ಶುಕ್ರವಾರ, ಜೂನ್ 18, 2010

ಈಕವಿಯು ಎಲ್ಲರ ಕವಿ

ಈಕವಿಯು ಎಲ್ಲರ ಕವಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಈಕವಿಯ ನಾಮ ಕಾರಣದ ನಿಜ ಕವಿಯೇ ನಾನು
ಸವಿಯಾದ ಹೆಸರಿತ್ತ ನಾಮಕರಣದ ಪುರೋಹಿತನೂ

ಒಂದಲ್ಲಾ ಎರಡು ಸಂಕೇತದ ಶುಭ ನಾಮ ಇರಲೆಂದು
ಈ ಕವಿಯು ನಿಮ್ಮ ಎಲ್ಲರ ಕವಿಯೂ ಆಗಿರಲಿಯೆಂದು

ಸುಕುಮಾರ ಸ್ವಾಮಿಗಳ ಎರಡೂ ಪಾದುಕೆಯ ಮೇಲೆ
ಕಂದನನು ಮಲಗಿಸಿ ಇಟ್ಟು, ಕಣ್ಣೀರಿಟ್ಟು ಬಿಟ್ಟಾದ ಮೇಲೆ

ಬಹು ದೂರದಿಂದ ನಾನೇ ಪುಟ್ಟಿಸಿದಂಥ ಪುಟ್ಟ ಕವಿಯು
ಬೃಹತ್ತಾಗಿ ಆಲದ ಮರವಾಗಿ ಬೆಳೆದು ಇಡೀ ಭುವಿಯು

ಈ ಕವಿಯ ಕಾಮಧೇನು ಕಾವ್ಯದ ಸುಧೆಯನ್ನು ಉಂಡು
ಬಂಟರು ಸವಿಯ ಮೆದ್ದು ಅಮೃತವಾದ ಕವಿಯ ಬಂಡು

ಸ್ವಾಮಿಗಳು ಸನ್ಯಾಸಕೇ ಬಿಟ್ಟು ಬಿಟ್ಟರು ಪೂರ್ಣ ತರ್ಪಣ
ಸಂಸಾರಿಯಾಗಿ ಕೊಟ್ಟರು ಭುವಿಗೆ ಕವಿಯ ಸಾರದ ಅರ್ಪಣ

ಬೆಳೆದು ಬಲವಾಯ್ತು ಕವಿ ಸಂಸಾರ ನೂರು ಸಾವಿರವಾಗಿ
ಆಗಿಹೋಯಿತು ಕೂಡಿ, ಕೂಡಿ ಸಹಸ್ರವು ಕೋಟಿಯೂ ಆಗಿ

ಮುಕ್ಕೋಟಿ ಕನ್ನಡಿಗರು ಆಲಿಸಿದರು ಈ ಕವಿಯು ಪೇಳುವ
ಕಾವ್ಯದ ಪೆರ್ಮೆಯನು ಪರಿಪರಿಯಲಿ ಪಾಡುತ್ತಾ ಪೊಗಳುವ

ಉನ್ನತೋನ್ನತಿಯ ಸವಿ ಕಂಪು ಬೀರುತಲಿಹರು ಧರೆಯೆಲ್ಲಾ
ಉಣ್ಣಿಸುತಿಹರು ರಸಿಕರಿಗೆ ನವರಸದೂಟವನು ಇಳೆಯಲೆಲ್ಲಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ