ಶನಿವಾರ, ಆಗಸ್ಟ್ 7, 2010

ಕಲ್ಪನೆಯೇ ಕಲ್ಪತರು, ಕಾಮಧೇನು

ಕಲ್ಪನೆಯೇ ಕಲ್ಪತರು, ಕಾಮಧೇನು
ಕೆ. ಆರ್. ಎಸ್. ಮೂರ್ತಿ

ಮೇಲಿಂದ ಮೇಲೆ, ಅಲೆಯ ಹಿಂದೊಂದು ಅಲೆ, ಉಬ್ಬಿ, ಹಿಗ್ಗಿ, ಬರುತಲಿದೆ ಸಲಿಲ
ಕಲ್ಪನೆಯ ಮೇಲೆ ಮತ್ತೊಂದು ಮರುಕಲ್ಪನೆ; ಒಂದಕ್ಕಿಂತ ಹಿರಿದು ಲೀಲಾಜಾಲ

ಬಲೆಯಲಿ ಹಿಡಿವುದುಂಟೇ? ಇರುವ ಐವತ್ತೆರಡು ಅಕ್ಷರದ ಬಲೆಯಲ್ಲಿ ಬರೀ ತೂತು
ಕವಿಯ ಕಲೆಯು ಸಾಲದು, ಭುವಿಯ ಕವಿ ಕುಲವೇ ಸಾಲು, ಸಾಲು ಬಂದು ನಿಂತು

ಕುಂಚದ ಕಲೆಗೂ ಕಿಂಚಿತ್ತೂ ಎಟುಕದು; ಕಲ್ಲಿನಲ್ಲಿ ಅಲೆಯಲೆಯ ಸಾಲುಗಳ ಕೆತ್ತಲಾಗದು
ನಾರದ, ಕಿನ್ನರ, ತುಂಬುರ, ಗಾನ ಗಂಧರ್ವರ ಕೊರಳು ಭೋರ್ಗರೆಯ ಪಾಡಲಾಗದು

ಕಲ್ಪನಾ ವಿಲಾಸವು ಒಲಿದು ಇತ್ತ ಹಾಯಿ, ದೇವ ಲೋಕದ ಅನುಭವವನೇ ನಾಚಿಸಿದೆ
ಅಲ್ಪವಾದರೂ ಸಾಕಿದೇ ವರ, ಕಲ್ಪತರು, ಕಾಮಧೇನುಗಳು ಇನ್ನೇಕೆ ಬೇಕು ಎನ್ನಿಸುತಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ