ಸೋಮವಾರ, ಜುಲೈ 26, 2010

ಯಾರಿಗೆ ಜೀವಿಸುವೆ?

ಯಾರಿಗೆ ಜೀವಿಸುವೆ?
ಕೆ. ಆರ್. ಎಸ್. ಮೂರ್ತಿ

ಇರಬೇಕು, ಇಲ್ಲದಿರಬೇಕು; ಎಲ್ಲದನು ಸಲ್ಲಿಸುತಲೇ ಇರಬೇಕು
ತಿನ್ನ ಬೇಕು, ತನುವ ತಣಿಸಲೂ ಬೇಕು; ಆತನಿಗಿದೆಲ್ಲ ಎನ್ನಬೇಕು

ಹೊಟ್ಟೆ ಹೊರೆಯಲು ರಟ್ಟೆಯಲಿ ಬಟ್ಟಲುಗಟ್ಟಲೆ ಬೆವರು ಸುರಿಸಿ
ರೊಟ್ಟಿ ಚಟ್ನಿ, ಲೋಟದಲಿ ಮೊಸರು, ತಟ್ಟೆಯಲಿ ಉಣಲು ಬಡಿಸಿ

ಆತನಿಗೆ ಮೊದಲು, ಮಿಕ್ಕದ್ದು ಪ್ರಸಾದ ನಿಮ್ಮೆಲ್ಲರಿಗೆ ಇದ್ದಷ್ಟೇ ಸಾಕು
ಕಾಣದ ಆತನಿಗೆ, ಎಲ್ಲವನೂ ಕೊಟ್ಟವನೆಂದು ಮಣಿಯುತಿರಬೇಕು

ಕೊಡಬೇಡ ಕೊಟ್ಟ ಕೊನೆಯ ಉಸಿರನೂ ಹುಟ್ಟು ಋಣ ಪುಟ್ಟಿಸಿದವಗೆ
ನಿನಗಾಗಿಯೇ ನಿನ್ನದೇ ಜೀವಿತವ ಅನುಭವಿಸುವ ಪರಿಯಿರಲಿ ನಿನಗೆ

1 ಕಾಮೆಂಟ್‌: