ಕೊಡುವಿರಿ, ಮೋಸ ಮುಕ್ತಳ ಅತೀ ಭಕ್ತಿ
ಅಂಜುವು ಅಂಜದೆಯೇ ಕೇಳುವಳು ಕಾಂಚನ, ಆಟದ ನಳಿನಿ ಅಳುಮುಂಜಿ

ಕೀರ್ತಿಗೆ ತೀರ್ಥವನು ಕೊಡಿಸುವಿರಿ, ನಿರ್ಮಳದು ಮರ್ಮದ ಮಾತು
ವಿಮಲಳು ವಿಮೆಗೆ ಪೀಡಿಸುವಳು, ಶಾರದೆಯದು ಪರದೆ ತೂತು

ರಮಳು ಬಾರಮ್ಮ ಎಂದರೆ ಬರುವಳು, ಹೇಮಳದು ಅತಿ ಕಾಮ
ಲೀನಳು ಹೀನ ಮನದವಳು, ಮೋನಳದು ಬರಿ ಸುಳ್ಳು ಮೌನ

ಇವರೆಲ್ಲ ನಿಮಗೇಕೆ ಬೇಕು? ನಾನೊಬ್ಬಳಿದ್ದರೆ ಸಾಕಲ್ಲವೇ?
ಹೆಸರು ಗುಂಡಮ್ಮ ಆದರೇನಾಯಿತು? ನಾನು ಹೆಂಡತಿಯಲ್ಲವೇ?

ಚಂಡಿತನ, ಮೊಂಡುತನ, ಭಂಡತನ, ಸಕಲಕೂ ಖಂಡನ
ಚರಂಡಿಮನ, ಧಾಂಡಿಗತನ, ಮುಷಂಡಿತನ, ಜೀರುಂಡಿತನ

ಗೂಂಡಾಗಿರಿ ಮಾಡುವ, ಗುಂಡು ಪ್ರಿಯೆ ಗುಂಡೋದರಿ ನಾನಾದರೇನು?,
ಆಂಜನೇಯನ ತಂಗಿ ನಾನಾದರೇನು? ಆ ತರುಣಿಯರೆಲ್ಲ ಏಕೆ ಬೇಕು?

ಶನಿವಾರ, ಮೇ 15, 2010

ಮಾಟಗಾತಿಯ ಅಡಿಯಾಳು ನಾನು

ಮಾಟಗಾತಿಯ ಅಡಿಯಾಳು ನಾನು
ಕೆ. ಆರ್. ಎಸ್. ಮೂರ್ತಿ

ಚಿನ್ನದ ಗುಂಗುರು ಕೂದಲಿನ ಚಿಂಗಾರಿಯೇ
ನನ್ನೆದೆಗೇ ಗುರಿಯಿಟ್ಟಿಹೆ ಹೊನ್ನ ಕಳಶದ್ವಯ

ತುಂಬು ಚೊಂಬುಗಳು ಎಗರಿ ಕುಣಿದರೂ
ಹನಿಯೂ ಚೆಲ್ಲದೆಯೇ ನಡೆಯುವ ಚಮ್ಮಕ್ಕು

ಗುಂಡು ಗುಂಡನೆಯ ಚೆಂಡುಗಳನು ಕಂಡು
ಗುಂಡಿಗೆಯೊಳಗೆ ಚಂಡೆಯನೇ ಬಡಿಸುತಿವೆ

ನಡುವೆಯ ಕಟಿ ಮಾತ್ರ ಎರಡೇ ಕೈಗಳಲಿ
ಪೂರ ಹಿಡಿಯುತ ಬಂಧಿಸುವಷ್ಟು ಸಪೂರ

ನೀಳ ದಟ್ಟ ಜಡೆಯು ಅತ್ತಿತ ಓಲಾಡುತಿರೆ
ಕುಚ್ಚಿನ ಭಾರ ಬಲವಾಗಿ ಆಂದೋಲಿಸುತಿದೆ

ನನ್ನ ಕಣ್ಣುಗಳು ಆಂದೋಲನದ ಮಾಯಕ್ಕೆ
ಸಿಕ್ಕಿಹಾಕಿ ಮನಕೆ ಮಾಟವ ಮಾಡಿಹಾಕಿದೆ

ಮಾಯಾವಿನಿಯೇ! ಮನಕೆ ಮಾಟದ ಬಲೆಯ
ಎರಚಿಹ ಮೋಹಿನಿಯೇ! ನಿನ್ನಾಳು ಹುಳು ನಾನು

ನಿನೆತ್ತ ನಡೆವತ್ತ ಮೋಡಿಯಲಿ ಹಿಂಬಾಲಿಸುವೆನು
ಅಡಿಯಾಳು ದಿನ ಇರುಳು ಮುಡುಪು ಇಡುವೆನು

ಪ್ರತಿಯುಸಿರು ನಿನಗೆಂದೇ ವ್ರತವ ಹಿಡಿದಿಹೆ ನಲ್ಲೆ
ನಿನ್ನವನು ನಾನು ಇದು ಆಣೆ, ನನ್ನವಳು ಆಗುವೆ ತಾನೆ?

ಮೈಯೆಲ್ಲ ಸುಟ್ಟು, ಸರ್ವ ಭೂತಗಳೆಲ್ಲ ಹಿಡಿ ಬೂದಿ
ನಿನಗೆಂದೇ ಮಾಡುವೆನೇ ನನ್ನನು ನಾನೇ ಅಗ್ನಿ ಸಮರ್ಪಣೆ

ಶುಕ್ರವಾರ, ಮೇ 14, 2010

ಪರಿಚಿತ್ರ ನಿರೂಪಣಾ ಪ್ರಕಾರಗಳು

ಪರಿಚಿತ್ರ ನಿರೂಪಣಾ ಪ್ರಕಾರಗಳು

ಸ್ವಗತ ಸಾಹಿತ್ಯ ಪ್ರಕಾರ

ಸ್ವಗತ ಕಥೆ / ಕಾದಂಬರಿ: ಈ ಪ್ರಕಾರದಲ್ಲಿ ಲೇಖಕನು ತನ್ನ ಕೃತಿಯ ಪೂರ್ತಿ ಸ್ವಗತದಲ್ಲೇ ಬರೆಯುತ್ತಾನೆ. ಉದಾಹರಣೆಗೆ, ಒಂದು ಕಥೆಯನ್ನು ಹೇಳಬೇಕಾದರೆ, ಕಥೆಯ ನಿರೂಪಣೆ ಲೇಖಕನ ಸ್ವಗತ ಅಥವಾ ಕಥೆಯ ಒಂದು ಪಾತ್ರದಲ್ಲಿ ಸ್ವಗತ ಶೈಲಿಯಲ್ಲಿ ಮಾಡುತ್ತಾನೆ. ಈ ಸಾಹಿತ್ಯ ಪ್ರಕಾರ ಸುಲಭ ಪ್ರಕಾರವಲ್ಲ; ಲೇಖಕನ ಕಥಾ ನಿರೂಪಣಾ ಶಕ್ತಿಗೆ ಸವಾಲು ಹಾಕುತ್ತದೆ; ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ, ಲೇಖಕನಿಗೆ ಸ್ರಿನಷ್ಟಿಶೀಲತೆಯನ್ನು ಉಪಯೋಗಿಸಲು ಮತ್ತು ಪ್ರಯೋಗಿಸಲು ಆ ಪ್ರಕಾರವು ಬಹಳ ಅವಕಾಶಗಳನ್ನು ಒದಗಿಸುತ್ತದೆ. ಕಾದಂಬರಿಯಲ್ಲಿ ಕೂಡ ಸ್ವಗತ ಪ್ರಕಾರವು ವಿಭಿನ್ನತೆಯನ್ನು ಒದಗಿಸುತ್ತದೆ.

ಸ್ವಗತ ಕವನ: ಕವನದಲ್ಲಿ ಸ್ವಗತ ಪ್ರಕಾರವನ್ನು ಬಹಳ ರಸವತ್ತಾಗಿಯೂ, ಚಾಣಾಕ್ಷತೆಯಿಂದಲೂ ಉಪಯೋಗಿಸಿಕೊಳ್ಳಬಹುದು.

ಸ್ವಗತ ನಾಟಕ: ನಾಟಕದ ಪೂರ್ತಿ ಎಲ್ಲ ಪಾತ್ರಗಳೂ ಸ್ವಗತದಲ್ಲಿ ಮಾತ್ರ ಮಾತನಾಡಿಕೊಳ್ಳಬೇಕು; ಒಬ್ಬರಿಗೊಬ್ಬರು ಮಾತನಾಡುವ ಹಾಗಿಲ್ಲ.

ಏಕಪಾತ್ರಕಾಯಪ್ರವೇಶ: ಈ ಪ್ರಕಾರದಲ್ಲಿ ಲೇಖಕನು ಕವನ, ಕಥೆ, ಕಾದಂಬರಿ ಮೊದಲಾದವುಗಳಲ್ಲಿ ಒಂದು ಪಾತ್ರದ ಮೂಲಕ, ಆ ಪಾತ್ರವು ತನ್ನ ಕಥೆಯನ್ನು ಹೇಳಿಕೊಳ್ಳುವಂತೆ ಬರೆಯಬೇಕು. ಉದಾಹರಣೆಗೆ, ಮಹಾಭಾರತವನ್ನು, ಅಥವಾ ಅದರ ಒಂದು ಅಂಕವನ್ನೋ, ಘಟನೆಯನ್ನೋ, ಕರ್ಣನ ದೃಶ್ಟಿಯಲ್ಲಿ ಅಥವಾ ಕರ್ಣನೇ ಹೇಳಿದಹಾಗೆ ಬರೆಯುವುದು. ರಾಮಾಯಣವನ್ನು, ರಾವಣನ ದೃಷ್ಟಿಯಲ್ಲೋ, ಹನುಮಂತನ ದೄಷ್ಟಿಯಲ್ಲೋ ಹೇಳುವುದು. ಮುಖ್ಯ ಪಾತ್ರದಲ್ಲಿಯೂ ಹೇಳಬಹುದು; ಒಂದು ಸಣ್ಣ ಪಾತ್ರದ ದೃಷ್ಟಿಯಲ್ಲಿಯಾದರೂ ಹೇಳಿ ಕಥೆಗೆ ಕಳೆಯನ್ನು ಕಟ್ಟಬಹುದು.

ಲೇಖಕನ ಅನಿಸಿಕೆಗಳು

ಲೇಖಕನ ಅನಿಸಿಕೆಗಳು

ಲೇಖಕನು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬೇರೆ, ಬೇರೆ ರಚನೆಗಳನ್ನು ಮಾಡಬಹುದು. ಆದರೆ, ಲೇಖನವನ್ನು ಬರೆಯುವ ಮುಂಚೆ, ಲೇಖನವು ಪೂರ್ತಿ ರೂಪಗೊಳ್ಳುವ ಮೊದಲು ಲೇಖಕನ ಅಂತರಂಗದಲ್ಲಿ ಆಗುವ ಅನಿಸಿಕೆಗಳನ್ನೂ, ಹಾಗೂ ರಚನೆಗೆ ಮುಂಚೆ, ರಚನೆಯ ಸಮಯದಲ್ಲಿ, ರಚನೆಯ ನಂತರ ಆಗುವ ಅನಿಸಿಕೆಗಳನ್ನು ಸ್ವಾರಸ್ಯವಾಗಿ ಹೇಳುವುದು ಈ ಪ್ರಕಾರದ ವೈಶಿಷ್ಠ್ಯ. ಇದನ್ನು ಸಾಹಿತಿಯೇ ಬರೆದಿಡುವುದು; ಈ ಪ್ರಕಾರವು ಲೇಖಕನೊಡನೆ ಸಂದರ್ಶನ, ಸಂಭಾಷಣೆಗಳಲ್ಲಿ, ಸಂದರ್ಶನವನ್ನು ನಡೆಸುವವರು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಉತ್ತರಗಳನ್ನು ಕೊಡುವ ರೀತಿ ಇದಕ್ಕಿಂತ ಭಿನ್ನ ರೂಪದ್ದು. ಈ ಪ್ರಕಾರದಲ್ಲಿ, ಲೇಖಕನೇ ತನ್ನ ಮನಸ್ಸನ್ನು ತಾನೇ ತೋಡಿಕೊಳ್ಳುತ್ತಾನೆ. ಹೀಗೆ ತೋಡಿಕೊಳ್ಳುವುದು ಬರೆಯುವ ಲೇಖಕನಿಗೂ ಪ್ರಯೋಜನಕಾರಿ; ಲೇಖಕನ ಮನಸ್ಸಿನೊಳಗೆ ಪಯಣಿಸುವ ಸದಾವಕಾಶ ಓದುಗರಿಗೆ; ಇಂತಹ ಇಣುಕುನೋಟಕ್ಕೆ ದಾರಿಮಾಡಿಕೊಡುವವನು ಸ್ವತಃ ಲೇಖಕನೇ, ಯಾರ ಸಂದರ್ಶನಾ ಪ್ರಶ್ನೆಗಳ ಬಾಣಗಳಿಗೆ ಒಳಗಾಗದೆಯೇ, ಲೇಖಕನು ತನ್ನ ಮನಃ ಪೂರ್ವಕವಾಗಿ ಬರೆದಿಡುತ್ತಾನೆ. ಲೇಖಕನಿಗೆ ಇಷ್ಟವಾದರೆ, ತನ್ನ ಅನಿಸಿಕೆಗಳನ್ನು ಬಾಯಲ್ಲಿ ಹೇಳಿ ಧ್ವನಿಮುದ್ರಿಸಬಹುದು.

Soliloquy as a Literary Genre

Dear Friends,

(I have appended the English version to this e-mail)

I have developed concepts for few new genres / sub-genres in literature.
Here is a brief overview of the Soliloquy genre in English. I have been
writing about it in Kannada also. Please give me your thoughts / feedback
from the perspective of authors.

Soliloquy as a genre

In this genre, the complete fiction is written in soliloquy; the fiction
would read as if someone is talking to himself / herself. A special
implementation version would be an author writing in his soliloquy,
narrating the fiction from his perspective, yet whole fiction limited to
soliloquy compositions. To a novice, this may sound like biography. It is
important to note that biography is not meant to be a fiction, but a
documentation of a person’s life story. It is also important to realize that
biography is written by an author about another person’s life, where as
autobiography is really written about oneself. The soliloquy as a genre
particularly applies only to fiction. Even though the soliloquy fiction
could be written by the author, narrating his reactions, feelings, plans and
tribulations on the topic, a more effective use of the power of soliloquy is
to write the story as if it is narrated by one of the characters. The author
in the role of a chosen character of the fiction would be relating the
myriads of diverse feelings like thoughts, pains, pleasures, worries, hopes,
fears, apprehensions, recollections of events and feelings, internal mental
debates and value judgments through out the narration of fiction.

This genre would be unique with its own advantages and difficulties. How
would a person, who has never heard of the genre called ‘drama’, feel if the
drama genre uses only dialogues, and any thing and everything that the
dramatist has to convey to the readers / audience should be in a dialogue
format to be delivered by a character in the fiction. It may look like
limitation!

This genre would be good for poems and short stories.

ಸತ್ಯ ಬೇಕೇ? ಸುಳ್ಳು ಬೇಕೇ?

ಸತ್ಯ ಬೇಕೇ? ಸುಳ್ಳು ಬೇಕೇ?
ಕೆ. ಆರ್. ಎಸ್. ಮೂರ್ತಿ

ಸತ್ಯಕ್ಕೆ ಬೆಲೆಯುಂಟು, ಒಮ್ಮೊಮ್ಮೆ ಬೆಲೆಯಿಲ್ಲ
ಸತ್ಯವನು ಕೇಳುವವರಿಗೆ, ಸತ್ಯವಾವುದೋ, ಅಸತ್ಯವಾವುದೋ ತಿಳಿಯ ಬಲ್ಲುದೆ?
ಸತ್ಯವನ್ನೇ ನಿತ್ಯ ಹೇಳುವವರನ್ನು ಕೆಳುವವರಾರೂ ಇಲ್ಲ.

ಅಸತ್ಯಕ್ಕೆ ಒಮ್ಮೆ ಮಾತ್ರ ಬೆಲೆ ಕೊಟ್ಟಾರು.
ಅಸತ್ಯದಿಂದ ಕೈ ಸುಟ್ಟುಕೊಂಡವರು, ಬಿಸಿಹಾಲು ಕುಡಿದ ಬೆಕ್ಕಿನ ಮರಿಯಂತೆ ಅಲ್ಲವೇ?
ಸುಳ್ಳು, ಅದರ ಮೇಲೆ ಮತ್ತೊಂದು ಸುಳ್ಳು, ಪೇರಿಸಿ, ಪೇರಿಸಿ, ಕಂತೆಯೊಂದನ್ನೇ ಕಟ್ಟಿ ಕಥೆಗಳನ್ನು ಹೇಳುವವರನ್ನು, ಅಡಿಪಾಯವಿಲ್ಲದೆ ಅರಮನೆಯನ್ನೇ ಕಟ್ಟುವವರನ್ನು ಕಿವಿಗೊಟ್ಟು ಕೇಳುವವರು ಉಂಟೆ?
ನಿತ್ಯ ಸತ್ತವರಿಗೆ ಅಳುವರಾರೂ ಇಲ್ಲ, ನಿತ್ಯ ಸುಳ್ಳಿನ ಅರಮನೆ ಕಟ್ಟುವವರಿಗೆ ಅದರ ಗೃಹ ಪ್ರವೇಶ ಮಾಡಿ ಭಾರಿ ಸುಳ್ಳಿನ ಔತಣ ಹಾಕಿದರೂ ಉಣ್ಣುವವರಿಲ್ಲ.

ಒಂದೊಂದು ಸಾರಿ ಸತ್ಯ, ಇನ್ನೊದು ಸಾರಿ ಸುಳ್ಳು ಹೇಳಿದವರನ್ನು ಕೇಳುತ್ತಾರೆಯೇ?
ಕೇಳಿದರೂ ನಂಬುತ್ತಾರೆಯೇ? ಆಗ ಸತ್ಯಕ್ಕೂ ಬೆಲೆಯಿಲ್ಲ; ಸುಳ್ಳಿಗೂ ಬೆಲೆಯಿಲ್ಲ
ಬೇಳೆಕಾಳು ಬೆಂದಿದೆಯೋ, ಇಲ್ಲವೊ ಎಂದೂ ನೋಡುವರು ಯಾರೂ ಇರುವುದಿಲ್ಲ. satya

ಸುಳ್ಳನ್ನು, ಸತ್ಯದ ತಲೆಯಮೇಲೆ ಹೊಡೆದಂತೆ ಹೇಳಿದರೆ ಹೇಗಿರುತ್ತದೆ?
ಸತ್ಯವನ್ನು ಹೇಳಿ ಸುಳ್ಳನ್ನು ಹೂಳಿದರೆ ಹೇಗೆ? ಸರಿ, ಯಾರ ಸುಳ್ಳು, ಯಾರ ಮುಂದೆ ಹೂಳುತ್ತಿದ್ದೀರಿ ಜೋಕೆ;
ನಿಮ್ಮನ್ನೇ ಹೂಳಿಹಾಕಿಬಿಟ್ಟಾರು!

ಪರಮಾಣು ಕವಿತೆಗಳು

ಪರಮಾಣು ಕವಿತೆಗಳು

ಕೆ. ಆರ್. ಎಸ್. ಮೂರ್ತಿ

ನಾನು ಹೊಸ ಪ್ರಕಾರದ ಕವಿತೆಗಳನ್ನು ಪ್ರಾರಂಭಿಸಿದ್ದೇನೆ. ಈ ನವೀನ ಪ್ರಕಾರದ ಹೆಸರು: ಪರಮಾಣು ಕವಿತೆ.
ಈ ಪ್ರಕಾರದಲ್ಲಿ ನಾನು ಉಪ ಪ್ರಕಾರಗಳನ್ನು ಗುರುತಿಸಿದ್ದೇನೆ. ಈ ಉಪ ಪ್ರಕಾರಗಳು:

೧. ಕೆಲವೇ ಪದಗಳ ಕವಿತೆ
೨. ಒಂದೇ ಪದದ ಕವಿತೆ
೩. ಕೆಲವೇ ಅಕ್ಷರಗಳ ಕವಿತೆ
೪. ಒಂದೇ ಅಕ್ಷರದ ಕವಿತೆ
೫. ಚಿನ್ಹೆಗಳ ಕವಿತೆ
೬. ಶೂನ್ಯ ಕವಿತೆ
೭. ಮಾಯಾವಿ ಕವಿತೆ
೮. ಸಂಭಾಶಣಾ ಪರಮಾಣು ಕವಿತಾ ಮಾಲೆ - ಈ ಕವಿತಾ ಮಾಲೆಯಲ್ಲಿ ಕವಿಯು ಅನೇಕ ಕವಿತೆಗಳನ್ನು ಸಂಭಾಷಣೆಯ ರೀತಿಯಲ್ಲಿ ಪೋಣಿಸುತ್ತಾನೆ.
೯. ಪರಮಾಣು ಕವಿತಾ ವಿನ್ಯಾಸ - ಈ ಪ್ರಕಾರದಲ್ಲಿ ಅನೇಕ ಉಪ ಪ್ರಕಾರದ ಪರಮಾಣು ಕವಿತೆಗಳನ್ನು ವಿಶೇಷ ವಿನ್ಯಾಸಗಳಲ್ಲಿ ಜೋಡಿಸಬಹುದು. ಓದುಗರು ವಿವಿಧ ಕ್ರಮದಲ್ಲಿ ಓದಿದರೆ ಈ ಕವಿತಾಗರಗಳು ವಿವಿಧ ಅರ್ಥಗಳನ್ನು ಕೊಡುವುವು.

ಕವಿತೆಯ ಶೀರ್ಷಿಕೆಯಲ್ಲಿ ಉಪಯೋಗಿಸುವ ಅಕ್ಷರಗಳ ಹಾಗೂ ಪದಗಳ ಸಂಖ್ಯೆಯನ್ನು ನಿಭಂದಿಸಬಹುದು. ಈ ನಿಭಂದನೆಯಿಂದ ಕವಿಗಳು ಅತಿ ಉದ್ದದ ಶೀರ್ಷಿಕೆಯನ್ನು ಉಪಯೋಗಿಸುವುದಕ್ಕೆ ಅವಕಾಶ ಕೊಡದ ಹಾಗೆ ನಿಯಂತ್ರಿಸಬಹುದು.

ಉದಾಹರಣೆಗೆ, ನಾನು ಈ ಕೆಳಗಿನ ಪರಮಾಣು ಕವಿತೆಗಳಲ್ಲಿ ಕೆಲವೇ ಪದಗಳ ಮಿತಿ ಹಾಕಿಕೊಂಡಿದ್ದೇನೆ.

ಕವಿತೆ ೧

ಕವಿತೆಯ ಉಪಪ್ರಕಾರ: ಒಂದಕ್ಷರದ ಕವಿತೆ

ಶೀರ್ಷಿಕೆ: ನಾನು ಹುಟ್ಟಿಸಿದ ಈ ಜಗತ್ತಿನಲ್ಲಿ ನಾನೊಬ್ಬನೇ ಇದ್ದೇನೆಯೇ?

ಕವಿತೆ: ಹುಂ.

ಇದನ್ನು ಮುದ್ರಿಸುವಾಗ "ಹುಂ" ಅಕ್ಷರವನ್ನು ದೊಡ್ಡದಾಗಿ ಮುದ್ರಿದರೆ ಕವಿತೆಯ ಗೂಡಾರ್ಥ ಪ್ರಕಟವಾಗುತ್ತದೆ. ಇದರ ಜೊತೆಗೆ, ಪೂರ್ಣವಿರಾಮವನ್ನು ಬಹು ದೊಡ್ಡದಾಗಿ ಮುದ್ರಿಸಿದರೆ ಈ ಉತ್ತರವೇ ಖಾತರಿಯ ಮತ್ತು ಅಂತ್ಯ ಉತ್ತರವೆಂಬುದು ಓದುಗರಿಗೆ ವೇದ್ಯವಾಗುತ್ತದೆ.

ಕವಿತೆ ೨

ಕವಿತೆಯ ಉಪಪ್ರಕಾರ: ಅಕ್ಷರ ಹಾಗೂ ಪದಗಳೇ ಇಲ್ಲದ ಕವಿತೆ.

ಶೀರ್ಷಿಕೆ: ಈ ಜಗತ್ತಿನ ಉದ್ದೇಶವೇನು; ಇದು ಹುಟ್ಟಿಸಲ್ಪಟ್ಟಿದ್ದೇ?

ಕವಿತೆ: !?!?!?!?!? ....................

ಕವಿತೆ ೩

ಕವಿತೆಯ ಉಪಪ್ರಕಾರ: ಅಕ್ಷರ ಹಾಗೂ ಚಿನ್ಹೆಗಳಿಲ್ಲದ ಕವಿತೆ

ಶೀರ್ಷಿಕೆ: ಈ ಜಗತ್ತಿನಲ್ಲಿ ಇನ್ಯಾರಾದರೂ ಉಂಟೆ?

ಕವಿತೆ:

ಉಪ ಸೂಚನೆ: ಉತ್ತರವಿಲ್ಲ!

ಕವಿತೆ ೪

ಕವಿತೆಯ ಉಪಪ್ರಕಾರ: ಮಾಯಾವಿ ಕವಿತೆ!

ಕವಿತೆ ಓದುವುದಕ್ಕೆ ಮುನ್ನ ಕಿರು ಸೂಚನೆ: ನೀವು ನಿಮ್ಮ ಕಣ್ಣನ್ನು ಹಾಯಿಸುವ ಹೊತ್ತಿಗೆ ಈ ಕವಿತೆ ಮಾಯವಾಗಿ ಬಿಟ್ಟಿರುವ ಹಾಗೆ ಕಾಣುತ್ತದೆ!

ಕವಿತೆ ೫

ಕವಿತೆಯ ಉಪಪ್ರಕಾರ: ಕಿವಿಯಿಂದ ಕೇಳುವ ಕವಿತೆ

ಶೀರ್ಷಿಕೆ: ಇದೇನು! ಈ ಜಗತ್ತಿನಲ್ಲಿ ನಾನೊಬ್ಬನೇ ಇರುವೆನೆ?

ಕವಿತೆ:

ಉಪಸೂಚನೆ: ನಿಶ್ಶಬ್ದ! ಪ್ರತಿಧ್ವನಿ ಕೂಡ ಇಲ್ಲ!

ಕವಿತೆ ೬

ಶೀರ್ಷಿಕೆ: ಈ ಜಗತ್ತನ್ನು ಹುಟ್ಟಿಸಿದ ತಂದೆ ನಾನೆ?

ಕವಿತೆ: ಹುಂ.

ಕವಿತೆ ೭

ಶೀರ್ಷಿಕೆ: ದೇವರನ್ನು ಹುಟ್ಟಿಸಿದ್ದು ಯಾರು?

ಕವಿತೆ: ಮಾನವ

ಕವಿತೆ ೮

ಶೀರ್ಷಿಕೆ: ದೇವರೇಕಿದ್ದಾನೆ?

ಕವಿತೆ: ಇದು ನಮ್ಮಿಬ್ಬರಲ್ಲಿ ಮಾತ್ರ ಇರುವ ಗುಟ್ಟಿರಲಿ: ಅವನ ಕರ್ತ್ರುವನ್ನು ರಕ್ಷಿಸಲು!

ಅಂತಿಮ ಸೂಚನೆ: ಈ ಮೇಲಿನ ನನ್ನ ಪರಮಾಣು ಕವಿತೆಗಳನ್ನು ಪರಮಾಣು ಕವಿತಾ ವಿನ್ಯಾಸದ ಪ್ರಕಾರಕ್ಕೆ ಸೇರಿಸಬಹುದು. ಈ ಕವಿತೆಗಳನ್ನು ಬೇರೆ ಬೇರೆ ಕ್ರಮದಲ್ಲಿ ಓದಿದರೆ ಬೇರೆ ಬೇರೆ ಅರ್ಥಗಳನ್ನು ಕೋಡುತ್ತವೆ. ಈ ಕವಿತೆಗಳನ್ನು ಎಂಟು ಕೋಣದ ಹಸೆಯ ವಿನ್ಯಾಸದಲ್ಲಿ ಮುದ್ರಿಸಿ, ಪ್ರತಿ ಕೋಣದಿಂದಲೂ ಮಿಕ್ಕೆಲ್ಲಾ ಕೋಣದಲ್ಲಿರುವ ಕವಿತೆಗಳಿಗೆ ಬಾಹುಗಳನ್ನು ಎಳೆದರೆ ಓದುಗರು ಈ ಕವಿತಾ ವಿನ್ಯಾಸದ ಬಹು ಮುಖಗಳನ್ನು ಕಾಣಬಹುದು.

ಹಿತ್ತಲ ಮನೆಯ ಶಾಂತಿ

ಹಿತ್ತಲ ಮನೆಯ ಶಾಂತಿ
ಕೆ. ಆರ್. ಎಸ್. ಮೂರ್ತಿ

ಸೂಚನೆ: ನಾನು ಈ ಕವನವನ್ನು ನನ್ನ ಪ್ರಿಯವಾದ "ಇಚ್ಛಂದ ಛಂದಸ್ಸಿ" ನಲ್ಲೇ ರಚಿಸಿರುವೆನು

ಬೆತ್ತಲೆ ಮಲಗುವಳಯ್ಯ ಇಡಿ ರಾತ್ರಿ
ಹಿತ್ತಲ ಮನೆಯ ಇಪ್ಪತ್ತಿನ ಸುಂದರಿ
ಶಾಂತಿಯವಳ ಹೆಸರು, ಬೆಳಗುವಳು
ಕತ್ತಲೆಯು ಹೌದು, ಬೆತ್ತಲೆಯಾದರೆನಂತೆ
ಚಂದಿರನ ಕಾಂತಿಯಲಿ ಕಂಡೆ ನಾನವಳ
ನನಗೆ ಮಾತ್ರ ಮನಸ್ಸೆಲ್ಲಾ, ಮೈಯೆಲ್ಲಾ ಅಶಾಂತಿ.

ಮೆತ್ತನೆಯ ಹಾಸಿಗೆಯ ಮೇಲೆ ಹೊರಳುವಳು
ಕತ್ತೆತ್ತಿ ನನ್ನತ್ತ ನೋಡುವಳು ಕಿಟಿಕಿಯಲಿ
ಇಟುಕಿ ನೋಡುವ ನನ್ನ ಕೀಟಲೆಯಲಿ
ಪಟಪಟನೆ ಮಿಟುಕಿಸುವಳು ಬಟ್ಟಲು ಕಣ್ಣು.

ಸೊಟ್ಟ ಮೂತಿಯ ಮಾಡಿಕೊಂಡು ಅಣಕಿಸುವಳು,
ಮತ್ತೆ ಫಕ್ಕನೆ ನಕ್ಕು, ನಾಲಿಗೆಯಲಿ ತುಟಿಯ ನೆಕ್ಕುತ:

'ಬಾರೋ! ನಿನಗೆ ಹಸಿವೆಯಾದರೆ ಕೊಡುವೆನು ಚಕ್ಕೊತನೆ ಹಣ್ಣು,
ಹುಳಿಯಲ್ಲವಿದು, ಒಂದಲ್ಲ, ದೊಡ್ದದೆರಡು ಹೀರುವೆಯಾ
ಸಿಹಿಯು ಅಮೃತಕ್ಕಿಂತ, ಕೈನೀಡಿ ಬಾರೋ ಈಗಲೇ
ಎಷ್ಟು ಮೆದ್ದರೂ ಮುಗಿಯದ, ಇನ್ನಷ್ಟು ಬೇಕೆನಿಸುವ ಹೆಣ್ಣು ನಾನು’

ಇಷ್ಟೆಲ್ಲಾ ಹೇಳುವಳು ತುಂಟ ನಗೆಯಲಿ ಮಾತ್ರ.
ಮೈಯೆಲ್ಲಾ ಸೆಟೆದು, ಕೈಕಾಲು ಕುಣಿಸಿ, ಎಗರಿ,
ಕುಪ್ಪಳಿಸಿದಂತೆ ಕಪ್ಪೆಯ ತೆರದಿ, ಎಲ್ಲೆಲ್ಲೂ ಉಬ್ಬಿ ಬೆವರುತಲಿರಲು
ಅವಳು ಮಾತ್ರ ಅವಳ ಅವಳಿ ಜವಳಿಯ ನನ್ನೆಡೆಗೆ ತೋರಿಸುತ
ಬೀರುವಳು ತುಂಟ ತುಟಿಯನು, ನನ್ನ ತುಟಿಯು ಮಾತ್ರ
ಮರಳುಗಾಡಿನ ಓತಿಕ್ಯಾತನಂತೆ ಇನ್ನೂ ಒಣಗಿಯೇ ಬೇಗೆಯಲಿ.

ಸಾಕಪ್ಪ ಸಾಕು ಸಿಕ್ಕದ ಕೆಂಪು ನೇರಳೆ ಹಣ್ಣು ಸುಮ್ಮನೆಯೇ ನೋಡಿದರೆ ಸಾಕೆ?
ಬೇಕಪ್ಪ ಬೇಕು, ನಾಕದ ಹೆಣ್ಣು ನೋಟದಲೇ ಇಷ್ಟು ಆಟವನಾಡಿಸಿದರೆ,
ದಿಟದಿ ಮೈಗೆ ಎಟುಕಿದರೆ, ಊರ ಹನುಮಗೆ ನೂರೆಂಟು ತೆಂಗಿನ ಕಾಯಿ.

ಹನುಮ ನೀನು ಜೀವ ಬ್ರಹ್ಮಚಾರಿ, ನಿನಗೇನು ಗೊತ್ತೋ ನನ್ನ ತವಕ
ಹರಕೆ ನನ್ನದು, ಮಹದಾಸೆ ನನ್ನದು, ನಿನ್ನದು ವರವ ಕೈನೀಡಿ ಕೊಡುವುದಷ್ಟೇ!

ನಾನೊಬ್ಬ ಕವಿ ಮಾತ್ರ

ನಾನೊಬ್ಬ ಕವಿ ಮಾತ್ರ

ಕೆ. ಆರ್. ಎಸ್. ಮೂರ್ತಿ

ನಾನೊಬ್ಬ ಕವಿ ಮಾತ್ರ;
ದಿನ, ರಾತ್ರಿ ಕನಸು ಕಾಣುವ
ಹಣೆ ಬರಹವ ಹೊತ್ತು ಮೆರೆವವನು.

ಹುಟ್ಟಿನಿಂದಲೇ ಪ್ರತಿ ನಿಮಿಷಕೆ
ಪರಿಪರಿಯ ಭಾವುಕತೆಯ ಅವತಾರ ಎತ್ತುವುದು
ಕೋಟಿ ರಂಗಿನ ಕವಿಯ ದಿನ ನಿತ್ಯದ ಕರ್ಮ.

ಸಾಸಿರ ತಲೆ, ಸಾಸಿರ ಬಲೆ, ಸಾಸಿರ ಕಲೆ,
ನೂರೆಂಟು ಬಣ್ಣದ ಮುಖವಾಡದ ಆಟ.

ಉಸಿರು, ಉಸಿರಿಗೂ ಸಾವಿರ ಪರಿಯೆನ್ನದು;
ಭಾವುಕತೆಯ ಬಸಿರು ಹೊರುತ, ಮೆರೆಯುತ
ಮನಸ್ಸಿನ ರಾಣಿ, ವೀಣಾಪಾಣಿ, ಕಮಲಜೆ
ಕಾವ್ಯ ಕಲ್ಪನ ಅರಸಿ, ಸರಸತಿಯ ವೀರ್ಯವ ಪೊತ್ತು,
ಗಜಗರ್ಭ, ನಿಜಗರ್ಭದ, ಅಜಗರ್ಭಿ ನಾನು
ಕಾಗಜದ ಮೇಲೆ ಚಿತ್ತಿರವ ಬಿಡಿಸುವುದು
ನನ್ನ ಹೆಚ್ಚು ಮೆಚ್ಚಿನ ಆನಂದ.

ಇಳೆಯಲ್ಲಿನ ನೂರಾರು ಅಲೆಗಳನು
ಏರಿಳಿಯುವ ಚಟವೆನ್ನದು, ಹಟವೆನ್ನದು.

ಸಾವಿರಾರು ಅವತಾರಗಳು ಎತ್ತಿದರೂ,
ಕವಿಯ ನೆಪ ಮಾತ್ರವಷ್ಟೇ;
ವ್ಯಕ್ತಿ ನಾಮಾತ್ರ ಬಲು ಬೇರೆ.

ರಸಿಕರು ನೀವು, ಆಲಿಪರೂ ನೀವೇ.
ನನ್ನ ಬರಹವ ಓದಿ, ಇತರಿಂದ ಕೇಳಿ
ಏನಾದರೂ ಅನ್ನುವುದು, ಅನ್ನಿಕೊಳ್ಳುವುದು
ನಿಮ್ಮ ವೈಯಕ್ತಿಕ ಮರ್ಮ;
ಪೊಗಳುವುದು, ಬೊಗಳುವುದು,
ಅತಿ ಕೋಪದಿಂ ಕಲ್ಲು ಎಸೆಯುವುದೂ
ನಿಮ್ಮ ಶಕ್ತ್ಯಾನುಸಾರದಿ ಜರುಗಲಿ.

ಒಪ್ಪದಿ ನನ್ನ ಒಪ್ಪುವುದು ನಿಮಗೆ ಬಿಟ್ಟಿದ್ದು.
ಬೆಪ್ಪು ಕವಿಯೆಂದು, ತಪ್ಪು ಹುಡುಕುತ
ಕಪ್ಪು ರಂಗನು ರಪ್ಪೆಂದು ನನ್ನ ಮೊಗಕೆ
ಎರಚಿ ಬಳಿದು, ಅಪವಾದದ ಸೆರೆಮನೆಗೆ ಅಟ್ಟಿ,
ಗುಟ್ಟಾಗಿ ವಿಜ್ರಂಬಿಸುವುದೂ ಒಪ್ಪಿಗೆ ನನಗೆ;
ನನ್ನ ಕಿರು ಬರಹದಿಂದ ನಿಮ್ಮ ಮನಕೆ
ತಾಟುವುದೇ ನನ್ನ ಹುಟ್ಟು ಬುಧ್ಧಿಯ ಹಠ!

ನನ್ನ ಕವನದ ಪರಿಣಾಮದಿಂದ
ನೀವೇನು ಎಣಿಸಿ, ಎಣೆಸಿ, ಸೆಣೆಸಿ,
ಕುಪ್ಪಳಿಸಿ ಕುಣಿದರೂ, ತಾಳ ನನ್ನದಲ್ಲವೇ!

ಗುರುವಾರ, ಮೇ 13, 2010

ಬೇಗನೆ ಲಕುಮಿ ಬಾರಮ್ಮ

ಬೇಗನೆ ಲಕುಮಿ ಬಾರಮ್ಮ
ಕೆ. ಆರ್. ಎಸ್. ಮೂರ್ತಿ

ಲೇ! ಲೇ! ಲೇ! ಲೇ! ಲಕ್ಕಮ್ಮ, ಲಚ್ಚಮ್ಮ, ಲಕುಮಿ
ನನಗೇಕೇ ಒಂದು ಚೂರೂನೂ ಲಕ್ಕೇ ಇಲ್ಲ, ಲಕುಮಿ

ನನಗೆ ಲಕ್ಕು ಕಮ್ಮಿ ಮಾಡಿದ್ದೀಯಲ್ಲೇ, ಲಕ್ಕಮ್ಮ
ಲೆಕ್ಕ ಹಾಕಿ, ಹಾಕಿ ಭಾಳ ಕಡಿಮೆ ಕೋಡ್ತೀಯಮ್ಮ

ಲಂಚ, ಗಿಂಚ ಏನೂ ಗಿಟ್ಟಕ್ಕಿಲ್ಲ ನನಗೆ ಲಚ್ಚಮ್ಮ
ಮಂಚದ ಕೆಳಗಂತೂ ಒಂದು ಬಿಡಿಗಾಸೂ ಇಲ್ಲಮ್ಮ

ನಾನು ಪೆದ್ದ, ಸರಸ್ವತಿ ನನ್ನ ಕಡೇನೇ ನೋಡಾಕಿಲ್ಲಮ್ಮ
ನೀನೂನೂ ಮರೆತು ಬಿಟ್ರೆ, ನನ್ನ ಗತಿ ಏನಾಗಬೇಕಮ್ಮ

ಬಾರಮ್ಮ, ಬಾರೇ ಸ್ವಲ್ಪ ಹೊತ್ತು ಆದ್ರೂ ಬಾರೆ ಒಳಗೆ
ಬಾರಮ್ಮ ನಿನ್ನ ಬಲಗಾಲಿಟ್ಟು ನನ್ನ ಅಟ್ಟಿ ಗುಡಿಸಲ್ಗೆ

ಸಕ್ಕರೆ, ತುಪ್ಪ ಹಾಲಿನ ಹೊಳೆಯೆಲ್ಲ ನನಗೆ ಬೇಡಮ್ಮ
ಸಣ್ಣ ಲೋಟ ಹಾಲು, ಒಂದು ಚಮಚ ಸಕ್ಕರೆ ಸಾಕಮ್ಮ

ತುಪ್ಪ, ಗಿಪ್ಪ ಎಲ್ಲಾ ಪಕ್ಕದ ಮನೆಗಳಿಗೇ ಕೊಟ್ಟು ಬಿಡಮ್ಮ
ಶುಕ್ರವಾರ ಆದ್ರಾಯ್ತು, ಮಧ್ಯ ರಾತ್ರಿಲಾದ್ರೂ ಅಡ್ಡಿಯಿಲ್ಲಮ್ಮ

ರಾಹು ಕಾಲದಲ್ಲಾದ್ರೂ ಪರವಾಗಿಲ್ಲ, ಕೇತು ಕಾಲವಾದರೂ,
ಗುಳಿಕ ಕಾಲದಲ್ಲಾದ್ರೂ ಬಂದು ಬಿಡಮ್ಮ, ಒಂದು ಕಿತವಾದರೂ

ಕೊಂಚು ಆಸೆ, ನಿನ್ನ ಮುಖ ಹೇಗಿದೇಂತ ಒಂದು ಕಿತ ನೋಡೋಣ ಅಂತ
ಹೆದರೋದ್ಯಾಕೆ ಗುಡಿಸಲು ಚಿಕ್ಕದು, ನನಗೆ ಹೆಂಡ್ರು ಯಾರೂ ಇಲ್ಲಾಅಂತ?

ನನ್ನ ಅಟ್ಟಿ ಶಾನೆ ಕೊಳಕಾದ್ರೂ, ನನ್ನ ಋದಯದಲ್ಲಿ ಕೊಳಕು ಇಲ್ಲಾ
ನೀನು ಕಾಲಿಟ್ಟ ನನ್ ಆಟ್ಟಿ, ಅರಮನೆ ಆಗದೆ ಇದ್ರೂನೂ ಚಿಂತೆಯಿಲ್ಲ

ನೀನು ಮನಸು ಮಾಡಿ ಒಳಗೆ ಬಂದರೇನೇ, ಅದೇ ಲಕ್ಷಕ್ಕಿಂತ ಹೆಚ್ಚು
ನಿನ್ನ ಮುಖ ನೋಡದ್ರೆ, ಅದೆ ನನಗೆ ಕೋಟಿ ರೂಪಾಯಿಗಿಂತ ಮೆಚ್ಚು

ಬುಧವಾರ, ಮೇ 12, 2010

ಕೆ. ಆರ್. ಎಸ್. ಮೂರ್ತಿ - Brief Introduction

ಕೆ. ಆರ್. ಎಸ್. ಮೂರ್ತಿ

ಮೂರ್ತಿಯ ಆರಾಧ್ಯ ದೇವತೆ ಸರಸ್ವತಿ, ಜಗತ್ ಸೃಷ್ಟಿ ಕರ್ತ ಬ್ರಃಮನ ರಾಣಿ.
ದಿನ, ರಾತ್ರಿಗಳಲ್ಲೆಲ್ಲಾ ಮೂರ್ತಿಯು ಸೃಸ್ಟಿಶೀಲತೆಯ ವ್ರತ ನಡೆಸಿ ವಿಶ್ವಾಮಿತ್ರನಮ್ತೆ ಹಲವು ಕ್ಷೇತ್ರಗಳಲ್ಲಿ ದಿಕ್ ಪರಿವರ್ತನೆಯನ್ನೇ ಮಾಡಿಬಿಟ್ಟಿದಾರೆ. ಕನ್ನಡ ಸಾಹಿತ್ಯ, ಸಮ್ಗೀತ, ನಾಟಕ, ವಿಜ್ಞಾನ, ತಮ್ತ್ರೋದ್ಯಮ, ಕ್ರಿಕೆಟ್ ಗಳಲ್ಲೆಲ್ಲಾ ತಪಸ್ಸು ಮಾಡಿರುವ ಇವರಿಗೆ ಇದುವರೆಗೂ ಯಾವ ಮೇನಕೆಯೂ ಅವರ ಘೋರ ತಪಸ್ಸಿಗೆ ಭಮ್ಗ ತರುವ ಸಾಹಸ ಮಾಡಿಲ್ಲ. ಇತ್ತೀಚೆಗೆ ಇವರು ೫೦೦ಕ್ಕೂ ಹೆಚ್ಚು ಹೊಸ ಸಮ್ಗೀತದ ಸಮ್ಯೋಜನೆ ಮಾಡಿದ್ದಾರೆ.

ಇರುವೆ ಲೋಕ

ಇರುವೆ ಲೋಕ

ಕೆ ಆರ್ ಎಸ್ ಮೂರ್ತಿ

ಮರಿ ಇರುವೆಗೆ ಅದೇಕೋ ಬಲು ಚಿಂತೆ
ಮರಿ ಇರುವೆಗೆ ಹಿರಿದಾದ, ಕಿರು ದೇಹಕ್ಕೇ ಮೀರಿದ ಯೋಚನೆ
ಪರಿ, ಪರಿ ಅಲೋಚನೆ; ಸರಿ ಸತ್ಯ ದೊರಕದ ಚಿಂತೆ
ಊರು, ಊರೆಲ್ಲಾ ಸರಿದು, ನೂರು ಸಾರಿ ನೆನೆದರೂ
ಮನಕ್ಕೆ ಮೀರಿದ ಮರು ಪ್ರಶ್ನೆ

ಬಲು ಗೆಳೆಯರನ್ನು ಕೇಳಿ, ಕೇಳಿ ಅವರೆಲ್ಲಾ ನೇಗಾಡಿ,
"ನಿನಗೇತಕೋ ಈ ಪರಿ ಹುಚ್ಚು" ಎಂದೊಬ್ಬನಂದರೆ,
"ಮುದಿ ಇರುವೆ" ಎಂದು ಕೀಟಲೆಯಲ್ಲಿ ಕೂಗಿದರು ಎಲ್ಲರೂ.

ಸರಿ, ನನ್ನ ಪೊರೆದ ಅಮ್ಮನನ್ನೋ, ಅಪ್ಪನನ್ನೋ ಕೇಳೋಣವೇ
ಎಂದು ತನ್ನ ಗೂಡಿನ ಕಡೆಗೆ ತಿರುಗಿದ.
ಗೂಡೊಳಗೆ ತೂರಿ, ಅಮ್ಮನನು ಕಂಡು,
"ಈ ನಮ್ಮೆಲ್ಲರ ಲೋಕಕ್ಕೂ ಮೀರಿದ ಲೋಕವುಂಟೆ?" ಎಂದ.
ಅಮ್ಮ ಇರುವೆ, "ನನ್ನ ಮುದ್ದು ಮರಿಯೆ, ನಿನಗೀ ಥರದ ಯೋಚನೆಗಳೇಕೇ ಕಂದ,
ಸುಮ್ಮನೆ ಇತರ ಕಿರು ಇರುವೆ ಜೊತೆ ಆಡಿಕೋ ನನ್ನ ರನ್ನ"
ಎನ್ನುತ್ತಾ, ಸಕ್ಕರೆ ಚೂರನ್ನು ಉಣಿಸಿದಳು.
ಸಕ್ಕರೆಯು ಸವಿಯಾದರೂ, ಸತ್ಯ ದೂರವೇ ಎನ್ನಿಸಿತು.

"ಮತ್ಯಾರ ಕೇಳಲಿ, ಎನ್ನ ಪೊರೆದ ಅಪ್ಪ ಬಲು ಬಲವಂತ; ಬಲು ತಿಳಿದವನೇ ಇರಬಹುದು",
ಎಂದು ಹೆತ್ತಪ್ಪನ ಕಡೆಗೆ ಸರಿದು, ಮತ್ತೆ ಅದೇ ಮಾತು ಕೇಳಿದ.
ನಮ್ಮ ಮರಿ ಇರುವೆಯ ಅಪ್ಪ ಬಲು ದೊಡ್ದ ಬೆಲ್ಲದ ಚೂರನ್ನು ನೂಕುತಲಿದ್ದ.
ಮರಿ ಇರುವೆಯ ಸಂಶಯ ಕೇಳಿ,
"ಇಲ್ಲಿ ಕೇಳು ಮರಿ, ನನಗೆ ಬಲು ದೊಡ್ದ ಕೆಲಸ ಇನ್ನು ಮುಗಿದಿಲ್ಲ"
"ನಮ್ಮೂರಿನ ಬಲು ಹಿರಿಯ ಇರುವೆ, ಗೂಡಿನ ಹೊರಗೆ ಇರುವ"
"ಅವನಿಗೆಲ್ಲ ಗೊತ್ತು. ಅವನಿಗೆ ಗೊತ್ತಿರದಿದ್ದು ಊರಲ್ಲೇ ಇಲ್ಲ."
"ಅವನನ್ನು ಮೀರಿಸದವರಿಲ್ಲ.
ಹೋದರೆ ಮಾತ್ರ, ಬಲು ವಿನಯದಿ, ತಲೆ ಬಾಗಿ, ಅವನ ಕಾಲು ಮುಟ್ಟಿ ಕೇಳು"
ಎಂದು ತನ್ನ ಕೆಲಸಕ್ಕೆ ಕೈಗೊಟ್ಟ.

ಮರಿ ಇರುವೆ ಹಿರಿ ಇರುವೆಯ ಕಾಲ ಹಿಡಿದು,
"ಈ ನಮ್ಮ ಇರುವೆ ಲೋಕಕ್ಕೂ ದೂರದ ಊರು ಏನಿದೆ?
ನಾನು ಸತ್ತ ಮೇಲೆ ಬೇರೆಲ್ಲಿ ಹೋಗುವೆ?
ಇರುವೆಗಳಿಗೆ ದೇವರುಂಟೆ? ಇರುವೆ ದೇವರ ಇರುಹು ಎಲ್ಲಿ.
ಅವನ ಕುರುಹು ಕಾಣುವುದೆಂತು?
ಸರಿ ದಾರಿ ತೋರಿ, ಈ ಮರಿಯನ್ನು ಸಲಹಿ ಗುರು ಇರುವೆಯೇ"
ಎಂದು ಒದಲಿದ.

ಗುರು ಇರುವೆಯ ಗೊರಕೆ ಧ್ಯಾನಕ್ಕೆ ಮರಿ ಇರುವೆಯು ಅಡ್ಡಿ ಬಂದಂತೆ ಆಗಿ,
ತನ್ನ ಕಾಲು ಹಿಡಿದ ಮರಿ ಇರುವೆಯ ಕೈ ಹಿಡಿದು,
"ನನ್ನ ದೇವರು, ನಿನ್ನ ದೇವರು, ನಮ್ಮೆಲ್ಲರ ದೇವರು ಅತಿ ದೊಡ್ದ ಇರುವೆ.
ಅವನಿಗೆ ಸಾವಿರಾರು ತಲೆಗಳು, ಕೈಗಳು, ಕೊಂಡಿಗಳಿದ್ದು, ನಮ್ಮೆಲ್ಲರನ್ನೂ ಸಲಹುತ್ತಾನೆ.
ಸತ್ಯ ಪರಿಪಾಲಕ, ಕರುಣಾಸಾಗರ, ಭಕ್ತರನ್ನು ಸದಾ ಕಾಯುವ ಸ್ವಾಮಿ
ಆ ಪರಮ ಇರುವೆಯನ್ನು ಧ್ಯಾನ ಮಾಡು"
ಎನ್ನುತ್ತಾ ಗೊರಕೆಗೆ ಅಧೀನವಾಯಿತು ಗುರು ಇರುವೆ.

ಮರಿ ಇರುವೆಯ ಕಿರು ತಲೆಗೆ ಮಿಂಚು ಹೊಳೆದಂಥಾಗಿ,
ಇರುವೆ ದೇವರ ನಾಮ ಧ್ಯಾನ ಮಾಡತೋಡಗಿತು.

ಇತ್ತ ಪರಮಾತ್ಮನನ್ನು ತಮ್ಮ ಧ್ಯಾನದಲ್ಲಿ ಕಂಡ,
ಜದದ್ಗುರು, ಮಹಾಮಂಡಲಾಧೀಶ್ವರ,
ಕರುಣಾಮಯಾನಂದ ಸ್ವಾಮಿಗಳು ತಮ್ಮ ಧ್ಯಾನದಿಂದ ಎದ್ದು,
ಮಠದ ಬಾಗಿಲಿಂದಾಚೆಗೆ ಕಾಲಿಡುತ್ತ,
ನಮ್ಮ ಮರಿ ಇರುವೆ, ಗುರು ಇರುವೆ, ಅಮ್ಮ, ಅಪ್ಪ,
ಮತ್ತೆಲ್ಲ ಇರುವೆಗಳ ಗೂಡಿನ ಮೇಲೆ ಕಾಲಿಟ್ಟು
ಇರುವೆ ಲೋಕಕ್ಕೆ ಮುಕ್ತಿ ನೀಡಿದರು.

ಕರ್ಣ - ವ್ಯಾಸ ಕಾರ್ಯಕ್ರಮ ಧಾಟಿ

ಕರ್ಣ - ವ್ಯಾಸ ಕಾರ್ಯಕ್ರಮ ಧಾಟಿ

ಮುನ್ನುಡಿ - ಕಾರ್ಯಕ್ರಮ ಪರಿಚಯ

೧. "ತಿರುಗು ಬಾಣ" ಸಾಹಿತ್ಯ ಪ್ರಕಾರದ ಕಿರುಪರಿಚಯ

೨ ಕರ್ಣ - ವ್ಯಾಸ ಕಾರ್ಯಕ್ರಮದ ಕೇಮ್ದ್ರ ವಸ್ತುವಿನ ಪರಿಚಯ

೩ ಇವತ್ತಿನ ಕಾರ್ಯಕ್ರಮದ ಪರಿಮಿತಿಯ ಮಮ್ಡನೆ

೪ ಪಾತ್ರಗಳ, ಪಾತ್ರಧಾರಿಗಳ ಹೆಸರುಗಳು

೫ ಪಾತ್ರಗಳ, ರಮ್ಗವಿನ್ಯಾಸದ ಸೂಚನೆ

೬ ಧಿಡೀರ್ ಪಾತ್ರಧಾರಣೆಯ ಅಪೇಕ್ಷೆ ಇರುವ ಪ್ರೇಕ್ಷಕರಿಗೆ ಸೂಚನೆಗಳು

೭. ಪರದೆ ಕಳಚಿದಮ್ತೆ ರಮ್ಗದ ಮೇಲಿನ ಸನ್ನಿವೇಷದ ಕಿರುಪರಿಚಯ

ಮೊದಲ ಹಮ್ತ:

ರಮ್ಗದ ಮೇಲೆ: ಅರ್ಜುನ, ಕ್ರಿಮಷ್ಣ, ಕರ್ಣ

(ಕರ್ಣನು ರಣರಮ್ಗದಲ್ಲಿ ರಕ್ತದ ಹೊಳೆಯ ಕೆಸರಿನಲ್ಲಿ ಹೂತು ಹೋಗಿರುವ ತನ್ನ ರಥವನ್ನು ಮೇಲೆತ್ತಲು, ತನ್ನ ಬಿಲ್ಲು, ಬತ್ತಳಿಕೆಗಳನ್ನು ಕೆಳಗಿಟ್ಟು, ರಥದ ಚಕ್ರಕ್ಕೆ ಕೈಯಿಟ್ಟು, ಭುಜವಿಕ್ಕಿ ಸೆಣೆದಾಡುತ್ತಿದ್ದಾನೆ.)



Krishna tells Arjuna to shoot the arrow and kill Karna, even though Karna is repairing the wheels of the chariot.



ಕ್ರಿ ಷ್ಣ: ಅರ್ಜುನ! ಇದೇ ಸದವಕಾಶ, ಹೂಡು ನಿನ್ನ ಬಾಣವನ್ನು. ಕರ್ಣನಿಗೆ ಗುರಿಯಿಟ್ಟು ನೇರವಾಗಿ ಹೊಡೆ ಬೇಗ.



Arjuna hesitates to follow Krishna's instructions.



ಅರ್ಜುನ: ಕ್ರಿoಷ್ಣಾ! ಹೇ ಭಗವನ್! ನ್ಯಾಯವನ್ನು ನಮ್ಮಮ್ಥ ಹುಲುಮಾನವರಿಗೆ ತಿಳಿಯ ಹೇಳಬೇಕಾದವನು ನೀನು. ಅದುಹೇಗೆ ನಾನು ರಥವನ್ನು ಬಿಟ್ಟು, ಸಾರಥಿಯ ಸಹಾಯವೂ ಇಲ್ಲದೆ, ತಾನೊಬ್ಬನೇ ಕೆಸರಿನಲ್ಲಿ ತೋಳು-ಭುಜಗಳನ್ನು ಕೊಟ್ಟು ಮಮ್ಡಿಯೂರಿರುವ ಕರ್ಣನ ಕಡೆಗೆ, ಸೂತ ಪುತ್ರನಾದವನ ಕಡೆಗೆ, ಮಹಾಕ್ಷತ್ರಿಯನಾದ, ಅಸಮಾನ ಬಿಲ್ಲುಗಾರನಾದ ನಾನು ಬಾಣವನ್ನು ಬೀರುವುದು ಅದು ಹೇಗೆ ಸಾಧ್ಯ, ಅದಾವ ನ್ಯಾಯ, ಅದಾವ ಶೌರ್ಯ?



Krishna persuades Arjuna to shoot saying that it is an opportune time and to exploit it.



ಕ್ರಿ ಷ್ಣ: ಹೇ ನರೋತ್ತಮ! ಕರ್ಣನು ಜಗತ್ತಿನಲ್ಲೇ ಮಹಾಶೂರ, ಮಹಾಬಿಲ್ಲುಗಾರ. ಆದರೆ, ಅವನು ನಿನಗೂ, ದ್ರೌಪದಿಗೂ, ಪಾಮ್ಡವರೆಲ್ಲರಿಗೂ ಮಾಡಿರುವ ಅನ್ಯಾಯಗಳನ್ನು ನೀನೇ ಯೋಚಿಸಿನೋಡು. ಇವನನ್ನು ಕೊಲ್ಲಲು ಈ ಕ್ಷಣಕ್ಕಿಮ್ತ ಮುಮ್ದೆ ಇನಾವ ಸಮಯವೂ ಸರಿಯಲ್ಲ. ಇದೇ ಮಹೂರ್ತ. ಬಿಡು ಬಾಣವನ್ನು. ತಡಮಾಡಬೇಡ!



Arjuna shoots the arrow to Karna.



ಅರ್ಜುನ: ನಿನ್ನ ಮಾತನ್ನು ಕೇಳಿ ನಾನು ಈ ಬಾಣವನ್ನು ಬಿಡುತ್ತಿದ್ದೇನೆ.



Karna collapses and starts his dialogue complaining and blaming Krishna and Arjuna for their illegal tactics.



ಕರ್ಣ: ಹಾ! ಇದೇನು ಆರ್ಜುನ, ಬಿಲ್ಲುಬಾಣವನ್ನು ಕೆಳಗಿಟ್ಟು, ಕೈಗಳನ್ನು ರಣರಮ್ಗದಲ್ಲಿ ಸುರಿಯುತ್ತಿರುವ ರಕ್ತದ ಕೆಸರಿನಿಮ್ದ ನನ್ನ ರಥವನ್ನು ಮೇಲೆತ್ತುವ ಸಮಯದಲ್ಲಿ ಹೇಡಿಯಮ್ತೆ, ಕ್ಷತ್ರಿಯ ಧರ್ಮವನ್ನು ಮರೆತು, ಬಾಣಹೂಡಿ ಕೊಮ್ದೆಯಲ್ಲೋ ನರಾಧಮ!

ಹೇ ಕ್ರಿಮಷ್ಣ! ಜೀವನ ಪೂರ್ತಿ ದುರಾದ್ರಿ!ಷ್ಟ ಕಾಡಿದ ನನಗೆ ಮರಣ ಸಮಯದಲ್ಲೂ ಬಹಳ ಮೋಸವಾಗಿಹೊಯಿತಲ್ಲಾ. ಏಲ್ಲವನ್ನೂ ತಿಳಿದವನಮ್ತೆ ನಾಟಕವಾಡುವ ನೀನು ಅರ್ಜುನನಿಗೆ ಅನ್ಯಾಯದ ಪಾಠಹೇಳಿ ನನ್ನನ್ನು ಕೊಲ್ಲಿಸಿದೆಯಲ್ಲಾ.



Arjuna responds by mentioning Karna's numerous mistakes through out Mahabharatha.



ಅರ್ಜುನ: ಕರ್ಣ! ನ್ಯಾಯದ ಭಾಷಣ ಕೊಡುವುದನ್ನು ಯಾವಾಗ ಕಲಿತೆ? ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣನಾದ ನೀನೂ, ದುರ್ಯೋಧನನೂ, ದುಶ್ಯಾಸನನೂ, ಸಜ್ಜನತೆ, ಪರಸ್ತ್ರೀ ಗೌರವಗಳನ್ನು ಕಸದಬುಟ್ಟಿಗೆ ಎಸೆದು, ದ್ರೌಪದಿಯನ್ನು ನಿನ್ನ ತೊಡೆಯಮೇಲೆ ಕೂರಿಸಿಕೊಳ್ಳಲು ನೀಚ ಮನೋಭಾವದಿಮ್ದ ಮೆರೆದ ನಿನಗೆ ಇದೇನು ಸಾಯುವಕಾಲದಲ್ಲಿ ನ್ಯಾಯ ನೀತಿಗಳ ಅರಿವು ಆಗುತ್ತಿದೆಯೇನು ?



Krishna responds with similar statements and blames his 'blind' support to Duryodhana.



ಕ್ರಿ ಷ್ಣ: ಹುಟ್ಟಿನಿಮ್ದ ಸೂತಪುತ್ರನೆಮ್ದು ಕೊರಗುತ್ತಿದ್ದವನು, ಒಮ್ದು ಸಣ್ಣ ರಾಜ್ಯದ ಲಮ್ಚ ಕೊಟ್ಟ ಮಾತ್ರಕ್ಕೆ, ದುರ್ಯೋಧನನನ್ನು ಪ್ರಶಮ್ಸೆ ಮಾಡುತ್ತಾ, ವಿವೇಚನೆಯನ್ನು ಕೂಡ ಮಾಡದೆ, ಅವನಿಗೆ ಸಾಸಿವೆ ಕಾಳಿನಷ್ಟೂ ಬುಧ್ಧಿ ಮಾತು ಹೇಳದೆ, ಕುರುಡನಮ್ತೆ ಜೀವನವನ್ನೆಲ್ಲಾ ಕಳೆದ ನೀನು ನ್ಯಾಯ ವಾದಿಯಮ್ತೆ ನಾಟಕ ಮಾಡುತ್ತಿರುವುದು ನೋಡಿದರೆ ನನಗೆ ನಗೆಯು ಬರುತ್ತಿದೆ.



Karna defends his master Duryodhana and defends his actions.



ಕರ್ಣ: ನನ್ನ ಆತ್ಮಗೌರವಕ್ಕೇ ಕುಮ್ದು ಬಮ್ದಹಾಗೆ ಮಾಡಿಬಿಟ್ಟ ನೀನೂ, ದ್ರೋಣರೂ, ಆ ಮುದುಕ ಭೀಷ್ಮರೂ ನನ್ನ ಶಕ್ತಿ ಸಾಮರ್ಥ್ಯಗಳಿಗೆ ಬೆಲೆಕೊಡದೆ, ಸೂತ ಪುತ್ರನೆಮ್ದು ಹೀಯಾಳಿಸಿಕೊಳ್ಳುತ್ತಿರುವಾಗ, ವಿಶಾಲ ಮನೋಭಾವದ ನಿಜವಾದ ಗುಣವನ್ನು ಕಮ್ಡ, ನನ್ನ ಆಪ್ತ ಸ್ನೇಹಿತ ದುರ್ಯೋಧನನ ಬಗ್ಗೆ ನಿನಗೇನು ಗೊತ್ತು? ಕಷ್ಟದಲ್ಲಿ ಒದಗುವನೇ ನಿಜವಾದ ಸ್ನೇಹಿತ. ನನ್ನ ಆಪ್ತಮಿತ್ರನ ಬಗ್ಗೆ ಇಮ್ಥಾ ಮಾತುಗಳನ್ನಾಡಿದ್ದಕ್ಕೆ, ಇದೀಗಲೆ ಎದ್ದುಬಮ್ದು ನಿನ್ನ ಕತ್ತು ಹಿಚುಕಿಬಿಟ್ಟೇನು, ಎಚ್ಚರಿಕೆ!

ಪ್ರವೇಶ: ದುರ್ಯೋಧನ



Duryodhana blames Krishna and cries for Karna's collapse.



ದುರ್ಯೋಧನ: ಕರ್ಣಾ! ಜಗತ್ತಿನಲ್ಲೇ ಅದ್ವಿತೀಯ ಬಿಲ್ಲುಗಾರನಾದ ನಿನ್ನಮ್ತಹಾ ಮಹಾವೀರನಿಗೆ ಇದೆಮ್ಥಾ ಅನ್ಯಾಯವಾಯಿತು! ಯುಧ್ಧದಲ್ಲಿ ನಿನ್ನನ್ನು ಅಸ್ತ್ರವಿದ್ಯೆಯಲ್ಲಿ, ಧರ್ಮ ಯುಧ್ಧದಲ್ಲಿ ಕೊಲ್ಲಲು ಅಸಾಧ್ಯವೆಮ್ದು, ಈ ಕುತಮ್ತ್ರಿ ಕ್ರಿ ಷ್ಣನೂ, ಹೆಮ್ಗೆಳೆಯರೊಡನೆ ಸೀರೆ ಒಡವೆಗಳನ್ನು ತೊಟ್ಟು ಭರತನಾಟ್ಯವನ್ನು ಮಾಡುವುದನ್ನು ಬಿಟ್ಟು, ರಣರಮ್ಗದ ನಿಯಮಗಳನ್ನು ಅರಿಯದೆ ಅರ್ಜುನನು ಕಳ್ಳ ಕ್ರಿ ಷ್ಣನ ಹಿಮ್ದೆ ಅಡಗಿಕೊಮ್ಡು ಬಾಣವನ್ನು ನಿಸ್ಸಹಾಯಕನಾದ ನಿನ್ನೆಡೆಗೆ ಬಿಟ್ಟು ಕೊಮ್ದಿರುವುದು ಪಾಮ್ಡವ ವಮ್ಶಕ್ಕೇ ಅವಮಾನದ ಸಮ್ಗತಿ.



Krishna trickily mentions Vyaasa as the real architect of the roles in Mahabharatha.



ಕ್ರಿ ಷ್ಣ: ದುರ್ಯೋಧನ! ಸಿಕ್ಕಸಿಕ್ಕವರನ್ನೆಲ್ಲಾ ಸುಮ್ಮಸುಮ್ಮನೆ ಬೈಯುವುದು ತರವಲ್ಲ. ಈ ಮಹಾಭಾರತದ ಕವಿಯ ಸ್ರಿಯಷ್ಟಿಯಲ್ಲವೇ ನಾವೆಲ್ಲರೂ? ನೀನೂ, ಕರ್ಣನೂ ಪ್ರಲಾಪಿಸುತ್ತಿರುವ ವಿಷಯಗಳನ್ನು ನೇರವಾಗಿ ವೇದವ್ಯಾಸರಿಗೇ ನೀನು ಏಕೆ ಕೇಳಬಾರದು?



Duryodhana summons Vyaasa with uncontrollable anger.



ದುರ್ಯೋಧನ: ಕ್ರಿaಷ್ಣ! ನಿನ್ನನ್ನು ನಾನು ಯಾವಾಗಲೂ ಗೌರವಿಸಿದ್ದೇ ಇಲ್ಲ! ಈ ನಿನ್ನ ಮಾತಿಗೊಮ್ದು ಸಲ ಬೆಲೆಕೊಟ್ಟು ನೋಡುವೆ. ಯಾರಲ್ಲಿ! ಈದೀಗಲೇ ಕಾಡಿನಲ್ಲಿ ಕಣ್ಮುಚ್ಚಿ ಯಾವಾಗಲೂ ತಪಸ್ಸುಮಾಡುವ ಅ ವ್ಯಾಸರನ್ನೇ ಹಿಡಿದು ಎಳೆದು ತನ್ನಿ. ತಡಮಾಡಬೇಡಿ. ನನ್ನ ಜೀವವೇ ಎನ್ನುವಹಾಗಿದ್ದ ಮಹಾವೀರ ಕರ್ಣನಿಗೆ ಆದ ಅನ್ಯಾಯಗಳೆಲ್ಲವನ್ನೂ ಆ ವ್ಯಾಸರಿಗೇ ಹೇಳೊಣವಮ್ತೆ. ಹೊರಡಿ ವಾಯುವೇಗದಲ್ಲಿ!

ಎರಡನೆಯ ಹಮ್ತ

ಪ್ರವೇಶ: ವ್ಯಾಸರನ್ನು ಇಬ್ಬರು ಸೈನಿಕರು ಕರೆದುಕೊಮ್ಡು ಬರುತ್ತಾರೆ



Vyaasa realizes what is happening: He is being questioned, interrogated and challenged by the characters he created.



ವ್ಯಾಸ: ಇದೇನಿದು! ತಪಸ್ಸುಮಾಡುತ್ತಿದ್ದ ನನ್ನನ್ನು ಬಲವಮ್ತದಿಮ್ದ ಎಳೆದು ಇಲ್ಲಿಗೇಕೆ ಕರೆದುಕೊಮ್ಡುಬಮ್ದಿರಿ? ಇದು ರಣರಮ್ಗದಮ್ತಿದೆ; ನಾನು ಬರೆದು ವಿಸ್ತರಿಸಿದ ಮಹಾಭಾರತದಮ್ತೆಯೇ ಕಾಣುತ್ತಿದೆಯಲ್ಲಾ. ಜೊತೆಗೇ, ನಾನು ಸ್ರಿನಷ್ಟಿಸಿದ ಪಾತ್ರಗಳೇ ನನ್ನ ಮುಮ್ದೆ ನಿಮ್ತು, ನನ್ನನ್ನೇ ಎದುರಿಸಿ ಮಾತನಾಡುತ್ತಿವೆಯಲ್ಲಾ! ಇದು ಜಗತ್ತಿನಲ್ಲೇ ಸರ್ವಕಾಲಕ್ಕೂ ಅತಿಶ್ರೇಷ್ಠ ಸೃಷ್ಟಿಶೀಲ ಕವಿಯೂ, ದಿವ್ಯಜ್ಞಾನಿಯೂ ಆಗಿರುವ ನನಗೇ ಅಚ್ಚರಿಯಾಗುತ್ತಿದೆಯೆಮ್ದರೆ ಉತ್ಪ್ರೇಕ್ಷೆಯಾಗುವುದಿಲ್ಲ!

ನಾನು ಕಲ್ಪಿಸಿದ ಪಾತ್ರಗಳೇ ನನ್ನನ್ನು ತಿರು ಪ್ರಶ್ನೆ ಕೇಳುತ್ತಿರುವ ಹಾಗೆ ಮಾಡಿದ ಆ ಹುಲುಮಾನವ, ಆ ಕುತಮ್ತ್ರಿ, ಆ ಅತಿ ಉಧ್ಧಟದ ಅಹಮ್ಕಾರಿ ಯಾರು ಇರಬಹುದು ? ! :-)



Duryodhana sums up the complaints and blames Vyaasa.



ದುರ್ಯೋಧನ: ವ್ಯಾಸರೇ! ಕಳ್ಳರ ಮಾತನ್ನು ಚಕ್ರವರ್ತಿಯಾದ ನಾನು ಕೇಳುವುದು ಎಮ್ದರೇ ಅತಿಶಯವಾಗಿಯೂ ಅಸಾಧ್ಯ! ಆದರೆ, ಮಹಾಭಾರತದಲ್ಲಿ ನಡೆದ ಎಲ್ಲಕ್ಕೂ ನೀವೇ ಕಾರಣರು ಎನ್ನುತ್ತಾನೆ ಈ ಕಪಟಿ ಕ್ರಿರಷ್ಣ.

ರಣರಮ್ಗದಲ್ಲಿ ಅಸಮಾನ ಅಸ್ತ್ರಮೇಧಾವಿಯಾಗಿದ್ದ ನನ್ನ ಜೀವದ ಜೀವದಮ್ತಿದ್ದ ಕರ್ಣನನ್ನು ಈ ರೀತಿ, ಕರ್ಣನ ಸಮಕ್ಕೆ ಹೋಲಿಸಲೂ ಅಯ್ಯೋಗ್ಯನಾದ ಅರ್ಜುನನಿಮ್ದ ಏಕೆ, ಯಾವ ಮನಸ್ಸಿನಿಮ್ದ ವಧೆಯನ್ನು ಅನೀತಿರೀತಿಯಲ್ಲಿ ಮಾಡಿಸಿದಿರಿ.

ನೀವು ನಿಜವಾಗಿಯೂ ಮಹಾಕವಿಯೂ, ಮಹಾಜ್ಞಾನಿಗಳೂ ಆಗಿದ್ದರೆ, ಇದ್ದಕ್ಕೆ ಉತ್ತರ ಹೇಳಿ.



He starts responding to one question at a time.

Vyaasa responds…

Karna cries and complains about his birth with Kunti as the mother, and that she and Krishna hid the facts through out his life.



ಕರ್ಣ: ಹುಟ್ಟಿನ ಸಮಯದಿಮ್ದಲೇ ನನಗೆ ಮೋಸವಾಗಿಹೋಗಿದೆ. ನಾನು ನನ್ನ ಅಮ್ಮನ ತೊಡೆಯಮೇಲೆ ಹಾಯಾಗಿ ನಿದ್ರಿಸುವ, ತಾಯಿಯ ಪ್ರೀತಿಯ ಉಣಿಸಿನ ಸೌಭಾಗ್ಯವಿಲ್ಲದೆಯೆ, ಸೂತ ಪುತ್ರನೆಮ್ದು ಬೆಳೆಯುವ ಹಣೆಬರಹ ನನ್ನ ಪಾಲಾಯಿತಲ್ಲಾ :-(

ಪ್ರವೇಶ: ಕುಮ್ತಿ



Kunti responds to Karna about the birth out of wedlock, as a simple curiosity of a young teenager, yet defends herself as a good mother with examples of Pandavas.



ಕುಮ್ತಿ: "ಅಮ್ಮಾ" ಎಮ್ದು ನೀನು ಬೋಧಿಸಿ ಕರೆದದ್ದನ್ನು ಕೇಳಿ ಬಮ್ದೆ ನನ್ನ ಕಮ್ದ. ನಾನು ಹರೆಯಕ್ಕೆ ಬಮ್ದಾಗ ರ‍ಿಷಿವರ್ಯರು ಕೊಟ್ಟಿದ್ದ ಅಮೂಲ್ಯ ವರಗಳನ್ನು ಸುಮ್ಮನೇ ನಮ್ಬಲಾಗದೆ, ಹೇರಳ ಕಾಮ್ತಿಯಿಮ್ದ ಪ್ರಜ್ವಲಿಸುವ ಸೂರ್ಯನನ್ನು ಒಮ್ದು ದಿನ ಪ್ರಾತಹ್ ಕಾಲ ನೋಡಿ ಅವನನ್ನು ನನಗೆ ವರವಾಗಿ ಕೊಟ್ಟಿದ್ದ ಮಮ್ತ್ರವನ್ನು ಉಛ್ಛರಿಸಿಕೊಮ್ಡು ಅರಾಧಿಸಿದೆ.

ಇದು ನನ್ನ ಹುಡುಗುತನದ ಕುತೂಹಲವೆಮ್ದಾದರೂ ತಿಳಿದುಕೊ; ಮುಮ್ದಿನ ಪರಿಣಾಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಬೇಜವಾಬ್ದಾರಿ ಹೆಮ್ಗಸಿನ ಚೆಲ್ಲಾಟವೆಮ್ದಾದರೂ ಅವಹೇಳನ ಮಾಡು. ವಿವಾಹಕ್ಕೆ ಮುಮ್ಚೆಯೇ ಪಡೆದ ಕೂಸನ್ನು ಅರಮನೆಯಲ್ಲಿ ಸಾಕಿದರೇ, ಯಾವ ರಾಜಕುಮಾರನೂ ನನ್ನನ್ನು ವರಿಸುವುದಿಲ್ಲ ಎಮ್ದು ಸ್ವಾರ್ಥಿಯಾಗಿ, ಭಯಪಟ್ಟು ನಿನ್ನನ್ನು ನೀರಿನಮೇಲೆ ತೇಲಿಬಿಡಬೇಕಾಯಿತು. ಅಮ್ದು ನನಗಾದ ದುಹ್ಖವನ್ನು ಯಾರೂ ಅರ್ಥಮಾಡಿಕೊಳ್ಳರು ಕಮ್ದಾ! :-( :-(

ನನಗೆ ಈ ನನ್ನ ಪಾಪಕ್ಕೆ ಜೀವನದಲ್ಲಿ ಸಾಕಷ್ಟು ಶಾಸ್ತಿಯಾಗಿದೆ. ರ‍ೋಗಿಷ್ಟನಾದ ಗಮ್ಡನನ್ನು ಪಡೆದದ್ದು, ನನ್ನ ಇನ್ನಿತರ ಮಕ್ಕಳೂ, ಅಮ್ದರೆ ಪಾಮ್ಡವರು, ಜೀವನ ಪೂರ್ತಿ ವನವಾಸ, ಅಜ್ಞಾತವಾಸ ಇತ್ಯಾದಿ ಕಷ್ಟಗಳನ್ನು ಅನುಭವಿಸುವುದನ್ನು ನನ್ನ ಕಣ್ಣಾರೆ ನೋಡಿ ಕಣ್ಣೀರು ಸುರಿಸಿದ್ದನ್ನು ವರ್ಣಿಸಲಸಾಧ್ಯ. ಜೊತೆಗೆ, ನೀನು ನಿನ್ನ ತಮ್ಮಮ್ದಿರನ್ನು ಎದುರುಹಾಕಿಕೊಮ್ಡ ಕೌರವರನ್ನು ಆಶ್ರಯಿಸಿ ಜೀವನಮಾಡಿದ್ದನ್ನು ಕಮ್ಡು ನನಗಾದ ಶೋಕ ಮತ್ಯಾರಿಗೂ ಬೇಡ :-( :-(



Karna blames Kunti again for the special boon she begged from Karna of 'Not using the same arrow twice'.

Karna blames Kunti again of it as an excuse to save Arjuna's life.



ಕರ್ಣ: ನಿನ್ನ ದುಹ್ಖದ ಜೀವನವನ್ನು ಕೇಳಲಾರೆನಮ್ಮಾ :-( ಆದರೆ, ನೀನು ನನ್ನಿಮ್ದ "ತೊಟ್ಟ ಬಾಣವನ್ನು ಮತ್ತೆ ತೊಡಬೇಡ ಕಮ್ದ" ಎಮ್ದು ಕೇಳುವಾಗ ನಿನ್ನ ಮಾತೃ ವಾತ್ಸಲ್ಯ ಎಲ್ಲಿ ಹೋಗಿತ್ತು?! ನಿನ್ನ ಪ್ರೀತಿಯ ಮಗ ಅರ್ಜುನನನ್ನು ಉಳಿಸಿಕೊಳ್ಳಲು, ನೀನು ನನ್ನ ಭವಿಷ್ಯವನ್ನು ಮೂಲೆಗೊತ್ತಿ, ಮಾತೃ ವಾತ್ಸಲ್ಯಕ್ಕೆ ತರ್ಪಣ ಬಿಟ್ಟೆಯಲ್ಲಾ! ನನ್ನ ಕೆಟ್ಟ ಹಣೇಬರಹಕ್ಕೆ ಮೊದಲಿಲ್ಲ, ಕೊನೆಯಿಲ್ಲ; ಒಬ್ಬರು ಉಳಿಯಲು ಇನ್ನೊಬ್ಬರು ತಮ್ಮ ಜೀವವನ್ನೇ ತ್ಯಾಗ ಮಾಡಬೇಕಲ್ಲವೆ :-( :-(



Kunti repeats the fact of her request for Karna to join the Pandavas in the war. She says that would have saved Karna's collapse.



ಕುಮ್ತಿ: ಕರ್ಣ! ನಾನು ನಿನ್ನಿಮ್ದ ವರ ಕೇಳುವಮೊದಲೇ, ನಿನ್ನನ್ನು ಪಾಮ್ಡವರ ಪಕ್ಷಕ್ಕೆ ಕರೆದೆನೆನ್ನುವುದನ್ನು ಮರೆಯಬೇಡ. ಆದರೆ, ನಿನ್ನ ಹಟ ನೀನು ಬಿಡಲಿಲ್ಲ; ದುಷ್ಟ ದುರ್ಯೋಧನನ ಸಹವಾಸ ತೊರೆಯಲಿಲ್ಲ; ತಮ್ಮಮ್ದಿರ ಮೋಹಕ್ಕಿಮ್ತ, ತಾಯಿಯ ಬುಧ್ಧಿಮಾತಿಗಿಮ್ತ, ದುರ್ಜನರ ಸಮ್ಗವೇ ಇಮ್ಪಾದ ಸಮ್ಗೀತ ವಾಯಿತು ನಿನ್ನ ಕುರುಡು ಅಹಮ್ಕಾರದ, ಅಪ್ರಯೋಜಕ ಸ್ವಾಮಿನಿಷ್ಟೆಯ ಧರ್ಮಕ್ಕೆ!



Krishna reminds the characters that it was all a plot scripted by Vyaasa.



ಕ್ರಿ ಷ್ಣ: ಕರ್ಣ! ಕುಮ್ತಿ! ಇದೆಲ್ಲಕ್ಕೂ ಕಾರಣ ಆ ವೇದ ವ್ಯಾಸರಲ್ಲವೆ! :-) ಯಾಸರು ನಿಮ್ಮ ಜೀವನವನ್ನು ಈ ರೀತಿಯಲ್ಲೇ ರೂಪಿಸಿರುವುದರಿಮ್ದ ಅವರನ್ನೇ ಕೇಳಿನೋಡೋಣ :-) :-)



Vyaasa responds …

Krishna mentions the name of Draupadi who was ill-treated by Karna and Duryodhana during the 'vastraapaharaNa'.



ಕ್ರಿ ಷ್ಣ: ನೀವೆಲ್ಲರೂ ಈ ರೀತಿ ಪ್ರಲಾಪಿಸುವುದನ್ನು ನೋಡಿದರೆ ಏನು ಹೇಳಲಿ ಎಮ್ದು ಗೊತ್ತಾಗುತ್ತಿಲ್ಲ. ಸಾಧ್ವಿ ಶಿರೋಮಣಿ, ಪತಿವ್ರತೆ, ಸುಮ್ದರಿಯಾದರೂ ಸಾವಧಾನದಿಮ್ದ ನಿಮ್ಮೆಲ್ಲರಿಗಿಮ್ತಲೂ ಹೆಚ್ಚು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದವಳೆಮ್ದರೆ ನನ್ನ ತಮ್ಗಿ ಕ್ರಿಸಷ್ಣೆಯಾದ ದ್ರೌಪದಿ.

ಪ್ರವೇಶ: ದ್ರೌಪದಿ



Draupadi cries out and vents her anger towards Karna and Duryodhana.



ದ್ರೌಪದಿ: ಕರ್ಣ! ನೀನು ರಣರಮ್ಗಕ್ಕೆ ಧೀರನಮ್ತೆ ಬಮ್ದು ಹೋರಾಡಿದರೂ, ಇದೀಗ ಸಾಯುವಕಾಲದಲ್ಲಿ ನಿನ್ನ ಜೀವನವನ್ನೆಲ್ಲಾ ಮರುಕಳಿಸಿ ನೆನಪಿಸಿಕೊಮ್ಡು, ಅಳುತ್ತಿದ್ದೀಯಲ್ಲಾ. ನನಗೆ ಬಮ್ದ ಕಷ್ಟಗಳು ನಿನ್ನ ದುಷ್ಟ ಮನಸ್ಸಿಗೆ ಏನು ತಿಳಿಯುವುದು! ಅಬಲೆಯಾದ ನನ್ನ ವಸ್ತ್ರಾಪಹರಣ ಮಾಡುವುದಕ್ಕೆ ನಾನೇನು ತಪ್ಪು ಮಾಡಿದ್ದೆ? ದುರುಳರಾದ ದುರ್ಯೋಧನ - ದುಶ್ಯಾಸನರ ಪರವಾಗಿ ನಿಮ್ತು ಪರಸ್ತ್ರೀಯಾದ ನನ್ನನ್ನು ಅವಮಾನಿಸಿ, ಛೇಡಿಸಿ, ಕಾಮುಕ ಕೋತಿಮನದ ಹುಚ್ಚನಮ್ತೆ ಆಟವಾಡಿದ್ದು ನೆನಪಿದೆಯೇ ಈಗ ಯುಧ್ಧದಲ್ಲಿ ಸೋತು ಉರುಳಿ ಬಿದ್ದುಕೊಮ್ಡಿರುವ ಕೀಳು ಮನಸ್ಸಿಗೆ? ಅಧಮನಾದ ನಿನಗೆ ಆದಮ್ತೆ ನಿನ್ನ ’ಸ್ವಾಮಿ’ ಆ ಖಳನಿಗೂ ಸಧ್ಯದಲ್ಲಿಯೇ ಸಾವು ಬರಲಿದೆ.

ನನ್ನ ಮಹಾವೀರ ಪತಿಗಳಿಮ್ದ ಕೌರವರೆಲ್ಲರಿಗೂ ನರಕದ ಬಾಗಿಲು ತೆಗೆದುಕೊಮ್ಡು ಕಾದಿದೆ!



Kunti blames Vyaasa for scripting the 'VastraapaharaNa event, as a cheap 'masaala' in his literary masterpiece.



ಕುಮ್ತಿ: ದ್ರೌಪದಿ! ನಿನ್ನ ದುಖ, ಸಿಟ್ಟು, ಸೇಡು ಎಲ್ಲವೂ ಹೆಮ್ಗಸಾದ ನನಗೆ ಅರ್ಥವಾಗುತ್ತದೆ, ಮಗಳೇ. ಆದರೆ, ನಿನ್ನ ಅಣ್ಣ, ಪಾಮ್ಡವರ ಪಕ್ಷಪಾತಿ ಶ್ರೀ ಕ್ರಿtಷ್ಣನು ಮೊದಲೇ ಹೇಳಿದ ಹಾಗೆ, ಇದಕ್ಕೆಲ್ಲಾ ವ್ಯಾಸರೆ ಕಾರಣರಲ್ಲವೆ?



Vyaasa responds …

Duryodhana ridicules the gutless attitude of Bheema during the 'vastraapaharaNa'



ದುರ್ಯೋಧನ: ದ್ರೌಪದಿ! ನೀನೇಕೆ ವ್ಯಥಾ ಕನಸನ್ನು ಈ ಹಗಲಿನಲ್ಲಿ, ರಣರಮ್ಗದಲ್ಲಿ ಕಾಣುತ್ತಿದ್ದೀಯೆ? ನಿನ್ನ ವಸ್ತ್ರಾಪಹರಣದ ಮನೋರಮ್ಜನೆಯನ್ನು ನೋಡುತ್ತಿದ್ದ ನಾವು, ಮೀಸೆಯ ಮೇಲೆ ಕೈಹಾಕಿ ಅಟ್ಟಹಾಸದಿಮ್ದ ನಿನ್ನ ಆ ಸೌಮ್ದರ್ಯದ ಬೆಡಗನ್ನು ಮನತಣಿಸಿಕೊಳ್ಳುತ್ತಾ ನೋಡುತ್ತಿರುವಾಗ, ಆ ನಿನ್ನ ಗಮ್ಡಮ್ದಿರು ಏನೂ ಮಾಡಲಾಗದ ಹೇಡಿಗಳಮ್ತೆ ಬಾಲ ಮುದುರಿಕೊಮ್ಡು ಸುಮ್ಮನೆ ಮಿಕ - ಮಿಕ ನೋಡುತ್ತಿದ್ದರಲ್ಲವೆ! ಆ ಅಡುಗೆ ಭಟ್ಟನ ಮಾತನ್ನೇಕೆ ತಮ್ದು ನಿನ್ನ ನಾಲಿಗೆಯನ್ನು ನೋಯಿಸಿಕೊಳುತ್ತಿದ್ದೀಯೆ ದಿಗಮ್ಬರ ಸುಮ್ದರಿ? (ದೊಡ್ಡ ಅಟ್ಟಹಾಸ ಹಾಕುತ್ತಾನೆ :-))

ಪ್ರವೇಶ: ಭೀಮ



Bheema rages and vows to kill Duryodhana, and moves to attack him. Krishna trickily restrains both Bheema and Duryodhana.



ಭೀಮ: ಎಲವೋ ಅಧಮಾಧಮ! ನಾನು ಅಡುಗೆ ಭಟ್ಟನಾಗಿದ್ದಾಗ, ನನ್ನ ಪ್ರೀತಿಯ ಹೆಮ್ಡತಿಯಾದ ದ್ರೌಪದಿಯನ್ನು ಛೇಡಿಸಿ, ಕೆರಳಿಸಿ ಕಾಮಾಮ್ಧನಾಗಿ ಅರಮನೆಯಲ್ಲೆಲ್ಲಾ ಹಿಮ್ಬಾಲಿಸುತ್ತಿದ್ದ ಆ ಕೀಚಕನನ್ನು ಹೇಗೆ ಕೊಮ್ದೆ ಎನ್ನುವುದು ನಿನಗೆ ಗೊತ್ತೋ! ದುರ್ಯೋಧನ! ನೀನು ಧೈರ್ಯವಮ್ತನಾದರೆ ಇದೀಗಲೇ ಬಾ! ನಿನ್ನನ್ನು ಜೆಟ್ಟಿ ಕಾಳಗದಲ್ಲಿ, ಪಲ್ಟಿಹಾಕಿಸಿ, ಕೆಳಗುರುಳಿಸಿ, ಜಗತ್ಪ್ರಸಿಧ್ಧವಾದ ನನ್ನ ಪಟ್ಟಿನಲ್ಲಿ ನೇಣುಹಾಕಿ ಒಮ್ದೂ ಉಸಿರು ದಕ್ಕದಮ್ತೆ ಮಾಡಿಬಿಡುತ್ತೇನೆ.

ನನ್ನ ಪ್ರೀತಿಯ ಪುತ್ರ ಘಟೋತ್ಕಚನನ್ನು ಸಾಯಿಸಿದ ಆ ಕರ್ಣನನ್ನು ಈ ಕಾಲಭೈರವನ ತುಳಿತದಲ್ಲಿ ಮೆಟ್ಟಿ ಕುಣಿದು ನಾಟ್ಯವಾಡುತ್ತೇನೆ.



Krishna mentions Vyaasa as the writer to decide what may really happen.



ಕ್ರಿ ಷ್ಣ: ಜಗತ್ ಜೆಟ್ಟಿ ಭೀಮ! ಸಾವಧಾನ. ಮುಮ್ದೆ ಆಗುವ ಭಾರತ ಯುಧ್ಧವನ್ನು ಈಗಲೇ ಮುಗಿಸಿ ಬಿಡಲು ಸಾಧ್ಯವೇ! ಇದರ ಸ್ರಿwಷ್ಟಿ ಕರ್ತ, ದಿವ್ಯ ಜ್ಞಾನಿಯಾದ ವೇದ ವ್ಯಾಸರು ನಡೆಸಿದಮ್ತೆ ಮಹಾಭಾರತ ವೆಲ್ಲವೂ ಸಾಗಬೇಕಲ್ಲವೆ! :-) :-)



Vyaasa responds …

Karna complains to Vyaasa that he was unjustly made to believe that he was born to a servant's ancestry - Sootha Putra. He claims to have deserved a royal treatment by everyone. Karna complains about Drona and Bheeshma as begets, who refused an opportunity to be trained along with Kauravas and Pandavas.



ಕರ್ಣ: ಮಹಾವೀರನಾದ ನನ್ನ ಹಣೆಬರಹದ ಪ್ರಕಾರ ನಾನು ಸೂತ ಪುತ್ರನಾಗಿ ಜೀವನಪೂರ್ತಿ ಅವಹೇಳನ ಮಾಡಿಸಿಕೊಳ್ಳಬೇಕಾಯಿತಲ್ಲಾ :-) ನನ್ನ ದುಹ್ಖ ಯಾರಿಗೂ ಅರ್ಥವಾಗಲಾರದು. :-(

ಪ್ರವೇಶ: ಏಕಲವ್ಯ



Ekalavya confers with a similar complaint to Drona, Bheeshma, Krishna and also Arjuna.



ಏಕಲವ್ಯ: ನಿನ್ನ ದುಹ್ಖ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ ಕರ್ಣ. ಬೇಡರವನಾದ ನನಗೆ ಬಿಲ್ಲುವಿದ್ಯೆ, ಶಸ್ತ್ರ ಪಾಠಗಳನ್ನು ಹೇಳಿಕೊಡುವುದಿಲ್ಲ ಎಮ್ದು ನನ್ನನ್ನು ಕನಿಕರವಿಲ್ಲದೆ ಹಿಮ್ತಿರುಗಿಸಿ ಕಳಿಸಿಬಿಟ್ಟ ದ್ರೋಣರ ಬಗ್ಗೆ ನನಗೂ ಬಹಳ ಬೇಸರವಾಯಿತಲ್ಲವೆ. ಹುಟ್ಟಿನಿಮ್ದ ಬೇಡನಾದ ನನಗೆ ಬಿಲ್ಲುವಿದ್ಯೆಯನ್ನು ನೈಜವಾಗಿ ಕಲಿಯಬಲ್ಲ ಸೌಭಾಗ್ಯ - ಸಮ್ಪ್ರದಾಯಗಳು ರಕ್ತಗತವಾಗಿ ಬಮ್ದದ್ದು ಎನ್ನುವುದನ್ನು ತೋರಿಸಿಕೊಡಲು ಗುರುವಿನ ಪ್ರತಿಮೆಯೇ ಸಾಕ್ಷಿಯಾಯಿತು. ಕರ್ಣ! ಆದರೆ, ಬಿಲ್ಲುವಿದ್ಯಕ್ಕೇ ಅತಿ ಅವಶ್ಯಕವಾದ ನನ್ನ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ಕೊಡಲು, ನನ್ನ ಕಣ್ಣಿನ ರೆಪ್ಪೆಯನ್ನು ಕೂಡ ಮಿಟುಕಿಸದೆ ಒಮ್ದೇ ಹೊಡೆತದಲ್ಲಿ ಕತ್ತರಿಸಿ ಗುರುಗಳ ಪಾದದಲ್ಲಿಟ್ಟಾಗ, ಪ್ರಪಮ್ಚದ ಧನಸ್-ಶಾಸ್ತ್ರ ಪಾರಮ್ಗತರನ್ನೆಲ್ಲಾ ಮಿಮ್ಚಿ ಗೆದ್ದ ಸಮ್ತಸದ ಅನುಭವವಾಯ್ತು.

ಕರ್ಣ! ನಿನ್ನ ಪರಿಸ್ತಿತಿ ನನಗೆ ಅರ್ಥವಾಗುವಷ್ಟು ಇನ್ನರಿಗೂ ತಿಳಿಯಲಾರದು.



Vyaasa responds.

karNa complains of the tricks played by Krishna, Kunti, Indra and also Soorya.



ಕರ್ಣ: ನನಗೆ ಕಪಟಿ ಕೃಷ್ಣ, ತಾಯಿ ಕುಮ್ತಿ, ಇಮ್ದ್ರ ಇವರುಗಳು ಅನ್ಯಾಯ ಮಾಡುತ್ತಿರುವಾಗ, ನನ್ನ ತಮ್ದೆಯಾದ ಸೂರ್ಯ ದೇವನು ನನ್ನ ಪತನಕ್ಕೆ ಪ್ರೀತಿಯಿಮ್ದ ಅಡ್ಡಬಮ್ದು ನನ್ನನ್ನು ಉಳಿಸಿಕೊಳ್ಳಬಹುದಾಗಿತ್ತಲ್ಲವೆ?

ಪ್ರವೇಶ: ಸೂರ್ಯ

ಸೂರ್ಯ: ಅಳಬೇಡ, ಕಣ್ಣೀರಿಡಬೇಡ ಕರ್ಣ!



Karna cries as an unfortunate child with Soorya not taking any practical steps to stop him from his 'noble 'giveaway' acts before the war.



ಕರ್ಣ: ಇಮ್ದ್ರನು ತನ್ನ ನೆಚ್ಚಿನ ಮಗನಾದ ಅರ್ಜುನನ ಜಯಕ್ಕೋಸ್ಕರ ನನ್ನಿಮ್ದ ವರದ ನೆವದಲ್ಲಿ ನನ್ನ ಜೀವವನ್ನೇ ಸಾಯುವ ಮುಮ್ಚೆಯೇ ಕಿತ್ತುಕೊಮ್ಡು ಹೋಗಿಬಿಟ್ಟ. ನೀನೇಕೆ ಅಮ್ತಹ ಪುತ್ರವಾತ್ಸಲ್ಯವನ್ನು ನನಗೆ ತೋರಲಿಲ್ಲ?



Soorya responds reminding Karna about his attempts to warn his son Karna, where as Karna ignored him.



ಸೂರ್ಯ: ಪುತ್ರಾ! ನೀನು ದಾನಶೂರನೆಮ್ಬ ಹೆಸರಿಗೆ ತಕ್ಕಮ್ತೆ ಕೇಳಿದ್ದನ್ನು, ಕೊಮ್ಚವೂ ಹಿಮ್ಜರಿಯದೆ, ಒಮ್ದು ಮಿಮ್ಚು ಹೊಳೆಯುವ ಕ್ಷಣಮಾತ್ರವೂ ಹಾರಿಹೋಗದಮ್ತೆ, ನಿಮ್ತಲ್ಲೇ ತರ್ಪಣ ಬಿಟ್ಟು ಕೊಡಲು ಹೋದಾಗ, ನಾನು ಬೇಡಿ, ಬೇಡಿ ’ಬೇಡ ಮಗು’, ’ದುಡುಕಬೇಡ ಕಮ್ದ’, ನಿನ್ನ ಪ್ರಾಣವನ್ನೇ ತರ್ಪಣ ಕೊಡಬೇಡ’ ಎಮ್ದೆಲ್ಲಾ ಹೇಳಿ, ಕೂಗಿ, ಅಗ್ನಿಹೃದಯದ ನಾನೂ ಒಮ್ದು ಹನಿ ಕಣ್ಣೀರು ಬಿಟ್ಟಿದ್ದನ್ನು ಕಮ್ಡೂ, ನೀನು ನಿನ್ನ ದಾನವನ್ನು ಪೂರ್ತಿ ಮಾಡಿದೆಯಲ್ಲವೇ?



Vyaasa responds…

Last opportunity for spectator participation

Vyaasa sums up the character of Karna, glorifies him and explains his story scripting of the epic as the best way Vyaasa closes the program with final dialogues with a special mention of Karna's role.

End - Curtain Closes



ಅಮ್ತ್ಯ ಪರದೆ ನಿಧಾನವಾಗಿ ಮುಚ್ಚುತ್ತದೆ



Acknowledgements

1. Names of people who sent in E-mail and phone in questions to Vyaasa
2. The actors take a bow while they are recognized and congratulated for participating in this experiments.
3. Thanking That's Kannada and Kannada Ratna.
4. Other acknowledgements and recognition.
5. Follow up programs and opportunities of Talk Back, as a continuing brainstorming activity in our lives.

Instructions to actors:

I encourage partipants to write their own dialogues or be ready to go with impromptu dialogues / questions with the general guidelines of the program flow.

Write only three sentences are less for each dialogue. We have only one hour.

You may send it to me for compilations and redistribution.

REQUEST:

Can we have all actors meet ONLY once more before the program?

Automatic Chandas Processor: Project Starts

Chandas: Project Starts


I am starting the development activity of the Chandas processor / evaluator. Sorry for the delay. I got too much involved in my music composition of the GeneticMusic genre.

Please feel free to contact me if anyone is interested in participating. You may join the Chandas Yahoo Group and interact with others on this first test project. Feel free to contact me to be added / invited to the Chandas Yahoo Group.

Please note that this is the first and trial / test project on which a detailed proram will be based. No restrictions. Anyone can participate. I practice equal opportunity.

I do NOT request any funds for the program. You need to walk into the project team only with your passion for literature.

First Small Project: To develop a test software to process and evaluate chandas.

Capabilities / Specifications:

1. Set up a table / database for the different combinations of Kannada aksharas including all 'kaaguNita' derivatives. In addition to swaras and vyanjanas, make sure to include ka, kaa, ki, kee etc. Include vattaksharas also.

2. Create the guNa, maatra, laghu, guru columns for each item. For example: Here are the counts / weights - ka is 1 whereas kaa is 2; ki is 1, whereas kee is 2. Vattaksharas donate their additional weight to the preceding akshara.

3. Take the text of the poem to be processed from Baraha 5.0, copy and paste onto a MSWord document. You may also consider notepad depending on your software interface needs.

4. You may use the MSWord macro features for processing. Make sure to transfer or add (as necessary) line and stanza separators. You may use MS Visual Basic or C, C++ or any other suitable software.

5. Create a tally of the weights subtotal for each line.

6. Validate the line total for specified count of the type of chandas to be verified. It is a good idea to create a look up table for the different chandas styles.

7. Print out the line counts. Indicate if it meets the required chandas in a distinct font or color.

8. You could use html type of hot links for annotations in future versions to show the count for each akshara, word, line or stanza. You could also create an MSWord table (with expandable Excel type of spreadsheet) to display the process results.

More ideas in my next post.

KRS Murthy

Murthy's New Idea: Chandassu Karaoke and Automatic Music Composer for Poetry

Murthy's New Idea: Chandassu Karaoke and Automatic
Music Composer for Poetry

Dear Freinds,
You may all remember that I had proposed automatic
chandassu calculator and validator few years ago. I
was pleasantly impressed to note after few years that
Dr. Krishna Priyan implemented it and gave us a
lecture recently. We all know of his diligent approach
to many things.

I have now developed the basic ideas for Chandassu
Karaoke. Another idea is applicable to music composers
and other musicians, as well as novices, modern and
traditional poetry / song composer. Here are its
features:

1. You can use Dr. Krishna Priyan's Chandassu
calculator engine and get the maatre notations for
each word, line and padya. I could use its output to
create a Karaoke track to be played while reading the
padya. Imagine to be able to create Karaoke track for
reading, teaching and listening epic works from
Kumaara Vyaasa, Pampa, Ranna and even recent poets
like Kuvempu!

2. A web based tool could be developed so that one can
input a padya in Baraha or other formats to get Dr.
Krishna Priyan's Chandassu notations and Murthy's
Karaoake track. I can make it interactive for users to
choose from a variety of musical instruments to play
the Karaoke track.

3. The Karaoke track will help for readers to keep
chosen pace / rhythm while the padya is read.

4. My idea also extends to the pada praasa (including
aadi praasa, madhya praasa and antya praasa) based
poems to also include modern poems. Now, imagine our
poet friends and poetry enthusiasts to be able to
compose poetry and interactively play with Murthy's
web tool even while composing to review, modify and
edit their creations to make sure it is "singable".
You can choose from a diversity of raagas and taalas
to check out and enhance the creative process.

5. Music composers, music directors, singers and other
musicians could use this tool to set poems to
different tunes.

6. Once the poem's lyrics have been set to a given
raaga or tune, Murthy's engine would let you
experiment to musically transform the composition to
any other selected raaga. For example, you may have
composed or set to tune a poem in Mohana raaga, that
you want to transform to HindOLa raaga. Murthy's web
engine could do it. You could also experiment on
changing the taala also. Murthy's engine could also
let you change the musical instrumental selection at
different parts of the poem, so that you could
interactively compose and listen how it sounds with
different instruments.

7. Finally, you could host your poem on your own
website with a wide selection of raaga, taala, musical
instrument repertoire for an enjoyable experience for
the poetry and music enthusiasts.

8. This applies to all languages of the world and all
music genres. You may know that I have composed many
musical genres of the world, even to include Chinese,
Japanese, Persian, Israeli and Middle Eastern music
genres. It also applies to rap music!


Please note that I already have over 2000 music
compositions. Therefore, I know what I am talking
about. You may get involved in the team depending on
your interest and time. I will be glad to accommodate
people with a wide range of skills, talents and
available time. You need not know about music or music
composition. You have to be self motivated and
genuine.

ದಿಟದ ಭ್ರಮೆಯ ಕನಸು ಕಂಡೆ

ದಿಟದ ಭ್ರಮೆಯ ಕನಸು ಕಂಡೆ

ಕೆ ಆರ್ ಎಸ್ ಮೂರ್ತಿ

ಕತ್ತಲೆಯಲಿ ನನ್ನ ಪ್ರತಿಬಿಂಬವ ಕಂಡೆ
ಕಿವುಡ ತಲೆದೂಡಿ ಸಂಗೀತವ ಕೇಳಿದಂತೆ

ನಿನ್ನೆಯನು ಕಾತರದಿ ಎದುರು ಕಾಣುವವನಂತೆ
ನಾಳಿನ ಸವಿನೆನಪು ಇಂದೆ ಆಗಿಹೋದಂತೆ

ಕನಸಿನಲಿ ಕಂಡ ಠೊಳ್ಳನೇ ನಿಜವೆಂಬಂತೆ
ನನ್ನ ಶವದ ಮೇಲ್ಬಿದ್ದು ನಾನೆ ಅತ್ತಂತೆ

ಭೂಮಿಯೆಡೆ ಬೀಳುವ ಕಲ್ಲು ಠಟ್ಟನೆ ದಿಗಂತಕ್ಕೇರಿದಂತೆ
ಮಳೆಹನಿಗಳು ನೆಲದಿಂದ ಆಗಸಕ್ಕೇರಿದಂತೆ

ನನ್ನ ಅಪ್ಪಿಗೆಯಲಿ ನನ್ನನು ನಾನೆ ಸುಖ ಪಟ್ಟಂತೆ
ನನ್ನ ಪ್ರಿಯೆಯನ್ನು ತೊರೆವ ಆತರ ಆವರಿಸಿಕೊಂಡಂತೆ

ನನ್ನ ಗರ್ಭದಿಂದ ನಾನೇ ಹುಟ್ಟಿಬಂದಂತೆ
ನನ್ನ ಸಾವಿಗೆ ನಾನೇ ಕುಣಿದಾಡಿದಂತೆ

ಹಸಿದ ಹೊಟ್ಟೆಯವನು ಧಿಡೀರ್ ತೇಗಿಬಿಟ್ಟಂತೆ
ಶೂನ್ಯದಲಿ ಸರ್ವ ಸಂಪತ್ತಿನ ತೃಪ್ತನಾದಂತೆ

ವಿಶ್ವದಲಿ ಎಲ್ಲೆಲ್ಲಿ ಹುಡುಕಿದರೂ ನಾನೊಬ್ಬನೇ ಇರುವನಂತೆ
ಏಕಾಂತದಲಿ ಎನ್ನಾತ್ಮವನು ಪರಮಾತ್ಮ ಭ್ರಮಿಸಿದನಂತೆ

ಎರಡು ಕನ್ನಡಿ ಮಧ್ಯೆ ನಾನಿಂತು, ನನ್ನ ಕಣ್ಣಿಂದೇ
ಸಾವಿರ ಸಾವಿರ ಸಾವಿರ ಬಿಂಬಗಳ ನೋಡಿ ದುರುಕಿಸಿದಂತೆ

ನಂಬಲಾರದನು ನಾ ಕಂಡೆ, ನನ್ನನ್ನೇ ನನ್ನ ಬಿಂಬವು ನೋಡಿದಂತೆ
ಸತ್ಯ ಮಿಥ್ಯೆಗಳು, ಸಕಲ ಸೃಷ್ಟಿಯು ಬಿಂದುವಿನಲಿ ವಿಲೀನವಾದಂತೆ

ಇದ್ಯಾತರ ಲೆಕ್ಕವೋ, ಸರಿ ಬೆಸಗಳು ಬೆರೆಸಿಹೋದಂತೆ
ಕತ್ತಲೆ ಬೆಳಕುಗಳು, ಸಿಹಿ, ಕಹಿಗಳು ಬೇರೆಯಲ್ಲವಂತೆ

ಕಾಲ ಮಾಯೆ, ದಿಕ್ಕೆಲ್ಲ ಮಾಯೆ, ಭ್ರಮಿಸುವವ ನಾನೆ ಮಾಯೆ
ಭ್ರಮಿಸುವುದೇ ಮಾಯೆ, ಭ್ರಮಣ ಕಾರಣ, ಕರ್ತ, ಕ್ರಿಯೆಯೂ ಮಾಯೆ

ಅದೇನಿತ್ತೋ, ಇಲ್ಲವೋ; ಅದೇನಿದೆಯೋ, ಇಲ್ಲವೋ; ಅದೆನಹುದೋ, ಇಲ್ಲವೋ
ಎಲ್ಲವೂ ಇಲ್ಲ; ಇಲ್ಲ-ಇಹುದು-ಇದ್ದೀತೂ ಎಲ್ಲವೂ ಒಂದರಲ್ಲೊಂದು ವಿಲೀನ

ವಿರೋಧಿಯ ವರುಷ ಬಂತು

ವಿರೋಧಿಯ ವರುಷ ಬಂತು

ಡಾಕ್ಟರ್. ಕೆ. ಆರ್. ಎಸ್. ಮೂರ್ತಿ

ವಿರೋಧಿಯ ವರುಷ ಬಂತು, ಹರುಷದಿ ಘೋಷಿಸುವ ಬೇಗ ಬನ್ನಿ
ವಿರೋಧವ ವಿರೋಧಿಸುವ ದಿವಸಗಳು ರಭಸದಲಿ ಬಂದಿದೆ ಎನ್ನಿ

ಅಡ್ಡಿಗಳೆಲ್ಲವ ಹೊಡೆದೋಡಿಸುವ ಗಿಡ್ಡ ಗುಂಡನಿಗೆ ಜಯಜಯವೆನ್ನಿ
ಸೊಟ್ಟ ಸೊಂಡಿಲಲಿ ಕಡುಬು ಹಿಡಿದವಗೆ ಮುದದಿ ಮಣಿಸುವ ಬನ್ನಿ

ವಿರೋಧಿಸುವ ದಿಟ್ಟದಿಂ ಕಿಟ್ಟನಂತೆ ಕೆಟ್ಟತನವ ಕೊಂದು ಕುಟಿಲತೆಯಲ್ಲಿ
ಆರಾಧಿಸುವ ಹರನ, ಮೈಯೆಲ್ಲ ಧರಿಸಿ ಸುಟ್ಟ ವಿಭೂತಿಯನು ದಿಟ್ಟತನದಲ್ಲಿ

ಬೆಟ್ಟದ ಭೈರವನು, ದುಷ್ಟತನವ ತನ್ನ ಕಾಲಲಿ ಮೆಟ್ಟಿ ಮೆರೆದ ನಟರಾಜನಂತೆ
ಒಟ್ಟಾದ ಭುವಿನರರು ದುಷ್ಟರಕ್ಕಸರ ಬಡಿದಿಕ್ಕಿ ಓಡಿಸುವ ಭರದಿ ಬನ್ನಿ ಇಂದೆ

ಅನಿರುಧ್ಧ ನಮ್ನಿಮ್ಮ ಆರಾಧ್ಯದೇವ, ಸಕಲ ಅನ್ಯಾಯವನು ನಿರೋಧಿಸುವ
ಸಮೃಧ್ಧ, ಸೌಹಾರ್ದ, ಸುಭಾಶೆ, ಶಾಂತಿ ಜೀವನವ ಭುವಿಯಲ್ಲಿ ವೃಧ್ಧಿಸುವ

ವಿರೋಧಿಯ ಹರುಷವನು ವಸುಧೆಯ ಮೇಲೆಲ್ಲ ಹೆಮ್ಮೆಯಲಿ ಹಂಚೋಣ ಬನ್ನಿ
ವೃಧ್ಧಿಯ ಅಮೃತದ ವರ್ಷವನು ಎಲ್ಲೆಲ್ಲೂ ಧರಧರನೆ ಸುರಿಸೋಣ ಬೇಗ ಬನ್ನಿ

ಏನದು?

ಏನದು?

ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಏನದು? ಯಾವುದು? ಎಲ್ಲಿದೆ? ಹೇಗಿದೆ?
ಪ್ರಶ್ನೆ ಮೇಲೆ ಪ್ರಶ್ನೆ; ಪ್ರಶ್ನೆ ಒಳಗೆ ಪ್ರಶ್ನೆ.
ಕೇಳಿದವರಾರು? ಅದನ ಕೇಳುವವರಾರು?
ಪೇಳಬಲ್ಲವರಾರು? ತಿಳಿಯಬಲ್ಲವರಾರು?

ಅನಂತ ತನನಾನ, ಆತನ ತರ, ಆತನ ಥರ, ಇದೆಯೇ ಇತರ ಮಂಜುಳ ಗಾನ?
ದಿಗಂತ ತನುಮಾನ, ಚೇತನ ತನು, ಚ್ಯುತವಲ್ಲ, ನಿಶ್ಚಯ ಇದಕಿಲ್ಲ ಸಮಾನ

ನಿಮಗೆ, ನನಗೆ, ಎಲ್ಲರಿಗೂ, ಕಣ್ಣಿಗೆ ಕಾಣುವ, ಕಾಣದ, ತಾಣದಲಿ ಇದರಾಟ
ಅರಿತ, ಅರಿಯದ, ಮರೆಯದ, ಅರಿಯಲಾಗದ, ಗುರಿಯಿಲ್ಲದ ಒಗಟಿನಾಟ

ಅಳೆಯಲಾಗದ, ಕಳಿಯಲಾಗದ, ಬೆಳೆಯಲಾಗದ, ಹೇಳಲಾಗದ ಸಂಪೂರಣ
ಹಿಡಿಯಲಾಗದ, ಮಡಿಯದ, ಮುಗಿಯದ, ಕುಗ್ಗದ, ಹಿಗ್ಗದ ಸಕಲ ಕಾರಣ

ನನ್ನತ್ವಕ್ಕೆ, ನಿಮ್ಮತ್ವಕ್ಕೆ, ಸಮಸ್ತ ಅಸ್ತಿತ್ವಕ್ಕೆ ಸಮತ್ವ ಕಾಣುವುದು ನಿನ್ನ ಮನ
ನಿತ್ಯ ಸತ್ಯಕ್ಕೆ, ಅಮೃತತ್ವಕ್ಕೆ, ಅಚಿಂತ್ಯ, ಚೇತನದಲಿ ಮೂಡಲಿ ನಿನ್ನ ಚಿತ ಆನುದಿನ

ನಾನದು. ನೀವದು, ಇಲ್ಲಿದೆ. ಹೀಗಿದೆ.
ಪ್ರಶ್ನೆಯಲೇ ಉತ್ತರ; ಮತ್ತೇಕೆ ಕೇಳುವೆ ಪ್ರಶ್ನೆ?
ಕೇಳಿದವ ನೀನು. ಕೇಳುವವ ನೀನು.
ಪೇಳಬಲ್ಲವ ನೀನೆ. ತಿಲಿದುಬಲ್ಲವ ನೀನೆ.

ಹೆಮ್ಮೆಯ ನಮ್ಮ ಮನೆ

ಹೆಮ್ಮೆಯ ನಮ್ಮ ಮನೆ

ಕೆ. ಆರ್. ಎಸ್. ಮೂರ್ತಿ

ನನ್ನ ಮನೆತನದ, ಜಾಣರ, ಸಜ್ಜನರ ತಾಣದ
ಹೆಮ್ಮೆಯನು ಕಹಳೆ, ಕೊಂಬುಗಳನೇ ಊದಿಸಿ
ಇಳೆಯ ದಿಕ್ಕು, ದಿಕ್ಕುಗಳಲಿ ಡಂಗುರದೊಡನೆ
ಬೀಗುವುದಕೆ ನಸು ನಾಚಿಕೆ ನನಗೇಕೆ?

ದೊಡ್ಡಕ್ಕ ಮಹಾದೇವಿಯು ನನಗೆ;
ನನ್ನಣ್ಣ ಬಸವನು ಮಹಾ ಸಾಹುಕಾರ
ಭಕ್ತಿ ಭಂಡಾರಿ.

ಇಹದ ಕ್ಷಣಿಕವ ತ್ಯಜಿಸಿ
ವಿರಕ್ತಿಯಾವೇಶದಲಿ ವರಿಸಿದಳು
ಕೈಲಾಸ ಪತಿ ಚೆನ್ನ ಮಲ್ಲಿಕಾರ್ಜುನನ
ನಮ್ಮಕ್ಕನ ಗಾನ ಸುಧೆಯ ಕೇಳಿದರೆ
ನಿಮಗೆಲ್ಲರಿಗೂ ಲಭ್ಯ ಖಚಿತ
ಪರದ ಪಟ್ಟ; ಕೈಲಾಸ ವಾಸ.

ದಲಿತರು ನಾವಲ್ಲ, ಬಡವರು ಯಾರಿಲ್ಲ
ಬಸವಣ್ಣನ ಮನೆಗೆ ಓಡಿ ಬನ್ನಿರೋ
ಧಿಢೀರನೆ ಬಿಸುಟು ಬೇಧದ ಮನವ
ಅಣ್ಣನ ಮನೆಗೆ ಬಾಗಿಲಿಲ್ಲ,
ಬೀಗವಂತೂ ಇಲ್ಲವೇ ಇಲ್ಲ;
ಅವನ ಮನ ಅತಿ ವಿಶಾಲ
ಬಂದವರಿಗೆಲ್ಲಾ ಭಕ್ತಿಯ ರಸದೂಟ.

ದಾಸವರೇಣ್ಯ ಪುರಂದರ, ಕನಕಾದಿಗಳು
ನಮ್ಮ ಆತ್ಮೀಯ ಬಂಧುಗಳು
ನವಕೋಟಿ ಹೊನ್ನು, ರತ್ನ, ವೈಢೂರ್ಯಗಳ
ಬಿಸುಟು, ಕೈ ನೀಡಿದರು
ದಿನ, ದಿನವೂ ಜೋಳಿಗೆಯ ಹೊತ್ತು;
ಒಂದು ಹೊತ್ತಿಗೆ ಬೇಕೆಂದು ಭಿಕ್ಷೆ ಬೇಡುವ
ನಾಟಕವನಾಡಿ, ಕಪಟನಾಟಕ ಶ್ರೇಷ್ಠನ
ಪಾಡಿ ಪೊಗಳಿದರು ವಿಠಲನ ನಾಮವನು;
ಕಲ್ಲು ಸಕ್ಕರೆ ಹಂಚಿದರು ನಮಗೆಲ್ಲ;
ತೋರಿದರು ವೈಕುಂಠಕೆ ದಾರಿಯನು.

ಮಹಾವೀರನು ನನ್ನ ಗುರು
ಆಕಾಶದೆತ್ತರ ನಿಂತಿರುವ
ಗೊಮ್ಮಟೇಶ್ವರ ಕಲ್ಲಿನಲಿ ಜೀವತುಂದಿಹ
ಜಿನ ಶ್ರೇಷ್ಠ ಮಹಾನುಭಾವ.

ನಮ್ಮಮ್ಮ ಚಾಮುಂಡಿ, ಬಲು ಘಟವಾಣಿ
ಬಡಿದು ಇಕ್ಕಿದಳು ರಕ್ಕಸ ಸೇನೆಯನೆ;
ಮೆಟ್ಟಿ ಸಂಹರಿಸಿದಳು ದುಷ್ಟ ಮಹಿಷನನು

ಇಳೆಯಲ್ಲೇ ಹುಡುಕಿದರೂ ಸಿಗುವುದುಂಟೇ
ಇಂತಹ ಶಾಂತ ಸುಂದರಿ.
ಸೂಸುವುದು ಸುವಾಸನೆಯ ಘಮವನು
ಅವಳು ಮುಡಿದ ಅರಳು ಮಲ್ಲಿಗೆಯಿಂದ

ಕೆಂಪು ತುಟಿಯವಳು ತುಂಟಿ ಚಾಮುಂಡಿ
ಚಿಗುರು ವೀಳ್ಯದ ಎಲೆ ಬಾಯಲ್ಲಿ.
ಬೇಕೆ ನಿಮಗೂ ಸ್ವಲ್ಪ ಬನ್ನಿ ಕೊಳ್ಳಿ
ನಗರದ ಮಾರುಕಟ್ಟೆಯ ರಸ್ತೆಯಲಿ.

ಬನ್ನಿ ನೋಡುವ ಬರುತಿಹುದು
ರಾಜ ಠೀವಿಯ ಹೆಜ್ಜೆ ಇಡುತ್ತ
ಹದಿನೈದು ಅಡಿ ಎತ್ತರದ
ಕಾಣುತಿದೆಯೇ ಆನೆಯ ಹಿಂಡು?

ನೋಡಿ ಆನಂದಿಸಿ ನಾಟ್ಯ ಸುಂದರಿಯ
ಭಾವ, ಭಂಗಿಗಳ, ಬಳುಕುವ ಸಿಂಹ ಕಟಿ
ಅದರ ಮೇಲೆ ತುಂಬಿ ಕುಣಿಯುವ ಕುಚ ದ್ವಯ
ಇದು ಸುಂದರವೋ, ಅದು ಸುಂದರವೋ
ವಿಷ್ಣುವರ್ಧನನೇ ಕೇಳಿ ನೋಡಿ

ಶಾಂತಲೆಯ ನಾಟ್ಯದಲಿ ಮನಸೋತು
ಮುಳುಗಿಹಿರಿ ಸೌಂದರ್ಯಾರಾಧಕರೆ
ನಿಮ್ಮ ಎದೆಯು ಮೋಹದಿ ಕಂಪಿಸುತಿದೆ

ಆ ಸಿಂಹಕಟಿಯ ನಾಟ್ಯದ ಹಿಂದೆ
ಬರುತಿಹುದು ಜೋಕೆ ಭಯಂಕರ ಸುಂದರ ಸಿಂಹ

ಕೇಳುತಿಹುದೆ ಎದೆಯ ನಡಗಿಸುವ ಘರ್ಜನೆಯು?
ಚಾಮುಂಡಿ ಏರಿ ಬರುತಿಹಳು ನೋಡಿ
ಮೈ ಬಾಗಿ ಮಣಿಯಿರಿ, ಬಹಳ ಗೌರವದಿಂದ
ನಮ್ಮ ಭೂಲೋಕದ ಸಾರ್ವ ಭೌಮಿಗೆ
ಕಾವೇರಿಯು ತಾಹರಿವ ದಿಕ್ಕ ಮರೆತು
ಧಾವಿಸಿ ಬರುತಿಹಳು ದೇವಿಯ ಕಾಲ ತೊಳೆಯಲು.

ವಾಯು ದೇವನು ಹೊತ್ತು ತಂದಿಹ
ಸಿರಿಗಂಧದ ಕಾಡಿನ ಸುಗಂಧವನು
ತಾಯಿಗೆ ಚಾಮರವ ಬೀಸುತಿಹನು.

ಬನ್ನಿ ಮನೆಯೊಳಗೆ ನಿಮ್ಮ ಸಮ್ಸಾರದ ಜೊತೆಗೆ
ಕೂಡಿ ವಿಶ್ರಮಿಸಿ ತೇಗದ ಮಣೆಯ ಅಲಂಕರಿಸಿ
ಕುಡಿಯಿರಿ ಕೊಡಗಿನ ಅಮೃತದ ಪಾನ
ಚೊಂಬಿಗಿಂತಲೂ ದೊಡ್ಡ ಬೆಳ್ಳಿಯ ಲೋಟ
ಸುಡುತಿಹುದು ಕಾಫಿ ನಾಲಿಗೆ ತುಟಿಗಳು ಜೋಕೆ
ಕಾವಲಿಯ ಮೇಲೆ ಹಿಟ್ಟು ಹಾಕುವೆನು
ಒಂದೆರಡು ಮೈಸೂರು ಮಸಾಲೆ ದೊಸೆ
ಭಾಂಡಲೆಯಲ್ಲಿ ತಟ್ಟುವೆನು
ದೊಡ್ಡ ರಾಗಿಯ ರೊಟ್ಟಿ
ಅದಕೆ ಹದ ಖಾರದ ತೆಂಗಿನ ಚಟ್ನಿ
ಜೊತೆಗೆ ಮದ್ದೂರಿನ ವಡೆ, ಚಕ್ಕುಲಿ, ಕೋಡುಬಳೆ

ನಮ್ಮೂರ ಊಟವನು ಚಪ್ಪರಿಸಿ ತಿನ್ನಿ
ಹಿತ್ತಲಲಿ ಬೆಳೆಯುವುದು ಎಳೆಯ ಬದನೇಕಾಯಿ,
ಅದಕೆ ಬ್ಯಾಡಗಿ ಮೆಣಸಿನ ಕಾಯಿ
ಅರೆದು ಮಾಡಿದಾ ನಳಪಾಕ ಎಣ್ಣೆಗಾಯಿ
ಕಾವಲಿಯಿಂದ ಬೀಳುವುದು
ನಿಮ್ಮ ಅಗ್ರದ ಬಾಳೆಯ ಮೇಲೆ
ಹದನಾದ ಜೋಳದ ರೊಟ್ಟಿ

ಬಿಸಿ, ಬಿಸಿ ಬೇಳೆ ಹುಳಿಯನ್ನ
ತಿನ್ನಿರಿ ಕಂಠ ಪೂರ್ತಿ
ಹೊಟ್ಟೆ ಭಾರ, ಮೇಲಕ್ಕೇಳುವ
ಆತುರವೇಕೆ, ಮರೆತು ಬಿಟ್ಟಿರಾ
ಘಮ, ಘಮ ತಿಳಿ ಸಾರು
ಮೈಸೂರಿನ ಸಾರೆಂದರೆ ಮಾತ್ರ ನಿಜದ ಸಾರು
ಮಿಕ್ಕವರ ರಸಂ ಬರಿಯ ಬಿಸಿನೀರು
ನಮ್ಮ ಮೈಸೂರು ಸಣ್ಣ ಅಕ್ಕಿ
ಮಲ್ಲಿಗೆಗಿಂತ ಬಹಳ ಅರಳು
ಕುಸುಬಲಕ್ಕಿ ಬೇಕೆ ಮಹರಾಯರೆ?

ಗಸಗಸೆಯ ಪಾಯಸ ಕುಡಿದರೆ
ನಿಮಗೆ ಸಾಕಷ್ಟು ಘಾಢನಿದ್ರೆ;
ಭಕ್ಷ್ಯ ಬೇಕೆಂದಿರಾ ಈಗಲೇ ತಯಾರು;
ನಮ್ಮ ಮನೆಯ ಮೈಸೂರು ಪಾಕ;
ತೆಗೆದುಕೊಳ್ಳಿ ಇನ್ನೂ ನಾಲ್ಕೈದು ಬಿಲ್ಲೆ;
ಧಾರವಾಡವೆಂಬ ಸ್ವರ್ಗದ ಫೇಢ
ಹಾಕುವೆನು ಎಲೆಯ ಮಧ್ಯಕ್ಕೇ

ಒಂದೆರಡು ದಿನ, ವಾರ, ತಿಂಗಳು ಸಾಲದು
ನಿಮ್ಮ ಮನೆ ಮಕ್ಕಳೆಲ್ಲಾ
ಇಲ್ಲೇ ಉಳಿದುಕೊಳ್ಳಿ,
ನಮ್ಮೂರ ಚೆನ್ದ್ದ ನೋಟವನು
ನಮ್ಮೂಟದ ಪಾಕದ ರುಚಿಯನ್ನು
ನಮ್ಮೆಲ್ಲರ ಆತ್ಮೀಯ ಆದರವನು
ಅನುಭವಿಸಿ, ಆನಂದಿಸಿದರೆ
ನಿಮ್ಮೂರನೇ ಮರೆಯುವುದು ಅನುಮಾನವೇ ಇಲ್ಲ.

ವಿಧಿರಾಯ ನಿನ್ನ ಅಡಿಯಾಳು

ವಿಧಿರಾಯ ನಿನ್ನ ಅಡಿಯಾಳು
ಕೆ. ಆರ್. ಎಸ್. ಮೂರ್ತಿ

ನಿನ್ನ ಸುಡುಗಾಡು ಹಣೆಯ ಬರಹವು
ಕಾಡಿ ಸುಟ್ಟಿತೆಂದು ಕೊರಗಿ
ಬಾಡಬೇಡಲೋ ಮರುಳೆ

ತನ್ನ ವಿಧಿಬರಹವನು
ಅಳಿಸಿ, ತಿದ್ದಿ ಬರೆಯುವ ಕವಿಯ
ಕುಶಲತೆ ಸುಲಭ ಸರಳ

ಹಣೆಯ ಫಲಕವು
ಮಸ್ತಕದೊಳು ಅಡಗಿರುವ
ಮೆತ್ತನೆಯ ಮಿದುಳು
ನಿನ್ನ ಅಮ್ಮನ
ಗರ್ಭವಾಸದ ಕಾಲದಿಂದಲೇ
ಪ್ರತಿ ನಿಮಿಷವೂ ಬರೆದು, ಅಳಿಸಿ,
ಮತ್ತೆ ಮತ್ತೆ ಬರೆದಾಗಿದೆಯಲ್ಲವೇ?

ಮಿದುಳಿನ ಹೊರಗಿನ ಫಲಕದ ಬರಹವನು
ನೀ ನಿನ್ನಾಸೆ,
ಅದರ ಜೊತೆ ನಿನ್ನ ಕಪಾಳದಿಂದ
ಸುರಿಸುವ ಬೆವರಿಂದ
ಫಲಕದ ಬರಹವನ್ನು ಒರೆಸಿಕೋ,
ನಿನ್ನ ಬಲಯುತ ಮಾಂಸದ ತೋಳು,
ಮುಂಗೈ, ಹಸ್ತದ ಕೊನೆಯಲ್ಲಿರುವ
ಹತ್ತು ಬೆರಳ ಕುಶಲತೆಯಿಂದ
ಮನಸ್ಪೂರ್ತಿ ಹೊಸ ವಿಧಿಯನೇ
ಮಾಡಿಕೊಳೋ ಚತುರ.

ನಿನ್ನ ಉಬ್ಬಿದ ಮಾಂಸ ಖಂಡಕೆ
ಹೆದರುವನೋ ನಿನ್ನ ಅಡಿಯಾಳು ವಿಧಿರಾಯ;
ನೀ ಸುರಿಸುವ ಬೆವರೇ ಅವನ ಕಣ್ಣೀರು;
ನೀ ಕಾಣುವ ಸುಖದ ಕನಸೇ
ಅವನಿಗೆ ಹೆದರಿಸಿ
ನಡಗಿಸುವ ಭಯಂಕರ ದುಃಸ್ವಪ್ನ.

"ನಾ ಹುಟ್ಟಿಬಂದಾಗ ಕೇಳಿಕೊಂಡು ಬಂದ
ನನ್ನ ಪ್ರಾರಭ್ದ ಕರ್ಮವನು
ನಾನು ಅನುಭವಿಸಿಯೇ ತೀರಬೇಕು"
ಎನ್ನುವ ಹೇಡಿ, ಸೋಮಾರಿಯ
ಮರುಕ ಮುಖವನು ನೋಡಿದರೇ
ಅಪಶಕುನ, ಅಪರ ಕಾಲ,
ಸೋಮಾರಿ ಕಾಲ ಬಂದೀತು,
ಅವರಿಂದ ಕಾಲುಕಿತ್ತಿ
ಪರಾರಿಯಾಗು, ಹುಶಾರಿಯಿಂದ
ಹಿಂತಿರುಗಿ, ಬೆನ್ನ ಹಿಂದೆಯೂ ನೋಡದ
ರಾಜಾ ತ್ರಿವಿಕ್ರಮನಂತೆ.