ಗುರುವಾರ, ಜೂನ್ 17, 2010

ಮರೆತ ಮಕ್ಕಳು ಅಲ್ಲ

ಮರೆತ ಮಕ್ಕಳು ಅಲ್ಲ
ಕೆ. ಆರ್. ಎಸ್. ಮೂರ್ತಿ

ಯಾರ ಮಕ್ಕಳು ನಾವೆಲ್ಲಾ ಎಂಬುದು ತಿಳಿದಿದೆಯೋ ?
ಯಾರ ನೆನೆದು ಬಾಲಕನು ರಕ್ಕಸ ಪಿತನ ಕೆಣಕಿದನೋ

ನಾರದನು ಮೀಟಿ ತಂಬೂರಿಯ ಯಾರ ಪಾಡುವನೋ
ಕರಿಯು ಕೂಗಿದೊಡನೆ ಒಡನೆ ಯಾರು ಓಡಿ ಬಂದನೋ

ಹರಿಯ ಮಕ್ಕಳು ನಾವೆಂದು ಅಣಗಿಸ ಬಹುದೇನೋ?
ನಮ್ಮನೆಲ್ಲಾ ಕಾಲಲಿ ತುಳಿದು ಕೆಣಕಿಸ ಬಲ್ಲುದೇನೋ?

ನಮ್ಮ ಆರ್ತವ ಕೇಳಿ ಬರುವನೋ ಇಂದಲ್ಲ ಒಂದು ದಿನ
ನಮ್ಮ, ನಿಮ್ಮೆಲ್ಲರನು ಮೇಲೆತ್ತುವನು ತಾನೇ ಜನಾರ್ಧನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ