ಕಲ್ಲೊಂದು ಕಲ್ಲಿಗೆ ಕೇಳಿತು:
ಕೆ. ಆರ್. ಎಸ್. ಮೂರ್ತಿ
ಇದೇಕೆ ಮಾನವರು ನಮಗೆಲ್ಲ ಮುಗಿಯುವುದು ಕೈ ಜೋಡಿ?
ತಾಳವನು ತಟ್ಟುವುದು, ಎಲ್ಲರೂ ಜೊತೆಗೆ ಧ್ವನಿಗಳನು ಕೂಡಿ
ಹೋಗಲಿ ಎಂದರೆ, ದಿನವೂ ಹೊಗಳುವುದೇತಕೆ ಹಾಡಿ, ಹಾಡಿ?
ಬಾಗಿದ ತಲೆ, ದೈನ್ಯತೆಯಲಿ ಒಟ್ಟಿಗೆ ಕೈ ಚಾಚುವುದು ಬೇಡಿ
ನೆಲದ ಮೇಲೆ ಮಲಗಿ, ಎದ್ದು ಮತ್ತೆ ಮಲಗಿ ಏಳುವುದು ನೋಡಿ
ಧನ, ಕನಕ, ಬಣ್ಣ, ಬಣ್ಣದ ಹತ್ತಿಯ ವಸ್ತ್ರಗಳೆಲ್ಲವನು ನೀಡಿ, ಹರಡಿ
ಮೂಗಿಲ್ಲದ ನಮಗೆ ಗಂಧ, ಧೂಪ, ಘಮ, ಘಮ ಹೂ ಪೂಜೆ ಮಾಡಿ
ಹಣ್ಣು, ಹಂಪಲು, ಹಾಲು, ಆನ್ನ, ಮೆಲೋಗರಗಳ ಇಟ್ಟ ಹಾಗೆ ಮಾಡಿ
ತಾವೇ ಗಬ, ಗಬ ತಿಂದು ತೇಗಿ, ತೂಕಡಿಸಿ ಕಲ್ಲನೇ ಸುಪ್ಪತಿಗೆ ಮಾಡಿ
ನಗುವುದೋ, ಅಳುವುದೋ ಈ ಮೂಢತನಕೆ ನೀವೇ ಯೋಚನೆ ಮಾಡಿ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ನಿಜ ಸರ್,
ಪ್ರತ್ಯುತ್ತರಅಳಿಸಿಈ ಕಲ್ಲು ಸತ್ಯ ಅಂಧಕಾರದಲ್ಲಿ ಮುಳುಗಿರೋ ಜನರಿಗೆಲ್ಲಿ ಅರ್ಥವಾದೀತು.........
ಚಂದದ ಕವನ.......