ಮರೆತ ಮಕ್ಕಳು ಅಲ್ಲ
ಕೆ. ಆರ್. ಎಸ್. ಮೂರ್ತಿ
ಯಾರ ಮಕ್ಕಳು ನಾವೆಲ್ಲಾ ಎಂಬುದು ತಿಳಿದಿದೆಯೋ ?
ಯಾರ ನೆನೆದು ಬಾಲಕನು ರಕ್ಕಸ ಪಿತನ ಕೆಣಕಿದನೋ
ನಾರದನು ಮೀಟಿ ತಂಬೂರಿಯ ಯಾರ ಪಾಡುವನೋ
ಕರಿಯು ಕೂಗಿದೊಡನೆ ಒಡನೆ ಯಾರು ಓಡಿ ಬಂದನೋ
ಹರಿಯ ಮಕ್ಕಳು ನಾವೆಂದು ಅಣಗಿಸ ಬಹುದೇನೋ?
ನಮ್ಮನೆಲ್ಲಾ ಕಾಲಲಿ ತುಳಿದು ಕೆಣಕಿಸ ಬಲ್ಲುದೇನೋ?
ನಮ್ಮ ಆರ್ತವ ಕೇಳಿ ಬರುವನೋ ಇಂದಲ್ಲ ಒಂದು ದಿನ
ನಮ್ಮ, ನಿಮ್ಮೆಲ್ಲರನು ಮೇಲೆತ್ತುವನು ತಾನೇ ಜನಾರ್ಧನ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಗುರುವಾರ, ಜೂನ್ 17, 2010
ಜನರ ಸೇವೆಗೆ ಜನಾರ್ಧನ
ಜನರ ಸೇವೆಗೆ ಜನಾರ್ಧನ
ಕೆ. ಆರ್. ಎಸ್. ಮೂರ್ತಿ
ಜನರ ಮನದಲ್ಲಿ ಜನಾರ್ಧನ
ಅವನ ಮನದಲ್ಲಿ ಅವನ ಜನ
ಹೌದಪ್ಪಾ ಹೌದು ಬಡವ ನಾನೂ
ಅವನ ಜನವೇ, ಅವರು, ನೀವೂ
ಪುಟ್ಟಿ ಪೊರೆದವರು ಧೂಳಿನಲಿ
ಪೊರೆವವನೇ ಬಂದಿಹನು ಕೇಳಿ
ಕಾಣುವವನಿವನು ಎಲ್ಲ ಜನರಂತೆ
ಎಂದು ಸುಮ್ಮ ನಿರುವುದು ಉಂಟೆ!
ನಮ್ರತೆಯು ನಡತೆಯಲ್ಲಿ, ನುಡಿಯಲ್ಲಿ
ತುಂಬಿಹುದು ಕರುಣೆಯ ನಿಧಿ ಎದೆಯಲ್ಲಿ
ಕೋಟೆ, ಕೊತ್ತಲದ ವಿಠಲ ನಿನ್ನೆ, ಇಂದು
ನೂರು ಕೋಟಿಗೂ ಆಗುವನು ಮುಂದು
ಕೆ. ಆರ್. ಎಸ್. ಮೂರ್ತಿ
ಜನರ ಮನದಲ್ಲಿ ಜನಾರ್ಧನ
ಅವನ ಮನದಲ್ಲಿ ಅವನ ಜನ
ಹೌದಪ್ಪಾ ಹೌದು ಬಡವ ನಾನೂ
ಅವನ ಜನವೇ, ಅವರು, ನೀವೂ
ಪುಟ್ಟಿ ಪೊರೆದವರು ಧೂಳಿನಲಿ
ಪೊರೆವವನೇ ಬಂದಿಹನು ಕೇಳಿ
ಕಾಣುವವನಿವನು ಎಲ್ಲ ಜನರಂತೆ
ಎಂದು ಸುಮ್ಮ ನಿರುವುದು ಉಂಟೆ!
ನಮ್ರತೆಯು ನಡತೆಯಲ್ಲಿ, ನುಡಿಯಲ್ಲಿ
ತುಂಬಿಹುದು ಕರುಣೆಯ ನಿಧಿ ಎದೆಯಲ್ಲಿ
ಕೋಟೆ, ಕೊತ್ತಲದ ವಿಠಲ ನಿನ್ನೆ, ಇಂದು
ನೂರು ಕೋಟಿಗೂ ಆಗುವನು ಮುಂದು
ಸೋಮವಾರ, ಜೂನ್ 14, 2010
ಲಕ್ಷ್ಮಣ ರೇಖೆಯಲ್ಲಿ ದೊಡ್ಡ ತೂತು
ಲಕ್ಷ್ಮಣ ರೇಖೆಯಲ್ಲಿ ದೊಡ್ಡ ತೂತು
ಕೆ. ಆರ್. ಎಸ್. ಮೂರ್ತಿ
ಬೇಡ, ಬೇಡ, ಬೇಡ, ಬೇಡ.
ಬಾರದು, ಆಗ ಬಾರದು, ಆಗದಿರಲಿ,
ಅಕಸ್ಮಾತ್ ಆಗಿಹೋದರೆ, ಎಂದೆಲ್ಲಾ ಯೋಚನೆ.
ಬೇಡನಿಗೆ "ಬೇಡ" ಎಂದು ಬರೆಯಲು,
ಕವಿ ಧಾರೆ ಹರಿಸಲು ಬರುವುದಿಲ್ಲವೇ!
ಅದಕ್ಕಾಗಿ ಏನು ಮಾಡುವ?
ಏನೇನು ಮಾಡಿದರೆ, ಹೇಗೆ ಮಾಡಿದರೆ?
ಜಾಗ್ರತೆ ಅಗ್ರಜನಿಗೆ, ಆಜ್ಞೆ ಅನುಜನಿಗೆ
ರಕ್ಷಣೆಗೆ ಲಕ್ಷ್ಮಣನನ್ನೇ ಇಡಿಸಿದ ಕಾವಲು
ಜಗದ್ರಕ್ಷಕ ದಾಶರಥಿಯ ಮಹಾ ಯೋಜನೆ!
ಇದರ ಜೊತೆಗೆ, ಲಕ್ಷ್ಮಣನ ಜೊತೆ ಅತ್ತಿಗೆಯ
ವಾದ, ಅನ್ಯಥಾ ಅಪವಾದ, ಪತಿವ್ರತಾ ವಾದ.
ಬೇಸತ್ತು ಹಾಕಿದ ಕುಟೀರದ ಸುತ್ತ ಮೂರು ಸುತ್ತು
"ಲಕ್ಷ್ಮಣ ರೇಖೆ" Fence around the humble hut,
non-circumvention protection clause,
ಲಾಯರಿಗಳ ಪರಿ, ಪರಿ ವೈಖರಿಯ ಬರಹ
ಆರೆಂಟು ಹಾಳೆಗಳು, ಬರೆದದ್ದೇ ಬರೆದದ್ದು!
ಎಣಿಸಿದ್ದೆ ಎಣಿಸಿದ್ದು! ಪದಗಳು, ವಾಕ್ಯಗಳು
ಒಂದೊಂದು ಪದಕ್ಕೆ ಹತ್ತು ಡಾಲರು ಶುಲ್ಕ!
ಅದರ ಮೇಲೆ, ಹಾಳೆಗೆ ಒಂದಾದರೆ ಸಾಲದು,
ಪಂಕ್ತಿಗೆ ಒಂದಿರಲಿ ನಮ್ಮ ಕಡೆಯ, ಅವರ ಕಡೆಯ
ಅಧಿಕಾರಿಗಳ ಸಹಿಗಳು, ಕೈ ಸೋಲುವವರೆಗೂ!
ರಾಕ್ಷಸ ರಾಜ್ಯದಲ್ಲಿ, ಲಕ್ಷಾಂತರ ರಾವಣರು
ಕೊರಮರು, ದರೋಡೆ ಕೋರರ, ಕಳ್ಳರ ಸಂತೆಯಲ್ಲಿ
ಮೂರಲ್ಲ ಮುನ್ನೂರು ಹಾಳೆಗಳ ರೇಖೆ ಹಾಕಿಸಿನೋಡಿ!
ನಿಮ್ಮ ಕಂಪೆನಿ ಸೀಕ್ರೆಟ್ ಸೀತಮ್ಮನವರನ್ನು ಸಲೀಸಾಗಿ
ಕೊಳ್ಳೆ ಮಾಡುವ ಕಳ್ಳರು, ಕತ್ತಲೆ, ಬೆಳಕಾದರೇನು!
ಚುರುಕಿನಲ್ಲಿ ಚೈನದಲ್ಲಿ ಮಾತ್ರವಲ್ಲ, ಚೆನ್ನೈನಲ್ಲೂ,
ನಿಮ್ಮ ಬಂಗಾರ ಕದಿಯುವವರು ಬೆಂಗಳೂರಿನಲ್ಲೂ,
ಸತ್ಯದ ಸ್ವರ್ಗ ಸಿಲಿಕಾನ್ ಕಣಿವೆಯಲ್ಲೂ ಇದ್ದಾರೆ.
ಸಿಲ್ಲಿ ಮಾತಂದೆನೆಂದು ಕಲ್ಲು ಹೊಡೆಯ ಬೇಡ,
ನಿಮ್ಮೂರು ಅಮೇರಿಕಾದ ಮೂಲೆ, ಮೂಲೆಗಳಲ್ಲೂ,
ರಾವಣರು ಲೆಕ್ಕವಿಲ್ಲದಷ್ಟು ಇದ್ದಾರೆ ಕಣೋ ಹೇ ಲಕ್ಷ್ಮಣಾ!
ಹೇ ರಾಮಾ! ಹೇ ಲಕ್ಷ್ಮಣಾ! ಎಂದು ಕಳ್ಳ ಕಂಠದಲ್ಲಿ ಕೂಗಿ
ನಿನ್ನ ಸೊತ್ತು ಸೀತೆಯನ್ನು ಎತ್ತಿ ಕೊಂಡು ಲಂಕಾಕ್ಕೆ
ಓಡಿ ಹೋದಾರು ಆಕಾಶರಾಯನಾಗ ಬೇಡ ಮಂಕೇ!
ಕೆ. ಆರ್. ಎಸ್. ಮೂರ್ತಿ
ಬೇಡ, ಬೇಡ, ಬೇಡ, ಬೇಡ.
ಬಾರದು, ಆಗ ಬಾರದು, ಆಗದಿರಲಿ,
ಅಕಸ್ಮಾತ್ ಆಗಿಹೋದರೆ, ಎಂದೆಲ್ಲಾ ಯೋಚನೆ.
ಬೇಡನಿಗೆ "ಬೇಡ" ಎಂದು ಬರೆಯಲು,
ಕವಿ ಧಾರೆ ಹರಿಸಲು ಬರುವುದಿಲ್ಲವೇ!
ಅದಕ್ಕಾಗಿ ಏನು ಮಾಡುವ?
ಏನೇನು ಮಾಡಿದರೆ, ಹೇಗೆ ಮಾಡಿದರೆ?
ಜಾಗ್ರತೆ ಅಗ್ರಜನಿಗೆ, ಆಜ್ಞೆ ಅನುಜನಿಗೆ
ರಕ್ಷಣೆಗೆ ಲಕ್ಷ್ಮಣನನ್ನೇ ಇಡಿಸಿದ ಕಾವಲು
ಜಗದ್ರಕ್ಷಕ ದಾಶರಥಿಯ ಮಹಾ ಯೋಜನೆ!
ಇದರ ಜೊತೆಗೆ, ಲಕ್ಷ್ಮಣನ ಜೊತೆ ಅತ್ತಿಗೆಯ
ವಾದ, ಅನ್ಯಥಾ ಅಪವಾದ, ಪತಿವ್ರತಾ ವಾದ.
ಬೇಸತ್ತು ಹಾಕಿದ ಕುಟೀರದ ಸುತ್ತ ಮೂರು ಸುತ್ತು
"ಲಕ್ಷ್ಮಣ ರೇಖೆ" Fence around the humble hut,
non-circumvention protection clause,
ಲಾಯರಿಗಳ ಪರಿ, ಪರಿ ವೈಖರಿಯ ಬರಹ
ಆರೆಂಟು ಹಾಳೆಗಳು, ಬರೆದದ್ದೇ ಬರೆದದ್ದು!
ಎಣಿಸಿದ್ದೆ ಎಣಿಸಿದ್ದು! ಪದಗಳು, ವಾಕ್ಯಗಳು
ಒಂದೊಂದು ಪದಕ್ಕೆ ಹತ್ತು ಡಾಲರು ಶುಲ್ಕ!
ಅದರ ಮೇಲೆ, ಹಾಳೆಗೆ ಒಂದಾದರೆ ಸಾಲದು,
ಪಂಕ್ತಿಗೆ ಒಂದಿರಲಿ ನಮ್ಮ ಕಡೆಯ, ಅವರ ಕಡೆಯ
ಅಧಿಕಾರಿಗಳ ಸಹಿಗಳು, ಕೈ ಸೋಲುವವರೆಗೂ!
ರಾಕ್ಷಸ ರಾಜ್ಯದಲ್ಲಿ, ಲಕ್ಷಾಂತರ ರಾವಣರು
ಕೊರಮರು, ದರೋಡೆ ಕೋರರ, ಕಳ್ಳರ ಸಂತೆಯಲ್ಲಿ
ಮೂರಲ್ಲ ಮುನ್ನೂರು ಹಾಳೆಗಳ ರೇಖೆ ಹಾಕಿಸಿನೋಡಿ!
ನಿಮ್ಮ ಕಂಪೆನಿ ಸೀಕ್ರೆಟ್ ಸೀತಮ್ಮನವರನ್ನು ಸಲೀಸಾಗಿ
ಕೊಳ್ಳೆ ಮಾಡುವ ಕಳ್ಳರು, ಕತ್ತಲೆ, ಬೆಳಕಾದರೇನು!
ಚುರುಕಿನಲ್ಲಿ ಚೈನದಲ್ಲಿ ಮಾತ್ರವಲ್ಲ, ಚೆನ್ನೈನಲ್ಲೂ,
ನಿಮ್ಮ ಬಂಗಾರ ಕದಿಯುವವರು ಬೆಂಗಳೂರಿನಲ್ಲೂ,
ಸತ್ಯದ ಸ್ವರ್ಗ ಸಿಲಿಕಾನ್ ಕಣಿವೆಯಲ್ಲೂ ಇದ್ದಾರೆ.
ಸಿಲ್ಲಿ ಮಾತಂದೆನೆಂದು ಕಲ್ಲು ಹೊಡೆಯ ಬೇಡ,
ನಿಮ್ಮೂರು ಅಮೇರಿಕಾದ ಮೂಲೆ, ಮೂಲೆಗಳಲ್ಲೂ,
ರಾವಣರು ಲೆಕ್ಕವಿಲ್ಲದಷ್ಟು ಇದ್ದಾರೆ ಕಣೋ ಹೇ ಲಕ್ಷ್ಮಣಾ!
ಹೇ ರಾಮಾ! ಹೇ ಲಕ್ಷ್ಮಣಾ! ಎಂದು ಕಳ್ಳ ಕಂಠದಲ್ಲಿ ಕೂಗಿ
ನಿನ್ನ ಸೊತ್ತು ಸೀತೆಯನ್ನು ಎತ್ತಿ ಕೊಂಡು ಲಂಕಾಕ್ಕೆ
ಓಡಿ ಹೋದಾರು ಆಕಾಶರಾಯನಾಗ ಬೇಡ ಮಂಕೇ!
ಅಕ್ಕ ಕೇಳವ್ವ
ಡಾ. ಕೆಆರ್ಎಸ್ ಮೂರ್ತಿ
ಅಕ್ಕ ಕೇಳವ್ವ,
ನೀನೊಂದು ಕನಸ ಕಂಡೆ
ನೀನಂದು ಕನಸ ಕಂಡೆ
ಅಕ್ಕ ಕೇಳವ್ವ,
ನಮ್ಮೂರ ನನಸನು
ಎನ್ನಾರೈ ಕನಸನು
ಅಕ್ಕ ಹೇಳವ್ವ,
ನೀನಂದು ಕಂಡ ಕನಸನು
ನಿನ್ನಮ್ಮನ ಹೊಕ್ಕಳ
ಒಕ್ಕಲಿಗರು ನಾವೆಂದು
ಹೊಕ್ಕಳ ಕುಡಿಯೆಲ್ಲ
ಬಳಸಿ ಸುತ್ತಿದರೂ
ನಿನ್ನ ಮಡಿಲವರೆಂದು
ಕನಸ ಕಂಡಿದ್ದು ನೆನಪು
ಅಕ್ಕ ಕೇಳವ್ವ, ನಮ್ಮೆಲ್ಲರ ಜಗಳವ
ಅಕ್ಕ ಕೇಳವ್ವ, ನಮ್ಮೆಲ್ಲರ ಕದನವ
ನನ್ನ ಎದೆಮೇಲೆ
ನಾ ಧರಿಸಿದ ದಾರ
ನಾ ಆರಾಧಿಸಿದ ಹರ
ನಿನ್ನ ಮುಂದೆಯೇ ಕಾದುವರು
ಅಕ್ಕ ಪೇಳವ್ವ
ನಿನ್ನ ಕೈ ಕಾಲ
ಅತ್ತಿತ್ತ ಎಳೆವರೇ
ಅದು ನನ್ನದು
ಇದು ನಿನ್ನದು
ಛಲದ ಕತ್ತಿಯನೆ
ಮಸೆದು ಕತ್ತರಿಸಿದರೆ
ನೂರು ಚೂರು
ಮಾಡಿಹರೆ ನಿನ್ನ
ನೀ ಮಡಿದರೆ
ಇನ್ನೇನು ಉಳಿದಿದೆ
ಅಕ್ಕ ಏಳವ್ವ
ನಮ್ಮೆಲ್ಲರ ಎಬ್ಬಿಸವ್ವ
ಇವರೆಲ್ಲ ನಿನ್ನ ಹೆಳವಿಯ
ಮಾಡುವ ಮುನ್ನವೇ
ನಮ್ಮೆಲ್ಲರ ಕಪಾಳಕ್ಕೆ
ಬಾರಿಸವ್ವ ಜೋರು ಮಾಡುತ್ತಾ
ನಮ್ಮೆಲ್ಲರ ತಲೆಗೆ
ಬುದ್ದಿಯ ಬರಸವ್ವ
ಅಕ್ಕ ಕೇಳವ್ವ,
ನೀನೊಂದು ಕನಸ ಕಂಡೆ
ನೀನಂದು ಕನಸ ಕಂಡೆ
ಅಕ್ಕ ಕೇಳವ್ವ,
ನಮ್ಮೂರ ನನಸನು
ಎನ್ನಾರೈ ಕನಸನು
ಅಕ್ಕ ಹೇಳವ್ವ,
ನೀನಂದು ಕಂಡ ಕನಸನು
ನಿನ್ನಮ್ಮನ ಹೊಕ್ಕಳ
ಒಕ್ಕಲಿಗರು ನಾವೆಂದು
ಹೊಕ್ಕಳ ಕುಡಿಯೆಲ್ಲ
ಬಳಸಿ ಸುತ್ತಿದರೂ
ನಿನ್ನ ಮಡಿಲವರೆಂದು
ಕನಸ ಕಂಡಿದ್ದು ನೆನಪು
ಅಕ್ಕ ಕೇಳವ್ವ, ನಮ್ಮೆಲ್ಲರ ಜಗಳವ
ಅಕ್ಕ ಕೇಳವ್ವ, ನಮ್ಮೆಲ್ಲರ ಕದನವ
ನನ್ನ ಎದೆಮೇಲೆ
ನಾ ಧರಿಸಿದ ದಾರ
ನಾ ಆರಾಧಿಸಿದ ಹರ
ನಿನ್ನ ಮುಂದೆಯೇ ಕಾದುವರು
ಅಕ್ಕ ಪೇಳವ್ವ
ನಿನ್ನ ಕೈ ಕಾಲ
ಅತ್ತಿತ್ತ ಎಳೆವರೇ
ಅದು ನನ್ನದು
ಇದು ನಿನ್ನದು
ಛಲದ ಕತ್ತಿಯನೆ
ಮಸೆದು ಕತ್ತರಿಸಿದರೆ
ನೂರು ಚೂರು
ಮಾಡಿಹರೆ ನಿನ್ನ
ನೀ ಮಡಿದರೆ
ಇನ್ನೇನು ಉಳಿದಿದೆ
ಅಕ್ಕ ಏಳವ್ವ
ನಮ್ಮೆಲ್ಲರ ಎಬ್ಬಿಸವ್ವ
ಇವರೆಲ್ಲ ನಿನ್ನ ಹೆಳವಿಯ
ಮಾಡುವ ಮುನ್ನವೇ
ನಮ್ಮೆಲ್ಲರ ಕಪಾಳಕ್ಕೆ
ಬಾರಿಸವ್ವ ಜೋರು ಮಾಡುತ್ತಾ
ನಮ್ಮೆಲ್ಲರ ತಲೆಗೆ
ಬುದ್ದಿಯ ಬರಸವ್ವ
ಕಂಡೂ ಕಾಣದ ಹಕ್ಕಿ
ಕೆ ಆರ್ ಎಸ್ ಮೂರ್ತಿ
ಕಂಡೂ ಕಾಣದ ಹಕ್ಕಿ ಗುಂಡಿಗೆಯ ಒಳ ಹೊಕ್ಕಿ
ಚಿನ್ನದ ಚೊಕ್ಕ ಗೂಡನ್ನೇ ಭರದಿಂದ ಕಟ್ತೀತಲ್ಲೋ!
ಹಕ್ಕೀಯ ಚೆಲುವು ಕಾಣದೇ ನಂಗೇಕೆ ಮನಸಾತು
ನನ್ನ ಹ್ಯಾಗೆ ಎಂತು ಕಂಡೀತೋ ಈ ಚೆಲುವಿನ ಹಕ್ಕಿ
ಇದರ ಮಧುರ ಇಂಚರ ಕೇಳಿದ್ದೇ ನೆನಪಿಲ್ಲ ಮನಕೆ
ನನ್ನ ದನಿಯ ಕೇಳದೆ ನನ್ನಲಿ ಹ್ಯಾಗೆ ಮನಸಾತು
ಚಂಚಲದ ಹಕ್ಕಿ ನನ್ನ ಗುಂಡಿಗೆಯ ಮಂಚವನೇರಿತ್ತು
ಬಿಗಿದಪ್ಪಿ ಬಿಸಿಮಾಡಿ ಮೈಯೆಲ್ಲಾ ಚುಂಬಿಸಿ ಬಿಟ್ಟಿತ್ತು
ರುಂಡ ಮುಂಡ ಮಂಡೆಯ ಧಮನಿ ಉಬ್ಬಿಸಿ ಬಿಟ್ಟಿತ್ತು
ಸಗ್ಗದ ಸುಖವನ್ನು ಹಿಗ್ಗಿದ ಮೈಯೊಳಗೆ ಫಕ್ಕನೆ ತರಿಸಿತ್ತು
ಮುಂದೆಂದೂ ಕಾಣದ ಹಕ್ಕಿಯೊಂದು ನನ್ನ ತನ್ನದಾಗಿಸಿತ್ತು
ತನ್ನ ಇಂಬಿನ ಧಾರೆ ಧರಧರನೆ ಸುರಿಸಿ ಸಗ್ಗದ ತಾನ ಹಾಕಿತ್ತು
ಕಂಡೂ ಕಾಣದ ಹಕ್ಕಿ ಗುಂಡಿಗೆಯ ಒಳ ಹೊಕ್ಕಿ
ಚಿನ್ನದ ಚೊಕ್ಕ ಗೂಡನ್ನೇ ಭರದಿಂದ ಕಟ್ತೀತಲ್ಲೋ!
ಹಕ್ಕೀಯ ಚೆಲುವು ಕಾಣದೇ ನಂಗೇಕೆ ಮನಸಾತು
ನನ್ನ ಹ್ಯಾಗೆ ಎಂತು ಕಂಡೀತೋ ಈ ಚೆಲುವಿನ ಹಕ್ಕಿ
ಇದರ ಮಧುರ ಇಂಚರ ಕೇಳಿದ್ದೇ ನೆನಪಿಲ್ಲ ಮನಕೆ
ನನ್ನ ದನಿಯ ಕೇಳದೆ ನನ್ನಲಿ ಹ್ಯಾಗೆ ಮನಸಾತು
ಚಂಚಲದ ಹಕ್ಕಿ ನನ್ನ ಗುಂಡಿಗೆಯ ಮಂಚವನೇರಿತ್ತು
ಬಿಗಿದಪ್ಪಿ ಬಿಸಿಮಾಡಿ ಮೈಯೆಲ್ಲಾ ಚುಂಬಿಸಿ ಬಿಟ್ಟಿತ್ತು
ರುಂಡ ಮುಂಡ ಮಂಡೆಯ ಧಮನಿ ಉಬ್ಬಿಸಿ ಬಿಟ್ಟಿತ್ತು
ಸಗ್ಗದ ಸುಖವನ್ನು ಹಿಗ್ಗಿದ ಮೈಯೊಳಗೆ ಫಕ್ಕನೆ ತರಿಸಿತ್ತು
ಮುಂದೆಂದೂ ಕಾಣದ ಹಕ್ಕಿಯೊಂದು ನನ್ನ ತನ್ನದಾಗಿಸಿತ್ತು
ತನ್ನ ಇಂಬಿನ ಧಾರೆ ಧರಧರನೆ ಸುರಿಸಿ ಸಗ್ಗದ ತಾನ ಹಾಕಿತ್ತು
ಉಗಾದಿಯ ಉಲ್ಲಾಸ
ಉಗಾದಿಯ ಉಲ್ಲಾಸ
ನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದು
ಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದು
ಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆ
ಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದು
ಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆ
ರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ ಬೀರುತಿದೆ ಹೊಸ್ತಿಲೊಳು ಕಾಲಿಡುತಿರೆ
ಕೇಳಬರುತಿದೆಯೇ ಮಕ್ಕಳ ಕಿಲ ಕಿಲ ದನಿಯಲ್ಲಿ ನಿಮ್ಮ ಕಿವಿ ಮೆಚ್ಚಿಸುವ ಆನಂದದ ಹಾಡು
ಮೊಮ್ಮಕ್ಕಳ ಬೆನ್ನೆತ್ತಿ, ನೆತ್ತಿಯ ಮೇಲೆ ತುಪ್ಪವನಿಡಲು ಕಾತುರದಿ ಹಾತೊರೆವ ಅಜ್ಜಿ ಪಾಡು
ಅಭ್ಯಂಜನವ ಮುಗಿಸಿ ಬರುತಿಹಳು ಮನೆಯ ಒಡತಿ ಒದ್ದೆಯ ತಲೆಯನ್ನು ಒರೆಸುತ್ತ ಬಟ್ಟೆಯಲಿ
ಒಳಗೆ ಬಂದವಳ ಕಾತುರದಿ ಕಾಣುತಿಹರು ಒಲವಿನಲಿ ರಾಯರು ಕೈಯಲ್ಲಿ ಮಾತ್ರ ಜನಿವಾರದ ಮೇಲೆ
ವರುಷ ಪೂರ್ತಿ ಕಣ್ತುಂಬಿ ನೋಡಿಹರೂ ತಮ್ಮ ಮಡದಿಯನು ಹೊಸ ವರುಷದಲಿ ಬೇರೆ ಹರುಷವಲ್ಲವೇ
ಇದನು ಗಮನಿಸಿದ ಒಡತಿ ತುಟಿ ಮುಚ್ಚಿ ನಗೆ ಬೀಸುತಿರೆ, ಕೆನ್ನೆ ಮಾತ್ರ ಮಾವಿನ ಹಣ್ಣಿಗಿಂತ ಕೆಂಪಲ್ಲವೇ
ಬಂದಿತೋ ಹೊಸ ಉಗಾದಿ, ತಂದಿಹುದೋ ಜೇನಿಗೂ ಸವಿಯಾದ ಬೆಲ್ಲದುಂಡೆಯ ತಿಂಗಳುಗಳೇ ಸಿಹಿಯಾಯ್ತು
ಇರಲಿ ಮಧ್ಯೆ ಬೇವಿನಾ ಚಿಗುರು, ಮಾಡಲಿ ಮತ್ತೆ ಬರುವ ಸಿಹಿದಿನಗಳ ಇನ್ನಷ್ಟು ಮತ್ತಷ್ಟು ಮೆಲುಕಿದರಾಯ್ತು
ಪಂಚಾಂಗವ ಓದಿ, ಗ್ರಹ ಗತಿಯನು ತಿಳಿದು, ಗುರು, ಶುಕ್ರ, ಶನಿ, ಚಂದಿರನೂ ಮಂಗಲನೂ ಏನೆಲ್ಲ ತಂದರಾಯ್ತು
ನಾವು ಮಾತ್ರ, ನೀವು, ನೀವು, ಅವರು, ಉಳಿದವರೆಲ್ಲ ನಗು ನಗುತ ನಗುವ ಸಾರುತ ಒಲುಮೆ ಬೀರಿದರಾಯ್ತು
ಇದೆ ಉಗಾದಿಯ ಸಾರ, ಇದೆ ಚೆಲುವಿನ ಗೆಲುವು, ಇದಲ್ಲವೇ ನಮ್ಮೆಲ್ಲರ ಸಂತಸದ ಗುಟ್ಟು, ನಮ್ಮೆಲ್ಲರ ಒಗ್ಗಟ್ಟು
ಹಾಡೊಣ ಬನ್ನಿರಿ ಹೊಸ ದಿನದ ಹಾಡು, ಕುಣಿಯೋಣ ಬನ್ನಿರೀ, ಕರೆದು ಬನ್ನಿ ಕೈ ಕೈ ಜೋಡಿಸುತ ನೆಗೆದು ಹೆಜ್ಜೆಯಿಟ್ಟು
ನಗುವ ಚೆಲ್ಲಿರಿ, ನಕ್ಕು ಅರಳಿದ ಮಲ್ಲಿಗೆಯ ಚೆಲ್ಲಿರಿ, ಸಿಹಿ ದಾಳಿಂಬೆ, ಮಾವಿನ ರಸಕೂ ಸಿಹಿಯಾದ ಒಡನಾಟದ ನಂಟು
ನಿಮ್ಮ ಒಡಲಿನ ಬೆಲ್ಲವ ಎಲ್ಲರ ಮಡಲಿನಲ್ಲಿ ನೀಡುತ್ತಾ ನಡೆವಾಗ ಮತ್ತೆ ಮಾಯದಲಿ ಹಿರಿದಾಗಲಿ ನಿಮ್ಮ ಮಡಲ ಗಂಟು
ನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದು
ಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದು
ಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆ
ಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದು
ಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆ
ರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ ಬೀರುತಿದೆ ಹೊಸ್ತಿಲೊಳು ಕಾಲಿಡುತಿರೆ
ಕೇಳಬರುತಿದೆಯೇ ಮಕ್ಕಳ ಕಿಲ ಕಿಲ ದನಿಯಲ್ಲಿ ನಿಮ್ಮ ಕಿವಿ ಮೆಚ್ಚಿಸುವ ಆನಂದದ ಹಾಡು
ಮೊಮ್ಮಕ್ಕಳ ಬೆನ್ನೆತ್ತಿ, ನೆತ್ತಿಯ ಮೇಲೆ ತುಪ್ಪವನಿಡಲು ಕಾತುರದಿ ಹಾತೊರೆವ ಅಜ್ಜಿ ಪಾಡು
ಅಭ್ಯಂಜನವ ಮುಗಿಸಿ ಬರುತಿಹಳು ಮನೆಯ ಒಡತಿ ಒದ್ದೆಯ ತಲೆಯನ್ನು ಒರೆಸುತ್ತ ಬಟ್ಟೆಯಲಿ
ಒಳಗೆ ಬಂದವಳ ಕಾತುರದಿ ಕಾಣುತಿಹರು ಒಲವಿನಲಿ ರಾಯರು ಕೈಯಲ್ಲಿ ಮಾತ್ರ ಜನಿವಾರದ ಮೇಲೆ
ವರುಷ ಪೂರ್ತಿ ಕಣ್ತುಂಬಿ ನೋಡಿಹರೂ ತಮ್ಮ ಮಡದಿಯನು ಹೊಸ ವರುಷದಲಿ ಬೇರೆ ಹರುಷವಲ್ಲವೇ
ಇದನು ಗಮನಿಸಿದ ಒಡತಿ ತುಟಿ ಮುಚ್ಚಿ ನಗೆ ಬೀಸುತಿರೆ, ಕೆನ್ನೆ ಮಾತ್ರ ಮಾವಿನ ಹಣ್ಣಿಗಿಂತ ಕೆಂಪಲ್ಲವೇ
ಬಂದಿತೋ ಹೊಸ ಉಗಾದಿ, ತಂದಿಹುದೋ ಜೇನಿಗೂ ಸವಿಯಾದ ಬೆಲ್ಲದುಂಡೆಯ ತಿಂಗಳುಗಳೇ ಸಿಹಿಯಾಯ್ತು
ಇರಲಿ ಮಧ್ಯೆ ಬೇವಿನಾ ಚಿಗುರು, ಮಾಡಲಿ ಮತ್ತೆ ಬರುವ ಸಿಹಿದಿನಗಳ ಇನ್ನಷ್ಟು ಮತ್ತಷ್ಟು ಮೆಲುಕಿದರಾಯ್ತು
ಪಂಚಾಂಗವ ಓದಿ, ಗ್ರಹ ಗತಿಯನು ತಿಳಿದು, ಗುರು, ಶುಕ್ರ, ಶನಿ, ಚಂದಿರನೂ ಮಂಗಲನೂ ಏನೆಲ್ಲ ತಂದರಾಯ್ತು
ನಾವು ಮಾತ್ರ, ನೀವು, ನೀವು, ಅವರು, ಉಳಿದವರೆಲ್ಲ ನಗು ನಗುತ ನಗುವ ಸಾರುತ ಒಲುಮೆ ಬೀರಿದರಾಯ್ತು
ಇದೆ ಉಗಾದಿಯ ಸಾರ, ಇದೆ ಚೆಲುವಿನ ಗೆಲುವು, ಇದಲ್ಲವೇ ನಮ್ಮೆಲ್ಲರ ಸಂತಸದ ಗುಟ್ಟು, ನಮ್ಮೆಲ್ಲರ ಒಗ್ಗಟ್ಟು
ಹಾಡೊಣ ಬನ್ನಿರಿ ಹೊಸ ದಿನದ ಹಾಡು, ಕುಣಿಯೋಣ ಬನ್ನಿರೀ, ಕರೆದು ಬನ್ನಿ ಕೈ ಕೈ ಜೋಡಿಸುತ ನೆಗೆದು ಹೆಜ್ಜೆಯಿಟ್ಟು
ನಗುವ ಚೆಲ್ಲಿರಿ, ನಕ್ಕು ಅರಳಿದ ಮಲ್ಲಿಗೆಯ ಚೆಲ್ಲಿರಿ, ಸಿಹಿ ದಾಳಿಂಬೆ, ಮಾವಿನ ರಸಕೂ ಸಿಹಿಯಾದ ಒಡನಾಟದ ನಂಟು
ನಿಮ್ಮ ಒಡಲಿನ ಬೆಲ್ಲವ ಎಲ್ಲರ ಮಡಲಿನಲ್ಲಿ ನೀಡುತ್ತಾ ನಡೆವಾಗ ಮತ್ತೆ ಮಾಯದಲಿ ಹಿರಿದಾಗಲಿ ನಿಮ್ಮ ಮಡಲ ಗಂಟು
ಗುರುವಾರ, ಜೂನ್ 10, 2010
ಎಲ್ಲ ಬಲ್ಲ ಗೂಗಲ್ಲ
ಎಲ್ಲ ಬಲ್ಲ ಗೂಗಲ್ಲ
ಕೆ. ಆರ್. ಎಸ್. ಮೂರ್ತಿ
ಗೂಗಲ್ಲ! ನೀನೆಲ್ಲ ಬಲ್ಲ, ಇನ್ನುಳಿದಿದೇನೂ ಇಲ್ಲ
ಎಲ್ಲರೂ ನಿನ್ನ ಬಲ್ಲವರು ಅಲ್ಲವೇನೋ ಗೂಗಲ್ಲ!
ಆಗಲ್ಲ, ಸಿಗಲಿಲ್ಲ, ಹುಡುಕುವುದಿಲ್ಲ, ಎಂದೆಲ್ಲಾ
ತಡ ಎನ್ನುತ್ತಾ, ಕಾಯಿಸಿ ನೋಯಿಸುವುದಿಲ್ಲ
ಇದ್ದವರಿಗೂ, ಇಲ್ಲದವರಿಗೂ, ಬಲ್ಲಿದರಿಗೂ,
ಮಣ್ಣು, ಕಲ್ಲು ತುಂಬಿರುವ ನನ್ನಂಥ ದಡ್ದರಿಗೂ
ಬರಡು ಬುರುಡೆಯ ಮಂಕುತಿಮ್ಮ ಆದರೂ ನಾನು
ಪ್ರಚಂಡ ಪ್ರಪಂಚ ಜ್ಞಾನ ಗರಡಿ ರಕ್ಷೆಯಾಗುವೆ ನೀನು
ಉತ್ತರಗಳನು ಅರಿಯದೆ ಅರಿಸುವವರು ಅಪಾರ
ಅವರಿಗೆಲ್ಲ ಆಗುವೆ ಆಧಾರ, ವಿಶೇಷ ಜ್ಞಾನ ಕುಬೇರ
ಸಾಕು ಒಂದೆರಡು ಅಕ್ಷರದ ಪದ ಹೇಳಿದರೆ
ಸಾವಿರಗಟ್ಟಲೆ ಉತ್ತರವ ಒದರಿ ಬಿಡುವ ಧೀರ
ತುಸು ಕಾಸಿಲ್ಲದೆ ಕೇಳಿದೆಲ್ಲವ ಸಲ್ಲಿಸುವ ಮಲ್ಲ
ಕಲ್ಪತರು, ಕಾಮಧೇನುವೂ ನೀನೆಮಗೆ ಎಲ್ಲ
ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ
ಎನ್ನುತ್ತ ಪ್ರತಿ ಕ್ಷಣವೂ ಭಜನೆ ಮಾಡುವವರು ಎಲ್ಲ
ಗೋಗೊಲ್ಲನನೂ ಭಜನೆ ಮಾಡುವವರಿಗಿಂತ
ನಿನ್ನ ಗೊಗರೆಯುವವರೇ ಅತಿ ಹೆಚ್ಚು ಭಕ್ತರಂತೆ
ಆಮತ, ಈಮತ, ಆಜಾತಿ, ಈಜಾತಿ, ಆದರೇನು
ಆ ಊರು, ಈ ಊರು, ದೇಶ ಯಾವುದಾದರೇನು
ಆವಸ್ತು, ಈವಸ್ತು, ಅವತ್ತು, ಇವತ್ತು, ಆಹೊತ್ತು
ಕೇಳಿ ಕೇಳಿದವರಿಗೆಲ್ಲ ಅಭಯ ಹಸ್ತದ ತಥಾಸ್ತು
ಕೆ. ಆರ್. ಎಸ್. ಮೂರ್ತಿ
ಗೂಗಲ್ಲ! ನೀನೆಲ್ಲ ಬಲ್ಲ, ಇನ್ನುಳಿದಿದೇನೂ ಇಲ್ಲ
ಎಲ್ಲರೂ ನಿನ್ನ ಬಲ್ಲವರು ಅಲ್ಲವೇನೋ ಗೂಗಲ್ಲ!
ಆಗಲ್ಲ, ಸಿಗಲಿಲ್ಲ, ಹುಡುಕುವುದಿಲ್ಲ, ಎಂದೆಲ್ಲಾ
ತಡ ಎನ್ನುತ್ತಾ, ಕಾಯಿಸಿ ನೋಯಿಸುವುದಿಲ್ಲ
ಇದ್ದವರಿಗೂ, ಇಲ್ಲದವರಿಗೂ, ಬಲ್ಲಿದರಿಗೂ,
ಮಣ್ಣು, ಕಲ್ಲು ತುಂಬಿರುವ ನನ್ನಂಥ ದಡ್ದರಿಗೂ
ಬರಡು ಬುರುಡೆಯ ಮಂಕುತಿಮ್ಮ ಆದರೂ ನಾನು
ಪ್ರಚಂಡ ಪ್ರಪಂಚ ಜ್ಞಾನ ಗರಡಿ ರಕ್ಷೆಯಾಗುವೆ ನೀನು
ಉತ್ತರಗಳನು ಅರಿಯದೆ ಅರಿಸುವವರು ಅಪಾರ
ಅವರಿಗೆಲ್ಲ ಆಗುವೆ ಆಧಾರ, ವಿಶೇಷ ಜ್ಞಾನ ಕುಬೇರ
ಸಾಕು ಒಂದೆರಡು ಅಕ್ಷರದ ಪದ ಹೇಳಿದರೆ
ಸಾವಿರಗಟ್ಟಲೆ ಉತ್ತರವ ಒದರಿ ಬಿಡುವ ಧೀರ
ತುಸು ಕಾಸಿಲ್ಲದೆ ಕೇಳಿದೆಲ್ಲವ ಸಲ್ಲಿಸುವ ಮಲ್ಲ
ಕಲ್ಪತರು, ಕಾಮಧೇನುವೂ ನೀನೆಮಗೆ ಎಲ್ಲ
ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ
ಎನ್ನುತ್ತ ಪ್ರತಿ ಕ್ಷಣವೂ ಭಜನೆ ಮಾಡುವವರು ಎಲ್ಲ
ಗೋಗೊಲ್ಲನನೂ ಭಜನೆ ಮಾಡುವವರಿಗಿಂತ
ನಿನ್ನ ಗೊಗರೆಯುವವರೇ ಅತಿ ಹೆಚ್ಚು ಭಕ್ತರಂತೆ
ಆಮತ, ಈಮತ, ಆಜಾತಿ, ಈಜಾತಿ, ಆದರೇನು
ಆ ಊರು, ಈ ಊರು, ದೇಶ ಯಾವುದಾದರೇನು
ಆವಸ್ತು, ಈವಸ್ತು, ಅವತ್ತು, ಇವತ್ತು, ಆಹೊತ್ತು
ಕೇಳಿ ಕೇಳಿದವರಿಗೆಲ್ಲ ಅಭಯ ಹಸ್ತದ ತಥಾಸ್ತು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)