ಸೋಮವಾರ, ಆಗಸ್ಟ್ 2, 2010

ಕಲ್ಲೊಂದು ಕಲ್ಲಿಗೆ ಕೇಳಿತು:

ಕಲ್ಲೊಂದು ಕಲ್ಲಿಗೆ ಕೇಳಿತು:
ಕೆ. ಆರ್. ಎಸ್. ಮೂರ್ತಿ

ಇದೇಕೆ ಮಾನವರು ನಮಗೆಲ್ಲ ಮುಗಿಯುವುದು ಕೈ ಜೋಡಿ?
ತಾಳವನು ತಟ್ಟುವುದು, ಎಲ್ಲರೂ ಜೊತೆಗೆ ಧ್ವನಿಗಳನು ಕೂಡಿ

ಹೋಗಲಿ ಎಂದರೆ, ದಿನವೂ ಹೊಗಳುವುದೇತಕೆ ಹಾಡಿ, ಹಾಡಿ?
ಬಾಗಿದ ತಲೆ, ದೈನ್ಯತೆಯಲಿ ಒಟ್ಟಿಗೆ ಕೈ ಚಾಚುವುದು ಬೇಡಿ

ನೆಲದ ಮೇಲೆ ಮಲಗಿ, ಎದ್ದು ಮತ್ತೆ ಮಲಗಿ ಏಳುವುದು ನೋಡಿ
ಧನ, ಕನಕ, ಬಣ್ಣ, ಬಣ್ಣದ ಹತ್ತಿಯ ವಸ್ತ್ರಗಳೆಲ್ಲವನು ನೀಡಿ, ಹರಡಿ

ಮೂಗಿಲ್ಲದ ನಮಗೆ ಗಂಧ, ಧೂಪ, ಘಮ, ಘಮ ಹೂ ಪೂಜೆ ಮಾಡಿ
ಹಣ್ಣು, ಹಂಪಲು, ಹಾಲು, ಆನ್ನ, ಮೆಲೋಗರಗಳ ಇಟ್ಟ ಹಾಗೆ ಮಾಡಿ

ತಾವೇ ಗಬ, ಗಬ ತಿಂದು ತೇಗಿ, ತೂಕಡಿಸಿ ಕಲ್ಲನೇ ಸುಪ್ಪತಿಗೆ ಮಾಡಿ
ನಗುವುದೋ, ಅಳುವುದೋ ಈ ಮೂಢತನಕೆ ನೀವೇ ಯೋಚನೆ ಮಾಡಿ

1 ಕಾಮೆಂಟ್‌: