ಗುರುವಾರ, ಜೂನ್ 17, 2010

ಸುಶೀಲೆಯ ಸೃಷ್ಟಿ ಶೀಲತೆ

ಸುಶೀಲೆಯ ಸೃಷ್ಟಿ ಶೀಲತೆ
ಕೆ. ಆರ್. ಎಸ್. ಮೂರ್ತಿ

ಪಾಪ ಮಾಡುವ ಆಸೆ, ಕೌಪೀನವ ಬಿಸುಟು ಪೀಪಿ ಊದುವ ಆಸೆ
ತಾಪಸಿಯ ಕೆಣಕಿ ಮೈಮೇಲೇರಿ ಕುಣಿದು ತಣಿಯುವ ಬಹುದಾಸೆ

ಮೇನಕೆಯು ನಾನು, ವಿಶ್ವಕೇ ಮಿತ್ರ ಪ್ರಚಂಡ ಸೃಷ್ಟಿ ಕರ್ತನ ವರಿಸಿ
ಶಕುಂತಲೆಯ ವರಿಸಿದ ಧರಣೀಪತಿ ದುಷ್ಯಂತನಿಗೆ ಮರೆವನ್ನು ತರಿಸಿ

ಬಾಲ ಭರತನ ಧರೆಗೆ ಕೊಡುಗೆಯ ಕೊಡಿಸುವ ಮಹದಾಸೆ ಯೋಜನೆ
ಭರತನ ಹೆಸರು ಅಮರವಾಗಿಸುವ ಖಂಡವನು ಬೆಳೆಸುವ ಆಲೋಚನೆ

ನನ್ನ ಬೃಹದಾಸೆಯನು ತಿಳಿದೇ ಜ್ಞಾನಿ ಒಲಿಯುವನೀ ಘೋರ ತಾಪಸಿ
ಇದೇ ತಪಸ್ಸು ನನ್ನದು ಸುರ ವೃಂದವೇ ಕುಣಿಯುತಿಹರು ನಮ್ಮನು ಹರಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ