ಸೋಮವಾರ, ಅಕ್ಟೋಬರ್ 4, 2010

ಮುಂದಾಳು ಕನ್ನಡಿಗ

ಮುಂದಾಳು ಕನ್ನಡಿಗ
ಕೆ. ಆರ್. ಎಸ್. ಮೂರ್ತಿ


ನಾಡು ನಮ್ಮದು ಹೆಮ್ಮೆಯದು, ಆಡುವೆವು ಅಮೃತವನೆ ಸುರಿಸಿ, ಹರಿಸಿ
ಹಾಡು ನಮ್ಮದು ಹೆಮ್ಮೆಯದು, ನುಡಿದಾಗಲೆಲ್ಲಾ ಹಾಡುವೆವು ಗುನುಗಿಸಿ (ಪಲ್ಲವಿ)

ನಮ್ಮ ಊರಿನಲೂ, ಪರರ ನಾಡಿನಲೂ, ವಿದೇಶ ಭಾಷಿಗಳ ಒಡನೆಯೂ
ಜೊತೆಯಾಗಿ, ಜೋರಾಗಿ, ಧ್ವನಿಸುವೆವು ಝೇಂಕರಿಸಿ ಕನ್ನಡದ ಡಿಂಡಿಮವನು

ಬೇರೆಯಾದರೇನಂತೆ ಬೇರೆ, ಬೇರೆ ಬೇರುಗಳೂ ನೆರೆ ಊರಿದ್ದರೇನಂತೆ
ಬೇರೆ, ಬೇರೆ ತರು, ಲತೆ, ಸಕಲ ಸುವಾಸನೆಯ ಹೂವುಗಳು ಮಿಳಿದಂತೆ

ಲತೆ ಹತ್ತಾರು ತಬ್ಬಲಿ ನಮ್ಮ ಎತ್ತರದ ವಿಶಾಲ ಮರದ ಕಾಂಡ ಕೊಂಬೆಗಳಲಿ
ಕನ್ನಡಿಗನು ನಡೆಯುವನು ಮುಂದಾಳು ಆಗಿ ಧೀಮಂತ ಶ್ರೀಮಂತ ತನದಲ್ಲಿ

1 ಕಾಮೆಂಟ್‌: