ಶುಕ್ರವಾರ, ನವೆಂಬರ್ 12, 2010

ಕಿವಿ ಕೊಟ್ಟು ಕೇಳಿ

ಕಿವಿ ಕೊಟ್ಟು ಕೇಳಿ
ಕೆ. ಆರ್. ಎಸ್. ಮೂರ್ತಿ

ಡಂಗುರ ಢಂ, ಡಂಗುರ ಢಂ, ಕೇಳಿರೀ! ಕೇಳಿರೀi! ಕಿವಿ ಕೊಟ್ಟು ಕೇಳಿರೀ!
ಬಿಸಿ, ಬಿಸಿ, ಸುದ್ದಿ. ಗಾಳಿಯಲಿ ತೇಲಿ ಬಂದಿರುವ ನಂಬಲಾಗದ ಆಲಿಸಿರಿ

ನಾಗ ಮುಂಗಸಿಯರ ಸುಮಹೂರ್ತ ಲಗ್ನ; ರಾಮ ರಾವಣರ ಮಿತ್ರೋತ್ಸವ
ಹಿರಣ್ಯ ಕಷ್ಯಪು ನಡೆಸುವನು ಇಡೀ ರಾತ್ರಿ ಹರಿ ಭಜನೆಯ ಜಾಗರಣೆ ಸೇವೆ

ಬೀಮ ಧುರ್ಯೋಧನರ ಸಂಧಾನ, ಬೀಷ್ಮ ಶಿಖಂಡಿಯರ ಯುಗಳಗಾನ
ಹನುಮಂತ ಚೆಂದೊಳ್ಳಿ ಹಿಡಂಬಿಯರ ಪ್ರೇಮಾಲಾಪ, ನಾಟ್ಯ ಪ್ರದರ್ಶನ

ಕಾಗೆ ಕೋಗಿಲೆಗೆ ಕಲಿಸಿದ ಸುಮಧುರ ರಾಗಗಳ ಸಂಗೀತ ಕಲೆಯ ಮೇಳ
ಉಪ್ಪಿನ ಬಿಸಿ, ಬಿಸಿ, ಪಾಯಸ, ಕಬ್ಬಿಣದ ಕಾಳುಗಳ ಹೂರಣದ ಹೋಳಿಗೆ

ಕಳ್ಳನ ಭುಜದ ಮೇಲೆ ಪೊಲೀಸನ ಕೈ, ಕಳ್ಳನ ಕೈ ಪೊಲೀಸನ ಜೇಬೊಳಗೆ
ಅರ್ಧ-ಅರ್ಧ ಮಸಾಲೆ ದೋಸೆ, ಜಾಮೂನು, ಬೈಟೂ ಕಾಫಿ, ಬಿಲ್ಲು ಯಾರಿಗೆ?

ಏನ್ರೀ? ನಂಬುವುದಿಲ್ಲವೋ ನೀವು? ಅಸಂಬಧ್ಧ ಪ್ರಲಾಪ ಅಂತೀರಾ ನೀವೆಲ್ಲಾ?
ಯಾರಿಗೆ ಗೊತ್ತು? ಅಂತಹ ಕಾಲಾನೂ ಬರಬಹುದು! ಸಾಧ್ಯ ಸ್ವಾಮಿ ಎಲ್ಲ.

ತೆರಿಗೆ, ಕಂದಾಯ ಅಧಿಕಾರಿ ತನ್ನ ಮಗಳನ್ನು ಮೋಸಗಾರ ವ್ಯಾಪಾರಿಗೆ ಕೊಟ್ಟ
ಪೊಲೀಸನ ಮಗನಿಗೆ ಕಳ್ಳನಾಗುವ ಅತಿ ಅಸ್ಸೆ ಅಂತ ಅವನ ತಾಯಿಗೆ ಹೇಳಿ ಬಿಟ್ಟ

ಅಪ್ಪ ವೆಂಕಟರಮಣನ ಗುಡಿಯಲ್ಲಿ ಪೂಜಾರಿ, ಮಗ ಕುಡಿಯೋದು ವೈನು, ಬೀರು
ಅವನಿಗೆ ಬೇಕು ಚಿಕ್ಕನ್ನು, ಮಟನ್ನು, ದಿನ್ನಕ್ಕೆ ಎರಡು ಸಲ; ಅವನದು ಕದ್ದ ಕಾರು

ಬೇಜಾರು ಮಾತ್ರ ಮಾಡಿಕೋ ಬೇಡಿ; ನನಗೆ ಗೊತ್ತಿರಲಿಲ್ಲ ನೀವು ಸತ್ಯಾನೆ ಹೇಳೋದು
ಇದ್ದದ್ದು ಹೇಳಿದೆ ಅಷ್ಟೇ; ನನ್ನ ಖಯಾಲಿ ಡಂಗುರ ಹೊಡೆಯೋದು, ಕವನ ಬರೆಯೋದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ