ಶುಕ್ರವಾರ, ಜುಲೈ 23, 2010

ಹರಿ ಹಾರಿ ಹೋದರು

ಹರಿ ಹಾರಿ ಹೋದರು
ಕೆ. ಆರ್ ಎಸ್. ಮೂರ್ತಿ

ಹರಿ ಹರಿಯಲ್ಲಿ ಹಾರಿಹೋದರು ಹರಿ
ಹರಿಹರರಿಗೆ ಹರನ ಹರಣ - "ಹರಿ"

ಹರಿಯಾದರೇನು ಹರಿಹರನಾದರೇನು
ಹರಿಯ ಪರಾರಿಗೆ ಕಾರಣವೇ ಆ ಹರನು

ಊರು ಬಿಟ್ಟು ಪರದೇಶ ಅಲೆದ ಕನ್ನಡಿಗ
ಹೊಂಟ ಕನ್ನಡದ ಬಂಟ ಹೊತ್ತು ಸಂದೇಶ

ಅಮೇರಿಕಾದ ಕನ್ನಡದ ತುತ್ತೂರಿ ಜೋಗಿಯೂ
ಹಿಂದೆಯೂ, ಮುಂದೆಯೂ ನಾಗಮಣಿ ಪುಂಗಿಯು

ನೀ ಹೋದೆ, ನಿನ್ನ ಮಾತುಗಳಿನ್ನೂ ಜೀವಂತವಿದೆ
ತುತ್ತೂರಿ ನಾದವದು ಎಲ್ಲರ ಕಿವಿಯಲ್ಲಿ ಗುನುಗುತಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ