ಗುರುವಾರ, ಜುಲೈ 8, 2010

ನಾವಿಕರ ವ್ಯರ್ಥ ಯಾತ್ರೆ

ನಾವಿಕರ ವ್ಯರ್ಥ ಯಾತ್ರೆ
ಕೆ. ಆರ್. ಎಸ್. ಮೂರ್ತಿ

ಬಾಗಿಲೊಳು ಬಾಯ್ಮುಚ್ಚಿ ಒಳಗೆ ಬಾ ಯಾತ್ರಿಕನೆ
ನಿನದಲ್ಲವೀ ಮನೆಯು ಇದಕೆ ಅತೀ ಬೆಲೆಯೂ

ಬಾಯ್ ಬಿಟ್ಟರೆ ಚಾಟಿ ಏಟು, ಮನವ ಹೊರಗಿಟ್ಟರೆ ಹಾಕುವೆವು ಬಾಯಿಗೆ ಬೀಗ
ಗೇಣು ಮಣ್ಣೂ ನಿನ್ನದಿಲ್ಲ, ಹಣವ ತರದೇ ಸಿಗುವುದಿಲ್ಲ, ಮಂಡಿಯೂರಿ ನಡೆ ಬೇಗ

ತಂಗಳು ಸಂತರ್ಪಣೆ ಸಾಲದೇನೋ, ಹೆಚ್ಚು ಕೂಗಿದರೆ ಹಾಕುವೆವು ಕರ್ಟನ್ ಗಿಲೊಟಿನ್
ಮಂಜು ಶೀತಲ ಹೋಳಿಗೆ, ಕನ್ನಡೇತರ ಕವಳ, ಅದೆಂಥದೋ, ರೊಟ್ಟಿ, ಸಾರು, ಹುಳಿಯನ್ನು

ನಾನೇ ರಾಜ, ರಾಜಾಧಿರಾಜ, ನಾ ಕೊಟ್ಟ ಅಪ್ಪಣೆ ಅವಧಿ ಗಡಿಯ ದಾಟುವುದು ಉಂಟೆ
ಚಂದ್ರವಂಶದ ಮುಖ್ಯ ಮಂತ್ರಿ ನೀನಾದರೆನೋ, ಎದುರು ಮಾತನಾಡುವುದು ಉಂಟೆ?

ನಾ ಹುಟ್ಟಿದುದು ಇಂದು, ನನಗೆ ಮಾತ್ರ ಸ್ವಾತಂತ್ರದ ದಿನ, ಮುಚ್ಚು ಬಾಯಿ ಪುರಂದರ
ನನ್ನ ರಂಗವಿದು, ಓಡಿರೋ ಹಿಂದಿರುಗಿ ಬೇಗ ಹಿಂಡು ಮಕ್ಕಳು, ನಿನ್ನ ದಾಸರ ಸಂಸಾರ

ರಂಗ ವಿಠಲನ ದಾಸ ಪುರಂದರನಿಗೇಕೋ, ನನಗೆ, ನನ್ನವರಿಗೆ ಮಾಡಿಸಿದೆ ನಾನೀರಂಗ
ನನಗೆ ತಲೆ ಬಾಗಿ, ಕೈಮುಗಿದು, ಕುಣಿಯುವ ಮಂಗಗಳಿಗೆ ಕೈ ಬೀಸಿ ಕರೆಯುವುದೀ ರಂಗ

ನೀವೆಲ್ಲ ಯಾವಾಗಲೂ ಕನ್ನಡವ ಆಡುವುದೇಕೆ?
ಹಾಕಬೇಡಿರೋ ಚೇಡಿಯ ಛೀಮಾರಿ ಶೀಟಿ ಕೇಕೆ
ಪಾಮರರ ಭಾಷೆ ಲಂಡನ್ನಿನ ತುಂಡು ನನಗೇಕೆ
ನನಗೆ, ನನ್ನ ಮಡದಿ ಮಕ್ಕಳಿಗೆ ತನ್ನಿ ದೊಡ್ಡ ಕೇಕ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ