ಗುರುವಾರ, ಜೂನ್ 17, 2010

ಜನರ ಸೇವೆಗೆ ಜನಾರ್ಧನ

ಜನರ ಸೇವೆಗೆ ಜನಾರ್ಧನ
ಕೆ. ಆರ್. ಎಸ್. ಮೂರ್ತಿ

ಜನರ ಮನದಲ್ಲಿ ಜನಾರ್ಧನ
ಅವನ ಮನದಲ್ಲಿ ಅವನ ಜನ

ಹೌದಪ್ಪಾ ಹೌದು ಬಡವ ನಾನೂ
ಅವನ ಜನವೇ, ಅವರು, ನೀವೂ

ಪುಟ್ಟಿ ಪೊರೆದವರು ಧೂಳಿನಲಿ
ಪೊರೆವವನೇ ಬಂದಿಹನು ಕೇಳಿ

ಕಾಣುವವನಿವನು ಎಲ್ಲ ಜನರಂತೆ
ಎಂದು ಸುಮ್ಮ ನಿರುವುದು ಉಂಟೆ!

ನಮ್ರತೆಯು ನಡತೆಯಲ್ಲಿ, ನುಡಿಯಲ್ಲಿ
ತುಂಬಿಹುದು ಕರುಣೆಯ ನಿಧಿ ಎದೆಯಲ್ಲಿ

ಕೋಟೆ, ಕೊತ್ತಲದ ವಿಠಲ ನಿನ್ನೆ, ಇಂದು
ನೂರು ಕೋಟಿಗೂ ಆಗುವನು ಮುಂದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ