ಬುಧವಾರ, ಜುಲೈ 7, 2010

ಕವಿಗಳ ಹತ್ತಾರು ಅವತಾರಗಳು

ಕವಿಗಳ ಹತ್ತಾರು ಅವತಾರಗಳು
ಕೆ. ಆರ್. ಎಸ್. ಮೂರ್ತಿ

ಆ ಕವಿ ಬೇರೆ, ಈ ಕವಿಯೇ ಬೇರೆ;
ಕವಿ ಮನ, ಕುಂಚ, ಅದ್ದಿದ ಬಣ್ಣ ಬೇರೆ.

ಕವಿ ಗಂಡಾದರೆ ಭಾವದ, ಡವ ಡವ
ಕವಿಯತ್ರಿಯಾದರೆ ಮಿಡಿತದ ಭಾವ

ಹದಿಹರೆಯದ ತವಕ, ಇಪ್ಪತ್ತರಾತಂಕ
ಮೂರು, ನಾಲ್ಕು ದಶಕಗಳ ಬೀಗುವಿಕೆ

ದಶಕ ಐದಾದರೆ ಕಾಯಿ ಆದೀತು ಹಣ್ಣು
ಆರು, ಏಳರಲಿ ನೆನಕೆ ಜೀವನದ ಹುಣ್ಣು

ಉಳಿದಿರುವ ದಿನಗಳಲಿ ಭ್ರಮೆಯೇ ಹೆಚ್ಚು
ಅರಳು ಮರುಳು ಉಲಿಸಿದ ಮಾತೆಲ್ಲ ಪೆಚ್ಚು

ಕರುಳಿನ ಕವಿಗಳು ತಂತಿ ಮೀಟುವರು
ನವರಸದ ಪಾಯಸವನೇ ಬಡಿಸುವರು

ಹರಳೆಣ್ಣೆ ಕವಿಯತ್ರಿ ಬಲದಿ ಕುಡಿಸುತ್ತ
ನಿಮ್ಮೆದೆಗೆ ದೊಡ್ಡ ಕತ್ರಿಯನು ಹಾಕುತ್ತ

ಸಂಡಾಸು ಯಾತ್ರೆಗೆ ಆತುರದಿ ಅಟ್ಟುವರು
ಎಲ್ಲ ಮುಗಿದ ಮೇಲೆ ಹಾಯಿ ಅನ್ನುವರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ