ಸೋಮವಾರ, ಜೂನ್ 14, 2010

ಲಕ್ಷ್ಮಣ ರೇಖೆಯಲ್ಲಿ ದೊಡ್ಡ ತೂತು

ಲಕ್ಷ್ಮಣ ರೇಖೆಯಲ್ಲಿ ದೊಡ್ಡ ತೂತು
ಕೆ. ಆರ್. ಎಸ್. ಮೂರ್ತಿ

ಬೇಡ, ಬೇಡ, ಬೇಡ, ಬೇಡ.
ಬಾರದು, ಆಗ ಬಾರದು, ಆಗದಿರಲಿ,
ಅಕಸ್ಮಾತ್ ಆಗಿಹೋದರೆ, ಎಂದೆಲ್ಲಾ ಯೋಚನೆ.

ಬೇಡನಿಗೆ "ಬೇಡ" ಎಂದು ಬರೆಯಲು,
ಕವಿ ಧಾರೆ ಹರಿಸಲು ಬರುವುದಿಲ್ಲವೇ!

ಅದಕ್ಕಾಗಿ ಏನು ಮಾಡುವ?
ಏನೇನು ಮಾಡಿದರೆ, ಹೇಗೆ ಮಾಡಿದರೆ?
ಜಾಗ್ರತೆ ಅಗ್ರಜನಿಗೆ, ಆಜ್ಞೆ ಅನುಜನಿಗೆ
ರಕ್ಷಣೆಗೆ ಲಕ್ಷ್ಮಣನನ್ನೇ ಇಡಿಸಿದ ಕಾವಲು
ಜಗದ್ರಕ್ಷಕ ದಾಶರಥಿಯ ಮಹಾ ಯೋಜನೆ!

ಇದರ ಜೊತೆಗೆ, ಲಕ್ಷ್ಮಣನ ಜೊತೆ ಅತ್ತಿಗೆಯ
ವಾದ, ಅನ್ಯಥಾ ಅಪವಾದ, ಪತಿವ್ರತಾ ವಾದ.

ಬೇಸತ್ತು ಹಾಕಿದ ಕುಟೀರದ ಸುತ್ತ ಮೂರು ಸುತ್ತು
"ಲಕ್ಷ್ಮಣ ರೇಖೆ" Fence around the humble hut,
non-circumvention protection clause,
ಲಾಯರಿಗಳ ಪರಿ, ಪರಿ ವೈಖರಿಯ ಬರಹ
ಆರೆಂಟು ಹಾಳೆಗಳು, ಬರೆದದ್ದೇ ಬರೆದದ್ದು!
ಎಣಿಸಿದ್ದೆ ಎಣಿಸಿದ್ದು! ಪದಗಳು, ವಾಕ್ಯಗಳು
ಒಂದೊಂದು ಪದಕ್ಕೆ ಹತ್ತು ಡಾಲರು ಶುಲ್ಕ!

ಅದರ ಮೇಲೆ, ಹಾಳೆಗೆ ಒಂದಾದರೆ ಸಾಲದು,
ಪಂಕ್ತಿಗೆ ಒಂದಿರಲಿ ನಮ್ಮ ಕಡೆಯ, ಅವರ ಕಡೆಯ
ಅಧಿಕಾರಿಗಳ ಸಹಿಗಳು, ಕೈ ಸೋಲುವವರೆಗೂ!

ರಾಕ್ಷಸ ರಾಜ್ಯದಲ್ಲಿ, ಲಕ್ಷಾಂತರ ರಾವಣರು
ಕೊರಮರು, ದರೋಡೆ ಕೋರರ, ಕಳ್ಳರ ಸಂತೆಯಲ್ಲಿ
ಮೂರಲ್ಲ ಮುನ್ನೂರು ಹಾಳೆಗಳ ರೇಖೆ ಹಾಕಿಸಿನೋಡಿ!

ನಿಮ್ಮ ಕಂಪೆನಿ ಸೀಕ್ರೆಟ್ ಸೀತಮ್ಮನವರನ್ನು ಸಲೀಸಾಗಿ
ಕೊಳ್ಳೆ ಮಾಡುವ ಕಳ್ಳರು, ಕತ್ತಲೆ, ಬೆಳಕಾದರೇನು!
ಚುರುಕಿನಲ್ಲಿ ಚೈನದಲ್ಲಿ ಮಾತ್ರವಲ್ಲ, ಚೆನ್ನೈನಲ್ಲೂ,
ನಿಮ್ಮ ಬಂಗಾರ ಕದಿಯುವವರು ಬೆಂಗಳೂರಿನಲ್ಲೂ,
ಸತ್ಯದ ಸ್ವರ್ಗ ಸಿಲಿಕಾನ್ ಕಣಿವೆಯಲ್ಲೂ ಇದ್ದಾರೆ.
ಸಿಲ್ಲಿ ಮಾತಂದೆನೆಂದು ಕಲ್ಲು ಹೊಡೆಯ ಬೇಡ,
ನಿಮ್ಮೂರು ಅಮೇರಿಕಾದ ಮೂಲೆ, ಮೂಲೆಗಳಲ್ಲೂ,
ರಾವಣರು ಲೆಕ್ಕವಿಲ್ಲದಷ್ಟು ಇದ್ದಾರೆ ಕಣೋ ಹೇ ಲಕ್ಷ್ಮಣಾ!

ಹೇ ರಾಮಾ! ಹೇ ಲಕ್ಷ್ಮಣಾ! ಎಂದು ಕಳ್ಳ ಕಂಠದಲ್ಲಿ ಕೂಗಿ
ನಿನ್ನ ಸೊತ್ತು ಸೀತೆಯನ್ನು ಎತ್ತಿ ಕೊಂಡು ಲಂಕಾಕ್ಕೆ
ಓಡಿ ಹೋದಾರು ಆಕಾಶರಾಯನಾಗ ಬೇಡ ಮಂಕೇ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ