ಶುಕ್ರವಾರ, ಆಗಸ್ಟ್ 13, 2010

ಅತಿಯೂ, ಅತ್ತತ್ತವೂ ನಮದಲ್ಲ

ಅತಿಯೂ, ಅತ್ತತ್ತವೂ ನಮದಲ್ಲ
ಕೆ. ಆರ್. ಎಸ್. ಮೂರ್ತಿ

ಕಲ್ಲಿಲ್ಲ, ಮುಳ್ಳಿಲ್ಲ, ಹೂವಿನಾ ಹಾಸಿಗೆಯು ಹಾಸಿಲ್ಲವೇ ಇಲ್ಲ
ಬರಡಲ್ಲ, ಕೊರಡಲ್ಲ, ಹಾಲಿನಾ ಸಾಗರವಂತೂ ಇಲ್ಲಿ ಹರಿದಿಲ್ಲ

ಗುಡಿಸಲಿದಲ್ಲ, ಕೊಂಪೆಯಿದಲ್ಲ, ಮೆರೆವ ಅರಮನೆಯೂ ಇದಲ್ಲ
ಗಬ್ಬು ಮಲದ ನಾಥವಿಲ್ಲಿಲ್ಲ, ಮರಿಮಳದ ಕಾರಂಜಿಯೂ ಚಿಮ್ಮಿಲ್ಲ

ಖಾಲಿ ಮಡಕೆಯೂ ಇಲ್ಲಿಲ್ಲ, ಭಾರಿ ಭೋಜನವೂ ಇಲ್ಲಿ ಸಿಗುವುದಿಲ್ಲ
ಕುನ್ನಿಗಳ ಕರ್ಕಶವಿಲ್ಲ, ಗಾನ ಗಂಧರ್ವರ ಸಕಲ ವಾದ್ಯಗಳ ಹಾಡಿಲ್ಲ

ಕಡು ಬಡತನದ ಪಾಡಲ್ಲ ನಮ್ಮದು, ಸಿರಿತನದ ಸಂತಸವೂ ಇಲ್ಲ
ಅದಃ ಪಾತಾಳವಿದಲ್ಲ, ಸೂರೆ ಸುರ ಸ್ವರ್ಗವಂತೂ ನಮ್ಮ ಪಾಲಲ್ಲ

ಅತಿ, ಅತಿ, ಯಾವುದೂ ನಮಗೆ ದೊರಕಿಲ್ಲ, ಅದರ ಹಂಬಲ ಬೇಕಿಲ್ಲ
ಸಮತೋಲನ, ಸಮಭಾವನ, ಸಮಜೀವನದ ತಿಳಿಗುಟ್ಟು ನಮದೆಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ